tag:blogger.com,1999:blog-57626760113323538982024-01-03T12:36:43.831+05:30ಕಡಲ ತೀರಸಂದೀಪ್ ಕಾಮತ್http://www.blogger.com/profile/17139651775566254649noreply@blogger.comBlogger109125tag:blogger.com,1999:blog-5762676011332353898.post-50593704329780814422015-05-20T18:23:00.000+05:302015-05-20T18:23:29.128+05:30ಆಟೋ ಮಹಾತ್ಮೆ<div dir="ltr" style="text-align: left;" trbidi="on"><br />
</div>'ಊರಿಗೆ ಬಂದವಳು ನೀರಿಗೆ ಬರದೇ ಇರ್ತಾಳಾ?' ಅನ್ನೋ ಗಾದೆ ಥರ 'ಬೆಂಗಳೂರಿಗೆ ಬಂದವರು ಆಟೋದಲ್ಲಿ ಹೋಗದೆ ಇರ್ತಾರಾ?' ಅನ್ನೋ ಗಾದೆ ಹುಟ್ಟು ಹಾಕಬಹುದೇನೋ ಬೆಂಗಳೂರಿನಲ್ಲಿ! ಎಲ್ಲಾ ಊರಿನಲ್ಲೂ ಆಟೋ ಇದ್ದೇ ಇದೆ, ಮತ್ತೆ ಜನ ಅದನ್ನು ಬಳಸೇ ಬಳಸುತ್ತಾರೆ. ಬೆಂಗಳೂರೇನು ಸ್ಪೆಶಲ್ ಅಂಥ ನಿಮಗನಿಸಿರಬಹುದು. ಬೆಂಗಳೂರಿನಲ್ಲಿ ಬಹುತೇಕ ಜಾಗಗಳಿಗೆ ನೇರವಾದ ಬಸ್ ಇರದೇ ಇದ್ದುದರಿಂದ ಇಲ್ಲಿ ಆಟೋದಲ್ಲಿ ಹೋಗೋದು ಎಲ್ಲರಿಗೂ ಅನಿವಾರ್ಯ. ಮುಂಬಯಿಯಂಥ ಊರಿಂದ ಬೆಂಗಳೂರಿಗೆ ಬಂದ ಹಲವರಿಗೆ ಒಂದು ವಿಷಯದಲ್ಲಿ ಕೆಲವೊಮ್ಮೆ ಮುಜುಗರವಾಗುವುದುಂಟು! ಅದೇನಂದರೆ 'ಆಟೋ......' ಅಂತ ಕರೆದ ತಕ್ಷಣ ಯಾರೂ ಬರದೆ ಇರುವುದು! ಮುಂಬಯಿಯಲ್ಲಿ 'ಟ್ಯಾಕ್ಸೀ..' ಅಂದ ತಕ್ಷಣ ಕಪ್ಪು-ಹಳದಿ ಬಣ್ಣದ ಟ್ಯಾಕ್ಸಿಯೊಂದು ನಿಮ್ಮ ಮುಂದೆ ಹಾಜರಾಗುತ್ತೆ. ನೀವೂ ಟ್ಯಾಕ್ಸಿ ಹತ್ತಿ ಬೇಕಾದಲ್ಲಿ ಹೋಗುತ್ತೀರ. ಅಷ್ಟೆ! ಆದ್ರೆ ಬೆಂಗಳೂರಿನಲ್ಲಿ ಆ ಥರ ಅಲ್ಲ. ಇಲ್ಲಿ ಆ ರೀತಿ ಕರೆದರೆ ಬರುವ ಟ್ಯಾಕ್ಸಿಗಳಿಲ್ಲ! ಇಲ್ಲಿ ಇರುವುದು ಆಟೋಗಳು. ಅದೂ ಕರೆದರೆ ಬಾರದ ಆಟೋಗಳು!<br />
<br />
ಬೆಂಗಳೂರಿನಲ್ಲಿ ಆಟೋದಲ್ಲಿ ಹೋಗೋದಕ್ಕೆ ಸ್ವಲ್ಪ ಮಟ್ಟಿನ ಅನುಭವ ಅಗತ್ಯ. ಆಟೋಗಳು ಕರೆದರೆ ಬರದೇ ಇರೋದಕ್ಕೂ ಕಾರಣ ಇದೆ. ಇಲ್ಲಿ ಆಟೋ ಹತ್ತೋದಕ್ಕೆ ಮೊದಲು ಒಂದು ಚಿಕ್ಕ ಸಂದರ್ಶನ ಇರುತ್ತೆ! ಆ ಸಂದರ್ಶನದಲ್ಲಿ ನೀವು ಯಶಸ್ವಿಯಾದರೆ ಮಾತ್ರ ನಿಮಗೆ ಆಟೊದಲ್ಲಿ ಕೂರುವ ಅವಕಾಶ! ನಿಮಗೆ ಮಲ್ಲೇಶ್ವರಂಗೆ ಹೋಗಬೇಕು ಅಂದುಕೊಳ್ಳಿ. ಮೊದಲಿಗೆ ಎಲ್ಲಾದರೂ ಖಾಲಿ ನಿಂತಿರುವ ಅಟೋ ಇದೆಯಾ ನೋಡಬೇಕು. ಖಾಲಿ ಅಂದ್ರೆ ತೀರ ಡ್ರೈವರೂ ಇರದ ಆಟೋ ಅಲ್ಲ! ಒಂದು ವೇಳೆ ಖಾಲಿ ಆಟೋ ನಿಂತಿದ್ದಲ್ಲಿ, ಡ್ರೈವರ್ ಏನು ಮಾಡುತ್ತಿದ್ದಾನೆ ಅಂತ ನೋಡಬೇಕು. ನಿಮಗೆ ಡ್ರೈವರ್ ಕಾಣದೆ ಬರೀ ಎರಡು ಕಾಲುಗಳು ಹಿಂದಿನ ಸೀಟುಗಳಿಂದ ಹೊರಗೆ ಚಾಚಿರೋದು ಕಂಡರೆ, ಆ ಕಡೆ ಹೋಗಲೇ ಬೇಡಿ. ಆ ಡ್ರೈವರ್ ಮಲಗಿದ್ದಾನೆ ಅಂತ ಅರ್ಥ! ಅವನು ಬರೋದು ಡೌಟೇ. ಹಾಗಾಗಿ ಬೇರೆ ಆಟೊ ನೋಡಿ.<br />
<br />
ಒಂದು ವೇಳೆ ಡ್ರೈವರ್ ತನ್ನ ಸೀಟಿನಲ್ಲಿದ್ದರೆ, ಅವನ ಬಳಿ ಹೋಗಿ "ಮಲ್ಲೇಶ್ವರಂ" ಅಂತ ಹೇಳಿ. ಅಲ್ಲಿಗೆ ಸಂದರ್ಶನ ಶುರು! ಅವನು "ಮಲ್ಲೇಶ್ವರಂನಲ್ಲಿ ಎಲ್ಲಿ ?" ಅಂತ ಕೇಳ್ತಾನೆ. ನೀವು ಹೇಳಿದ ಉತ್ತರ ಅವನಿಗೆ ಇಷ್ಟ ಆದ್ರೆ ನೀವು ಸಿಲೆಕ್ಟ್ ಅಂತ ಅರ್ಥ. ಇಲ್ಲದಿದ್ದಲ್ಲಿ ಸಂದರ್ಶನ ಮುಂದುವರೆಯುತ್ತೆ! "ಮೇನ್ ರೋಡಲ್ಲೇನಾ? ಅಥವ ಒಳಗೆ ಹೋಗ್ಬೇಕಾ?", "ಎಷ್ಟು ಜನ ಇದ್ದೀರಿ, ಲಗೇಜ್ ಇದೆಯಾ" ಹೀಗೆ ಪ್ರಶ್ನೆ ಮುಂದುವರೆಯುತ್ತೆ. ನಿಜ ಹೇಳ್ಬೇಕಂದ್ರೆ ಈ ಪ್ರಶ್ನೆಗಳೆಲ್ಲ ನೆಪ ಮಾತ್ರ. ನೀವು "ಮಲ್ಲೇಶ್ವರಂ" ಅಂದಾಕ್ಷಣ ಅವನು ಏನೂ ಪ್ರಶ್ನೆ ಕೇಳಿಲ್ಲ ಅಂದರೆ ಅವನು ಮೀಟರ್ ಪ್ರಕಾರ ಬರೋದಿಕ್ಕೆ ಒಪ್ಪಿದ್ದಾನೆ ಅಂತ ಅರ್ಥ. "ಮಲ್ಲೇಶ್ವರಂನಲ್ಲಿ ಎಲ್ಲಿ. ಮೇನ್ ರೋಡಲ್ಲೇನಾ ಅಥವ ಒಳಗೆ ಹೋಗ್ಬೇಕಾ ?.." ಅಂತೆಲ್ಲಾ ಕೇಳಿದ್ರೆ ಅವನು ಮೀಟರ್ ಮೇಲೆ ಇಪ್ಪತ್ತು ರೂ ಹೆಚ್ಚಿಗೆ ಕೇಳ್ತಾನೆ ಅಂತ ಅರ್ಥ. ನೀವು ಈವರೆಗೆ ಯಾರೂ ಹೋಗದಿರುವಂಥ ಸ್ಥಳಕ್ಕೆ ಹೋಗ್ತಿದ್ದೀರಾ ಅಂತ ನಿಮ್ಮನ್ನು ನಂಬಿಸಿ, ಹೆಚ್ಚಿಗೆ ಹಣ ಕೇಳುವ ತಂತ್ರ ಇದು. ಡ್ರೈವರ್ ಜೊತೆ ಮೊದಲ ಸುತ್ತಿನ ಮಾತುಕತೆ ಮುಗಿದು ನೀವು ಆಟೋ ಹತ್ತಿದ್ರೆ ಅಲ್ಲಿಗೆ ಒಂದು ಹಂತ ತಲುಪಿದ್ರಿ ಅಂತ ಅರ್ಥ. ಈಗ ಡ್ರೈವರ್ ಮೀಟರ್ ಹಚ್ಚಿ ಡುರ್ರ್ ಡುರ್ರ್ ಅಂತ ಆಟೋ ಶುರು ಮಾಡ್ತಾನೆ.<br />
<br />
ಇನ್ನು ಮುಂದಿನ ಹಂತ! ಸ್ವಲ್ಪ ಹೊತ್ತಿನ ನಂತರ ಮೂರು ರಸ್ತೆ ಕೂಡುವಲ್ಲಿ ಒಮ್ಮೆ ಹಿಂದೆ ತಿರುಗಿ "ಸಾರ್/ಮ್ಯಾಡಮ್ ಸ್ಯಾಂಕಿ ರೋಡ್ ಮೇಲೆ ಹೋಗ್ಲಾ ಇಲ್ಲ ಮೇಖ್ರಿ ಸರ್ಕಲ್ ಮೇಲ್ ಹೋಗ್ಲಿ?" ಅಂತ ಕೇಳ್ತಾನೆ. ಇದು ನಿಮಗೆ ಆ ಪ್ರದೇಶದ ಬಗ್ಗೆ ಎಷ್ಟು ಮಾಹಿತಿ ಇದೆ ಅನ್ನೋ ಟೆಸ್ಟ್. ಆಗಿದ್ದಾಗ್ಲಿ ಅಂತ ದೇವರ ಮೆಲೆ ಭಾರ ಹಾಕಿ ಸ್ಯಾಂಕಿ ರೋಡ್ ಅಥವಾ ಮೆಖ್ರಿ ಸರ್ಕಲ್ ಅಂತ ಹೇಳಿದ್ರೆ ನೀವು ಬಚಾವ್. ಅದು ಬಿಟ್ಟು "ನನಗೆ ಈ ಕಡೆ ಏರಿಯಾ ಅಷ್ಟಾಗಿ ಗೊತ್ತಿಲ್ಲ. ನೀವೇ ಯಾವುದು ಹತ್ತಿರ ಆ ರೋಡಲ್ಲಿ ಕರ್ಕೊಂಡು ಹೋಗಿ" ಅಂದ್ರೆ ಆಷ್ಟೆ! ಪವರ್ ಆಫ್ ಅಟಾರ್ನಿ ಬರೆದು ಕೊಟ್ಟ ಹಾಗೆ! ನೀವು ಬೆಂಗಳೂರು ದರ್ಶನ ಮಾಡಿ ಆರಾಮಾಗಿ ಹೋಗಬಹುದು!<br />
<br />
ಆಟೋ ಹತ್ತಿದ ಮೇಲೆ ನೀವು ಮುಖ್ಯವಾಗಿ ಮಾಡಬೇಕಾದ ಕೆಲಸ ಅಂದ್ರೆ ಮೀಟರ್ ಮೇಲೆ ಒಂದು ಕಣ್ಣಿಟ್ಟಿರೋದು. ನೀವು ಗಮನಿಸಿರಬಹುದು. ಹಲವು ಸಲ ನಾವು ಬೆಳಿಗ್ಗೆ ಎಚ್ಚರ ಆದ ತಕ್ಷಣ ಒಮ್ಮೆ ಗಡಿಯಾರ ನೋಡಿ 'ಒಂದು ಹತ್ತು ನಿಮಿಷ ಮಲಗೋಣ' ಅಂದುಕೊಂಡು ಮಲಗಿದ್ರೆ ಮತ್ತೆ ಎಚ್ಚರ ಆದಾಗ ಅರ್ಧ ಗಂಟೆ ಆಗಿರುತ್ತೆ! ಆಟೋದಲ್ಲೂ ಹೀಗೇ. ನೀವು ಮೀಟರ್ ಮೇಲೆ ಕಣ್ಣಿಡದೆ ರಸ್ತೆ ಬದಿಯಲ್ಲಿ ಹೋಗ್ತಿರೊ ಹುಡುಗಿಯರನ್ನೋ, ಅಂಗಡಿಯಲ್ಲಿ ನೇತು ಹಾಕಿರೋ ಸೀರೆಗಳನ್ನೋ ನೋಡಿ ಮೈ ಮರೆತರೆ, ಆಟೋ ಮೀಟರ್ ಪೆಟ್ರೋಲ್ ಬಂಕ್ ಮೀಟರ್ ಥರ್ ಜಂಪ್ ಆಗಿರುತ್ತೆ. ಇನ್ನು ಕೆಲವು ಸಲ ನಾವು ಹತ್ತಿದ ತಕ್ಷಣ ಮೀಟರ್ ಚೇಂಜ್ ಮಾಡಿಯೇ ಇರಲ್ಲ. ಹಿಂದಿನ ಅಂಕಿಯಿಂದಲೆ ಅದು ಮುಂದುವರೆಯುತ್ತೆ!<br />
<br />
ಕೆಲವೊಮ್ಮೆ ಆಟೋದವರು ಮೀಟರ್ ಹಾಕದೆ "ಇಪ್ಪತ್ತು ರೂ ಆಗುತ್ತೆ" ಅಂತಾರೆ. ಅಂಥ ಸಂದರ್ಭದಲ್ಲಿ ಎರಡೆರಡು ಸಲ ಇಪ್ಪತ್ತು ಅಂತ ಖಚಿತ ಮಾಡಿಯೇ ಆಟೋ ಹತ್ತಬೇಕು. ಒಮ್ಮೆ ನನಗೆ ಆಟೋದವನು "ಇಪ್ಪತ್ತು" ಅಂತ ಹೇಳಿ, ಇಳಿಯುವಾಗ ನಾನು "ಎಪ್ಪತ್ತು" ಹೇಳಿದ್ದು ಅಂತ ಜಗಳ ಮಾಡಿ ವಸೂಲಿ ಮಾಡಿದ್ದ. ಯಾವುದಕ್ಕೂ ಇಂಥ ಸಂದರ್ಭದಲ್ಲಿ ಹರ್ಬಜನ್ ಸಿಂಗ್ ಮಂಕಿ ಅಂದ ಪ್ರಕರಣ ನೆನಪಿಸಿಕೊಂಡರೆ ಒಳ್ಳೆಯದು!<br />
<br />
ಬೆಂಗಳೂರಿನ ಆಟೋಗಳ ವಿಶೇಷತೆ ಅಂದ್ರೆ ಅವರು ಯಾವತ್ತೂ ಎಲ್ಲೇ ಕರೆದರೂ "ಬರಲ್ಲ" ಅನ್ನೋದೇ ಇಲ್ಲ! ಬದಲಾಗಿ ಡುರ್ರ್ ಅಂತ ಮುಂದೆ ಹೋಗೇ ಬಿಡ್ತಾರೆ. ಹಾಗೆ ಹೋದ್ರೆ ಬರಲ್ಲ ಅಂತ ತಾನೆ ಲೆಕ್ಕ. ಹಾಗೇನಾದ್ರೂ ಹೋಗದೆ ಅವನು ಹಿಂದಿನ ಸೀಟ್ ಕಡೆ ನೊಡಿದ್ರೆ "ಹತ್ತಿ" ಅಂತ ಅರ್ಥ! ಅದು ಬಿಟ್ಟು ಇನ್ನೂ ಏನೋ ಆಲೋಚನೆ ಮಾಡ್ತಿದ್ರೆ, ಅವನು ಸಂದರ್ಶನಕ್ಕೆ ತಯಾರಿ ನಡೆಸ್ತಾ ಇದ್ದಾನೆ ಅಂತ ಅರ್ಥ!<br />
<br />
ಹೀಗೆ ಬೆಂಗಳೂರಿನಲ್ಲಿ ಆಟೋದಲ್ಲಿ ಹೋಗೊದಕ್ಕೂ ಸ್ವಲ್ಪ ಅನುಭವ ಅಗತ್ಯ. ನಿಮ್ಮ ಆಟೋ ಪ್ರಯಾಣ ಸುಖಕರವಾಗಲಿ ಅನ್ನೊದೇ ನನ್ನ ಹಾರೈಕೆ!<br />
<br />
[ಈ ಪ್ರಬಂಧ ಅಮೆರಿಕಾದ ಅಕ್ಕ ವಿಶ್ವ ಕನ್ನಡ ಸಮ್ಮೇಳನ 2014ದಲ್ಲಿ ಪ್ರಕಟಗೊಂಡ 'ಹರಟೆ ಕಟ್ಟೆ' ಪ್ರಬಂಧ ಸಂಕಲನದಲ್ಲಿ ಪ್ರಕಟಗೊಂಡಿದೆ.]<br />
<br />
<br />
<br />
<br />
<br />
ಸಂದೀಪ್ ಕಾಮತ್http://www.blogger.com/profile/17139651775566254649noreply@blogger.com2tag:blogger.com,1999:blog-5762676011332353898.post-57309768396144264362012-08-29T23:00:00.001+05:302012-08-29T23:00:44.093+05:30ಬೆಂಗಳೂರೆಂಬ ಮಾಯಾನಗರಿ!<div dir="ltr" style="text-align: left;" trbidi="on"><br />
</div><br />
ಮಾಯಾನಗರಿ ಬೆಂಗಳೂರು!<br />
<br />
ಟಿ.ವಿ ಚ್ಯಾನಲ್ ನವರು ಆಗಾಗ್ಗೆ ಬೆಂಗಳೂರನ್ನು ಸಂಬೋಧಿಸೋದು ಹೀಗೆ! ಬಹುಶಃ ಎಲ್ಲಾ ನಗರಗಳೂ ಒಂದು ರೀತಿಯಲ್ಲಿ ಮಾಯಾನಗರಿಗಳೇ! ನಾನು ಚಿಕ್ಕವನಿದ್ದಾಗ ಬಹುತೇಕ ಜನರು ವಲಸೆ ಹೋಗುತ್ತಿದ್ದುದು ದೂರದ ಬೊಂಬಾಯಿಗೆ. ಅದೀಗ ಮುಂಬಯಿ ಆದರೂ ಮಂಗಳೂರಿನವರ ಬಾಯಲ್ಲಿ ಬೊಂಬಾಯೇ! ಬೊಂಬಾಯಿಯಿಂದ ಎರಡು ವರ್ಷಕ್ಕೊಮ್ಮೆ ಊರಿಗೆ ಬರುವವರ ಬಾಯಲ್ಲಿ ಮುಂಬಯಿಯ ರೊಚಕ ಕಥೆಗಳನ್ನು ಕೇಳಿದವರಿಗೆ ಅದು ನಿಜಕ್ಕೂ ಮಾಯಾನಗರಿಯೆ ಅನ್ನೋ ಭರವಸೆ ಮೂಡಿ ಹೋಗಿತ್ತು. ಆದರೆ ಕಾಲ ಕಳೆದಂತೆ ಮುಂಬಯಿಗೆ ವಲಸೆ ಹೋಗುವವರ ಸಂಖ್ಯೆ ಕಡಿಮೆ ಆಗಿ ಬೆಂಗಳೂರಿಗೆ ವಲಸೆ ಹೋಗೋವವರ ಸಂಖ್ಯೆ ಹೆಚ್ಚತೊಡಗಿತು. ಬಹುತೇಕ ಬೊಂಬಾಯಿ ಮಾದರಿಯ ಕಥೆಗಳೇ ಬೆಂಗಳೂರಿನ ಬಗ್ಗೆಯೂ ಕೇಳತೊಡಗಿತು. ಹೀಗೆ ಬೆಂಗಳೂರೂ ಟಾಪ್ ಟೆನ್ ಮಾಯಾನಗರಿಗಳ ಪಟ್ಟಿಗೆ ಸೇರಿ ಬಿಟ್ಟಿತು!<br />
<br />
ಬೆಂಗಳೂರಿಗೆ ಎಂಟ್ರಿ ನೀಡುವ ಎಲ್ಲರಿಗೂ ಈ ಮಾಯಾನಗರಿ ತನ್ನ ಮಾಯೆ ತೋರಿಸಿಯೇ ಇರುವುದರಿಂದ ಬಹುಶಃ ಯಾರೂ ನನ್ನ ಮಾತನ್ನು ಅಲ್ಲಗಳೆಯಲಾರರೇನೋ. ಅದಲ್ಲದೇ ಊರಿನಿಂದ ಅಷ್ಟೇನೂ ದೂರವಿಲ್ಲದೇ ಇದ್ದುದರಿಂದ, ಊರಿಂದ ಸಾಕ್ಷಾತ್ ಬೆಂಗಳೂರಿನ ಮಾಯೆಯನ್ನು ಕಣ್ಣಾರೆ ನೋಡಲು ಬರುವವರೂ ಕಮ್ಮಿ ಇಲ್ಲ ಬಿಡಿ!<br />
<br />
ಬೆಂಗಳೂರಿಗೆ ಕಾಲಿಡುವ ಎಲ್ಲರೂ ಮೊದಲು ಭೇಟಿ ನೀಡುವ, ನೀಡಲೇ ಬೇಕಾಗಿರುವ ಸ್ಥಳ ಮೆಜೆಸ್ಟಿಕ್. ಬೆಳ್ಳಂಬೆಳಿಗ್ಗೆ ಬಸ್ ನಿಂದ ಇಳಿದ ತಕ್ಷಣ ಮುತ್ತಿಕೊಳ್ಳುವ ಆಟೋ ಡ್ರೈವರ್ ಗಳೇ ಮೊದಲನೆ ಮಾಯೆ ತೋರಿಸುವವರು. ಮಂಗಳೂರಿನಿಂದ ಬರಲು ತಗುಲಿದಷ್ಟೇ ಕಾಸನ್ನು ಆಟೋದವರೂ ಕೇಳಿದಾಗ ಮತ್ತೆ ವಾಪಸ್ ಹೋಗೋದೇ ವಾಸಿ ಅಂತ ಬಹಳಷ್ಟು ಸಲ ಅನಿಸದೆ ಇಲ್ಲ! ಒಮ್ಮೆ ನನ್ನ ಸ್ನೇಹಿತನಿಗೆ ಮೆಜೆಸ್ಟಿಕ್ ನಿಂದ ರೈಲ್ವೆ ಸ್ಟೇಶನ್ ಗೆ ಹೊಗಬೇಕಾಗಿತ್ತು. ಮೆಜೆಸ್ಟಿಕ್ ಮುಂದೇನೇ ರೈಲ್ವೇ ಸ್ಟೇಶನ್ ಇರೋದು ಗೊತ್ತಿಲ್ಲದೇ ಇದ್ದರಿಂದ ಅವನು ಸಹಜವಾಗೇ ಆಟೋದವರೊಬ್ಬರನ್ನು ಕೇಳಿದಾಗ ಅವನು ಐವತ್ತು ರೂಪಾಯಿಗೆ ಒಪ್ಪಿದ್ದಾನೆ. ಇವನು ಹತ್ತಿದ ತಕ್ಷಣ ಎರಡೇ ಎರಡು ನಿಮಿಷದಲ್ಲಿ ರೈಲ್ವೇ ಸ್ಟೇಶನ್ ಮುಂದೆ ಇಳಿಸಿ ಐವತ್ತು ರೂಪಾಯಿ ಪೀಕಿದ್ದಾನೆ. ಆಟೋದವರು ಊರೆಲ್ಲಾ ಸುತ್ತಿಸಿ ಜಾಸ್ತಿ ದುಡ್ಡು ಲೂಟಿ ಮಾಡೋದು ಗೊತ್ತಿತ್ತು ಮಾರಾಯ. ನಿನ್ನ ಬೆಂಗಳೂರಿನ ಆಟೋದವರು ಇಷ್ಟು ಪ್ರಾಮಾಣಿಕರು ಅಂತ ಗೊತ್ತಿರಲಿಲ್ಲ ಅಂತ ಸರ್ಟಿಫಿಕೇಟ್ ಬೇರೆ ಕೊಟ್ಟು ಹೋಗಿದ್ದ ನನಗೆ ಆ ಸ್ನೇಹಿತ!<br />
<br />
ನಾನು ಬೆಂಗಳೂರಿಗೆ ಬಂದು ಹತ್ತು ವರ್ಷವಾದರೂ ಬೆಂಗಳೂರು ಇನ್ನೂ ಒಂದು ಬೆರಗು. ಮೆಜೆಸ್ಟಿಕ್ ನ ಹೊಟೇಲ್ ನಲ್ಲಿ ಒಂದೆ ಸಲ ಐವತ್ತು ಮಾಸಾಲೆ ದೋಸೆ ತಂದು ಸುರಿಯೋದು, ವಿದ್ಯಾರ್ಥಿ ಭವನದಲ್ಲಿ ಒಂದೇ ಕೈಯಲ್ಲಿ ಹದಿನೈದು ಮಸಾಲೆದೋಸೆ ತಟ್ಟೆ ಬ್ಯಾಲೆನ್ಸ್ ಮಾಡೋದು, ಅವೆನ್ಯೂ ರೋಡಲ್ಲಿ ಪೇರಿಸಿಟ್ಟ ನೂರು ಪುಸ್ತಕಗಳ ಮಧ್ಯದಿಂದ ನಮಗೆ ಬೇಕಾದ ಒಂದು ಪುಸ್ತಕ ತೆಗೆದು ಕೊಡೋದು. ಅವೆನ್ಯೂ ರೋಡಲ್ಲಿ ಹೊಚ್ಚ ಹೊಸ ಕಾರೊಂದನ್ನು ಆ ಬದಿಯಿಂದ ಈ ಬದಿಗೆ ಎಲ್ಲಿಯೂ ತಗುಲಿಸದೆ ಡ್ರೈವ್ ಮಾಡಿಕೊಂಡು ಬರೋದು! ಎಲ್ಲವೂ ಬೆರಗಿನ ಸಂಗತಿಗಳೇ.<br />
<br />
ಬೆಂಗಳೂರಿನ ಫುಟ್ಪಾತ್ ನಲ್ಲಿ ಯಾವುದಾದರೂ ವಸ್ತುವನ್ನು ಚೌಕಾಸಿ ಮಾಡಿ ತಗೊಂಡ್ರೆ ಆ ದಿನ ಅವರು ಬೆಂಗಳೂರಿನಲ್ಲಿ ಸೆಟ್ಲ್ ಆದರು ಅಂತ ಅರ್ಥ! ಸ್ಥಳದಲ್ಲಿಯೇ ಅವರಿಗೊಂದು ಸರ್ಟಿಫಿಕೇಟ್ ಬರೆದು ಕೊಡಬಹುದು! ನಾನೂ ಒಮ್ಮೆ ಇಂಥ ರಸ್ತೆ ಬದಿಯ ಅಂಗಡಿಯಲ್ಲಿ ಚೇತನ್ ಭಗತ್ ರ ಪುಸ್ತಕ ಒಂದನ್ನು ಕೊಂಡಿದ್ದೆ. ಅದೂ ಭರ್ಜರಿ ಚೌಕಾಸಿ ಮಾಡಿ. ಅವನು ಮೂನ್ನೂರು ರೂಪಾಯಿ ಹೇಳಿದ ಪುಸ್ತಕವನ್ನು ನಾನು ಬರೋಬ್ಬರಿ ಅರ್ಧ ಗಂಟೆ ಚೌಕಾಸಿ ಮಾಡಿ ನೂರೈವತ್ತಕ್ಕೆ ಕೊಂಡಿದ್ದೆ! ಆದರೆ ದುಖಃದ ಸಂಗತಿ ಏನೆಂದರೆ ಅದರ ಬೆಲೆ ತೊಂಬತ್ತು ರೂಪಾಯಿ ಆಗಿತ್ತೆಂದು ನನಗೆ ಎರಡು ವರ್ಷದ ಬಳಿಕ ಗೊತ್ತಾಗಿದ್ದು! ಅದೇ ಚೇತನ್ ಭಗತ್ ರ ಹೊಸ ಪುಸ್ತಕ ಕೊಳ್ಳಲು ಇಂಟರ್ನೆಟ್ ನಲ್ಲಿ ಹುಡುಕಿದಾಗ ಅವರ ಎಲ್ಲಾ ಪುಸ್ತಕಗಳಿಗೂ ತೊಂಬತ್ತು ರೂಪಾಯಿ ಇತ್ತೆಂದು ಗೊತ್ತಾಗಿದ್ದು ನನಗೆ! ಪೈರೇಟೆಡ್ ಪುಸ್ತಕ ಒಂದನ್ನು ಹೊಸ ಪುಸ್ತಕದ ಬೆಲೆಗಿಂತಲೂ ಹೆಚ್ಚಿನ ಬೆಲೆ ಕೊಟ್ಟು ಕೊಂಡ ಭೂಪ ನಾನೊಬ್ಬನೆ ಅಂತ ಹೇಳಿಕೊಳ್ಳಲು ನನಗೆ ಯಾವ ನಾಚಿಕೆಯೂ ಇಲ್ಲ ಬಿಡಿ! ನಾಚಿಕೆ ಪಡಲು ನಾನೇನು ಸದನದಲ್ಲಿ ಡಾಕ್ಯುಮೆಂಟರಿ ನೋಡಿಲ್ಲವಲ್ಲ!!<br />
<br />
ಬೆಂಗಳೂರಿನ ನಿಜ ರುಚಿ ಸಿಗೋದು ಬಾಡಿಗೆಗೆ ಮನೆ ಹಿಡಿದಾಗ. ಮನೆ ಹುಡುಕುವವರು ಬ್ಯಾಚುಲರ್ ಆಗಿದ್ದರಂತೂ ಕೇಳೋದೇ ಬೇಡ. ಒಂದು ದಿನ ಮನೆಯಲ್ಲಿ ಟ್ರಯಲ್ ಗೋಸ್ಕರ ಇರೋದಕ್ಕೆ ಯಾರೂ ಬಿಡದೇ ಇರೋದ್ರಿಂದ ಆ ಮನೆಯಲ್ಲಿರೋ ಎಲ್ಲಾ ತೊಂದರೆಗಳೂ ನಿಮಗೆ ಮನೆ ಬದಲಾಯಿಸಿದ ಮೇಲೇಯೇ ತಿಳಿಯೋದು. ನೀವು ಮನೆ ನೋಡಲು ರಾತ್ರಿ ಹೋಗಿರ್ತೀರಾ ಹಾಗಾಗಿ ಟ್ಯೂಬ್ ಲೈಟ್ ಬೆಳಕಲ್ಲಿ ಮನೆ ಜಗಮಗ ಕಾಣಿಸುತ್ತಿರುತ್ತೆ. ಆದರೆ ಮನೆ ಬದಲಾಯಿಸಿ ಬಂದ ಮೇಲಷ್ಟೇ ನಿಮಗೆ ಗೊತ್ತಾಗೋದು, ಆ ಮನೆಯಲ್ಲಿ ಹಗಲು ಹೊತ್ತಲ್ಲೂ ನೀವು ಟ್ಯೂಬ್ ಲೈಟ್ ಹಾಕಿಯೇ ಇರಬೇಕಾಗುತ್ತೆ ಅಂತ! ಯಾಕಂದ್ರೆ ಕಿಟಕಿಗಳಿದ್ರೆ ತಾನೇ ಬೆಳಕು ಬರೋದು. ಕೆಲವು ಮನೆಗಳಿಗೆ ಕಿಟಕಿಗಳಿದ್ರೂ ಓಪನ್ ಮಾಡೋ ಹಾಗಿಲ್ಲ ಯಾಕಂದ್ರೆ ಓಪನ್ ಮಾಡಿದ್ರೆ ಇನ್ನೊಂದು ಮನೆಯ ಬೆಡ್ ರೂಮ್ ಕಾಣಿಸುತ್ತೆ. ಎರಡೂ ಮನೆಯ ಓನರ್ ಒಬ್ಬನೇ ಆದ್ದರಿಂದ ಒಂದೇ ಕಿಟಕಿ ಇಟ್ಟಿರ್ತಾನೆ. ಕೇಳಿದ್ರೆ 'ನನ್ ಮನೆ ಕಣ್ರಿ ನನ್ನಿಷ್ಟ' ಅಂತಾನೆ! ಶೌಚಾಲಯ ಅಂತೂ ಕೇಳೋದೇ ಬೇಡ. ಕೂತು ಮಾಡುವ ಕೆಲಸವನ್ನು ಕೂತೇ ಮಾಡಬೇಕು! ಅಕಸ್ಮಾತ್ ಎದ್ದು ನಿಂತರೆ ತಲೆ ಗೋಡೆಗೆ ಬಡಿಯುತ್ತೆ. ಮೆಟ್ಟಿಲ ಕೆಳಗೆ ಶೌಚಾಲಯ ಕಟ್ಟಿಸಿದ್ರೆ ಇನ್ನೇನ್ ಅಗುತ್ತೆ ಹೇಳಿ? ಬೆಂಗಳೂರಿನ ಜನರಿಗೆ ವೇಸ್ಟ್ ಮಾಡೋದು ಅಂದ್ರೆ ಸ್ವಲ್ಪಾನೂ ಆಗಲ್ಲ. ಅದಿಕ್ಕೇ ಒಂದಿಂಚೂ ಜಾಗ ವೇಸ್ಟ್ ಮಾಡದೆ ಮನೆ ಕಟ್ಟಿಸ್ತಾರೆ.<br />
<br />
ಬೆಂಗಳೂರಿನಲ್ಲಿ ಖುಷಿ ಕೊಡುವ ಒಂದು ಸೌಲಭ್ಯ ಅಂದರೆ ಬಸ್ ಪಾಸ್. ಒಂದು ಸಾರಿ ಪಾಸ್ ಮಾಡಿಸಿಕೊಂಡರೆ ಸಾಕು, ಕಾಸು ಕೊಡೋ, ಚಿಲ್ಲರೆಗಾಗಿ ಕಾಯೋ ತೊಂದರೇನೆ ಇಲ್ಲ. ಕಂಡಕ್ಟರ್ ಟಿಕೇಟ್ ಕೇಳಿದ ತಕ್ಷಣ ಹೆಬ್ಬೆರಳನ್ನು ಮಡಚಿ ಅಂಗೈ ತೋರಿಸಿದ್ರೆ ಸಾಕು ಕಂಡಕ್ಟರ್ ಗೆ ಅರ್ಥವಾಗಿ ಬಿಡುತ್ತೆ ಪಾಸ್ ಅಂತ. ಅದಕ್ಕೂ ಮೀರಿ ಯಾರಾದ್ರೂ ಪಾಸ್ ತೋರಿಸಿ ಅಂದರೆ ಸಿನೆಮಾಗಳಲ್ಲಿ ಸಿ.ಬಿ.ಐ ಆಫೀಸರ್ ಗಳು ತಮ್ಮ ಕಾರ್ಡ್ ತೋರಿಸಿದ ಹಾಗೆ ತೆಗೆದು ತೋರಿಸಿದರೆ ಆಯ್ತು! ಈ ಪಾಸ್ ಗೆ ಅದರದ್ದೇ ಆದ ತೊಂದರೆಗಳೂ ಇವೆ. ಟಿಕೆಟ್ ತಗೊಳ್ಳುವಾಗ ಒಂದು ವೇಳೆ ಬಸ್ ಆ ಜಾಗಕ್ಕೆ ಹೋಗದೇ ಇದ್ದಲ್ಲಿ ಕಂಡಕ್ಟರ್ ಕೂಡಲೇ ನಿಮ್ಮನ್ನು ಇಳಿಸಿ ಬಿಡುತ್ತಾನೆ. ಆದರೆ ಪಾಸ್ ಇರೋರನ್ನು ಯಾರೂ ಎಲ್ಲಿಗೆ ಅಂತ ಕೇಳದೇ ಇರೋದ್ರಿಂದ ಅವರು ಎಲ್ಲೆಲ್ಲೋ ಹೋಗಿ ತಲುಪುವ ಸಾಧ್ಯತೆಗಳೇ ಹೆಚ್ಚು. ನಾನೂ ಬಹಳಷ್ಟು ಸಲ ಎಲ್ಲೆಲ್ಲೋ ತಲುಪಿದ್ದಿದೆ. ಮಂಗಳೂರಿನಲ್ಲಿದ್ದಾಗ ಈ ಸಮಸ್ಯೆ ಇರಲಿಲ್ಲ. ಎಡಕ್ಕೆ ಉಡುಪಿ ಬಲಕ್ಕೆ ಮಂಗಳೂರು. ಒಂದು ಸಲ ಮೇಯೊ ಹಾಲ್ ಬಳಿ ಮೆಜೆಸ್ಟಿಕ್ ಅನ್ನೋ ಬೋರ್ಡ್ ನೋಡಿ ಹತ್ತಿದ್ದೆ. ಹಲಸೂರು ಬಂದ ನಂತರವೇ ನನಗೆ ತಪ್ಪಿನ ಅರಿವಾಗಿದ್ದು. ಅದೂ ಅಲ್ಲದೇ ಎಲ್ಲದಕ್ಕೂ ಮೆಜೆಸ್ಟಿಕ್ಕೇ ಆರಂಭ ಮತ್ತು ಅಂತ್ಯ ಆಗಿದ್ದರಿಂದ ಏನೇ ಎಡವಟ್ಟಾದ್ರೂ ವಾಪಸ್ ಮೆಜೆಸ್ಟಿಕ್ ಗೆ ಬರಬೇಕಾಗಿತ್ತು. ಒಂದು ಸಲ ದೊಮ್ಮಲೂರಿನಿಂದ ಇಂದಿರಾನಗರಕ್ಕೆ ಬರಲು ಅದೇ ದಾರಿಯಲ್ಲಿ ಹೋಗುವ ಬಸ್ ಇದೆ ಅನ್ನೋದು ಗೊತ್ತಿರದೆ, ಮೆಜೆಸ್ಟಿಕ್ ಗೆ ಬಂದು ಮತ್ತೆ ಇಂದಿರಾನಗರಕ್ಕೆ ಹೋಗಿದ್ದೆ! ಇನ್ನೊಂದು ಸಲ ಪಾಸ್ ಇದೆ ಅನ್ನೋ ಭಂಡ ಧೈರ್ಯದಿಂದ ಹೆಸರಘಟ್ಟದ ಬಸ್ ಹತ್ತಿ ಹೋಗಿದ್ದೆ. ಹೆಸರಘಟ್ಟ ತಲುಪಿದ ಮೇಲೆ ಕಂಡಕ್ಟರ್ ಬಳಿ ಮತ್ತೆ ವಾಪಸ್ ಮೆಜೆಸ್ಟಿಕ್ ಗೆ ಯಾವಾಗ ಹೊರಡೋದು ಅಂತ ಕೇಳಿದಾಗ ಅವನು 'ನಾಳೆ ಬೆಳಿಗ್ಗೆ' ಅಂದಿದ್ದ. ಎಡವಟ್ಟಾಗಿ ಕೊನೆ ಟ್ರಿಪ್ ನ ಬಸ್ ಹತ್ತಿದ್ದೆ! ಹೇಗೊ ಕಷ್ಟಪಟ್ಟು ಯಾರದೋ ಬೈಕ್ ನಲ್ಲಿ ಮುಖ್ಯ ರಸ್ತೆಯ ತನಕ ಡ್ರಾಪ್ ಕೇಳಿ ರೂಮ್ ಗೆ ವಾಪಸ್ ಬರೋ ಅಷ್ಟರಲ್ಲಿ ಸಾಕು ಸಾಕಾಗಿತ್ತು!<br />
<br />
ಶಾಲೆಯಲ್ಲಿದ್ದಾಗ ಬೆಂಗಳೂರಿನಲ್ಲಿ ಐಟಿಐ, ಹೆಚ್.ಎ.ಎಲ್, ಬಿ.ಎಚ್.ಇ.ಎಲ್ ನಂಥ ಕಂಪೆನಿಗಳಿವೆ ಅಂತ ಓದಿದ್ದೆ. ಆದರೆ ಇಲ್ಲಿ ಬಂದು ನೋಡಿದಾಗ ಗಗನಚುಂಬಿ ಕಟ್ಟಡಗಳು. ಎಲ್ಲಿ ನೋಡಿದರೂ ಐಟಿ, ಬಿಟಿ ಕಟ್ಟಡಗಳು. ಇಂಥ ಕಟ್ಟಡಗಳಲ್ಲಿ ಕೆಲಸ ಮಾಡೋ ಅವಕಾಶ ನನಗೂ ಸಿಗಬಹುದಾ ಅನ್ನೋ ಸಣ್ಣ ಆಸೆ. ಹೀಗೆ ಬಂದ ಹೊಸತರಲ್ಲಿ ಕೆಲಸ ಸಿಗೋ ಮುನ್ನ ಒಂದು ದಿನ ಮೆಜೆಸ್ಟಿಕ್ ಫುಟ್ಪಾತ್ ನಲ್ಲಿ ಗಾಡಿಯಲ್ಲಿ ಮಾರೋ ಚಿಕನ್ ಬಿರಿಯಾನಿ ತಿನ್ನುತ್ತಾ ಇದ್ದೆ. ಅಲ್ಲಿಗೆ ಒಬ್ಬ ಟೈ ಹಾಕಿಕೊಂಡು ಬೈಕಿನಲ್ಲಿ ಬಂದು ಇಳಿದ. ಯಾವುದೋ ದೊಡ್ಡ ಕಂಪನಿಯಲ್ಲಿ ಕೆಲಸಕ್ಕಿರಬೇಕು ಇವನ ಬಳಿ ಕೇಳಿದ್ರೆ ಯಾವುದಾದರೂ ಕೆಲಸ ಸಿಕ್ಕರೂ ಸಿಗಬಹುದು ಅನ್ನೋ ಆಸೆ ಚಿಗುರೊಡೆಯಿತು. ಅವನು ಬಂದು ಒಂದು ಪ್ಲೇಟ್ ಅನ್ನ ಸಾಂಬಾರ್ ತಗೊಂಡು ಸೀದಾ ನನ್ನ ಬಳಿಯೇ ನಿಂತ! ಒಂದೆರಡು ನಿಮಿಷ ಹಾಗೇ ಮುಖ ಮುಖ ನೋಡಿದೆವು. ಆಮೇಲೆ ಅವನೇ ಮಾತಿಗಿಳಿಸಿದ. ಅವನು ಕೇಳಿದ ಮೊದಲನೇ ಪ್ರಶ್ನೆ 'ಗುರು ಒಂದ್ ಪೀಸ್ ಚಿಕನ್ ಕೊಡ್ತೀಯಾ?' ಅನ್ನೋದು. ಅವನು ಯಾವುದೋ ಕಂಪೆನಿಯಲ್ಲಿ ಮಾರ್ಕೆಟಿಂಗ್ ಕೆಲಸಕ್ಕಿದ್ದಾನಂತೆ. ಬೈಕು, ಹಾಕಿರೋ ಡ್ರೆಸ್ ಎಲ್ಲವೂ ಕಂಪೆನಿಯದ್ದಂತೆ. ಚಿಕನ್ ತಿನ್ನದೆ ತುಂಬಾ ದಿನ ಆಗಿದ್ದರಿಂದ ಬಾಯಿಬಿಟ್ಟು ಕೇಳಿದ್ದಾನೆ. ಅದೂ ಅಲ್ಲದೆ ಮಾರ್ಕೆಟಿಂಗ್ ಕೆಲಸ ಮಾಡಿದ್ರೆ ನಾಚಿಕೆ ಎಲ್ಲಾ ಹಂಗೆ ಮಾಯ ಆಗಿ ಬಿಡುತ್ತಂತೆ!<br />
<br />
ಬಹುಶಃ ಇದಕ್ಕೇ ಏನೋ ಬೆಂಗಳೂರು ಮಾಯಾನಗರಿ! <br />
<br />
[ಈ ಪ್ರಬಂಧ 'ಬ್ಲಾಗಿಸು ಕನ್ನಡ ಡಿಂಡಿಮವ' ಪುಸ್ತಕದಲ್ಲಿ ಪ್ರಕಟವಾಗಿದೆ]ಸಂದೀಪ್ ಕಾಮತ್http://www.blogger.com/profile/17139651775566254649noreply@blogger.com13tag:blogger.com,1999:blog-5762676011332353898.post-64710265517689351592012-05-12T21:44:00.000+05:302012-05-12T21:44:35.508+05:30ಉದರನಿಮಿತ್ತಂ...<div dir="ltr" style="text-align: left;" trbidi="on"><br /></div><br />
ಅದೊಂದು ಪುಟ್ಟ ಊರು. ಊರಂದ ಮೇಲೆ ಅಲ್ಲಿ ಸಲೂನು, ಹಾಲಿನ ಅಂಗಡಿ, ಜಿನಸಿ ಅಂಗಡಿ, ಹೋಟಲ್ ಇತ್ಯಾದಿ ಇದ್ದೇ ಇರುತ್ತೆ ಅಲ್ವ. ಈ ಊರಲ್ಲೂ ಪುಟ್ಟ ಹೋಟಲ್ ಒಂದಿತ್ತು. ಬಹುಷಃ ಉಡುಪಿಯ ಯಾವುದೊ ಹಳ್ಳಿಯಿಂದ ಬಂದು ಈ ಊರಲ್ಲಿ ಹೋಟಲ್ ಮಾಡಿದ್ರು ಅನ್ಸುತ್ತೆ.<br />
<br />
ಬೆಳಿಗ್ಗೆ ಬೆಳಿಗ್ಗೆ ಬಿಸಿ ಬಿಸಿ ಇಡ್ಲಿ, ವಡಾ, ನೀರ್ ದೋಸೆ, ಮಸಾಲೆ ದೋಸೆ ಎಲ್ಲವೂ ಸಿಗುತ್ತಿತ್ತು. ಹಾಗಾಗಿ ವ್ಯಾಪಾರವೂ ಚೆನ್ನಾಗೇ ಇತ್ತು.<br />
<br />
ಆಲ್ ಇಸ್ ವೆಲ್!<br />
<br />
ಅದ್ಯಾವುದೋ ನಡು ರಾತ್ರಿ ಪಕ್ಕದ ಕೇರಳದಿಂದ ಮಲಯಾಳಿಯೊಬ್ಬ ಆ ಊರಿಗೆ ಕಾಲಿಟ್ಟ. ಅವನದೂ ಹೊಟ್ಟೆ ಪಾಡು ನಡೆಯಬೇಕಲ್ಲ ಅವನಿಗೆ ಗೊತ್ತಿದ್ದಿದ್ದೇ ಹೋಟಲ್ ಬಿಸಿನೆಸ್. ಸಹಜವಾಗೇ ಅವನು ಆ ಊರಲ್ಲಿ ಹೋಟಲ್ ಶುರು ಮಾಡಿದ. ಅವನು ಬೆಳಿಗ್ಗೆ ಬಿಸಿ ಬಿಸಿ ಪುಟ್ಟು, ಆಪಂ ಇತ್ಯಾದಿ ಮಲಯಾಳಿ ತಿನಿಸುಗಳನ್ನು ಮಾಡತೊಡಗಿದ. ಕೆಲವು ವಾರಗಳು ವ್ಯಾಪಾರವೇ ಇರಲಿಲ್ಲ. ಎಲ್ಲರೂ ಉಡುಪಿ ಹೋಟಲ್ ಗೆ ಹೋಗುತ್ತಿದ್ದರಿಂದ ಇವನ ಹೋಟಲ್ ಗೆ ಯಾರೂ ಬರುತ್ತಿರಲಿಲ್ಲ. ಅದೂ ಅಲ್ಲದೇ ಮಲಯಾಳಿ ತಿನಿಸು ಬೇರೆ. ಹೇಗಿರುತ್ತೆ ಅನ್ನೋ ಕಲ್ಪನೆ ಕೂಡಾ ಅಲ್ಲಿನ ಜನರಿಗಿರಲಿಲ್ಲ! ಅದ್ಯಾವುದೋ ಘಳಿಗೆಯಲ್ಲಿ ಊರಿನ ಒಬ್ಬ, ಆ ಮಲಯಾಳಿ ಹೋಟಲ್ ಗೆ ಹೋಗಿ ತಿಂಡಿ ತಿಂದ. ತಿಂದವನಿಗೆ ಬಹಳ ಇಷ್ಟವಾಗಿ ಊರಿನ ಜನರಿಗೆಲ್ಲ ತಿಳಿಸಿದ. ಊರವರೆಲ್ಲಾ ಮಲಯಾಳಿ ಹೋಟಲ್ ಗೂ ಹೋಗತೊಡಗಿದರು.<br />
<br />
ಉಡುಪಿ ಹೋಟಲ್ ನವನು ಕಂಗಾಲಾದ.ಚೆನ್ನಾಗೇ ನಡೆಯುತ್ತಿದ್ದ ಬದುಕಿನಲ್ಲಿ ಅಚಾಕ್ ಆಗಿ ತಿರುವೊಂದು ಬಂದಿತ್ತು.<br />
<br />
ಕಂಗಾಲಾದವನೇ ಬೇರೆ ಬೇರೆ ಸಂಘ ಸಂಸ್ಥೆಗಳ ಮೊರೆ ಹೊಕ್ಕ. ನಮ್ಮದು ಮಲಯಾಳಿ ಸಂಸ್ಕೃತಿ ಅಲ್ಲ. ಪುಟ್ಟು ನಮಗೆ ಆಗಿ ಬರಲ್ಲ. ನಮ್ಮದೇನಿದ್ದರೂ ಇಡ್ಲಿ ವಡಾ ಸಂಸ್ಕೃತಿ. ಅದೂ ಅಲ್ಲದೆ ನನ್ನದು ಸೀಮಿತ ಮಾರುಕಟ್ಟೆ. ದಯವಿಟ್ಟು ಆ ಮಲಯಾಳಿ ಹೋಟಲ್ ನವನನ್ನು ಇಲ್ಲಿಂದ ಒದ್ದೋಡಿಸಿ ಅಂತ ಎಲ್ಲರಲ್ಲೂ ಮನವಿ ಮಾಡಿದ.<br />
<br />
ಅವನ ಮನವಿಗೆ ಸ್ಪಂದಿಸಿದ ಸಂಘ ಸಂಸ್ಥೆಯವರು ಆ ಮಲಯಾಳಿಗೆ ನೋಟಿಸ್ ಕಳಿಸಿದರು. ನೋಟಿಸ್ ಗೆ ಹೆದರಿದ ಮಲಯಾಳಿ ಹೋಟಲ್ ಮುಚ್ಚಿದ.<br />
<br />
ಮತ್ತೆ ಉಡುಪಿ ಹೋಟಲ್ ಬಿಸಿನೆಸ್ ಭರ್ಜರಿಯಾಗಿ ನಡೆಯತೊಡಗಿತು.<br />
<br />
ಇಲ್ಲಿಗೆ ಕಥೆ ಮುಗಿಯಲಿಲ್ಲ! ಈಗ ಇಂಟರ್ವಲ್ ............<br />
<br />
ಕಂಗಾಲಾದ ಮಲಯಾಳಿಗೆ ಏನು ಮಾಡುವುದೆಂದೇ ತೋಚಲಿಲ್ಲ. ಅದೇ ಊರಿನ ಬಾರ್ ಒಂದರಲ್ಲಿ ಝೀರೋ ವ್ಯಾಟ್ ನ ಬಲ್ಬ್ ನ ಕೆಳಗೆ ಕಿಂಗ್ ಫಿಷರ್ ಬೀರ್ ಹೀರುವಾಗ ಅವನಿಗೆ ಏನೋ ಹೊಳೆಯಿತು. ಥಟ್ಟನೆ ಅದೇ ರಾತ್ರಿ ಬಸ್ ಹಿಡಿದು ಉಡುಪಿಗೆ ಹೋಗಿ ಅಡುಗೆ ಭಟ್ಟರೊಬ್ಬರನ್ನು ಹುಡುಕಿ ತನ್ನೊಂದಿಗೆ ಕರೆ ತಂದ.<br />
<br />
ಮಾರನೇ ದಿನದಿಂದ ಮಲಯಾಳಿ ಹೋಟಲ್ ಮತ್ತೆ ಶುರು! ಉಡುಪಿಯ ಅಡುಗೆ ಭಟ್ಟರು ಇಡ್ಲಿ, ವಡಾ, ನೀರ್ ದೋಸೆ, ಮಸಾಲೆ ದೊಸೆ ಮಾಡಿದ್ರೆ ಮಲಯಾಳಿ ತಾನೇ ಸ್ವಥ ಪುಟ್ಟು, ಆಪಂ ಥರದ ಮಲಯಾಳಿ ತಿನಿಸು ಮಾಡತೊಡಗಿದ.<br />
<br />
ಜನರ ಬಳಿ ಈಗ ಹೆಚ್ಚಿನ ಆಯ್ಕೆ ಇತ್ತು. ಮಲಯಾಳಿ ಹೋಟಲ್ ಗೆ ಹೋದರೆ ಎಲ್ಲವೂ ಸಿಗುತ್ತಿದ್ದರಿಂದ ಎಲ್ಲರೂ ಅಲ್ಲಿಗೇ ಹೋಗತೊಡಗಿದರು.<br />
<br />
ಓಕೆ. ಈಗ ಕಥೆ ಮುಗಿಯಿತು. ತಾವಿನ್ನು ಹೊರಡಬಹುದು.<br />
<br />
ಕಥೆಯ ನೀತಿ?<br />
<br />
ಇದು ಈಸೋಪನ ಅಥವ ಪಂಚತಂತ್ರದ ಕಥೆಯಲ್ಲ ನೀತಿ ಇರಲು! ಇದು ಬಿಸಿನೆಸ್!ಸಂದೀಪ್ ಕಾಮತ್http://www.blogger.com/profile/17139651775566254649noreply@blogger.com4tag:blogger.com,1999:blog-5762676011332353898.post-91374278280487801182011-12-08T23:41:00.004+05:302011-12-09T00:05:41.149+05:30ಮೂಢನಂಬಿಕೆಟಿ.ವಿ ಕಾರ್ಯಕ್ರಮ................<br /><br />ಬನ್ನಿ ವೀಕ್ಷಕರೆ ಈಗ ನಾವು ಮೂಢನಂಬಿಕೆಯ ಬಗ್ಗೆ ಚರ್ಚೆ ನಡೆಸೋಣ. ಯಾಕೆ ಜನ ಇನ್ನೂ ಈ ಮೂಢನಂಬಿಕೆಯನ್ನು ಮುಂದುವರೆಸುತ್ತಿದ್ದಾರೆ ಅನ್ನೋ ಚರ್ಚೆ ನಡೆಸೋಣ.<br /><br />....................ಚರ್ಚೆ........ಚರ್ಚೆ............ಚರ್ಚೆ....................<br /><br />ವೀಕ್ಷಕರೆ ಒಂದು ಚಿಕ್ಕ ಬ್ರೇಕ್ ನ ನಂತರ ಚರ್ಚೆ ಮುಂದುವರೆಸೋಣ.............................<br /><br />....ಜಾಹೀರಾತು.....<br /><br />ಸಮಸ್ಯೆಯಿಂದ ಬಳಲುತ್ತೀದ್ದೀರಾ ಕೊಳ್ಳಿರಿ ಅದೃಷ್ಟದ ಹರಳುಗಳು. ನಿಮ್ಮ ಯಾವುದೇ ಸಮಸ್ಯೆಗೆ ಇಲ್ಲಿದೆ ಪರಿಹಾರ. ಅದೃಷ್ಟದ ಹರಳುಗಳು.<br /><br />ವೀಕ್ಷಕರೇ ಬ್ರೇಕ್ ನ ನಂತರ ಮತ್ತೆ ಸ್ವಾಗತ............................................<br /><br /><br />....................ಚರ್ಚೆ........ಚರ್ಚೆ............ಚರ್ಚೆ....................<br /><br /><br />ವೀಕ್ಷಕರೆ ಒಂದು ಚಿಕ್ಕ ಬ್ರೇಕ್ ನ ನಂತರ ಚರ್ಚೆ ಮುಂದುವರೆಸೋಣ.............................<br /><br /><br />....ಜಾಹೀರಾತು.....<br /><br /><br />ಸ್ತ್ರೀ ಪ್ರೇಮ, ಪುರುಷ ಪ್ರೇಮ ವಶೀಕರಣ. ನಿಮ್ಮ ಎಲ್ಲಾ ಸಮಸ್ಯೆಗಳಿಗೂ ನಮ್ಮಲ್ಲಿದೆ ಪರಿಹಾರ. ಒಮ್ಮೆ ಭೇಟಿ ಕೊಡಿ.<br /><br /><br />ವೀಕ್ಷಕರೇ ಬ್ರೇಕ್ ನ ನಂತರ ಮತ್ತೆ ಸ್ವಾಗತ............................................<br /><br />....................ಚರ್ಚೆ........ಚರ್ಚೆ............ಚರ್ಚೆ....................<br /><br />ವೀಕ್ಷಕರೆ ಒಂದು ಚಿಕ್ಕ ಬ್ರೇಕ್ ನ ನಂತರ ಚರ್ಚೆ ಮುಂದುವರೆಸೋಣ.............................<br /><br /><br />....ಜಾಹೀರಾತು.....<br /><br />ಇಲ್ಲಿದೆ ಒಂದು ವಿಚಿತ್ರ ಬಾವಿ. ಆ ಬಾವಿಯ ನೀರಿನಲ್ಲಿ ಸ್ನಾನ ಮಾಡಿದರೆ ಚರ್ಮ ರೋಗಗಳು ವಾಸಿ ಆಗ್ತಾವೆ. ಇಂಥ ವಿಸ್ಮಯ ನಡೆಯೋದಾದರೂ ಎಲ್ಲಿ. ವೀಕ್ಷಿಸಿ 'ರಹಸ್ಯ ಲೋಕದಲ್ಲಿ' ಇಂದು ರಾತ್ರಿ ೧೨.೦೦ ಘಂಟೆಗೆ.<br /><br />ವೀಕ್ಷಕರೇ ಬ್ರೇಕ್ ನ ನಂತರ ಮತ್ತೆ ಸ್ವಾಗತ...........................................<br /><br />....................ಚರ್ಚೆ........ಚರ್ಚೆ............ಚರ್ಚೆ....................<br /><br /><br />....................ಚರ್ಚೆ........ಚರ್ಚೆ............ಚರ್ಚೆ....................<br /><br />ಚರ್ಚೆಯಲ್ಲಿ ಭಾಗವಹಿಸಿದ ತಮಗಲ್ಲರಿಗೂ ಧನ್ಯವಾದಗಳು.<br /><br />ನೋಡಿದ್ರಲ್ಲ ವೀಕ್ಷಕರೇ 21 ನೇ ಶತಮಾನದಲ್ಲೂ ಎಂತೆಂಥ ಮೂಢನಂಬಿಕೆಗಳು ಉಳಿದುಕೊಂಡಿವೆ ಅಂತ! ಇಂಥ ಮೂಢನಂಬಿಕೆಗಳನ್ನು ಒದ್ದು ಓಡಿಸುವ ಕೆಲಸ 'ನಿಮ್ಮಿಂದ' ಆಗಬೇಕಾಗಿದೆ. ಮತ್ತೆ ನಾಳೆ ಬೆಳಿಗ್ಗೆ ಭೇಟಿ ಆಗೋಣ ಬೆಳಿಗ್ಗೆ ೭ ಘಂಟೆಗೆ 'ಬೃಹತ್ ಗ್ಯಾಲಕ್ಸಿ' ಕಾರ್ಯಕ್ರಮದಲ್ಲಿ.<br /><br />ನಮಸ್ಕಾರ!ಸಂದೀಪ್ ಕಾಮತ್http://www.blogger.com/profile/17139651775566254649noreply@blogger.com10tag:blogger.com,1999:blog-5762676011332353898.post-83028478312975309882011-11-22T23:54:00.004+05:302011-11-23T00:07:12.068+05:30ನುಂಗಲಾಗುವ ಟ್ಯಾಬ್ಲೆಟ್ !!!ಶ್ರೀನಿಧಿಯವರು 'ನುಂಗಲಾರದ ಟ್ಯಾಬ್ಲೆಟ್ ತಿನ್ನಲಾಗದ ಬಿಸ್ಕತ್ತು ..' ಅಂತ ಪುಸ್ತಕ ಬರೆದಿದ್ದಾರೆ.<br /><br />ಆದರೆ ಗೂಗಲ್ translation ಕೃಪೆಯಿಂದಾಗಿ 'ನುಂಗಬಹುದಾದ ಟ್ಯಾಬ್ಲೆಟ್ ಗಳು' ಬಂದಿವೆ!<br /><br /><a onblur="try {parent.deselectBloggerImageGracefully();} catch(e) {}" href="https://blogger.googleusercontent.com/img/b/R29vZ2xl/AVvXsEg3lrtsIO4yf7v58bCiFMpeCJP4HAznOrHEmkv-rmjciTi2K_67i4lntrPXldAGJoTbiyYK4Zu801cuz4McVpFtFRGgHzFGopXTvAr5q6NNUo8_QkA1273wmiY-u2pQPfuOxe9mEbCwCjQ/s1600/tablet.jpg"><img style="display:block; margin:0px auto 10px; text-align:center;cursor:pointer; cursor:hand;width: 400px; height: 261px;" src="https://blogger.googleusercontent.com/img/b/R29vZ2xl/AVvXsEg3lrtsIO4yf7v58bCiFMpeCJP4HAznOrHEmkv-rmjciTi2K_67i4lntrPXldAGJoTbiyYK4Zu801cuz4McVpFtFRGgHzFGopXTvAr5q6NNUo8_QkA1273wmiY-u2pQPfuOxe9mEbCwCjQ/s400/tablet.jpg" border="0" alt=""id="BLOGGER_PHOTO_ID_5677888308105047058" /></a><br /><br />ಅಂದ ಹಾಗೆ ಗೂಗಲ್ ನ ಕನ್ನಡ-ಇಂಗ್ಲಿಷ್, ಇಂಗ್ಲಿಷ್-ಕನ್ನಡ ಅನುವಾದ ನೋಡಿಲ್ಲವಾದರೆ ಒಂದು ಕೈ ನೋಡಿ ಬಿಡಿ.<br /><a href="http://translate.google.co.in/" target="_blank">http://translate.google.co.in/</a><br /><br />ಅನುವಾದ ಅಷ್ಟೊಂದು ಸಮರ್ಪಕವಾಗಿಲ್ಲದಿದ್ದರೂ ಗೂಗಲ್ ನ ಈ ಪ್ರಯತ್ನ ಅಭಿನಂದನಾರ್ಹ.<br /><br />ನಾವು ಕೂಡಾ ಅನುವಾದವನ್ನು ಉತ್ತಮಪಡಿಸಲು ಸಹಕರಿಸಬಹುದು.ಸಂದೀಪ್ ಕಾಮತ್http://www.blogger.com/profile/17139651775566254649noreply@blogger.com1tag:blogger.com,1999:blog-5762676011332353898.post-88141221081281606992011-10-20T23:49:00.005+05:302011-10-21T00:25:47.422+05:30ಹಳೆಗನ್ನಡ, ಹೊಸಗನ್ನಡ, ಸುಲಭ ಕನ್ನಡ, ಕಷ್ಟ ಕನ್ನಡ!ತುಂಬಾ ತಿಳಿದಿರುವವರು, ತುಂಬಾ ಓದಿರೋರು, ಪಂಡಿತರು, ಭಾಷಾ ತಜ್ಞರು ಸೇರಿ ಒಂದು ಒಳ್ಳೆಯ ನಿರ್ಧಾರಕ್ಕೆ ಬಂದಿದ್ದಾರಂತೆ! ಅದೇನೆಂದರೆ ಕನ್ನಡ ಭಾಷೆಯ ಅಕ್ಷರಗಳನ್ನು ಸರಳೀಕರಣಗೊಳ್ಳಿಸೊದು. ಕನ್ನಡಕ್ಕೆ 'ಹೆಚ್ಚಾದ' ಅಕ್ಷರಗಳನ್ನು ಎತ್ತಿ ಕಸದ ಬುಟ್ಟಿಗೆ ಬಿಸಾಕಿ, ಕಷ್ಟದ ಅಕ್ಷರಗಳನ್ನು, ಒತ್ತಕ್ಷರಗಳನ್ನು ಎರಡೂ ಬದಿಯಿಂದ ಬಡಿದು ಸರಳಗೊಳಿಸೋದು ಅವರ ಉದ್ದೇಶ. ಅವರ ಪ್ರಯತ್ನ ಸಫಲವಾಗಲಿ ಅನ್ನೊದು ಹಾರೈಕೆ.<br /><br />ಹಾಗೆಯೆ ಇನ್ನೂ ಕೆಲವು ವಿಷಯಗಳನ್ನು ಸರಳೀಕರಣಗೊಳಿಸಿದರೆ ಶ್ರೀ ಸಾಮಾನ್ಯರಿಗೆ ತುಂಬಾ ಉಪಕಾರವಾಗುತ್ತಿತ್ತು.<br /><br />ಈ ಐಟಿ,ಬಿಟಿಯಿಂದಾಗಿ ಪಾಪ ಕೆಲಸಕ್ಕೆ ಹೋಗೋ ಹೆಣ್ಣು ಮಕ್ಕಳಿಗೆ ಅಡುಗೆ ಮಾಡೋದೇ ಒಂದು ದೊಡ್ಡ ತಲೆ ನೋವಾಗಿಬಿಟ್ಟಿದೆ. ಆದ್ದರಿಂದ ಸ್ವಲ್ಪ ಬಲ್ಲ ಹೆಂಗಸರೆಲ್ಲಾ ಸೇರಿ ಅಡುಗೆಯ ಕೆಲಸವನ್ನು ಸರಳೀಕರಣಗೊಳಿಸಿದ್ದಲ್ಲಿ ತುಂಬಾ ಸಹಾಯವಾಗುತ್ತಿತ್ತು!<br /><br />ಈ ಚಿಕನ್ ಬಿರಿಯಾನಿ ಮಾಡೋದು ಹೇಗೆ ಅಂತ ಏನಾದರು ಹುಡುಕಿದ್ರೆ ಮಾರುದ್ದ ಪಟ್ಟಿ ಸಿಗುತ್ತೆ. ಬಲ್ಲವರೆಲ್ಲಾ ಸೇರಿ ಈ ಚಿಕನ್ ಬಿರಿಯಾನಿಯನ್ನು ಸರಳೀಕರಣಗೊಳಿಸಿದ್ರೆ ಚೆನ್ನಾಗಿರ್ತಿತ್ತು. ಬರೀ ಅನ್ನಕ್ಕೆ ಒಂದೆರಡು ಚಿಕನ್ ಪೀಸ್ ಒಗೆದು ಒಂದಿಷ್ಟು ಖಾರದ ಪುಡಿ ಎರಚಿದರೆ ಚಿಕನ್ ಬಿರಿಯಾನಿ ಸಿದ್ಧ ಆಗೋ ಥರ ಯಾರಾದ್ರೂ ಮಾರ್ಪಾಡು ಮಾಡಿದ್ರೆ ತುಂಬಾ ಖುಷಿ ಆಗ್ತಿತ್ತು. ನಿಂದೊಳ್ಳೆ ಕಥೆ ಆಯ್ತು ಮಾರಾಯ ನಿನಗೆ ಬೇಕಿದ್ರೆ ಹಾಗೇ ಮಾಡಿ ತಿನ್ನು ಅಂತ ಬಯ್ಯಬೇಡಿ. ಎಲ್ಲದಕ್ಕೂ ನೀತಿ, ನಿಯಮಗಳಿರುತ್ತವೆ. ಹಾಗಾಗಿ ಆ ನೀತಿ ನಿಯಮಗಳನ್ನು ಸರಳಗೊಳಿಸಿದ್ರೇನೇ ಚೆನ್ನ!<br /><br />ಎರಡನೆಯದಾಗಿ ಈ ಪರೀಕ್ಷಾ ವಿಧಾನ ಸರಳೀಕರಣ ಆಗ್ಬೇಕು. ಈ ಸಂಧಿ, ಸಮಾಸ, ಛಂದಸ್ಸು, ಎಲ್ಲವನ್ನೂ ಎತ್ತಿ ಒಗೆದು ಒಂದೇ ಒಂದು ಪ್ರಶ್ನೆ ಇರಬೇಕು ಪರೀಕ್ಷೆಗೆ.<br /><br />ಅದೇನೆಂದರೆ " ನಿಮಗೆನು ಗೊತ್ತು ಬರೀರಪ್ಪ ... " ಮಾರ್ಕ್ಸ್ :೧೦೦<br /><br />ಕನ್ನಡ ಸರಳೀಕರಣಗೊಂಡ ಮೇಲೆ ಇನ್ನು ನಾಲ್ಕು ಕನ್ನಡಗಳಿರುತ್ತವೆ! <br /><br />ಹಳೆಗನ್ನಡ, ಹೊಸಗನ್ನಡ, ಸುಲಭ ಕನ್ನಡ ಮತ್ತು ಕಷ್ಟ ಕನ್ನಡ! (ಮಂಗಳೂರು ಕನ್ನಡ ಸಿನೆಮಾದಲ್ಲಿ ಮಾತ್ರ! ಬೆಂಗಳೂರು ಕನ್ನಡ ಬೆಂಗಳೂರಲ್ಲಿ ಮಾತ್ರ!)<br /><br />ಇನು ಕನದ ಸರಲಿಕರನಗೊಲಿಸಿದರೆ ನನಗೆ ಲೆಕನ ಬರೆಯುದು ಇನು ಸುಲಬ. ನಿಮಗೆ ಒದುದು ಕಶತ ಆದರೆ ಮತರ ನನಗೆ ಬಯಬೆದಿ!!!ಸಂದೀಪ್ ಕಾಮತ್http://www.blogger.com/profile/17139651775566254649noreply@blogger.com6tag:blogger.com,1999:blog-5762676011332353898.post-36331722238093319322011-10-01T22:42:00.002+05:302011-10-01T23:06:38.484+05:30ಕನ್ನಡಪ್ರಭವನ್ನು ತಲೆನೋವಿಲ್ಲದೆ ಓದುವುದು ಹೇಗೆ?ಕನ್ನಡವಪ್ರಭವನ್ನು ತಲೆ ನೋವಿಲ್ಲದೆ ಓದುವುದು ಹೇಗೆ ಅಂತ ಶೀರ್ಷಿಕೆ ನೋಡಿ ಕನ್ನಡಪ್ರಭವನ್ನು ಓದಿದರೆ ತಲೆನೋವು ಬರುತ್ತೋ ಅನ್ನೋ ಸಂಶಯ ಬಂದಿದ್ದಲ್ಲಿ ದಯವಿಟ್ಟು ಕ್ಷಮಿಸಿ!<br /><br />ನಾನು ಹೇಳಿರುವುದು ಕನ್ನಡಪ್ರಭ ಆನ್ ಲೈನ್ ಆವೃತ್ತಿಯ ಬಗ್ಗೆ. ಕನ್ನಡಪ್ರಭದ ಆನ್ ಲೈನ್ ಆವೃತ್ತಿ ಓದಬೇಕಾದರೆ ನೀವು ರಿಜಿಸ್ಟರ್ ಆಗೋದು,ಲಾಗಿನ್ ಆಗೋದು ಇಂಥ ರಗಳೆಗಳಿರುತ್ತವೆ. ಅದಕ್ಕೆ ಚಿಕ್ಕ ಉಪಾಯ ಇದೆ!<br /><br />ಮೊದಲು ನೀವು ಈ ವೆಬ್ ವಿಳಾಸ ನೆನಪಿಟ್ಟುಕೊಳ್ಳಬೇಕು :<br /><br />http://www.kannadaprabha.com/pdf/<br /><br />ಈಗ ನಿಮಗೆ ಯಾವ ದಿನದ ಪೇಪರ್ ಬೇಕು ? ಮತ್ತೆ ಯಾವ ಪುಟ ಬೇಕು ಅಂತ ಡಿಸೈಡ್ ಮಾಡಿದರೆ ಸಾಕು.<br /><br />ಉದಾ: 22/07/2010 ಪುಟ 6<br /><br />http://www.kannadaprabha.com/pdf/2272010/6.pdf ಇಲ್ಲಿ 2272010 ಗಮನಿಸಿ! ತಿಂಗಳು 07 ಅನ್ನು ಬರೀ 7 ಅಂತ ಹಾಕಬೇಕು. <br /><br />ನಾಳೆಯ ದಿನಾಂಕವನ್ನು ಇವತ್ತೇ ಹಾಕಿ ನೋಡಬೇಡಿ. ಕನ್ನಡಪ್ರಭದವರು ಜ್ಯೋತಿಷಿಗಳಲ್ಲ!!!ಸಂದೀಪ್ ಕಾಮತ್http://www.blogger.com/profile/17139651775566254649noreply@blogger.com3tag:blogger.com,1999:blog-5762676011332353898.post-52513062900469989372011-08-28T21:53:00.003+05:302011-08-28T21:58:58.980+05:30ವಿಚಿತ್ರ!
<br />ವಿಚಿತ್ರ!
<br />
<br />ಶಾಲೆಯ ಆವರಣದ 100 ಮೀಟರ್ ಆಸುಪಾಸಿನಲ್ಲಿ ತಂಬಾಕು ಮಾರಾಟ ನಿಶೇಧಿಸಲಾಗಿದೆ. ತಪ್ಪಿದಲ್ಲಿ ಅದು ಶಿಕ್ಷಾರ್ಹ ಅಪರಾಧ!
<br />
<br />ಆದರೆ ತಂಬಾಕು ಮಾರುವ ಅಂಗಡಿಯ ಸಮೀಪ ಶಾಲೆಯನ್ನು ಕಟ್ಟಬಹುದು!
<br />ಸಂದೀಪ್ ಕಾಮತ್http://www.blogger.com/profile/17139651775566254649noreply@blogger.com4tag:blogger.com,1999:blog-5762676011332353898.post-61778734082369409742011-07-17T00:00:00.001+05:302011-07-17T00:10:51.247+05:30ನಂಗಿಷ್ಟ ಆಗಿದ್ದು..ಇದನ್ನು ಕೇಳಿದ ಮೇಲೆ share ಮಾಡದೇ ಇರಲು ಮನಸಾಗಲಿಲ್ಲ!<br /><br /><object style="height: 390px; width: 640px"><param name="movie" value="http://www.youtube.com/v/XpKD732WAf8?version=3"><param name="allowFullScreen" value="true"><param name="allowScriptAccess" value="always"><embed src="http://www.youtube.com/v/XpKD732WAf8?version=3" type="application/x-shockwave-flash" allowfullscreen="true" allowScriptAccess="always" width="640" height="390"></object><br /><br />ಮತ್ತೆ ಇದೂ !<br /><br /><object style="height: 390px; width: 640px"><param name="movie" value="http://www.youtube.com/v/QHmz60_l2-k?version=3"><param name="allowFullScreen" value="true"><param name="allowScriptAccess" value="always"><embed src="http://www.youtube.com/v/QHmz60_l2-k?version=3" type="application/x-shockwave-flash" allowfullscreen="true" allowScriptAccess="always" width="640" height="390"></object><br /><br />ನಿಮ್ಮಿಂದ ಇನ್ನೂ ಇಂತಹ ಸುಂದರ ಹಾಡುಗಳು ಬರಲಿ ಅಶ್ವಿನಿ.<br /><br /><br />ಥ್ಯಾಂಕ್ಸ್ !ಸಂದೀಪ್ ಕಾಮತ್http://www.blogger.com/profile/17139651775566254649noreply@blogger.com7tag:blogger.com,1999:blog-5762676011332353898.post-39677739888589368632011-05-20T11:00:00.006+05:302011-05-20T11:47:42.868+05:30ಸಂದೀಪ್ Weds ದಿವ್ಯಾ !<a onblur="try {parent.deselectBloggerImageGracefully();} catch(e) {}" href="https://blogger.googleusercontent.com/img/b/R29vZ2xl/AVvXsEh02ui3H4vrl380Y3MUtleMfrmjZ8dxtgv5xdENv6zrCl2p7GLG70-ESLqhLCJ9d7wK5_IUmeHHaVfjElqWijBspxXtYVDsectjVq7q7XBVEMMIu0ZBcVOFYy4Xpl6utrFseElZSw5EJB8/s1600/4.jpg"><img style="cursor:pointer; cursor:hand;width: 400px; height: 266px;" src="https://blogger.googleusercontent.com/img/b/R29vZ2xl/AVvXsEh02ui3H4vrl380Y3MUtleMfrmjZ8dxtgv5xdENv6zrCl2p7GLG70-ESLqhLCJ9d7wK5_IUmeHHaVfjElqWijBspxXtYVDsectjVq7q7XBVEMMIu0ZBcVOFYy4Xpl6utrFseElZSw5EJB8/s400/4.jpg" border="0" alt=""id="BLOGGER_PHOTO_ID_5608673856155927330" /></a><br /><br /><br /><br /><br />ದಿನ ಉರುಳಿ ಯುಗವಾಗಿ<br />ಮನವೆರಡು ಒಂದಾಗಿ<br />ಪಿಸುಮಾತು ನುಡಿಯಾಗಿ<br />ಕನಸೊಂದು ನನಸಾಗಿದೆ..<br /><br />ಚೈತ್ರವು ಚಿಗುರಾಗಿದೆ<br />ಮಾಮರವು ಕೊನರಿದೆ<br />ಭೂಮಿ ಕಾದು ನಿಂತಿದೆ<br />ಆಗಸದ ಮಿಲನಕೆ...<br /><br />ಕಡಲು ಭೋರ್ಗರೆಯುತಿದೆ<br />ತೀರದ ಸೆಳೆತವಿದೆ <br />ನದಿಯು ಓಡೋಡಿ ಸಾಗುತಿದೆ<br /><a href="http://bhaavajeeevataledaaga.blogspot.com/">ಭಾವ ಜೀವ ತಳೆಯಲು</a> - <a href="http://kadalateera.blogspot.com/">ಕಡಲ ತೀರದಲಿ</a>!!!<br /><br />---------------------------------------------------<br /><br />ಸ್ನೇಹಿತರೆ,<br /><br />ಹೊಸ ಬದುಕಿನ ಹೊಸ ಆರಂಭಕೆ<br />ಮುನ್ನುಡಿ ಬರೆಯುತಿಹೆವು,<br />ಅಲ್ಲೊಂದು ಖುಷಿಯಿದೆ, ವಚನವಿದೆ<br />ಸಡಗರವಿದೆ, ಸಂತಸವಿದೆ, ಊಟವಿದೆ :)<br /><br />ಸತಿ ಪತಿಗಳಾಗುತಿಹೆವು,<br />ಜೂನ್ ೫, ೨೦೧೧ - ಆದಿತ್ಯವಾರದಂದು<br />೧೨.೨೮ರ ಅಭಿಜಿನ್ ಲಗ್ನದ ಸುಮುಹೂರ್ತದಲ್ಲಿ<br />ಉಡುಪಿಯ ಶಾರದಾ ಕಲ್ಯಾಣ ಮಂಟಪದಲ್ಲಿ<br /><br />ನೀವು ಬರಬೇಕು, ನಮ್ಮೊಂದಿಗಿರಬೇಕು, ನಮ್ಮನ್ನು ಹರಸಬೇಕು<br />ನಮ್ಮ ಆತಿಥ್ಯವನ್ನು ಸ್ವೀಕರಿಸಬೇಕು..<br /><br />ನಿಮ್ಮ ಆಗಮನದ ನಿರೀಕ್ಷೆಯಲ್ಲಿ...<br /><a href="http://www.blogger.com/profile/17139651775566254649">ಸಂದೀಪ್</a> ಮತ್ತು <a href="http://www.blogger.com/profile/09357710818480496683">ದಿವ್ಯಾ</a>ಸಂದೀಪ್ ಕಾಮತ್http://www.blogger.com/profile/17139651775566254649noreply@blogger.com36tag:blogger.com,1999:blog-5762676011332353898.post-34080738589843553852011-05-05T00:06:00.003+05:302011-05-05T00:21:41.425+05:30ಸೊಳ್ಳೆ...ನಿಮ್ಮ ಬಳಿ ಒಳ್ಳೆಯ ಕ್ಯಾಮೆರಾ ಇದ್ರೆ ಸೊಳ್ಳೆಯ ಒಂದು ಫೋಟೋ ತೆಗೆದು ನೋಡಿ! <br /><br />ಎಷ್ಟು ಸುಂದರ ಕಾಣ್ಸತ್ತೆ ಸೊಳ್ಳೆ. ಕಡುಗಪ್ಪು ಬಣ್ಣ. ಸುಂದರ ಕಾಲುಗಳು. ಕೆಂಪನೆ ಡುಮ್ಮ ಹೊಟ್ಟೆ. ಫಳ ಫಳ ಹೊಳೆಯೋ ಮೊನಚಾಗಿರೋ ಎರಡು ಸೂಜಿ.<br /><br />ನೋಡ್ತಾ ನೋಡ್ತಾ ಪಾಪ ಅನಿಸಿಬಿಡುತ್ತೆ. ಛೇ ಈ ಸೊಳ್ಳೆಯನ್ಯಾಕೆ ನಾವು ಅಷ್ಟು ದ್ವೇಷಿಸ್ತೀವಿ? ಪಾಪ ಅದೂ ತನ್ನ ಹೊಟ್ಟೆಪಾಡಿಗೆ ತಾನೇ ರಕ್ತ ಹೀರೋದು. ಅದು ಅದರ ಹವ್ಯಾಸ ಅಲ್ವಲ್ಲ!ಅಲ್ಲದೆ ಎಲ್ಲಾ ಸೊಳ್ಳೆಗಳೂ ಕೆಟ್ಟವೇನಲ್ಲ. ಕೆಲವು ಪಾಪದ ಸೊಳ್ಳೆಗಳೂ ಇರುತ್ತೆ! <br /><br />ಹೀಗೆ ಸೊಳ್ಳೆಯ ಮೇಲೂ ನಮಗೆ ಪ್ರೀತಿ ಉಕ್ಕುತ್ತೆ ಒಮ್ಮೊಮ್ಮೆ!<br /><br />ಆದರೆ ರಾತ್ರಿ ಮಲಗಿದಾಗ ಸೊಳ್ಳೆ ಗುಂಯ್ ಅನ್ನುತ್ತಾ ಕೆನ್ನೆ ಮೇಲೆ ಏನಾದ್ರೂ ಕೂತ್ರೆ ಟಪ್ ಅಂತ ಒಂದು ಶಬ್ದ ಕೇಳುತ್ತೆ!<br /><br />ಒಂದೇ ಏಟು ಸೊಳ್ಳೆ ಖಲಾಸ್!<br /><br />ಅಂದ ಹಾಗೆ ಈ ಪಾಕಿಸ್ತಾನ ಒಂದು ಸೊಳ್ಳೆ !ಸಂದೀಪ್ ಕಾಮತ್http://www.blogger.com/profile/17139651775566254649noreply@blogger.com8tag:blogger.com,1999:blog-5762676011332353898.post-47475616310470559962011-04-20T22:48:00.003+05:302011-04-20T23:00:05.955+05:30ಹೆಂಡತಿಯೊಬ್ಬಳು ಮನೆಯೊಳಗಿದ್ದರೆ -ಭಾಗ ೩’ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿ ರೂಪಾಯಿ’ ಅಂತ ಕೆ.ಎಸ್.ನ ಬರೆದಿದ್ದರು. ಆದರೆ ಬಹಳಷ್ಟು ಜನರಿಗೆ ಹೆಂಡತಿ ಮನೆಯೊಳಗಿದ್ದರಷ್ಟೇ ಕೋಟಿ ರೂಪಾಯಿ. ಹೆಂಡತಿ ತನಗೆ ಸರಿ ಸಮನಾಗಿ, ಕೆಲವೊಮ್ಮೆ ತನಗಿಂತ ಹೆಚ್ಚು ಬುದ್ಧಿವಂತಳಾಗಿರೋದು, ಸಂಪಾದಿಸೋದು ಬಹಳಷ್ಟು ಜನರಿಗೆ ಭಯ ಹುಟ್ಟಿಸೋ ವಿಷಯ! ಖಂಡಿತಾ ಇದು ಮೇಲ್ ಈಗೋ ವಿಷಯ. ಅಂದರೆ ಫೀಮೇಲ್ ಮೇಲ್ ಗಿಂತ ಮೇಲಾಗೋ ಭಯ ಮೇಲ್ ಗೆ ಹುಟ್ಟೋ ವಿಷಯ! ಇಂಥ ಸಮಾಜದಲ್ಲಿ ಅಲ್ಲೊಬ್ಬರು ಇಲ್ಲೊಬ್ಬರು ಹೆಂಡತಿಯನ್ನು ಹುರಿದುಂಬಿಸುವವರು, ಹೆಂಡತಿಯ ಬುದ್ಧಿಮತ್ತೆಯನ್ನು ಮನಸಾರೆ ಹೊಗಳುವವರೂ ಸಿಗುತ್ತಾರೆ. ಮೊನ್ನೆ ಅಮೆರಿಕಾದ ಪ್ರಥಮ ಪ್ರಜೆ ಬರಾಕ್ ಒಬಾಮ ಹೆಂಡತಿ ಮಿಶೆಲ್ ಳನ್ನು ಮನಸಾರೆ ಹೊಗಳಿದ್ದನ್ನೂ ಇಲ್ಲಿ ಸ್ಮರಿಸಬಹುದು. ಆದರೆ ಒಬಾಮ ಹೆಂಡತಿಗೆ ಹೆದರಿಯೇ ಹೊಗಳಿದ್ದು ಅನ್ನೋ ವಾದವನ್ನೂ ಮಾಡುವವರಿದ್ದಾರೆ.<br /><br />ತನಗಿಂತ ಬುದ್ಧಿವಂತ ಬೇರೊಬ್ಬರು ಇದ್ದಾರೆ ಅನ್ನೋದನ್ನು ಒಪ್ಪಿಕೊಳ್ಳೋದೆ ಮನುಷ್ಯನಿಗೆ ಅತ್ಯಂತ ಕಷ್ಟದ ಕೆಲಸ. ಅದರಲ್ಲೂ ಆ ’ಬೇರೆಯವರು’ ಹೆಂಡತಿ ಆಗಿದ್ದರಂತೂ ಕೇಳೋದೇ ಬೇಡ. ಹೆಂಡತಿ ಅನ್ನೋ ಶಬ್ದ ಕೇಳಿದ ತಕ್ಷಣವೆ ಕೆಲವರಿಗೆ ಹಿನ್ನೆಲೆಯಲ್ಲಿ ’ಕಾರ್ಯೇಶು ದಾಸಿ, ಶಯನೇಶು ರಂಭಾ ’ ಅನ್ನೋದು ರಾಗವಾಗಿ ಕೇಳತೊಡಗುತ್ತದೆ. ಇದರಲ್ಲೂ ಕಾರ್ಯೇಶು ಮೊದಲೋ ಶಯನೇಷು ಮೊದಲೊ ಅನ್ನೋದು ಅವರವರ preference ಮೇಲೆ ಬದಲಾಗುತ್ತಿರುತ್ತದೆ! ಗಂಡ ಬಹುಷಃ ಮನಸಾರೆ ಹೊಗಳೋದು ಹೆಂಡತಿಯ ಅಡುಗೆಯನ್ನು ಮಾತ್ರ.<br /><br />ಹೆಂಡತಿಯ ಆಯ್ಕೆಯ ವಿಷಯ ಬಂದಾಗಲೂ ಹುಡುಗಿಯ ವಯಸ್ಸು ತನಗಿಂತ ಕಡಿಮೆ ಇರಬೇಕು, ವಿದ್ಯಾರ್ಹತೆ ಕಡಿಮೆ ಇರಬೇಕು, ಎತ್ತರ ಕಡಿಮೆ ಇರಬೇಕು ಅನ್ನೋದು ಅಘೋಶಿತ ನಿಯಮವೇ ಆಗಿ ಬಿಟ್ಟಿದೆ. ಇಷ್ಟೆಲ್ಲಾ ವಿಷಯಗಳು ಕಡಿಮೆ ಇರುವಾಗ ಬುದ್ಧಿವಂತಿಕೆಯೂ ತನಗಿಂತ ಕಮ್ಮಿ ಇದ್ದೇ ಇರುತ್ತೆ ಅನ್ನೋದು ಹುಡುಗನ ಲೆಕ್ಕಾಚಾರ! ಕಾಲ ಬದಲಾದಂತೆ ಎಲ್ಲವೂ ಬದಲಾಗಿದೆ. ಹೆಂಗಸರಂತೂ ಎಲ್ಲಾ ಕ್ಷೇತ್ರದಲ್ಲೂ ಮಿಂಚಿದ್ದಾರೆ. ಇನ್ನು ಏನಿದ್ದರೂ ’ಕಾರ್ಯೇಶು CEO ' ಅನ್ನಬೆಕಷ್ಟೆ! <br /><br />***********************************************************************************<br />’ಹೆಂಡತಿಯೊಬ್ಬಳು ಮನೆಯೊಳಗಿದ್ದರೆ -ಭಾಗ ೩ ’ ಅಂತ ಯಾಕೆ ಹೆಸರಿಟ್ಟೆ ಅಂತ ನಿಮಗೆಲ್ಲ ಅನಿಸಿರಬೇಕು. ನಿಜ, ಭಾಗ ಒಂದು ಅಥವಾ ಎರಡು ನಾನು ಬರೆದಿಲ್ಲ !<br /><br />ನಾನು ಈ ಲೇಖನವನ್ನು ತುಂಬಾ ಹಿಂದೆ ಪತ್ರಿಕೆಯೊಂದಕ್ಕೆ ಬರೆದಿದ್ದೆ. As usual ಅಲ್ಲಿ ಪ್ರಕಟ ಆಗಿರಲಿಲ್ಲ! ಬ್ಲಾಗ್ ಗೆ ಹಾಕೋದಿಕ್ಕೆ ಮರೆತಿದ್ದೆ! ಈಗ <a href="http://anubhaava.wordpress.com/2009/03/03/%E0%B2%B9%E0%B3%86%E0%B2%82%E0%B2%A1%E0%B2%A4%E0%B2%BF%E0%B2%AF%E0%B3%8A%E0%B2%AC%E0%B3%8D%E0%B2%AC%E0%B2%B3%E0%B3%81-%E0%B2%AE%E0%B2%A8%E0%B3%86%E0%B2%AF%E0%B3%8A%E0%B2%B3%E0%B2%97%E0%B2%BF%E0%B2%A6/">ಅನು</a> ಅನ್ನೋರ ಬ್ಲಾಗ್ ಲೇಖನ ನೋಡಿ ನೆನಪಾಯ್ತು. ಅವರು <a href="http://simhansden.blogspot.com/2009/03/blog-post.html">ಸಿಂಹ</a> ಅನ್ನೋರ ಬ್ಲಾಗ್ ನೋಡಿ ಅದಕ್ಕೆ ಉತ್ತರವಾಗಿ ಬರೆದದ್ದಂತೆ!ಸಂದೀಪ್ ಕಾಮತ್http://www.blogger.com/profile/17139651775566254649noreply@blogger.com6tag:blogger.com,1999:blog-5762676011332353898.post-40139401523876698342011-04-16T23:56:00.003+05:302011-04-17T00:41:53.772+05:30ನೀವೇನೇ ಹೇಳಿ......ಇಂಥದ್ದೊಂದು ಆಟವನ್ನೂ ಬಹುತೇಕ ಜನರು ತಮ್ಮ ಬಾಲ್ಯದಲ್ಲಿ ಆಡಿರ್ತಾರೆ. ನಾವು ಚಿಕ್ಕಂದಿನಲ್ಲಿ ಕಲ್ಲುಗಳನ್ನು ಜೋಡಿಸಿ ಬೆಂಕಿ ಹೊತ್ತಿಸಿ ಅದರ ಮೇಲೊಂದು ತೆಂಗಿನ ಕರಟವನ್ನಿಟ್ಟು ಅದರಲ್ಲಿ ನೀರು ಹಾಕಿ ಚಹಾ,ಕಾಫಿ ಮಾಡೋ ಅಂಥ ಆಟವೊಂದನ್ನು ಆಡ್ತಾ ಇದ್ವಿ. ಎಷ್ಟೋ ಸಲ ಮನೆ ಒಳಗಿಂದ ಚಹಾ ಪುಡಿ,ಹಾಲು,ಸಕ್ಕರೆ ತಂದು ನಿಜಕ್ಕೂ ಚಹಾ ಮಾಡೋದೂ ಇತ್ತು. ಆದರೆ ಅಮ್ಮನ ಕೈಯಲ್ಲಿ ಬಯ್ಯಿಸಿ ಕೊಳ್ಳೋದೂ ಇತ್ತು. ಅದೂ ಸಾಲದೆಂಬಂತೆ ಜೋಪಡಿ ಥರ ಮನೆಯನ್ನು ಕಟ್ಟುವ ಆಟ ಬೇರೆ ಆಡ್ತಾ ಇದ್ವಿ. ಇರೋದಿಕ್ಕೆ ಇಷ್ಟು ಒಳ್ಳೆ ಮನೆ ಇದ್ರೂ ಅದೇನು ಜೋಪಡಿ ಕಟ್ಟೋ ಆಟ ನಿಮ್ಮದು ಅಂತ ಮನೆಯವರು ಬಯ್ಯೋದೂ ಇತ್ತು! <br /><br />ನಾವು ಈ ರೀತಿ ಜೊಪಡಿ ಕಟ್ಟಿ ಆಟ ಆಡೋ ಸಮಯದಲ್ಲೇ ನಿಜವಾಗಲೂ ಜೋಪಡಿಯಲ್ಲಿ ವಾಸಿಸುತ್ತಿದ್ದ ಮಕ್ಕಳು ನಮ್ಮ ಥರ ಟೆರೇಸ್ ಮನೆಯಲ್ಲಿ ವಾಸ ಮಾಡೋ ಕನಸು ಕಾಣ್ತಾ ಇದ್ರು ! <br /><br />ಬಹುಷಃ ಅದಕ್ಕೇ ಹೇಳಿರ್ಬೇಕು ಕವಿ - " ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ " ಅಂಥ !<br /><br />ಹಿಂದೆ ಕಿಲೋ ಮೀಟರುಗಟ್ಟಲೆ ನಡೀತಾ ಇದ್ರು ನಮ್ಮ ಅಪ್ಪ,ಅಮ್ಮಂದಿರು. ಆಗ ಅವರಿಗೆ ಖಂಡಿತ ಅನ್ನಿಸ್ತಿತ್ತು ’ ಹಾಳಾದ್ದು ನಾವು ಆರಾಮಾಗಿ ಬೇಕಾದ ಕಡೆ ಹೋಗೋ ಅಂಥ ಗಾಡಿ ಒಂದಿದ್ದರೆ ಎಷ್ಟು ಚೆನ್ನಾಗಿರ್ತಿತ್ತು ’ ಅಂತ. ಆ ದೇವರೇ ತಥಾಸ್ತು ಅಂದ ಹಾಗ ಬಸ್ಸು ರೈಲು ವಿಮಾನಗಳು ಬಂದು ಬಿಟ್ಟವು. ಈಗ ’ನೀವು ಏನೇ ಹೇಳಿ ಈ ಟೆಕ್ನಾಲಜಿ ನಮ್ಮನ್ನು ಹಾಳು ಮಾಡೋದೇ ಆಯ್ತು ಕಣ್ರಿ . ಹಿಂದೇನೆ ಚೆನ್ನಾಗಿತ್ತು. ಕಿಲೋಮೀಟರುಗಟ್ಟಲೆ ನಡೀತಾ ಇದ್ವಿ ಗಟ್ಟಿ ಮುಟ್ಟಾಗಿದ್ವಿ ’ ಅಂತೀವಿ. <br /><br />ಹಿಂದೆ ಒಂದು ಲೆಟರ್ ಹಾಕಿದ್ರೆ ಅದು ೧೦ ದಿನ ಆದ್ಮೇಲೆ ಬೇಕಾದವರಿಗೆ ತಲುಪಿ ಅವರು ಪೋಸ್ಟ್ ಆಫೀಸಿಗೆ ಹೋಗಿ ಇನ್ ಲ್ಯಾಂಡ್ ಲೆಟರ್ ತಗೊಂಡು ಅದರಲ್ಲಿ ಬರೆದು ಮತ್ತೆ ಪೋಸ್ಟ್ ಮಾಡಿ ನಮಗೆ ತಲುಪೋ ಅಷ್ಟರಲ್ಲಿ ತಿಂಗಳುಗಳೇ ಆಗ್ತಾ ಇತ್ತು. ಆಗಲೂ ನಮಗೆ ಅನ್ನಿಸ್ತಿತ್ತು ’ಹಾಳಾದ್ದು ಈ ಕಾಗದ ಒಂದೇ ದಿನದಲ್ಲಿ ತಲುಪೋ ಥರ ಇದ್ದಿದ್ರೆ ಎಷ್ಟು ಚೆನ್ನಾಗಿರ್ತಿತ್ತು ’ ಅಂತ. ಅದಕ್ಕೂ ಪರಿಹಾರ ಸಿಕ್ಕೇ ಬಿಡ್ತು , ಈ ಕಡೆ ಮೇಯ್ಲ್ ಹಾಕಿದ ತಕ್ಷಣ ಆ ಕಡೆಯಿಂದ ರಿಪ್ಲೈ ಬರೋ ಥರ ಟೆಕ್ನಾಲಜಿನೂ ಬಂತೂ. ಆದ್ರೂ ’ನೀವೇನೇ ಹೇಳಿ ಆ ಲೆಟರ್ ಗೋಸ್ಕರ ಪೋಸ್ಟ್ ಮ್ಯಾನ್ ಗೆ ಕಾಯೋದ್ರಲ್ಲಿ ಇರೋ ಸುಖ ಈ e-mail ಗಳಲ್ಲಿಲ್ಲ ಕಣ್ರಿ ’ ಅಂತೀವಿ ನಾವೆಲ್ಲಾ!<br /><br />ಹಿಂದೆ ಒಂದು ಟೆಲಿಫೋನ್ ಕಾಲ್ ಮಾಡಬೇಕಾದಲ್ಲಿ ಟ್ರಂಕ್ ಕಾಲ್ ಮಾಡಿ ಗಂಟೆ ಗಟ್ಟಲೆ ಕಾಯ್ತಾ ಇರ್ಬೇಕಾದ್ರೆ ಎಲ್ರಿಗೂ ಖಂಡಿತಾ ಅನ್ನಿಸ್ತಿತ್ತು ’ಛೆ ಒಂದು ಟೆಲಿಫೋನ್ ಕಾಲ್ ಮಾಡೋಕೂ ಇಷ್ಟು ಕಷ್ಟ ನಾ? ನಮಗೆ ಬೇಕಾದ ಹಾಗೆ ಕಾಲ್ ಮಾಡೋಕಾದ್ರೆ ಎಷ್ಟು ಚೆನ್ನಾಗಿರ್ತಿತ್ತು ’ ಅಂತ. ಈಗ ಆ ಟ್ರಂಕ್ ಕಾಲ್ ನೆನೆಸಿನೇ ಖುಷಿ ಪಡ್ತೀವಿ ನಾವು !<br /><br />ಹಿಂದೆ ರುಬ್ಬೋ ಕಲ್ಲಿನಲ್ಲಿ ರುಬ್ಬಿ ರುಬ್ಬಿ ಸುಸ್ತಾಗಿ ಹೆಂಗಸರೆಲ್ಲಾ ’ ಅಯ್ಯೋ ಚೆನ್ನಾಗಿ ರುಬ್ಬೋಕೆ ಯಾವುದಾದರೂ ಒಂದು ಮೆಶಿನ್ ಇದ್ದಿದ್ರೆ ಎಷ್ಟು ಚೆನ್ನಾಗಿರ್ತಿತ್ತು ’ ಅಂತ ಅಂದುಕೋತಾ ಇದ್ರು. ಆದ್ರೆ ಈಗ ’ನೀವೇನೆ ಹೇಳಿ ಆ ರುಬ್ಬೋ ಕಲ್ಲಿನಲ್ಲಿ ರುಬ್ಬಿ ಮಾಡಿದ ಅಡುಗೆ ರುಚಿ ಈ ಮಿಕ್ಸಿ,ಗ್ರೈಂಡರ್ ನಲ್ಲಿ ಇರಲ್ಲ ಕಣ್ರಿ ’ ಅಂತೀವಿ. <br /><br />ಈ ಮೊಬೈಲ್ ಫೋನ್,ಈ-ಮೇಲ್,ಟೆಲಿಫೋನ್.ಮಿಕ್ಸಿ,ಟಿ.ವಿ,ರೇಡಿಯೋ,ವಾಶಿಂಗ್ ಮೆಶಿನ್, ಏನೇ ಬರಲಿ ಅದನ್ನು ಬಳಸುತ್ತಲೇ , ಅದಿಲ್ಲದೇ ನಮ್ಮ ಬದುಕೇ ಸಾಗದು ಅನ್ನೋ ಪರಿಸ್ಥಿತಿ ಇದ್ದಾಗಲೆ ನಮ್ಮ ಮನಸ್ಸಲ್ಲಿ ಬರೋದು ’ನೀವೇನೆ ಹೇಳಿ ಹಿಂದೇನೇ ಚೆನ್ನಾಗಿತ್ತು .....’<br /><br /><br />ನೀವೇನೇ ಹೇಳಿ -<br /><br />ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ............ಸಂದೀಪ್ ಕಾಮತ್http://www.blogger.com/profile/17139651775566254649noreply@blogger.com12tag:blogger.com,1999:blog-5762676011332353898.post-17413756951189434262011-04-11T13:24:00.003+05:302011-04-11T13:32:53.984+05:30ಬಸ್ ಡೇ ...’ ಬಸ್ ಡೇ ’ ಆಚರಿಸುವ ಉತ್ಸಾಹದಲ್ಲಿ ಐಟಿ ಬಿಟಿ ಜನರೆಲ್ಲಾ ಬಸ್ ಏರಿದರು. <br /><br />ಬಸ್ ತುಂಬಿ ತುಳುಕಿದ್ದರಿಂದ ಬಸ್ ಡ್ರೈವರ್ ಮಹದೇವಪ್ಪ ಪೀಣ್ಯ ಸೆಕಂಡ್ ಸ್ಟೇಜ್ ನಲ್ಲಿ ಬಸ್ ನಿಲ್ಲಿಸಲೇ ಇಲ್ಲ.<br /><br />ದಿನಾ ಬಸ್ ನಲ್ಲೇ ಹೋಗುತ್ತಿದ್ದ ಕೇಶವ ರಾಯರು ಆ ದಿನ ನೂರು ರೂ ಕೊಟ್ಟು ಆಟೋದಲ್ಲಿ ಹೋಗಬೇಕಾಯಿತು.ಸಂದೀಪ್ ಕಾಮತ್http://www.blogger.com/profile/17139651775566254649noreply@blogger.com12tag:blogger.com,1999:blog-5762676011332353898.post-72713116974950889422011-04-01T21:15:00.002+05:302011-04-01T21:18:10.728+05:30ಏರ್ ಟೆಲ್ ಸೂಪರ್ ಸಿಂಗರ್...ಏರ್ ಟೆಲ್ ಸೂಪರ್ ಸಿಂಗರ್ ಸಂಗೀತ ಕಾರ್ಯಕ್ರಮ ಇನ್ನು ಮುಂದೆ ಐಡಿಯಾ ಸೂಪರ್ ಸಿಂಗರ್ ಅಂತ ಆಗುತ್ತೆ ......<br /><br /><br />ಮೊಬೈಲ್ ನಂಬರ್ ಪೋರ್ಟೇಬಿಲಿಟಿ ಬಂದಿದೆ Get Idea Sir Ji !!ಸಂದೀಪ್ ಕಾಮತ್http://www.blogger.com/profile/17139651775566254649noreply@blogger.com4tag:blogger.com,1999:blog-5762676011332353898.post-73422447831440437352011-03-13T23:24:00.004+05:302011-03-14T00:53:56.564+05:30ಇಂಗ್ಲೀಷ್ ಮತ್ತು ಮೊಬೈಲ್ ಫೋನ್ !ಒಂದು ಜಾಹೀರಾತು ಬರುತ್ತೆ. ಅದು ಚಹಾದ ಬಗ್ಗೆ. ತಂದೆ ಮಗನಿಗೆ ಚಹಾ ಕುಡಿಯಬೇಡ ಅನ್ನೋವಾಗ ತಾಯಿ ’ಯಾರು ಹೇಳಿದ್ದು ಚಹಾ ಒಳ್ಳೆಯದಲ್ಲ ಅಂತ ? ’ ಈ ಪ್ರಶ್ನೆಗೆ ತಂದೆ ನನಗೆ ಸರಿಯಾಗಿ ನೆನಪಿಲ್ಲ ಬಹುಶಃ ನನ್ನ ತಾಯಿ ಹೇಳಿರ್ಬೇಕು ಅಂತ ತಾಯಿ ಮೇಲೆ ಗೂಬೆ ಕೂರಿಸ್ತಾನೆ. ಅವನ ತಾಯಿ ಆಗ ’ ನನಗೂ ಸರಿಯಾಗಿ ನೆನಪಿಲ್ಲ ನಿನ್ನ ತಂದೆ ಹೇಳಿರ್ಬೇಕು ’ ಅಂತ ಅವಳ ಗಂಡನ ಮೇಲೆ ಗೂಬೆ ಕೂರಿಸ್ತಾಳೆ. ಕಡೆಗೂ ಚಹಾ ಕೆಟ್ಟದು ಅಂತ ಯಾರು ಹೇಳಿದ್ದು ಗೊತ್ತಾಗೋದೆ ಇಲ್ಲ!<br /><br />ಈ ಜಾಹೀರಾತಿನ ಪ್ರಸ್ತಾವ ಯಾಕೆ ಬಂತು ಅಂದರೆ ನನಗೂ ಅಂಥದ್ದೇ ಒಂದು ಪ್ರಶ್ನೆ ಮನದಲ್ಲಿ ಮೂಡಿದೆ.<br /><br />"ಯಾರು ಹೇಳಿದ್ದು ಕನ್ನಡ ನಶಿಸುತ್ತಿದೆ ಅಂತ ? " <br /><br />ನಿಮ್ಮಲ್ಲಿ ಕೆಲವರು ಥಟ್ ಅಂತ ನನಗೆ ಅವರು ಹೇಳಿದ್ದು ನನ್ಗೆ ಆ ವೆಬ್ ಸೈಟ್ ನಲ್ಲಿ ವಿಷಯ ಸಿಕ್ಕಿತ್ತು , ಅಂತ ಥೇಟ್ ಆ ಜಾಹೀರಾತಿನ ಹಾಗೆಯೇ ಹೇಳಬಹುದು. ಆದ್ರೆ ಅದು ಸರಿನಾ?<br /><br />ಕನ್ನಡಕ್ಕೆ ಸಾವಿರಾರು ಭಾಷೆಯ ಇತಿಹಾಸ ಇದೆ ಅಂತಾರೆ. ಹಾಗಾದ್ರೆ ಸಾವಿರಾರು ವರ್ಷಗಳಿಂದ ತನ್ನತನವನ್ನು ಉಳಿಸಿಕೊಂಡಿರುವ ಭಾಷೆ ಅದು ಹೇಗೆ ಸಾಯುತ್ತೆ ? <br /><br />ಇಂಗ್ಲೀಷ್ ಕೊಲೆಗಡುಕ ಭಾಷೆ ಅಂತಾರೆ. ಹಾಗಾದ್ರೆ ಇಂಗ್ಲೀಷ್ ನಮ್ಮ ಕನ್ನಡವನ್ನೂ ಕೊಂದು ಬಿಡುತ್ತಾ? ಲೇಸ್ ಜಾಹೀರಾತಿನಲ್ಲಿ ಕಾರ್ ನಲ್ಲಿ ಹೋಗುತ್ತಿರುವ ಒಬ್ಬಾತ, ಹಳ್ಳಿಯಲ್ಲಿ ಕೂತ ಒಬ್ಬನ ಹತ್ರ ದೊಡ್ಡಬಳ್ಳಾಪುರಕ್ಕೆ ಹೇಗೆ ಹೋಗೋಗುದು ಅಂತ ಕೇಳಿದಾಗ ಹಳ್ಳಿಯವ ಇಂಗ್ಲೀಷ್ ನಲ್ಲೆ ಉತ್ತರಿಸುತ್ತಾನೆ. ಹಾಗೆ ನಿಜಕ್ಕೂ ಆಗುವ ಸಾಧ್ಯತೆಗಳಿದೆಯಾ?<br /><br />ಪುರೋಹಿತರು ದೇವಸ್ಥಾನದಲ್ಲಿ ಇಂಗ್ಲೀಷ್ನಲ್ಲೇ ಮಂತ್ರ ಹೇಳ್ತಾರಾ ? ದೇವಸ್ಥಾನದ ಮೈಕ್ ನಲ್ಲಿ ಸುಪ್ರಭಾತವೂ ಇಂಗ್ಲೀಷ್ ನಲ್ಲೇ ಬರುತ್ತಾ? ನಮ್ಮ ವಿದ್ಯಾಭೂಷಣರು ಇಂಗ್ಲೀಷ್ ನಲ್ಲೇ 'This era is not for the truth tellers, this is the best time for wicked people ' ಅಂತ ಇಂಗ್ಲೀಷ್ ನಲ್ಲೇ ಭಜನೆ ಹಾಡ್ತಾರಾ? <br /><br />ನಾನು ಚಿಕ್ಕವನಿದ್ದಾಗ ಎರಡು ದಿನ ಪತ್ರಿಕೆ ಬರುತ್ತಿತ್ತು. ಒಂದು ಮುಂಗಾರು ಇನ್ನೊಂದು ಉದಯವಾಣಿ(ಪ್ರಜಾವಾಣಿ ಮತ್ತಿತರ ಪತ್ರಿಕೆಗಳ ಬಗ್ಗೆ ನನಗೆ ಗೊತ್ತಿರಲಿಲ್ಲ). ಆದ್ರೆ ಇವತ್ತು ಎಷ್ಟು ದಿನ ಪತ್ರಿಕೆಗಳಿವೆ? ಬರೀ ಕನ್ನಡ ಚಿತ್ರರಂಗದ ಬಗ್ಗೆಯೇ ಅರಗಿಣಿ,ಚಿತ್ತಾರ,ರೂಪತಾರ ಹೀಗೆ ಹಲವು ಪತ್ರಿಕೆಗಳಿವೆ. ಸುಧಾ,ತರಂಗ ಹೀಗೆ ವೈವಿಧ್ಯಮಯ ಪತ್ರಿಕೆಗಳಿವೆ. ಈ ಪತ್ರಿಕೆಗಳೆಲ್ಲವೂ ಮಾಯ ಆಗುತ್ತಾ ?<br /><br />ಆಗ ಇದ್ದಿದ್ದು ಒಂದು ದೂರದರ್ಶನ. ಅದೂ ಭಾನುವಾರ ಸಾಯಂಕಾಲ ನೋಡೋದಕ್ಕೆ ಸಿಕ್ತಾ ಇದ್ದಿದ್ದು ಒಂದೇ ಒಂದು ಕನ್ನಡ ಪಿಕ್ಚರ್ರು! ಈಗ ಕನ್ನಡ ಸಿನಿಮಾಗಳಿಗೆ ಅಂತಾನೇ ಚ್ಯಾನೆಲ್ ಇದೆ. ಉದಯ,ಈ ಟಿವಿ,ಸುವರ್ಣ, ಹೀಗೆ ಹತ್ತು ಹಲವು ಚ್ಯಾನೆಲ್ ಗಳಿವೆ.ಅಗತ್ಯವಿಲ್ಲದಿದ್ದರೂ ಬರೀ ನ್ಯೂಸ್ ಗೆ ಅಂತಲೇ ಐದು ಚ್ಯಾನೆಲ್ ಗಳಿವೆ ಇನ್ನೊಂದು ಬರಲು ಸಿದ್ಧವಾಗಿ ನಿಂತಿದೆ! ಇವೆಲ್ಲವೂ ನಿಂತು ಹೋಗುತ್ತಾ ?<br /><br />ಕೆಲವು ವರ್ಷದ ಹಿಂದೆ ಇಂಟರ್ನೆಟ್ ನಲ್ಲಿ ಕನ್ನಡವನ್ನು ದುರ್ಬೀನು ಹಿಡಿದು ಹುಡುಕಬೇಕಾಗಿತ್ತು.ಆದರೆ ಈಗ ಕನ್ನಡದಲ್ಲಿ ಸಾವಿರಕ್ಕೂ ಹೆಚ್ಚು ಬರೀ ಬ್ಲಾಗ್ ಗಳಿವೆ. ಅವಧಿ,ಕೆಂಡಸಂಪಿಗೆ,thatskannada.com ನಂಥ ವೆಬ್ ಸೈಟ್ ಗಳಿವೆ. ಬಹುತೇಕ ಎಲ್ಲಾ ಪತ್ರಿಕೆಳೂ ತಮ್ಮ ಸ್ವಂತ ವೆಬ್ ಸೈಟ್ ಹೊಂದಿವೆ.<br /><br />ಆದರೂ ಯಾಕೆ ನಮಗೆ ಇಂಥಾ ಆತಂಕ? ಇಂಗ್ಲೀಷ್ ನಿಜಕ್ಕೂ ಕನ್ನಡವನ್ನು ಕೊಂದು ಬಿಡುತ್ತಾ ? ಕನ್ನಡದ ಕಥೆ ಹೀಗಾದ್ರೆ ನನ್ನ ಮಾತೃಭಾಷೆಯಾದ ಕೊಂಕಣಿಯ ಗತಿ ಏನು, ನನ್ನ ಊರಿನ ಭಾಷೆಯಾದ ತುಳುವಿನ ಗತಿ ಏನು? ಕನ್ನಡಕ್ಕೆ ಕೊನೆ ಪಕ್ಷ ತನ್ನದೇ ಲಿಪಿ ಇದೆ ,ಪತ್ರಿಕೆಗಳಿವೆ,ಚ್ಯಾನೆಲ್ ಗಳಿವೆ ಆದರೆ ತುಳು ಕೊಂಕಣಿಗಳಿಗೆ ಅವೂ ಇಲ್ಲ! ಹೀಗಾದರೆ ಗತಿ ಏನು ?<br /><br />ಆದರೆ ಈ ಪ್ರಶ್ನೆ ಅಷ್ಟು ಜಟಿಲ ಅಂತಲೂ ಅನಿಸುವುದಿಲ್ಲ ಕೆಲವೊಮ್ಮೆ.<br /><br />ನನ್ನ ಪ್ರಕಾರ ಇಂಗ್ಲೀಷ್ ಅಂದರೆ ಮೊಬೈಲ್ ಫೋನ ಇದ್ದ ಹಾಗೆ. ಹಿಂದೆ ಮೊದಲ ಬಾರಿಗೆ ಮೊಬೈಲ್ ಫೋನ್ ಭಾರತಕ್ಕೆ ಬಂದಾಗ ಅದೊಂದು ಲಕ್ಷುರಿ ವಸ್ತು ಆಗಿತ್ತು. ಇನ್ ಕಮಿಂಗ್ ಗೆ ಇಪ್ಪತ್ತು ರೂ ಇದ್ದ ಕಾಲದಲ್ಲೆಲ್ಲಾ ಬರೀ ಶ್ರೀಮಂತರಷ್ಟೇ ಮೊಬೈಲ್ ಕೊಳ್ಳೋಕೆ ಸಾಧ್ಯ ಆಗ್ತಿತ್ತು. ’ಹೇ ಅವನ(ರ?) ಬಳಿ ಮೊಬೈಲ್ ಇದೆ ’ ಅನ್ನೋದು ತುಂಬಾ ಪ್ರತಿಷ್ಟೆಯ ವಿಷಯವಾಗಿತ್ತು.<br /><br />ಆದರೆ ಈಗ ? ಮೊಬೈಲ್ ಅನ್ನೋದು ಒಂದು ಬೇಸಿಕ್ ನೀಡ್ ಆಗಿದೆ. ಯಾವುದೇ ಕೆಲಸ ಅಥವಾ ವಿಷಯ ಇರಲಿ, ಅದು ನಮಗೆ ಮಾಡಲು ಸಾಧ್ಯವಾಗದ ವಿಷಯ ಆಗಿದ್ದು ಅದನ್ನು ಬೇರೆಯವರು ಮಾಡಿದಾಗ ನಮಗೆ ಅದರ ಬಗೆಗೊಂದು ವಿಚಿತ್ರ ಬೆರಗು ಮೂಡುತ್ತೆ. ಸರ್ಕಸ್ ನಲ್ಲಿ ಒಬ್ಬಾತ ಹತ್ತು ಚೆಂಡನ್ನು ಒಮ್ಮೇಲೆ ಚಿಮ್ಮಿಸಿ ಆಟ ಆಡುವುದನ್ನು ನೋಡಿ ಬೆರಗುಗೊಂಡಂತೆ! <br /><br />ಹಿಂದೆ ಇಂಗ್ಲೀಷ್ ವಿಷಯದ ಬಗೆಗೂ ಅಂಥದ್ದೇ ಒಂದು ಬೆರಗು ನಮಗಿತ್ತು! ಕನ್ನಡ ಮೀಡಿಯಂ ನಲ್ಲಿ ಕಲಿತ ಡಿಗ್ರಿ ಮುಗಿಸಿದಾತ ಕೂಡ ಇಂಗ್ಲೀಷ್ ಮೀಡಿಯಂನಲ್ಲಿ ಕಲಿತ ಐದನೆ ಕ್ಲಾಸ್ ಹುಡುಗನ ಇಂಗ್ಲೀಷ್ ನೋಡಿ ತನ್ನೊಳಗೇ ಕೀಳರಿಮೆಗೆ ಒಳಗಾಗುತ್ತಿದ್ದ ಕಾಲ ಅದು. ಯಾರಾದರೂ ಠಸ್ ಪುಸ್ ಅಂತ ಇಂಗ್ಲೀಷ್ ಮಾತಾಡ್ತಿದ್ರೆ ಅದನ್ನು ದೊಡ್ಡದೊಂದು ಬೆರಗಿನಿಂದ ನೋಡುತ್ತಿದ್ದ ಕಾಲ ಒಂದಿತ್ತು. ’ಅಳಿಯಂದ್ರು ಎಷ್ಟು ಚೆನ್ನಾಗಿ ಇಂಗ್ಲೀಷ್ ಮಾತಾಡ್ತಾರೆ ಗೊತ್ತಾ ? ’ ಅಂತ ಮಾವ ಹೇಳಿಕೊಂಡು ತಿರುಗಾಡ್ತಾ ಇದ್ದ ಕಾಲ ಅದು.<br /><br />ಆದರೆ ಈಗ ಇಂಗ್ಲೀಷ್ ಬಗೆಗೆ ಯಾರಿಗೂ ಅಂಥ ಬೆರಗಿಲ್ಲ! ಬಹುತೇಕ ಎಲ್ಲರಿಗೂ ಈಗ ಇಂಗ್ಲೀಷ್ ಬರುತ್ತೆ. ಮಕ್ಕಳೂ ಈಗ ಇಂಗ್ಲೀಷ್ ಕಲಿತಿದ್ದಾರೆ. ಆದರೆ ಅವರಿಗೆ ಬರದೇ ಇರೋದು ಕನ್ನಡ ಮಾತ್ರ. ಈ ಮಕ್ಕಳು ಒಂದು ದಿನ ಕನ್ನಡವನ್ನು ಬೆರಗಿನಿಂದ ನೋಡೋ ಕಾಲ ಬಂದೇ ಬರುತ್ತೆ. ’hey see how fluent his/her Kannada is ' ಅಂತ ಹೇಳೋ ಕಾಲ ಬರುತ್ತೆ. ಆಗ ಎಲ್ಲರೂ ಕನ್ನಡವನ್ನು ಮತ್ತೆ ಪ್ರೀತಿಸಲು ಶುರು ಮಾಡ್ತಾರೆ. ಅಲ್ಲಿಯವರೆಗೆ ಕಾಯಬೇಕಷ್ಟೆ.<br /><br />ನಿನ್ನದೊಂದು ಹುಚ್ಚು ಕನಸು ಅಂತೀರಾ ? ಇರಲಿ ಬಿಡಿ ಹುಚ್ಚು ಕನಸು ಕಾಣೋದ್ರಲ್ಲೂ ಒಂದು ಖುಷಿ ಇದೆ !ಸಂದೀಪ್ ಕಾಮತ್http://www.blogger.com/profile/17139651775566254649noreply@blogger.com10tag:blogger.com,1999:blog-5762676011332353898.post-56908546783772204652011-02-22T00:38:00.003+05:302011-02-22T01:01:14.855+05:30ಹೊಚ್ಚ ಹೊಸ ಚ್ಯಾನಲ್ , ಹೊಚ್ಚ ಹೊಸ ಕಾರ್ಯಕ್ರಮ !ಹೊಚ್ಚ ಹೊಸ ಚ್ಯಾನಲ್ ಒಂದಕ್ಕೆ ಹೊಚ್ಚ ಹೊಸ ಕಾರ್ಯಕ್ರಗಳನ್ನು ಮಾಡಿಕೊಡುವವರು ಬೇಕಾಗಿದ್ದಾರೆ. ಅಂದ ಹಾಗೆ ಬೇಕಾಗಿರೋ ಕಾರ್ಯಕ್ರಮಗಳ ಪಟ್ಟಿ ಈ ರೀತಿ ಇವೆ :<br /><br />ಸಿಕ್ಸರ್ ,ಬೌಂಡರಿ ಲೈನ್ ಥರದ ಆದರೆ ವಿಭಿನ್ನವಾದ 365 ದಿನವೂ ಇರೋ ಕ್ರೀಡಾ ಕಾರ್ಯಕ್ರಮ .<br /><br />ಲೇಡಿಸ್ ಕ್ಲಬ್ ಥರದ ಆದರೆ ವಿಭಿನ್ನವಾದ ಗಂಡಸರೇ ಜಾಸ್ತಿ ನೋಡೋ ಹೆಂಗಸರ ಕಾರ್ಯಕ್ರಮ.<br /><br />ಹೀಗೂ ಉಂಟೆ , ಅಗೋಚರ ಥರದ್ದೇ ಆದರೆ ವಿಭಿನ್ನವಾದ ಯಾವುದಾದರೂ ಹೆದರಿಸೋ,ಬೆದರಿಸೋ ಕಾರ್ಯಕ್ರಮ .<br /><br />ಕೇಳ್ರಪ್ಪೋ ಕೇಳಿ , ಸಿಂಗ್ರಿ ರೌಂಡ್ಸ್ ಥರದ್ದೇ ಆದರೆ ವಿಭಿನ್ನವಾದ ಮಿಮಿಕ್ರಿ ಕಾರ್ಯಕ್ರಮ.<br /><br />ಚಕ್ರವ್ಯೂಹ , ಟಾರ್ಗೆಟ್ ಥರದ್ದೆ ಆದರೆ ವಿಭಿನ್ನವಾದ ಟಾಕ್ ಶೋ .<br /><br />ಯೂ ಟ್ಯೂಬ್ ವಿಡಿಯೋಗಳನ್ನು ಎಗರಿಸಿ ಕನ್ನಡ ಕಮೆಂಟರಿ ಕೊಡೋ ಯೂ ಟ್ಯೂಬ್ ಮಸಾಲಾ ಥರದ ಕಾರ್ಯಕ್ರಮ.<br /><br />ವಾರಂಟ್ , ಕ್ರೈಂ ಬೀಟ್ ಥರದ ಆದರೆ ವಿಭಿನ್ನವಾದ ಪೋಲೀಸ್ ಸ್ಟೇಶನ್ ಕಾರ್ಯಕ್ರಮ .<br /><br /><br />ಕ್ರಿಯೇಟಿವ್ ಆಗಿರೋ ಜನರು ಮಾತ್ರ ಅರ್ಜಿ ಸಲ್ಲಿಸಿ.ಸಂದೀಪ್ ಕಾಮತ್http://www.blogger.com/profile/17139651775566254649noreply@blogger.com6tag:blogger.com,1999:blog-5762676011332353898.post-50955556687741360802011-01-23T21:04:00.003+05:302011-01-23T21:26:24.308+05:30ಚಿತ್ರರಂಗ ಮತ್ತು ಥರ್ಮೋಡೈನಾಮಿಕ್ಸ್ ನಿಯಮ !"Energy can neither be created nor destroyed. It can only be converted from one form to another " - First law of Thermodynamics .<br /><br />" ಶಕ್ತಿಯನ್ನು ಸೃಷ್ಟಿಸಲೂ ಸಾಧ್ಯವಿಲ್ಲ , ನಾಶಗೊಳಿಸಲೂ ಸಾಧ್ಯವಿಲ್ಲ. ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಬದಲಾಯಿಸಬಹುದಷ್ಟೆ " - ಥರ್ಮೋ ಡೈನಾಮಿಕ್ಸ್ ಮೊದಲನೆಯ ನಿಯಮ.<br /><br /><br />"Cinema can neither be created nor destroyed, It can only be remade from one language to another " - First law of film industry .<br /><br />"ಸಿನೆಮಾವನ್ನು ನಿರ್ಮಿಸಲೂ ಸಾಧ್ಯವಿಲ್ಲ ನಾಶಗೊಳಿಸಲೂ ಸಾಧ್ಯವಿಲ್ಲ , ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ರಿಮೇಕ್ ಮಾಡಬಹುದಷ್ಟೆ. " - ಚಿತ್ರರಂಗದ ಮೊದಲನೆಯ ನಿಯಮ.ಸಂದೀಪ್ ಕಾಮತ್http://www.blogger.com/profile/17139651775566254649noreply@blogger.com6tag:blogger.com,1999:blog-5762676011332353898.post-51166882807517655852011-01-15T23:06:00.003+05:302011-01-15T23:53:21.146+05:30ಟಿ.ವಿ anchor ಆಗ್ತೀರಾ?ಒಂದು ಉಚಿತ ಸಲಹೆ ಇದೆ ! ಬೇಕಾದ್ರೆ ಉಪಯೋಗಿಸಿಕೊಳ್ಳಿ ! ನೀನೆ ಯಾಕೆ ಅದನ್ನು ಉಪಯೋಗಿಸಬಾರದು ಅಂತ ಮಾತ್ರ ಕೇಳಬೇಡಿ !<br /><br />ವಿಷಯ ಏನಂದ್ರೆ ಇತ್ತೀಚೆಗೆ ಕನ್ನಡ ಚ್ಯಾನೆಲ್ ಗಳು ಜಾಸ್ತಿ ಆಗಿವೆ. ಹೀಗಾಗಿ ಜಾಸ್ತಿ ಆಗಿರೋ ಚ್ಯಾನೆಲ್ ಗಳಿಗೆ anchor ಗಳ ಕೊರತೆಯೂ ಜಾಸ್ತಿ ಅಗಿವೆ. ನೀವೂ ಒಂದು ಕೈ ನೋಡ್ತೀರಾದ್ರೆ ನೋಡಿ !<br /><br />ಬೆಳ್ಳಂಬೆಳಗ್ಗೆ ಬರೋ ಪ್ರೋಗ್ರಾಮ್ ಇದು. ಎಲ್ಲಾ ಚ್ಯಾನಲ್ ಗಳಲ್ಲೂ ಬರುತ್ತೆ . ಅದೇ ರಿ ಫೋನ್ ಮಾಡಿ ಹಾಡು ಕೇಳೋದು.<br /><br />ನಾನು ನಿಮಗೆ ಬರೀ 4-5 ಟಿಪ್ಸ್ ಹೇಳಿ ಕೊಡ್ತೀನಿ. ಅದರಲ್ಲೇ ಪ್ರೋಗ್ರಾಮ್ ಮುಗಿಸಿ ಮನೆಗೆ ಹೋಗಬಹುದು. ಎಡವಟ್ಟಾದ್ರೆ ನಿಮ್ ಕರ್ಮ! ನನ್ನನ್ನು ಬಯ್ಯ ಬೇಡಿ ಮತ್ತೆ.<br /><br />ಕೆಳಗೆ ಬರೆದಿರೋ ಥರ ಮಾಡಿ . ಉಳಿದದ್ದು ದೇವರ ಮೇಲೆ ಭಾರ ಹಾಕಿ!<br /><br />ಮೊದಲ ಕಾಲರ್ :<br /><br /><br />’ಸರ್ ನಿಮ್ ಹೆಸರು ’ . ( ಸರ್ ಅಥವಾ ಮ್ಯಾಡಮ್ ಅನ್ನೊದನ್ನು ಗೊತ್ತು ಮಾಡೋದು ನಿಮ್ ಕೆಲಸ ನನ್ನದಲ್ಲ!)<br />ಏನೋ ಒಂದು ಹೆಸರು ಹೇಳ್ತಾರೆ . ಅಪರೂಪಕ್ಕೊಮ್ಮೆ ’ ವಾವ್ ನಿಮ್ ಹೆಸರು ತುಂಬಾ ಚೆನ್ನಾಗಿದೆ ’ ಅನ್ನಬೇಕು. ಎಲ್ಲರಿಗೂ ಹೇಳೋಕೆ ಹೋಗ್ಬೇಡಿ ಮತ್ತೆ!<br /><br />ಮುಂದಿನ ಪ್ರಶ್ನೆ ’ ಸರ್ ಎಲ್ಲಿಂದ ಕಾಲ್ ಮಾಡ್ತೀರಾ ? ’ ಅನ್ನೋದು . ಕೆಲವು ಅಧಿಕ ಪ್ರಸಂಗಿಗಳು ’ಸರ್ ನಾನು ತಿಮ್ಮಣ್ಣ ಬೀದರ್ ಡಿಸ್ಟ್ರಿಕ್ಟ್ ಸುರಪುರ ತಾಲೂಕು ಪಿನ್ ಕೋಡ್ ೫೮೦೦೩೧ ಇಂದ ಕಾಲ್ ಮಾಡ್ತಾ ಇದ್ದೀನಿ’ ಅಂತ ಮೊದಲೇ ಹೇಳಿ ಬಿಡ್ತಾರೆ . ಅವರಿಗೆ ಎಲ್ಲಿಂದ ಮಾತಾಡ್ತೀರಿ ಅಂತ ಕೇಳೋಕೆ ಹೋಗ್ಬೇಡಿ!<br /><br />ಆಮೇಲೆ ಮುಂದಿನ ಪ್ರಶ್ನೆ ’ಸರ್ ತಿಂಡಿ ಆಯ್ತಾ ? ’ ಅನ್ನೋದು . ನಂಗೂ ಗೊತ್ತು ನೀವು ಬೆಳಿಗ್ಗೆ ಬೇಗ ಸ್ಟುಡಿಯೋಗೆ ಬಂದಿರ್ತೀರಾ.ನಿಮ್ಮ ತಿಂಡಿ ಇನ್ನೂ ಆಗಿರಲ್ಲ .ಆದ್ರೆ ಏನ್ ಮಾಡೋದು ಹೇಳಿ ಇಂಥದ್ದೆಲ್ಲಾ ಕೇಳಲೇ ಬೇಕು :(<br />ಅವರು ’ಹೂಂ ಆಯ್ತು ಬಿಸಿ ಬೇಳೆ ಬಾತ್ ಮಾಡಿದ್ವಿ ’ ಅಂತಾರೆ. ನೀವು ’ಏನ್ರಿ ಒಬ್ರೇ ತಿನ್ತೀರಾ, ನಂಗಿಲ್ವಾ ? ’ ಅನ್ಬೇಕು.<br />ಅವರೂ ಸಂಭಾವಿತರ ಹಾಗೆ ’ಹೂಂ ಬಂದ್ ಬಿಡಿ ಮನೆಗೆ ’ ಅಂತ ಪಾಪ ಕರೀತಾರೆ.ಆಡ್ರೆಸ್ ಕೇಳಿ ಹೋಗ್ಬಿಟ್ಟೀರಾ ಮತ್ತೆ ! ಹುಷಾರು ! ಇದೆಲ್ಲಾ ಬರೀ ಫಾರ್ಮಾಲಿಟಿಗೆ ಕಣ್ರಿ! <br /><br />ಇನ್ನು ಕೆಲವು ಮನೆಗಳಲ್ಲಿ ಅಪ್ಪ ಅಮ್ಮ ಕೆಲಸಕ್ಕೆ ಹೋದ ಮೇಲೆ ಮಕ್ಕಳು ಕಾಲ್ ಮಾಡಿರ್ತಾರೆ. ಒಳ್ಳೆ ತಲೆ ನೋವು . ಮಕ್ಕಳು ಅಂತ ಹಗುರ ತಗೋಬೇಡಿ. ನಿಮಗಿಂತ ಸ್ಮಾರ್ಟ್ ಆಗಿರ್ತಾರೆ ಅವರು!<br /><br />ಅವರು ಖಂಡಿತ ’ಜಿಂಕೆ ಮರೀನಾ ’ , ’ಪ್ರೀತ್ಸೆ ಪ್ರೀತ್ಸೆ’ ಹಾಡುಗಳನ್ನೇ ಕೇಳೋದು. ಅವರಿಗೆ ಅಂತ ’ಕನ್ನಡದ ಮಕ್ಕಳೆಲ್ಲಾ ಒಂದಾಗಿ ಬನ್ನಿ ’ ಥರದ ಮಕ್ಕಳ ಹಾಡು ಹುಡುಕೋಕೆ ಹೋಗ್ಬೇಡಿ. ನಿಮ್ ಟೈಮ್ ವೇಸ್ಟ್ ಅಷ್ಟೆ !<br /><br />ಕೆಲವು ತರ್ಲೆ ಕಾಲರ್ ಗಳಿರ್ತಾರೆ. ’ ಮ್ಯಾಡಮ್ ನಿಮ್ ಮನೆ ಎಲ್ಲಿ ,ಯಾವ್ ಕಾಲೇಜ್ ’ ಅಂತೆಲ್ಲಾ ಬುಡಕ್ಕೆ ಕೈ ಹಾಕಿ ಬಿಡ್ತಾರೆ! ಆಗ ನೀವು ’ ಸರ್ ನಿಮ್ ಟಿ.ವಿ ವಾಲ್ಯೂಮ್ ಮ್ಯೂಟ್ ಮಾಡಿ . ಏನೂ ಕೇಳಿಸ್ತಾ ಇಲ್ಲ ,ಹಲೋ ಹಲೋ... ಹಲೋ . ’ ಅಂತ ಕಾಲ್ ಕಟ್ ಮಾಡ್ಬಿಡಿ. ಸ್ವಲ್ಪ ಯಾಮಾರಿದ್ರೂ ನಾಳೆ ಬೆಳಿಗ್ಗೆ ನಿಮ್ ಮನೆ ಮುಂದೇನೆ ಹಾಜರ್ ಆಗಿರ್ತಾರೆ ಹುಷಾರು !<br /><br />ಆಮೇಲೆ ಕೊನೆಯದಾಗಿ ’ ಯಾರಿಗೆ ವಿಶ್ ಮಾಡ್ಬೇಕಿತ್ತು ’ ಅಂತ ಕೇಳಿ. ಅವರೂ ಯಾರದ್ದೋ ಹೆಸರು ಹೇಳಿ ಯಾವತ್ತೋ ಮುಗಿದಿರೋ ಬರ್ತ್ ಡೇ ಗೆ ವಿಶ್ ಮಾಡಿ ಅಂತಾರೆ. ನೀವು ತುಟಿಕ್ ಪಿಟಿಕ್ ಅನ್ನದೆ ವಿಷ್ ಮಾಡಿ.<br /><br />ನೆನಪಿಡಿ ನಿಮಗೆ ದಿನಾ ಇವರೇ ಕಾಲ್ ಮಾಡೋದು . ಹಾಗಾಗಿ handle with care !<br /><br />ಇವೇ ಪ್ರಶ್ನೆಗಳನ್ನು ಹಿಂದೆ ಮುಂದೆ ಮಾಡಿ ಮುಂದಿನ ಕಾಲರ್ ಗೆ ಕೇಳಿ ! <br /><br />ಆಲ್ ದಿ ಬೆಸ್ಟ್ !!!ಸಂದೀಪ್ ಕಾಮತ್http://www.blogger.com/profile/17139651775566254649noreply@blogger.com13tag:blogger.com,1999:blog-5762676011332353898.post-27730781207435565292011-01-07T00:05:00.004+05:302011-01-07T00:18:12.115+05:30ಬೇಕಾಗಿದ್ದಾರೆ...ಬೇಕಾಗಿದ್ದಾರೆ :<br /><br />ಫೇಸ್ ಬುಕ್ ನ ಫಾರ್ಮ್ ವಿಲೆ ಥರದ್ದೇ ಒಂದು ಆಟವನ್ನು ಅಭಿವೃದ್ಧಿ ಪಡಿಸಲು ಸಾಫ್ಟ್ ವೇರ್ ಇಂಜಿನಿಯರ್ ಗಳು ಬೇಕಾಗಿದ್ದಾರೆ.<br /><br />ಆಟದಲ್ಲಿ ರೈತರಿಗೆ ಬೆಳೆದ ಬೆಳೆಗೆ ತಕ್ಕ ಬೆಲೆ ಸಿಗದೆ ಅನ್ಯಾಯವಾಗುವುದು, ಮಧ್ಯವರ್ತಿಗಳ ಕಾಟ ಇತ್ಯಾದಿಗಳನ್ನು ಸಮರ್ಪಕವಾಗಿ ಅಳವಡಿಸಬೇಕು.<br /><br />ರೈತರು ಆತ್ಮಹತ್ಯೆ ಮಾಡುವ ಅವಕಾಶವಿರಬೇಕು.<br /><br /><br />ಕೃಷಿ ಭೂಮಿಯನ್ನು ಅಭಿವೃದ್ಧಿಯ ಹೆಸರಲ್ಲಿ ಕಬಳಿಸುವ ಅವಕಾಶವಿರಬೇಕು.ಸಂದೀಪ್ ಕಾಮತ್http://www.blogger.com/profile/17139651775566254649noreply@blogger.com8tag:blogger.com,1999:blog-5762676011332353898.post-30600010722123556402010-11-06T19:05:00.003+05:302010-11-06T19:10:31.425+05:30ಹೀಗೊಂದು ಪ್ರಸಂಗ...ಕನ್ನಡ ಪದ್ಯ ಬಾಯಿಪಾಠ ಮಾಡಿಕೊಂಡು ಬರದ್ದಕ್ಕೆ ಮೇಷ್ಟ್ರು ಮಹೇಶನಿಗೆ ಕುಂಡೆಗೆ ಬಾಸುಂಡೆ ಬರೋ ಹಾಗೆ ಹೊಡೆದಿದ್ದರು.<br /><br />ಮಹೇಶ ಮನೆ ಬಿಟ್ಟು ಓಡಿ ಪೆರ್ಡೂರು ಯಕ್ಷಗಾನ ಮೇಳ ಸೇರಿದ.<br /><br />ಈಗ ಮಹೇಶನಿಗೆ ಇಡೀ ಕೃಷ್ಣಾರ್ಜುನ ಕಾಳಗ ಪ್ರಸಂಗ ಬಾಯಿಪಾಠ ಬರುತ್ತೆ.....ಸಂದೀಪ್ ಕಾಮತ್http://www.blogger.com/profile/17139651775566254649noreply@blogger.com8tag:blogger.com,1999:blog-5762676011332353898.post-52979327840446464292010-11-01T20:38:00.001+05:302010-11-01T20:40:54.205+05:30ಹೀಗೂ ಉಂಟು !ಕೆಲವರು ಇಲಿ ಪಾಷಾಣ ತಿಂದು ಸಾಯುತ್ತಾರೆ...<br /><br />ಇನ್ನು ಕೆಲವರು ಇಲಿ ಪಾಷಾಣ ಮಾರಿಯೇ ಬದುಕುತ್ತಾರೆ ....ಸಂದೀಪ್ ಕಾಮತ್http://www.blogger.com/profile/17139651775566254649noreply@blogger.com4tag:blogger.com,1999:blog-5762676011332353898.post-39200667398243609412010-10-11T20:34:00.004+05:302010-10-12T16:53:46.168+05:30ಗೂಗಲ್ ಕಾರ್ ...’ ಗೂಗಲ್ ನಿಂದ ಚಾಲಕರಹಿತ ಕಾರ್ - ಸುದ್ದಿ ’<br /><br />ಗೂಗಲ್ ಚಾಲಕ ರಹಿತ ಕಾರ್ ಅಭಿವೃದ್ಧಿಗೊಳಿಸುತ್ತಾ ಇದೆ. ಭಾರತದಿಂದಲೂ ಬೇಡಿಕೆ ಬಂದಿರುವುದರಿಂದ ಹಾಗೂ ಅಮೆರಿಕಾದ ಮಾಡೆಲ್ ಭಾರತಕ್ಕೆ ಸರಿ ಹೊಂದದ ಕಾರಣ ಭಾರತ ಮೂಲದ ಕಂಪನಿಯೊಂದು ಚಾಲಕ ರಹಿತ ವಾಹನವನ್ನು ಕೆಲವು ಮಾರ್ಪಾಡುಗಳೊಂದಿಗೆ ಮಾರುಕಟ್ಟೆಗೆ ತರಲು ತಯಾರಿ ನಡೆಸುತ್ತಿದೆ!<br /><br />ಈ ಚಾಲಕರಹಿತ ಕಾರ್ ನ ಕೆಲವು ಫೀಚರ್ ಗಳು :<br /><br /><span style="font-weight:bold;">ಸಿಗ್ನಲ್ ಜಂಪಿಂಗ್</span> : ಎಲ್ಲರಿಗೂ ಈಗ ಸಿಗ್ನಲ್ ಜಂಪ್ ಮಾಡಿ ರೂಢಿ ಆಗಿರುವುದರಿಂದ ಈ ಕಾರ್ ನಲ್ಲಿ ’ಸಿಗ್ನಲ್ ಜಂಪಿಂಗ್’ ತಂತ್ರಾಂಶವನ್ನು ಅಳವಡಿಸಲಾಗಿದೆ. ಈ ಕಾರು ಕೆಂಪು ಸಿಗ್ನಲ್ ಬಿದ್ದ ಮೇಲೂ ೩ ಸೆಕೆಂಡ್ ,ಹಾಗೂ ಹಸಿರು ಸಿಗ್ನಲ್ ಬೀಳುವ ೩ ಸೆಕೆಂಡು ಮೊದಲೇ ಚಲಿಸುವ ರೀತಿಯಲ್ಲಿ ತಂತ್ರಾಂಶವನ್ನು ಅಬ್ಭಿವೃದ್ಧಿಗೊಳಿಸಲಾಗಿದೆ. <br /><br /><span style="font-weight:bold;">ಜಗಳ ಮೇಕರ್ (ವರ್ಶನ್ 2.1)</span> : ’ ಜಗಳ ಮೇಕರ್ ’ ತುಂಬಾ ಉಪಯುಕ್ತ ತಂತ್ರಾಂಶ. ಅಕಸ್ಮಾತ್ ಬೇರೆ ವಾಹನಗಳಿಂದ ತೊಂದರೆ ಉಂಟಾದಲ್ಲಿ ಆ ವಾಹನವನ್ನು ಓವರ್ ಟೇಕ್ ಮಾಡಿ,ಆ ವಾಹನದ ಚಾಲಕನಿಗೆ ಅವಾಚ್ಯ ಶಬ್ದಗಳಿಂದ ಬಯ್ಯಲಾಗುತ್ತದೆ. 50 ಪ್ರಿ ರೆಕಾರ್ಡೆಡ್ ಅಶ್ಲೀಲ ಬಯ್ಗುಳಗಳನ್ನು ಈಗಾಗಲೇ ಅಳವಡಿಸಲಾಗಿದೆ. ವರ್ಶನ್ 2.2 ನಲ್ಲಿ ಎಲ್ಲಾ ಭಾರತೀಯ ಭಾಷೆಗಳನ್ನು ಅಳವಡಿಸುವುದಲ್ಲದೇ ಎದುರಾಳಿ ಚಾಲಕನನ್ನು ತದಕುವ ಸೌಲಭ್ಯವೂ ದೊರಕುತ್ತದೆ.<br /><br /><span style="font-weight:bold;">ಲಂಚೇಶ </span>: ಅಕಸ್ಮಾತ್ ಟ್ರಾಫಿಕ್ ಪೋಲಿಸರು ಹಿಡಿದಲ್ಲಿ ಅವರಿಗೆ ಲಂಚ ಕೊಡಲು ATM ಥರದ ಸೌಲಭ್ಯವನ್ನು ಅಳವಡಿಸಲಾಗಿದೆ. <br />ವಿ.ಸೂ : ಕೇವಲ ನೂರು ರೂ ನೋಟುಗಳನ್ನಷ್ಟೇ ಇಡಿ ,ಪೋಲಿಸರು ಲಂಚಕ್ಕೆ ಚಿಲ್ಲರೆ ವಾಪಾಸ್ ನೀಡುವುದಿಲ್ಲ !<br /><br /><span style="font-weight:bold;">ಪಂಚರಂಗಿ ಪಾಂ ಪಾಂ</span> : ಈ ತಂತ್ರಾಂಶ ಕರ್ಕಶವಾದ ಹಾರ್ನ್ ಮಾಡಿ ಜನರನ್ನು ಬೆಚ್ಚಿ ಬೀಳಿಸುತ್ತದೆ. ಸಧ್ಯಕ್ಕೆ ಐದು ಥರದ ಕರ್ಕಶ ಸದ್ದುಗಳು ಲಭ್ಯವಿದೆ. ಜೊತೆಗೆ ಕಣ್ಣು ಕೋರೈಸುವ ಹೆಡ್ ಲೈಟ್ ಸೌಲಭ್ಯವೂ ಇದೆ.<br /><br />ಡಿಸೆಂಬರ್ ಹೊತ್ತಲ್ಲಿ ಈ ಚಾಲಕ ರಹಿತ ಕಾರು ಮಾರುಕಟ್ಟೆಗೆ ಲಗ್ಗೆ ಇಡುತ್ತದೆ. ಕಾದು ನೋಡಿ !ಸಂದೀಪ್ ಕಾಮತ್http://www.blogger.com/profile/17139651775566254649noreply@blogger.com11tag:blogger.com,1999:blog-5762676011332353898.post-7169048218186505232010-10-06T12:45:00.002+05:302010-10-06T12:50:30.221+05:30ದಿನಕ್ಕೊಂದು ಸಿರೀಸ್ ..' ದಿನಕ್ಕೊಂದು ಕಥೆ ’ , ಲೇ:ಡಾ||ಅನುಪಮಾ ನಿರಂಜನ , ರೂ:20<br /><br /><br />' ದಿನಕ್ಕೊಂದು ಹಗರಣ ’ , ಲೇ:ಡಾ||ಬಿ.ಎಸ್.ವೈ , ರೂ:420ಸಂದೀಪ್ ಕಾಮತ್http://www.blogger.com/profile/17139651775566254649noreply@blogger.com15tag:blogger.com,1999:blog-5762676011332353898.post-28473954522745299912010-09-24T20:04:00.004+05:302010-09-24T20:10:46.271+05:30ಸೆಟ್ಟೇರದ ಚಿತ್ರ ...ಅವನು ’ಮೈ ಆಟೋಗ್ರಾಫ್ ’ ಥರದ್ದೇ ಒಂದು ಚಿತ್ರ ಮಾಡಲು ಹೊರಟಿದ್ದ ....<br /><br /><br />ಆದರೆ ಒಂದನೇ ಕ್ಲಾಸ್ ನ ಸಹಪಾಠಿಗಳಿಂದ ಹಿಡಿದು ಈಗಿನ ಸಹೋದ್ಯೋಗಿಗಳವರೆಗೆ ,ಎಲ್ಲರೂ ಫೇಸ್ ಬುಕ್ ನಲ್ಲಿ ಸಿಕ್ಕಿರೋದ್ರಿಂದ ಫಿಲಮ್ ಐಡಿಯಾ ಕೈ ಬಿಟ್ಟ!!!ಸಂದೀಪ್ ಕಾಮತ್http://www.blogger.com/profile/17139651775566254649noreply@blogger.com15