ನನ್ನ ಬ್ಲಾಗಿಗೆ ಮೊದಲ ಪ್ರತಿಕ್ರಿಯೆ ಬಂದಿದ್ದು ಒಬ್ಬ ಲೇಖಕಿ / ಕವಯತ್ರಿ ಯಿಂದ !!
ತೇಜಸ್ವಿನಿ ಹೆಗಡೆಯವರು ನನ್ನ ಬ್ಲಾಗಿಗೆ ಅದರಲ್ಲೂ ನಾನು ಟೀಚರ್ ಗಳಿಗೆ ನಮನ ಸಲ್ಲಿಸಿದ ಬಗೆಗೆ ಅಬಿನಂದನೆ ಸಲ್ಲಿಸಿದ್ದಾರೆ.
ನಮಗೆ ನಿಜ ಜೀವನದಲ್ಲಂತೂ ಗುರುವಂದನೆ ಸಲ್ಲಿಸುವ ಭಾಗ್ಯ ಸಿಗೋದು ತುಂಬಾ ಕಮ್ಮಿ.
ಕೊನೇ ಪಕ್ಷ ಈ ರೀತಿಯಾದರೂ ಗುರುಗಳನ್ನು ನೆನೆಸುವ ಭಾಗ್ಯ ಸಿಕ್ಕಿರೋದು ನನ್ನ ಪುಣ್ಯ.
ನನಗೆ ಚಿಕ್ಕಂದಿನಲ್ಲಿ ಗುರುಗಳ ಬಗ್ಗೆ ಅಷ್ಟೇನೂ ಗೌರವಯುತ ಭಾವನೆ ಇರಲಿಲ್ಲ. ಇದ್ರೂ ಅದು ಕೇವಲ ಭಯದಿಂದಾಗಿತ್ತು!’ಗುರು ಬ್ರಹ್ಮ ಗುರು ವಿಷ್ಣು ’ ಸ್ತೋತ್ರಗಳೂ ಅಷ್ಟೊಂದು ನಾಟುತ್ತಿರಲಿಲ್ಲ. ಟೀಚರ್ ಗಳಿಗೆ ಸಂಬಳ ಕೊಡ್ತಾರೆ ಅದಿಕ್ಕೆ ಅವರು ಪಾಠ ಮಾಡ್ತಾರೆ ಅದರಲ್ಲೇನು ವಿಶೇಷ ಅನ್ನೊ ಉಡಾಪೆ ಮಾತನ್ನೂ ಆಡ್ತಾ ಇದ್ವಿ ನಾವೆಲ್ಲ ಸ್ನೇಹಿತರು.
ನಮಗೆ ನಿಜ ಜೀವನದಲ್ಲಂತೂ ಗುರುವಂದನೆ ಸಲ್ಲಿಸುವ ಭಾಗ್ಯ ಸಿಗೋದು ತುಂಬಾ ಕಮ್ಮಿ.
ಕೊನೇ ಪಕ್ಷ ಈ ರೀತಿಯಾದರೂ ಗುರುಗಳನ್ನು ನೆನೆಸುವ ಭಾಗ್ಯ ಸಿಕ್ಕಿರೋದು ನನ್ನ ಪುಣ್ಯ.
ನನಗೆ ಚಿಕ್ಕಂದಿನಲ್ಲಿ ಗುರುಗಳ ಬಗ್ಗೆ ಅಷ್ಟೇನೂ ಗೌರವಯುತ ಭಾವನೆ ಇರಲಿಲ್ಲ. ಇದ್ರೂ ಅದು ಕೇವಲ ಭಯದಿಂದಾಗಿತ್ತು!’ಗುರು ಬ್ರಹ್ಮ ಗುರು ವಿಷ್ಣು ’ ಸ್ತೋತ್ರಗಳೂ ಅಷ್ಟೊಂದು ನಾಟುತ್ತಿರಲಿಲ್ಲ. ಟೀಚರ್ ಗಳಿಗೆ ಸಂಬಳ ಕೊಡ್ತಾರೆ ಅದಿಕ್ಕೆ ಅವರು ಪಾಠ ಮಾಡ್ತಾರೆ ಅದರಲ್ಲೇನು ವಿಶೇಷ ಅನ್ನೊ ಉಡಾಪೆ ಮಾತನ್ನೂ ಆಡ್ತಾ ಇದ್ವಿ ನಾವೆಲ್ಲ ಸ್ನೇಹಿತರು.
ಆದ್ರೆ ಈಗಿಗ ಟೀಚರ್ ಗಳು ತುಂಬಾ ನೆನಪಾಗ್ತಾರೆ.
ಈ ಉಗ್ರಗಾಮಿಗಳಿಗೂ ನನಗೆ ಸಿಕ್ಕಿರೋ ಹಾಗೆ , ಒಳ್ಳೆಯ ಟೀಚರ್ ಗಳು ಸಿಕ್ಕಿದ್ರೆ ಎಷ್ಟು ಚೆನ್ನಾಗಿರ್ತಾ ಇತ್ತಲ್ವ ? ಅಂತಾನೂ ಅನ್ನಿಸುತ್ತೆ.
ಚಿಕ್ಕವರಿರ್ಬೇಕಾದ್ರೆ ಟೀಚರ್ ಗಳು ಕಲಿಸಿರೋ ಒಂದೊಂದು ವಿಷಯಾನೂ ಹೇಗೆ ಉಪಯೊಗಕ್ಕೆ ಬೀಳ್ತಾವೆ ಅಲ್ವ??
ನಮ್ಮೆಲ್ಲರ ಜೀವನದಲ್ಲೂ ಬಾಲ್ಯದ ಘಟನೆಗಳು ಎಷ್ಟು ಪ್ರಭಾವ ಬೀರಿರುತ್ತವೆ. ಬಹುಶ: ಅದಿಕ್ಕೆ ಇರ್ಬೇಕು ’ಮೈ ಆಟೊಗ್ರಾಫ್ ’ ಚಿತ್ರ ಆ ಪರಿ ಹಿಟ್ ಆಗಿದ್ದು.
ಎಷ್ಟೊಂದು ಹೊಡೀತಾ ಇದ್ರು ಮೇಷ್ಟ್ರು ,ಕೆಲವೊಮ್ಮೆ ಬೆಂಚ್ ಮೇಲೆ ಕೂರೋಕೆ ಆಗ್ತಾ ಇರ್ಲಿಲ್ಲ ಏಟು ತಿಂದ ಮೇಲೆ.ಬೇಜಾರಂದ್ರೆ ನಾವು ತಂದುಕೊಟ್ಟ ಬೆತ್ತದಿಂದಲೇ ನಮಗೆ ಹೊಡೀತ ಇದ್ರು.
"ಸಂದೀಪ ನಾಳೆ ನನಗೆ ಒಳ್ಳೆಯದೊಂದು ಬೆತ್ತ ತಂದುಕೊಡ್ಬೇಕು " ಅಂತ ಅಪ್ಪಣೆಯಾಗಿದ್ದೆ ತಡ, ಹುಡುಕಾಟ ಶುರು.
ರಸ್ತೆ ಬದಿಯಲ್ಲಿರೋ ಗಾಳಿಮರ ಹತ್ತಿ ಚೆನ್ನಾಗಿರೋ ಬೆತ್ತ ಕಡಿದು ಅದನ್ನು ಚೂರಿಯಿಂದ ಪಾಲಿಷ್ ಮಾಡಿ ಟೀಚರ್ ಗೆ ಕೊಟ್ರೆ ಫ್ರೆಂಡ್ಸ್ ಎಲ್ಲ ಬೈತಾ ಇದ್ರು "ಮಗನೇ ಯಾಕೋ ಇಷ್ಟು ಒಳ್ಳೇ ಬೆತ್ತ ತಂದುಕೊಟ್ಟೆ " ಅಂತ.
ಚಿಕ್ಕವರಿರ್ಬೇಕಾದ್ರೆ ಟೀಚರ್ ಗಳು ಕಲಿಸಿರೋ ಒಂದೊಂದು ವಿಷಯಾನೂ ಹೇಗೆ ಉಪಯೊಗಕ್ಕೆ ಬೀಳ್ತಾವೆ ಅಲ್ವ??
ನಮ್ಮೆಲ್ಲರ ಜೀವನದಲ್ಲೂ ಬಾಲ್ಯದ ಘಟನೆಗಳು ಎಷ್ಟು ಪ್ರಭಾವ ಬೀರಿರುತ್ತವೆ. ಬಹುಶ: ಅದಿಕ್ಕೆ ಇರ್ಬೇಕು ’ಮೈ ಆಟೊಗ್ರಾಫ್ ’ ಚಿತ್ರ ಆ ಪರಿ ಹಿಟ್ ಆಗಿದ್ದು.
ಎಷ್ಟೊಂದು ಹೊಡೀತಾ ಇದ್ರು ಮೇಷ್ಟ್ರು ,ಕೆಲವೊಮ್ಮೆ ಬೆಂಚ್ ಮೇಲೆ ಕೂರೋಕೆ ಆಗ್ತಾ ಇರ್ಲಿಲ್ಲ ಏಟು ತಿಂದ ಮೇಲೆ.ಬೇಜಾರಂದ್ರೆ ನಾವು ತಂದುಕೊಟ್ಟ ಬೆತ್ತದಿಂದಲೇ ನಮಗೆ ಹೊಡೀತ ಇದ್ರು.
"ಸಂದೀಪ ನಾಳೆ ನನಗೆ ಒಳ್ಳೆಯದೊಂದು ಬೆತ್ತ ತಂದುಕೊಡ್ಬೇಕು " ಅಂತ ಅಪ್ಪಣೆಯಾಗಿದ್ದೆ ತಡ, ಹುಡುಕಾಟ ಶುರು.
ರಸ್ತೆ ಬದಿಯಲ್ಲಿರೋ ಗಾಳಿಮರ ಹತ್ತಿ ಚೆನ್ನಾಗಿರೋ ಬೆತ್ತ ಕಡಿದು ಅದನ್ನು ಚೂರಿಯಿಂದ ಪಾಲಿಷ್ ಮಾಡಿ ಟೀಚರ್ ಗೆ ಕೊಟ್ರೆ ಫ್ರೆಂಡ್ಸ್ ಎಲ್ಲ ಬೈತಾ ಇದ್ರು "ಮಗನೇ ಯಾಕೋ ಇಷ್ಟು ಒಳ್ಳೇ ಬೆತ್ತ ತಂದುಕೊಟ್ಟೆ " ಅಂತ.
ಆದ್ರೆ ನನಗೆ ಏನೋ ಖುಷಿ ಟೀಚರ್ thanks ಅಂತ ಹೊಗಳಿದಾಗ.
ಆದ್ರೆ ಯಾವಾಗ ಅದೇ ಬೆತ್ತದಿಂದ ನನಗೂ ಏಟು ಬೀಳ್ತಾ ಇತ್ತೊ ಆವಾಗ ಅನ್ನಿಸ್ತಾ ಇತ್ತು ಇಷ್ಟು ಒಳ್ಳೆಯ ಬೆತ್ತ ಕೊಡ್ಬಾರ್ದಿತ್ತು ಅಂತ!!
’ನಾನೆ ಟೀಚರ್ ಬೆತ್ತ ತಂದುಕೊಟ್ಟಿದ್ದು ಸ್ವಲ್ಪ ರಿಯಾಯಿತಿ ಕೊಡಿ ’ ಅಂತ ಕೇಳೋಣ ಅಂತ ಅನ್ನಿಸ್ತಾ ಇತ್ತು . ಆದ್ರೆ ಧೈರ್ಯ ಬರ್ತಾ ಇರ್ಲಿಲ್ಲ.
ಇಂತ ಟೀಚರ್ ಗಳೇ ಅಲ್ವಾ ನಾವು ತಪ್ಪು ಮಾಡಿದಾಗ ನಮ್ಮನ್ನೆಲ್ಲ ಹೊಡೆದು ಸರಿ ಮಾಡಿದ್ದು.
ಆದ್ರೆ ಈಗ ಮಕ್ಕಳಿಗೆ ಹೊಡೆತ ತಡ್ಕೊಳ್ಳೋ ಶಕ್ತಿನೂ ಇಲ್ಲ ! ಟೀಚರ್ ಗೆ ಹೊಡಿಯೊ ಧೈರ್ಯಾನೂ ಇಲ್ಲ !!
ಆದ್ರೆ ಯಾವಾಗ ಅದೇ ಬೆತ್ತದಿಂದ ನನಗೂ ಏಟು ಬೀಳ್ತಾ ಇತ್ತೊ ಆವಾಗ ಅನ್ನಿಸ್ತಾ ಇತ್ತು ಇಷ್ಟು ಒಳ್ಳೆಯ ಬೆತ್ತ ಕೊಡ್ಬಾರ್ದಿತ್ತು ಅಂತ!!
’ನಾನೆ ಟೀಚರ್ ಬೆತ್ತ ತಂದುಕೊಟ್ಟಿದ್ದು ಸ್ವಲ್ಪ ರಿಯಾಯಿತಿ ಕೊಡಿ ’ ಅಂತ ಕೇಳೋಣ ಅಂತ ಅನ್ನಿಸ್ತಾ ಇತ್ತು . ಆದ್ರೆ ಧೈರ್ಯ ಬರ್ತಾ ಇರ್ಲಿಲ್ಲ.
ಇಂತ ಟೀಚರ್ ಗಳೇ ಅಲ್ವಾ ನಾವು ತಪ್ಪು ಮಾಡಿದಾಗ ನಮ್ಮನ್ನೆಲ್ಲ ಹೊಡೆದು ಸರಿ ಮಾಡಿದ್ದು.
ಆದ್ರೆ ಈಗ ಮಕ್ಕಳಿಗೆ ಹೊಡೆತ ತಡ್ಕೊಳ್ಳೋ ಶಕ್ತಿನೂ ಇಲ್ಲ ! ಟೀಚರ್ ಗೆ ಹೊಡಿಯೊ ಧೈರ್ಯಾನೂ ಇಲ್ಲ !!
ಫೋಟೊ ಕೃಪೆ :www.wcu.edu