Saturday, November 6, 2010

ಹೀಗೊಂದು ಪ್ರಸಂಗ...

ಕನ್ನಡ ಪದ್ಯ ಬಾಯಿಪಾಠ ಮಾಡಿಕೊಂಡು ಬರದ್ದಕ್ಕೆ ಮೇಷ್ಟ್ರು ಮಹೇಶನಿಗೆ ಕುಂಡೆಗೆ ಬಾಸುಂಡೆ ಬರೋ ಹಾಗೆ ಹೊಡೆದಿದ್ದರು.

ಮಹೇಶ ಮನೆ ಬಿಟ್ಟು ಓಡಿ ಪೆರ್ಡೂರು ಯಕ್ಷಗಾನ ಮೇಳ ಸೇರಿದ.

ಈಗ ಮಹೇಶನಿಗೆ ಇಡೀ ಕೃಷ್ಣಾರ್ಜುನ ಕಾಳಗ ಪ್ರಸಂಗ ಬಾಯಿಪಾಠ ಬರುತ್ತೆ.....

Monday, November 1, 2010

ಹೀಗೂ ಉಂಟು !

ಕೆಲವರು ಇಲಿ ಪಾಷಾಣ ತಿಂದು ಸಾಯುತ್ತಾರೆ...

ಇನ್ನು ಕೆಲವರು ಇಲಿ ಪಾಷಾಣ ಮಾರಿಯೇ ಬದುಕುತ್ತಾರೆ ....