Monday, December 1, 2008

ಸಂದೀಪನಿಂದ ಸಂದೀಪನಿಗೆ ......


ಯಾಕೋ ಮುಂಬೈ ಘಟನೆ ಬಗ್ಗೆ ಏನೂ ಬರೆಯಲೇಬಾರದು ಅಂತ ನಿರ್ಧರಿಸಿದ್ದೆ .ಆದರೆ ಈ ಸಂದೀಪನ ಫೋಟೊ ನೋಡಿದ ಮೇಲಂತೂ ಬರೆಯದೆ ಇರಲು ಸಾಧ್ಯವೇ ಆಗಿಲ್ಲ ನಂಗೆ!

ಈ ಸಂದೀಪನ ಕಣ್ಣುಗಳಂತೂ ನೆನ್ನೆಯಿಂದ ಬಹಳ ಕಾಡುತ್ತಿವೆ.ಈತನ ಬೇರೆ ಫೋಟೋಗಳನ್ನೂ ನೋಡಿದೆ ನಾನು, ಆದರೆ ಈ ಫೋಟೋದಲ್ಲಿ ಏನೋ ತುಂಬಾ ಧೃಡ ಸಂಕಲ್ಪ ಹೊಂದಿರುವ ಹಾಗೆ ಕಾಣ್ತಾನೆ ಸಂದೀಪ.

ದೇಶಕ್ಕಾಗಿ ಹುತಾತ್ಮರಾಗುವ ಸೌಭಾಗ್ಯ ಬಹಳ ಕಡಿಮೆ ಜನರಿಗೆ ಸಿಗುತ್ತದೆ.ಅಂಥ ಅದೃಷ್ಟಶಾಲಿ(?) ಗಳಲ್ಲಿ ಸಂದೀಪನೂ ಒಬ್ಬ(ಈ ವಾಕ್ಯ ಸ್ವಲ್ಪ ಮುಜುಗರ ತರಿಸುವಂತಿದ್ದರೂ ನೀವು ಒಬ್ಬ ಸೈನಿಕನ ಬಳಿ ಎರಡನೇ ಅಭಿಪ್ರಾಯ ಕೇಳಬಹುದು).

ನಿನ್ನ ಈ ಫೋಟೋದಲ್ಲಿರುವ ಅಗ್ರೆಸ್ಸಿವ್ ನೆಸ್ಸ್ ತುಂಬಾ ದಿನಗಳವರೆಗೆ ನಮಗೆ ಕಾಡುತ್ತಿರುತ್ತೆ ಸಂದೀಪ್ .

We miss you.


ಫೊಟೋ ಸೌಜನ್ಯ : ’ ಉಗ್ರಗಾಮಿಗಳು :( ’

8 comments:

  1. ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹೇಳುವುದು ಬಿಟ್ಟು ಬೇರೆ ಏನೂ ಹೇಳಲು ಉಳಿದಿಲ್ಲ :-(

    ReplyDelete
  2. ಕಂಗಳಲ್ಲಿ ಕಣ್ಣೀರಷ್ಟೇ ಮಡುಗಟ್ಟಿದೆ. ಮುಂಬೈ ಮಾರಣಹೋಮದಿಂದ ಇನ್ನೂ ಚೇತರಿಸಿಕೊಂಡಿಲ್ಲ ಮನ.
    -ಚಿತ್ರಾ

    ReplyDelete
  3. ಸಮಯವಿದ್ದರೆ ನನ್ನ ಬ್ಲಾಗಿನಲ್ಲಿ ಹಾಕಿರುವ ಬೇಡಿಕೆ ಪರಿಶೀಲಿಸುತ್ತೀರಾ?

    ReplyDelete
  4. thanx for supporting

    ReplyDelete
  5. ಸಂದೀಪ್ ಇಲ್ಲಿ ನೋಡಿ..,

    http://www.orkut.com/Main#Profile.aspx?uid=5185304287748406909

    ಅದೇನೋ ತರಹದ ಅಸಮಧಾನ.. ನಿಟ್ಟುಸಿರು.. ಸಿಟ್ಟು. ಕಣ್ರೀ..


    -ರಮೇಶ ಬಿ.ವಿ.
    http://www.orkut.com/Main#Profile.aspx?uid=7835405758723060069

    ReplyDelete
  6. ಸಂದೀಪ್,

    ಆತನ ಕಣ್ಣುಗಳಲ್ಲಿ ನೀವು ಹೇಳಿದಂತೆ ಅಂತ ದೃಢ ಸಂಕಲ್ಪವಿದೆ. ಆತನ ಫೋಟೊನೋಡಿದಾಗಲೆಲ್ಲಾ ಕಣ್ಣು ತುಂಬಿ ಬರುತ್ತದೆ. ಮತ್ತೇನು ಹೇಳಲಾರೆ....

    ReplyDelete
  7. ಹೌದು.. ಆತನ ಕಣ್ಣಲ್ಲಿ ಇರೋ ಒಂದು ತರಹದ ಅಗ್ರೆಶನ್... ತುಂಬಾನೇ ಕಾಡ್ತಾವೆ

    ReplyDelete