Tuesday, September 30, 2008

ಧರ್ಮ ಮತ್ತು ವಿಜ್ಞಾನ .



" ರಾಮಾಯಣ,ಮಹಾಭಾರತ,ಬೈಬಲ್,ಕುರಾನ್-ಇವೆಲ್ಲಾ ನನ್ನ ಮಟ್ಟಿಗೆ ಕೇವಲ literature texts.
ವೈಜ್ನಾನಿಕ ಸತ್ಯಗಳನ್ನು ಕಂಡುಕೊಂಡವರಿಗೆ ಅದರ ಅಗತ್ಯವಿಲ್ಲ ಅಂದುಕೊಂಡಿದ್ದೇನೆ "

ಹೀಗಂತ ಗೆಳತಿಯೊಬ್ಬರು ನನ್ನ ಲೇಖನಕ್ಕೆ ಪ್ರತಿಕ್ರಿಯಿಸುತ್ತಾ ಬರೆದಿದ್ರು !ಬೈಬಲ್ ,ಕುರಾನ್ ಬಗ್ಗೆ ನಾನು ಓದಿಲ್ಲವಾದ್ದರಿಂದ ನನ್ಗೆ ಆ ಬಗ್ಗೆ ಮಾತಾಡೋದು ಕಷ್ಟ.ಆದ್ರೆ ರಾಮಾಯಣ ,ಮಹಾಭಾರತದ ಬಗ್ಗೆ ನನಗೆ ಮೊದಲಿನಿಂದಲೂ ಒಂದು ಬೆರಗಿದೆ ,ಗೌರವವಿದೆ.

ಈ ಎರಡನ್ನೂ ನಾನು ಓದಿಲ್ಲ! ಬರೀ ನೋಡಿದ್ದಷ್ಟೆ(ಟಿ.ವಿ ಯಲ್ಲಿ ಮಾರಾಯ್ರೆ, ಹಸ್ತಿನಾವತಿ,ಅಯೋಧ್ಯೆಗೆ ಹೋಗಿಲ್ಲ ಇನ್ನೂ!)

ಮೇಲೆ ಹೇಳಿದ ಪ್ರಕಾರ ರಾಮಾಯಣ ,ಮಹಾಭಾರತಗಳು ’ಬರೀ’ literature texts ಗಳಾಗಿದ್ದಿದ್ರೆ ನಾನಂತೂ ತುಂಬಾ ಖುಶಿ ಪಡ್ತೀನಿ! ಒಂದು ವೇಳೆ ಇದೊಂದು ಸತ್ಯ ಕಥೆ ಆಗಿದ್ರೆ ಟುಸ್ಸ್ ಸ್ಸ್ ಸ್ಸ್ ಸ್ಸ್ ಸ್ಸ್ ಪಟಾಕಿ!!!!

ಯಾಕೆ ಅಂತೀರಾ?? ಸತ್ಯ ಕಥೆ ಬರೆಯೋದೇನ್ರಿ ದೊಡ್ದ ವಿಷಯ?? ಎಲ್ಲೋ ಏನೋ ಆಗಿರುತ್ತೆ ಅದನ್ನು ನಿಮಗೆ ’ಯಾರೋ ’ ಹೇಳಿರ್ತಾರೆ ನೀವು ಅದನ್ನು ಚಾಚೂ ತಪ್ಪದೆ ಬರ್ದಿರ್ತೀರ .ಅದರಲ್ಲೇನು greatness? ನಿಮಗೆ ಕೂಲಿ ಕೊಟ್ಟು,.ಅರ್ಧ ಟೀ (ಬೆಂಗಳೊರ್ರಿನಲ್ಲಾದ್ರೆ ಮಾತ್ರ!) ಕುಡಿಸಿ ಕಳಿಸೋದು.ಆಮೇಲೆ ಯಾವುದಾದ್ರೂ ಪಬ್ಲಿಷರ್ ಹಿಡ್ಕೊಂಡು ಪ್ರಕಟಿಸೋದು ಅದ್ರಲ್ಲೇನು ವಿಶೇಷ ಅಲ್ವಾ??

ಆದ್ರೆ ಸ್ವಲ್ಪ ಯೋಚಿಸಿ ನೋಡಿ -ಈ ರಾಮಾಯಣ ,ಮಹಾಭಾರತಗಳು ಕಟ್ಟುಕಥೆಗಳೇ ಆಗಿದ್ದಿದ್ರೆ..........????
ಎಷ್ಟು ಬುದ್ಧಿವಂತನಾಗಿದ್ದಿರಬಹುದು ಅದರ ಲೇಖಕ??ಕಥೆ ಬಿಡ್ರಿ ಆ ಕಥೆಗಳಲ್ಲಿ ಬರೋ ಸಾವಿರಾರು ಪಾತ್ರದ ಹೆಸರುಗಳನ್ನು ಯೋಚಿಸಲೇ ಎಷ್ಟು ತಲೆ ಓಡಿಸಿರ್ಬೇಕು ಆ ಲೇಖಕ?? ನನ್ನ ಜುಜುಬಿ ಬ್ಲಾಗ್ ಗೆ ಒಂದು ಹೆಸರಿಡಲು ಎಷ್ಟು ತಲೆ ಕೆರ್ಕೊಂಡ್ರೂ ಹೊಸ ಹೆಸರು ಹೊಳೀಲಿಲ್ಲ!
ನಮ್ಮ ಮಕ್ಕಳಿಗೆ ಹೆಸರಿಡ್ಬೇಕಾದ್ರೆ ಎಷ್ಟೇ ಒರಿಜಿನಲ್ ಇಡೊದಕ್ಕೆ try ಮಾಡಿದ್ರೂ ಅದು ಎಲ್ಲೊ use ಆಗಿರುತ್ತೆ!
ಇಂಥ ಒಂದು ಕಟ್ಟು ಕಥೆ ತಯಾರು ಮಾಡ್ಬೇಕಾದ್ರೆ ಆ ಲೇಖಕರು ಎಷ್ಟು ಒದ್ದಾಡಿರ್ಬೇಕು ಅಲ್ವ?? ಒಂದು ಕಡೆ ಬಂದ ಹೆಸರು ಇನ್ನೊಂದು ಕಡೆ ಇಲ್ಲ.ಕಥೆಯಲ್ಲಿ twistಗಳ ಮೇಲೆ twistಗಳು .ಕಾಮಿಡಿ ಇದೆ,ಸಸ್ಪೆನ್ಸ್ ಇದೆ ,horror ಇದೆ ,ಎಲ್ಲ ಇದೆ!!
ಆಮೇಲೆ ಈ ಮಹಾಭಾರತ,ರಾಮಾಯಣಗಳನ್ನು ವೈಜ್ಞಾನಿಕ ದೃಷ್ಟಿಯಿಂದ ನೋಡಿ ಅಂತ ಹೇಳೋಮಂದಿನೂ ಸಿಗ್ತಾರೆ !
ನಾವು ಯಾರ್ರಿ ವಿಜ್ಞಾನದ ಬಗ್ಗೆ ಮಾತಾಡೊದಕ್ಕೆ ಅಧಿಕಾರ ಉಳ್ಳವರು?? ಹೊಸದಾಗಿ ಕಂಡು ಹುಡುಕೋದು ಬಿಡಿ ಯಾವತ್ತೋ ನ್ಯೂಟನ್ ಕಂಡು ಹುಡುಕಿದ ನಿಯಮಗಳನ್ನೇ 5 marks ಗೆ ಆಗೋ ಅಷ್ಟು ಬರೆಯೋ ಯೋಗ್ಯತೆ ನಮಗಿಲ್ಲ(ನನ್ನಂಥ ಸಾಮನ್ಯ ಜನರಿಗೆ)!
ಈ ವಿಜ್ಞಾನಿಗಳೂ ಪಾಪ ಒಂದು ದಿನ ಭೂಮಿ ಚಪ್ಪಟೆ ಅಂತಾರೆ! ಮಾರನೇ ದಿನ ಭೂಮಿ ಗುಂಡಗಿದೆ ಅಂತಾರೆ.ನಾಳೆ ಭೂಮಿ ಚೌಕವಾಗಿದೆ ಅಂದ್ರೂ ಅನ್ನಬಹುದು!
ನಾನು ವಿಜ್ಞಾನಿಗಳನ್ನು ಅವಮಾನಿಸಲು ಈ ರೀತಿ ಬರೆದಿಲ್ಲ .ಅವರ ಬಗ್ಗೆ ಅಪಾರ ಗೌರವವಿದೆ ನನಗೆ. ಆದ್ರೆ ವಿಜ್ಞಾನದ ಸಿದ್ಧಾಂತಗಳೂ ಕಾಲ ಕಾಲಕ್ಕೆ ಬದಲಾಗೋದಂತೂ ನಿಜ.The ultimate truth ! ಅನ್ನೋ ಅಂಥದ್ದು ವಿಜ್ಞಾನದಲ್ಲೂ ಇಲ್ಲ,ಅಲ್ವ??
ಒಂದು ದಿನ ಮೊಟ್ಟೆ ಸಸ್ಯಾಹಾರಿ ಅಂತಾರೆ ,ಆಮೇಲೆ ಯಾವುದೋ ಲೇಖನದಲ್ಲಿ ಮಾಂಸಾಹಾರ ಅಂತಾರೆ.ಒಬ್ಬ ಕೊಪರ್ನಿಕಸ್ ಅಂದದ್ದೇ ಸರಿ ಅಂತಾನೆ,ಇನ್ನೊಬ್ಬ ಗೆಲಿಲಿಯೊ ಅಂದಿದ್ದೇ ಸರಿ ಅಂತಾನೆ.ಮತ್ತೊಬ್ಬ ಎಲ್ಲರದ್ದೂ ತಪ್ಪು ’ನಾನು ಹೇಳಿದ್ದೆ ಸರಿ ’ ಅಂತಾನೆ(ನನ್ ಥರ ಪಾರ್ಟಿ!).

ಈಗ ವೈಜ್ಞಾನಿಕ ದೃಷ್ಟಿಯಿಂದಲೇ ನೋಡೋಣ ರಾಮಾಯಣ ,ಮಹಾಭಾರತಗಳನ್ನು:-

ರಾವಣ ಪುಷ್ಪಕ ವಿಮಾನದಲ್ಲಿ ಬಂದು ಸೀತೆಯನ್ನು ಅಪಹರಿಸಿದ ಅಂತ ಮೇಷ್ಟ್ರು ಹೇಳ್ತಾ ಇದ್ರೆ ಕೊನೆ ಬೆಂಚಲ್ಲಿ ಕೂತು ಮಕ್ಕಳು ಮುಸಿ ಮುಸಿ ನಗ್ತಾರೆ! ಏನಪ್ಪ ಜೋಕ್ ಮಾಡ್ತಾರೆ ಮೇಷ್ಟ್ರು! ,ಆ ಕಾಲದಲ್ಲಿ ವಿಮಾನ ಇತ್ತಂತೆ ,ಅದೂ ಹಾರ್ತಾ ಇತ್ತಂತೆ!!
ಆದ್ರೆ ಮನಮೋಹನ್ ಸಿಂಗ್ ಕಿಂಗ್ ಫಿಶರ್ airlines ನಲ್ಲಿ ಇನ್ನು ಅರ್ಧ ಗಂಟೆಯಲ್ಲಿ ಬೆಂಗಳೂರಿಗೆ ಬರ್ತಾರಂತೆ ಅಂದ್ರೆ ಹಾರ,ತುರಾಯಿ ತಗೊಂಡು ವಿಮಾನ ನಿಲ್ದಾಣಕ್ಕೆ ಧಾವಿಸ್ತಾರೆ ಜನ -ಆಗ ನಗಲ್ಲ!!!!!!

ಸಂಜಯ ಯುದ್ಧಭೂಮಿಯಲ್ಲಿ ಏನಾಗ್ತಾ ಇತ್ತು ಅಂತ ಇಲ್ಲೇ ಕುಳಿತು ಧೃತರಾಷ್ಟ್ರನಿಗೆ ವಿವರಿಸ್ತಾ ಇದ್ದ ಅಂತ lecturer ಹೇಳ್ತಾ ಇದ್ರೆ ಅಸಡ್ಡೆಯಿಂದ ಮುಂದಿನ ಬೆಂಚಿನಲ್ಲಿ ಕೂತ ಹುಡುಗಿಯ ಜಡೆ ಜೊತೆ ಆಟ ಆಡ್ತಾನೆ ಕಾಲೇಜ್ ಹುಡುಗ!
ಆದ್ರೆ ದೂರದಲ್ಲೆಲ್ಲೋ ಸೌತ್ ಆಫ್ರಿಕಾದಲ್ಲಿ ಅಗೋ ಮ್ಯಾಚ್ ಬಗ್ಗೆ ,ರವಿಶಾಸ್ರಿ ಇಲ್ಲೇ ದೆಹಲಿ ಸ್ಟೇಡಿಯಂ ನಲ್ಲಿ ಕೂತು ಕಮೆಂಟ್ರಿ ಕೊಡ್ತಾ ಇದ್ರೆ ಅದನ್ನು laysಗೆ ಸ್ವಲ್ಪ ಉಪ್ಪಿನಕಾಯಿ ಹಾಕಿ ತಿನ್ತಾ ಚಪ್ಪರಿಸಿ ಮ್ಯಾಚ್ ನೋಡ್ತಾನೆ ಅದೇ ಕಾಲೇಜಿನ ಪಡ್ದೆ ಹುಡುಗ!

ಇದು ವಿಜ್ಞಾನ - ಅದು ಅಜ್ಞಾನ !!!

ಋಷಿ ಮುನಿಗಳು ತಮ್ಮ ದಿವ್ಯ ಜ್ಞಾನದಿಂದ ದೂರದ್ಲ್ಲಿದ್ದ ಇನ್ನೊಬ್ಬರ ಬಳಿ ಸಂವಹನ ನಡೆಸ್ತಾ ಇದ್ರು ಅಂತ ಹೇಳಿದ್ರೆ ನಂಬೋಕೆ ಆಗಲ್ಲ ನಮಗೆ.
ಆದ್ರೆ ಇಲ್ಲಿಂದ U.K ನಲ್ಲಿರೋ ಮಗಳ ಹತ್ರ ಮೊಬೈಲ್ ನಲ್ಲಿ ಮಾತಾಡ್ತೀನಿ ಅಂದ್ರೆ ನಗಲ್ಲ ಬದಲಾಗಿ ’ಎಷ್ಟು ಬೀಳುತ್ತೆ ಮಿನಿಟಿಗೆ ’ ಅಂತ ಪ್ರಶ್ಶ್ನಿಸ್ತಾರೆ!!!!

ಘಟೋತ್ಕಚ ದೈತ್ಯ ದೇಹಿಯಾಗಿದ್ದ ಅಂದ್ರೆ ಖಂಡಿತ ನಂಬಲ್ಲ ! ಆದ್ರೆ ದ ಗ್ರೇಟ್ ಖಲಿ WWE ನಲ್ಲಿ ಪೈಟ್ ಮಾಡ್ತಾ ಇದ್ರೆ ’ಏನು ಕಟ್ಟು ಮಸ್ತಾದ ಜೀವ ಕಣ್ರಿ ’ ಅಂತೀವಿ! ಡೈನೋಸರ್ ಬಗ್ಗೆ ಬಂದ ’ಜುರಾಸಿಕ್ ಪಾರ್ಕ್ ’ ನೋಡಿ ಖುಷಿ ಪಡ್ತೀವಿ!

ಕುಂತಿ ಕೇವಲ ದೇವರ ಪ್ರಾರ್ಥನೆಯಿಂದ ಗರ್ಭವತಿ ಆದ್ಲು ಅಂದ್ರೆ ನಂಬಲ್ಲ!

’ಪಕ್ಕದ ಮನೆ ಆಂಟಿಯ ಗಂಡ ಸತ್ತು ಮೂರು ವರ್ಷ ಆಯ್ತು ,ಆದ್ರೆ ವೀರ್ಯಾಣು ಫ್ರಿಜ್ ನಲ್ಲಿ ಜೋಪಾನವಾಗಿಟ್ಟಿದ್ರಿಂದ In vitro fertilization ಮಾಡಿ ಈಗ ಗರ್ಭವತಿ ಆದ್ರು ಅಂದ್ರೆ -ವಾವ್ ಇದು ನೋಡ್ರಿ ವಿಜ್ಞಾನ ಅಂದ್ರೆ! ’ಅಂತ ಖುಷಿ ಪಡ್ತೀವಿ!

ಅರ್ಜುನ ಬಿಟ್ಟ ಬಾಣ ಟಾರ್ಗೆಟ್ ನ ಹುಡುಕಿಕೊಂಡು ಹೋಗಿ ದಾಳಿ ನಡೆಸುತ್ತೆ ಅಂದ್ರೆ ನಂಬಲ್ಲ!
ಆದ್ರೆ ಅಬ್ದುಲ್ ಕಲಾಂ ಡಿಸೈನ್ ಮಾಡಿದ ’guide missile' targetನ ಹುಡುಕಿಕೊಂಡು ಹೋಗಿ ದಾಳಿ ಮಾಡುತ್ತೆ ಅಂದ್ರೆ ’ಗ್ರೇಟ್ ಕಣ್ರಿ ಅಬ್ದುಲ್ ಕಲಾಂ’ .Brilliant scientist ಅಂತೀವಿ!!!!!

ಅಬ್ದುಲ್ ಕಲಾಂರದ್ದು ವೈಜ್ಞಾನಿಕ ಸತ್ಯ - ಅರ್ಜುನ ಮಾಡಿದ್ದು ’literature text '????

ಇಷ್ಟೊಂದು ಬೆರಗುಗಳನ್ನು ಕೂಡಿದ ರಾಮಾಯಣ ,ಮಹಾಭಾರತ ನಮಗೆ just literature texts!!

ಅದೇ ವರ್ಷಕ್ಕೊಂದು ಹೆಂಡತಿಯರನ್ನು ಬದಲಾಯಿಸುವ ಸಲ್ಮಾನ್ ರಶ್ದಿ ಬರೆದಿರೋ ’Midnight’s Children' ಸಾರ್ವಕಾಲಿಕ ಶ್ರೇಷ್ಠ ಬೂಕರ್ ಕೃತಿ!

ರಾಮಾಯಣ ,ಮಹಾಭಾರತಗಳು ಏನಾದ್ರೂ ನಿಜ ಕಥೆಗಳೇ ಆಗಿದ್ರೆ -’ಛೇ ,ಬೇಜಾರು.......’

ಇವುಗಳೇನಾದ್ರೂ ಕಾಲ್ಪನಿಕ ಕಥೆಗಳೇ ಆಗಿದ್ರೆ - ಪ್ರೀತಿಯ ರಾಮಾಯಣ ,ಮಹಾಭಾರತದ ಲೇಖಕರೇ ನೀವು ನಿಜಕ್ಕೊ ಗ್ರೇಟ್ !

Thursday, September 18, 2008

ಎದೆ ತಟ್ಟಿ ಹೇಳು ನಾನೊಬ್ಬ ಹಿಂದು !


ಹೀಗೆ ವಿಜಯ್ ರಾಜ್ ರ ಕುಂದಾಪ್ರ ಕನ್ನಡ ಬ್ಲಾಗ್ ನೋಡ್ತಾ ಇದ್ದೆ .ದಕ್ಷಿಣ ಕನ್ನಡ(ಅವಿಭಜಿತ) ’ಬುದ್ಧಿವಂತರ ನಾಡು ’ಅಂತ ಹೆಸರು ಪಡೆದುಕೊಂಡಿದ್ದು ,ಈಗ ನಡೆಯುತ್ತಿರೋ ಕೋಮು ಗಲಬೆಯಿಂದ ಈ ಪಟ್ಟ ಹೋಗೋ ಸಂಭವವಿದೆ ಅನ್ನೋ ಭಯ ಅವರಿಗೆ .ಅವರ ಬ್ಲಾಗ್ ನಲ್ಲೇ ಈ ಬಗ್ಗೆ ಕಮೆಂಟಿಸೋಣ ಅಂದುಕೊಂಡಿದ್ದೆ ಆದ್ರೆ ನನಗೆ ’ಹೇಳಲಿಕ್ಕಿನ್ನೂ ತುಂಬಾ ಇದೆ ’ ಆದ್ದರಿಂದ ಎಲ್ಲಾ ಇಲ್ಲೇ ಬರೆಯೋಣ ಅನ್ನಿಸಿತು.
ನಂಗೆ ಕುಂದಾಪ್ರ ಕನ್ನಡ ಬರಲ್ಲ .ಆದ್ರೆ ಅರ್ಥ ಆಗುತ್ತೆ. ವಿಜಯ್ ಲೇಖನ ತುಂಬಾ ಚೆನ್ನಾಗಿದೆ - Food for thought .

ಆದ್ರೆ..........................
There is always other side of story.
ಮಂಗಳೂರಿನ ವಿಷಯದಲ್ಲಿ ರಾಜಕಾರಣ ನುಸುಳಿರುವುದು ಸ್ವಲ್ಪ ಮಟ್ಟಿಗೆ ಸತ್ಯ ಇರಬಹುದು .ಆದ್ರೆ ರಾಜಕಾರಣ ಎಲ್ಲಿಲ್ಲ ಹೇಳಿ ?
ಮುಖ್ಯಮಂತ್ರಿ ಹೆಣ್ಣುಮಕ್ಕಳಿಗೆ ಸೈಕಲ್ ಕೊಟ್ರೆ ಅದು ರಾಜಕೀಯ ,ಹುಡುಗರಿಗೆ ಕೊಟ್ಟಿಲ್ಲ ಅಂದ್ರೆ ಅದೂ ರಾಜಕೀಯ!
ವಿತ್ತ ಸಚಿವರು ಒಳ್ಳೆಯ ಬಜೆಟ್ ಮಂಡಿಸಿದ್ರೆ ಅದು ರಾಜಕೀಯ ,ಕೆಟ್ಟ ಬಜೆಟ್ ಮಂಡಿಸಿದ್ರೆ ಅದೂ ರಾಜಕೀಯ.ಹಜ್ ಗೆ ಸಬ್ಸಿಡಿ ಕೊಟ್ರೆ ಅದೂ ರಾಜಕೀಯಕ್ಕೆ ,ಅಮರನಾಥ ಯಾತ್ರೆ ಗೆ ಭೂಮಿ ಕೊಟ್ಟಿಲ್ಲ ಅಂದ್ರೆ ಅದೂ ರಾಜಕಾರಣ.ಎಲ್ಲಾ ರಾಜಕಾರಣಿಗಳು ಒಳ್ಳೆಯ ಕೆಲಸ ಮಾಡೋದು ರಾಜಕೀಯಕ್ಕೆ !ಕೆಟ್ಟ ಕೆಲಸ ಮಾಡೋದು ರಾಜಕೀಯಕ್ಕೆ !
ವಿಜಯ್ ಹೇಳ್ತಾ ಇದ್ರು ಮತಾಂತರದ ವಿಷಯವನ್ನು ಕಾನೂನು ಪ್ರಕಾರ ಬಗೆಹರಿಸ್ಬೇಕಿತ್ತು ಅಂತ!ಒಳ್ಳೆಯ ವಿಚಾರ ಆದ್ರೆ ಇದು ಎಷ್ಟರ ಮಟ್ಟಿಗೆ ಸಾಧ್ಯ ? ಕಾನೂನನ್ನು ಕೈಗೆ ತಗೊಳ್ಳೊದು ತಪ್ಪು ನಿಜ ,ಆದ್ರೆ ಒಂದು ಹೇಳಿ ನಿಮ್ಮ ಆಫೀಸುಗಳಿಗೆ ವಾಚ್ ಮ್ಯಾನ್ ಯಾಕೆ ಇಡ್ತೀರ? ಯಾರಾದ್ರೂ attack ಮಾಡಿದ್ರೆ ,ಅಥವ ಏನಾದ್ರೂ ಕಳವು ಆದ್ರೆ ’ಆಮೇಲೆ ಕಾನೂನಿನ ಪ್ರಕಾರ ಕ್ರಮ ಕೈ ತಗೊಳ್ ಬಹುದು ಅಲ್ವ?? ’ ಆದ್ರೆ ನೀವು security ಇಡ್ತೀರ ,ಅದೂ ನಿಮ್ ಗೆ ಗ್ರೂಪ್ ಫೋರ್ ನಂಥ security agency ನೇ ಬೇಕು?? ಯಾಕೆ?
ಈಗ ನಡೆದಿರೋ ಸಂಗತಿಗಳಿಂದ ಈ ಮತಾಂತರದ ವಿಷಯ ಜಗಜ್ಜಾಹೀರಾಗಿದೆ ,ಆದ್ರೆ ಸುಮ್ಮನೆ ಮತಾಂತರದ ಬಗ್ಗೆ ಸುಮ್ಮನೆ ಒಂದು complaint ಕೊಟ್ಟು ಮನೆಗೆ ಬಂದು ಬೆಚ್ಚಗೆ ಮಲಗಿದ್ರೆ NDTVಯವ್ರು ಈ ಬಗ್ಗೆ ಕಾರ್ಯಕ್ರಮ ನಡೆಸ್ತಿದ್ರ?? ಅಥವಾ ನೀವು/ನಾನು ಬ್ಲಾಗ್ ನಲ್ಲಿ ಈ ಬಗ್ಗೆ ಬರೀತಿದ್ವ??

ನನ್ಗೆ ಮಂಗಳೂರಿನ ರೋಮನ್ ಕ್ಯಾಥೋಲಿಕ್ ಸಮುದಾಯದ ಬಗ್ಗೆ ಅಪಾರ ಗೌರವವಿದೆ .ಯಾಕಂದ್ರೆ ನಾನೂ ಕಾನ್ವೆಂಟ್ ನಲ್ಲಿ ಓದಿರೋನು .ನಮ್ಮ ಟೀಚರುಗಳು,ಸಿಸ್ಟರ್ ಗಳು ಎಲ್ಲ ಕ್ರಿಶ್ಚಿಯನ್ ಸಮುದಾಯದವ್ರು.ಆದ್ರೆ ಯಾವತ್ತೂ ಅವರು ಹಿಂದೂ ಧರ್ಮದ ಬಗ್ಗೆ ಅವಮಾನಿಸಿ ಮಾತಾಡಿಲ್ಲ .ನನ್ನಲ್ಲಿ ಸ್ವಲ್ಪ ಒಳ್ಳೆಯ ಗುಣಗಳು ಮೂಡಿದ್ರೆ ಅದರಲ್ಲಿ ಅವರ ಕೊಡುಗೆ ಅಪಾರ.
ಎಲ್ಲೋ ಕೆಲವೊಂದು ಶಾಲೆಗಳಲ್ಲಿ ಹಿಂದೂ ಧರ್ಮದ ಸಂಕೇತಗಳಾದ ಹೂ,ಕುಂಕುಮ ಗಳಿಗೆ ನಿಷೇಧ ಹೇರಿದ್ದು ಬಿಟ್ರೆ (ಇದು ಗಂಭೀರ ಅಪರಾಧ ಆದ್ರೂ ಅದನ್ನು ಸರಿ ಪಡಿಸಿದ್ದಾರೆ,ಲಂಡನ್ ನಲ್ಲೇ ಸಿಖ್ ಗಳು ಟರ್ಬನ್ ಧರಿಸೋದನ್ನು ನಿಷೇಧಿಸಿದರ ಬಗ್ಗೆ ಪ್ರತಿಭಟನೆ ನಡೆಸ್ತಾರೆ ಆದ್ರೆ ನಾವು?) ಹಿಂದೂ ಧರ್ಮಕ್ಕೆ ಅಪಚಾರ ಆಗೋ ಅಂಥ ಕೆಲಸ ಅವ್ರು ಯಾವತ್ತೂ ಮಾಡಿಲ್ಲ ,ಮಾಡೋದೂ ಇಲ್ಲ .
ಆದ್ರೆ ಈಗ ಕೆಲವು ದುರುದ್ದೇಶ ಪ್ರೇರಿತ ಸಂಘಟನೆಗಳು ಮತಾಂತರಕ್ಕೆ ಕುಮ್ಮಕ್ಕು ನೀಡಿದ್ದು ಸತ್ಯ.ಇದಕ್ಕೆಲ್ಲ ಹಣ ಎಲ್ಲಿಂದ ಬರುತ್ತೆ ಅನ್ನೋದೂ ರಹಸ್ಯವಾಗೇನೂ ಉಳಿದಿಲ್ಲ.
ನನ್ನ ಹಲವಾರು ಸ್ನೇಹಿತರು ಕೇಳ್ತಾರೆ "ಅಲ್ಲಪ್ಪ ಬೇರೆ ಮತಕ್ಕೆ ಹೋಗೋದು ಅವರಿಷ್ಟ ,ಅದನ್ಯಾಕೆ ನಾವು ವಿರೋಧಿಸ್ಬೇಕು " ಅಂತ !!

ಹೌದಲ್ಲ?? ಯಾಕೆ ನಾವು ತಲೆ ಕೆಡಿಸ್ಕೋಬೇಕು ???

ಅದೆಲ್ಲ ಇರ್ಲಿ ,ನಿಮಗೊಂದು ಪುಟ್ಟ ಮಗು ಇದೆ ಅಂತ ತಿಳ್ಕೊಳ್ಳಿ! ನಿಮಗೆ ಬರೋದು ಎರಡು ಸಾವಿರ ಸಂಬಳ .ನಿಮ್ಮ ಶಕ್ತಿ ಪ್ರಕಾರ ಯಾವುದೋ ಒಂದು ಸರಕಾರಿ ಶಾಲೆಗೆ ಮಗುವನ್ನು ಸೇರಿಸಿ ನಿಮ್ಮ ಶಕ್ತಿ ಮೀರಿ ಬೆಳೆಸ್ತೀರ.
ಒಂದು ದಿನ ಒಬ್ಬ ಶ್ರೀಮಂತ ಸಾಫ್ಟ್ ವೇರ್ ಇಂಜಿನಿಯರ್ ಬಂದು " ಮಗು, ನಿನ್ ಅಪ್ಪಂಗೆ ಬರೀ ಎರಡು ಸಾವಿರ ಸಂಬಳ ,ಅವನಿಂದ ನಿನ್ನನ್ನು ’ಚೆನ್ನಾಗಿ’ ಸಾಕೋ ಯೋಗ್ಯತೆ ಇಲ್ಲ .ನನ್ ಜೊತೆ ಬಾ ,ಯಾವುದಾದ್ರೂ ಒಳ್ಳೆ ಕಾನ್ವೆಂಟ್ ಗೆ ನಿನ್ನ ಸೇರಿಸ್ತೀನಿ ,ದಿನಾ ಹಾರ್ಲಿಕ್ಸ್ ಕೊಡಿಸ್ತೀನಿ ,ಹ್ಯಾರಿ ಪೊಟರ್ ಸಿನೆಮಾ ತೋರಿಸ್ತೀನಿ " ಅಂತ ಪುಸಲಾಯಿಸಿ ಕರ್ಕೊಂಡು ಹೋದ್ರೆ ಏನ್ ಮಾಡ್ತೀರಾ??

ನೀವನ್ ಬಹುದು ಮಗು ಆ ಥರ ಹೋಗಲ್ಲ ಅಂತ !

21st century ಮಗು ಕಣ್ರಿ ಅದು ಏನೂ ಹೇಳೋಕಾಗಲ್ಲ ಹೋದ್ರೂ ಹೋಗ್ ಬಹುದು ! ಆಗ ಏನನ್ನಿಸುತ್ತೆ ನಿಮಗೆ?
ಓಕೆ ಮಗು ಮೈನರ್ . ಅದು ಹೋದ್ರೂ ವಾಪಸ್ ತರ್ಸೋಕೆ ಕಾನೂನು ಇದೆ.
ಇದೇ ಕೆಲಸ ಹೆಂಡತಿ ಮಾಡಿದ್ರೆ ?? "ನಿನ್ ಗಂಡನಿಗೆ ಸಂಬಳ ಚೆನ್ನಾಗಿಲ್ಲ ,ನಾನು ಚೆನ್ನಾಗಿ ಸಾಕ್ತೀನಿ " ಅಂತ ಯಾರಾದ್ರೂ ಪುಸಲಾಯಿಸಿದ್ರೆ ಏನನ್ಸುತ್ತೆ? ಮಗು ಏನೊ ಮೈನರ್ ,ಆದ್ರೆ ಹೆಂಡತಿ ಮೇಜರ್ ಅಲ್ವ? ಡೈವೋರ್ಸ್ ಕೊಟ್ಟೇ ಹೋಗಬಹುದು?

ಈಗ ಹೇಳಿ ತಪ್ಪು ಯಾರ್ದು?

ಯಾರೊ ಒಬ್ಬ ನಡುರಾತ್ರಿಯಲ್ಲಿ ಮನೆಯಲ್ಲಿ ಮಲಗಿದ್ದಾಗ, ಖೇತಾನ್ ಫ್ಯಾನ್ ಕೆಳಗೆ ಜ್ಞಾನೋದಯ ಆಗಿ ಸೀದ ಚರ್ಚಿಗೆ ಹೋಗಿ ’ಫಾದರ್ ನಾನೂ ಕ್ರಿಶ್ಚಿಯನ್ ಆಗ್ಬೇಕು ನನಗೆ ದೀಕ್ಷೆ ಕೊಡಿ ’ಅಂತ ಹೇಳಿದ್ರೆ ಅದು fine ,ಅದು ಅವನಿಷ್ಟ . ಆದ್ರೆ ’ಬೇರೆ ಯಾರೋ ’ಅವನ ಮನೆಗೆ ಬಂದು ಪುಸಲಾಯಿಸಿದ್ರೆ ತಪ್ಪು ಯಾರದ್ದು?
ಸುವರ್ಣ ಚ್ಯಾನೆಲ್ ನಲ್ಲಿ ಈ ಬಗ್ಗೆ ಚರ್ಚೆ ನಡೀತ ಇತ್ತು . ಶಶಿಧರ್ ಭಟ್ ಮತ್ತೆ ಇನ್ನೊಬ್ರು ಸೇರಿಕೊಂಡು ಒಬ್ಬ ಹೆಗ್ಗಡೆಯವರ ಮೇಲೆ ವಾಗ್ದಾಳಿ ನಡೆಸ್ತಾ ಇದ್ರು .ಇದು ಸರಿ ನಾ??
ಶಶಿಧರ್ ಭಟ್ ಅಲ್ಲಿ neutral ಆಗಿರ್ಬೇಕಿತ್ತಲ್ಲ?? ಕೊನೆಗೆ ಭಟ್ರು ’ಕುವೆಂಪು ಹೇಳಿದ್ದಾರೆ ಎಲ್ಲ ದೇವರನ್ನು ಬೀದಿಗೆಸೀರಿ ’ ಅಂತಾನೂ ಹೇಳಿದ್ರೂ .
ಸರಿ ಎಲ್ಲ ಬಿಟ್ಟು ಬಿಡೊಣ ,ಆದ್ರೆ ಭಟ್ ,ಕಾಮತ್ ಅನ್ನೋ ಜಾತಿ ಸೂಚಕಗಳನ್ಯಾಕೆ ನಾವು ಬೀದಿಗೆಸೆಯೋಕೆ ತಯಾರಿಲ್ಲ?? ಅಷ್ಟು ಸುಲಭ ನಾ ಅದು?

’ಎದೆ ತಟ್ಟಿ ಹೇಳು ನಾನೊಬ್ಬ ಹಿಂದು ’ ಅನ್ನೋ ಸ್ಲೋಗನ್ ಇದೆ ಅದನ್ನು ಮಂಗಳೂರಿನಲ್ಲಿದ್ದಾಗ ಕೇಳಿದ್ರೆ ನಗು ಬರ್ತಾ ಇತ್ತು . ಛೇ ! ನಾನೊಬ್ಬ ಹಿಂದು ಅಂತ ಎದೆ ತಟ್ಟಿ ಹೇಳೊದ್ರಲ್ಲಿ ಏನಿದೆ ವಿಶೇಷ ಅಂತ !!

ಆದ್ರೆ ಈಗ ಗೊತ್ತಾಗ್ತಾ ಇದೆ ಅಷ್ಟು ಸುಲಭವಿಲ್ಲ ಎದೆ ತಟ್ಟಿ ಹೇಳೋದು ! ಶಶಿಧರ್ ಭಟ್ರು ,ಹೆಗ್ಡೆಯವ್ರಿಗೆ ಪದೇ ಪದೇ "ನೀವು ಹಿಂದುಗಳು ","ನೀವು ಹಿಂದುಗಳು " ಅಂತ ಉದ್ದೇಶಿಸೀನೇ ಮಾತಾಡ್ತಾ ಇದ್ರು; ಅವ್ರ್ಯಾಕೆ "ನಾವು ಹಿಂದುಗಳು " ಅನ್ನೋ ರೀತಿ ಮಾತಾಡಿಲ್ಲ?? ಯಾಕಂದ್ರೆ ಆ ಕ್ರಿಶ್ಚಿಯನ್ ಹಿರಿಯರು ತಪ್ಪು ತಿಳ್ಕೋತಾರೇನೋ ಭಯ ”ಹೆಗಡೆಯವ್ರಿಗೆ ,ಭಜರಂಗ ದಳದವ್ರಿಗೆ ಸಪೋರ್ಟ್ ಮಾಡ್ತಾ ಇದ್ದೀನಿ ’ ಅಂತ ವೀಕ್ಷಕರು ತಿಳೀಬಹುದೇನೋ ಅನ್ನೊ ಭಯ !
ಎಂಥ ವಿಪರ್ಯಾಸ ?.....
ನಾನು ಅಹಮದಾಬಾದ್ ನಲ್ಲಿ ಸ್ವಲ್ಪ ಕೆಲಸ ಮಾಡ್ತಾ ಇದ್ದೆ .ಸಾಬರಮತೀ ನದಿಯ ಈ ಕಡೆ ಹಿಂದೂಗಳು ,ಆ ಕಡೆ ಮುಸ್ಲಿಮರು ! ಅಂಥ ವಿಚಿತ್ರವಾದ ಏರಿಯಾ ಅದು! ಕೋಳಿ ಮಾಂಸ ನದಿಯ ಆ ಕಡೇನೆ ಸಿಗೋದ್ರಿಂದ ನಾನೂ ನನ್ನ ಫ್ರೆಂಡ್ಸ್ ನಾನ್ ವೆಜ್ ತಿನ್ನೋಕೆ ಅಂತ ’ಆ ಕಡೆ ’ ಹೋಗಿದ್ವಿ . ಮಂಗಳೂರಿನ style ನಲ್ಲಿ ಉದ್ದನೆ ಕುಂಕುಮ ನಾಮ ಬೇರೆ ಹಾಕಿದ್ವಿ (ಅಲ್ಲಿದ್ದಾಗ ಯಾಕೋ ದೈವ ಭಕ್ತಿ ಜಾಸ್ತಿನೇ ಉಕ್ಕಿ ಬಂದಿತ್ತು !).ಅಲ್ಲಿ ಒಂದು ಗಲ್ಲಿ ಇತ್ತು ,ಬಟ್ಟೆ ಬರೆ ಮಾರೋರ್ದು . ದೊಡ್ಡ ಗಲ್ಲಿ ,ಆ ಗಲ್ಲಿಯ ಒಳಗೆ ಹೋದ್ರೆ ಹೊರಗೆ ಬರೋದಕ್ಕೇ ಗೊತ್ತಾಗಿಲ್ಲ ನಮಗೆ .ಒಳಗೆ ನೋಡಿದ್ರೆ ಎಲ್ಲ ಮುಸಲ್ಮಾನ ವರ್ತಕರು.ಎಲ್ಲಾ ನಮ್ಮನ್ನೇ ನೋಡಿ ಗುರಾಯಿಸ್ತಾ ಇದ್ರು .ಯಾಕೆ ಏನೂ ಅಂತ ನಮಗೂ ಗೊತ್ತಾಗಿಲ್ಲ . ಅಲ್ಲಿ ಚೆನ್ನಾಗಿ ಸುತ್ತಾಡಿ ,ಕೋಳಿ ,ಮೀನು ತಿಂದು ಆಫೀಸಿಗೆ ವಾಪಾಸಾದ್ವಿ.
ಆಫೀಸಿನಲ್ಲಿ ಕಲೀಗ್ಸ್ ’ಎಲ್ಲಪ್ಪ ಹೋಗಿದ್ರಿ ,ಏನ್ ಮಾಡಿದ್ರಿ ’ ಅಂತ ಕೇಳಿದ್ರು .
ನಾವು ಎಲ್ಲ ಹೇಳಿ ,’ಅಲ್ಲಿ ನಮ್ಮನ್ನು ಜನ ಗುರಾಯಿಸ್ತಿದ್ದರು ಯಾಕೆ ಅಂತ ಗೊತ್ತಾಗಿಲ್ಲ ’ ಅಂದ್ವಿ .
ಅದಕ್ಕೆ ಆಫೀಸಿನವ್ರು ನಮ್ಮನ್ನೇ ಗದರಿಸೋದಾ?? " ಏನ್ರಪ್ಪ ಈ ರೀತಿ ಬಜರಂಗ ದಳದವ್ರ ಹಾಗೆ ನಾಮ ಇಟ್ಕೊಂಡು ಅಲ್ಲೆಲ್ಲ ಸುತ್ತಾಡೊದಾ ನೀವು? ಜೀವಂತ ವಾಪಸ್ ಬಂದಿದ್ದೆ ಪುಣ್ಯ ಕಣ್ರಯ್ಯ ನೀವು ,ಆ ಗಲ್ಲಿಯಲ್ಲಿ ನಿಮ್ಮನ್ನು ಕತ್ತರಿಸಿ ಬಿಸಾಡಿದ್ರೆ ಎಲ್ಲ ನಂ ತಲೆ ಮೇಲೆ ಬರ್ತಿತ್ತು " ಅಂತ !!!!

ಈಗ ಹೇಳಿ ಇದೆಯ ಧೈರ್ಯ ,ಎದೆ ತಟ್ಟಿ ಹೇಳೊಕೆ ನಾನೊಬ್ಬ ಹಿಂದು ಅಂತ??

ನಾನು ಹೇಳಿರೋದೆಲ್ಲ ಸಿನೆಮಾ ಕಥೆ ಥರ ಅನ್ನಿಸಬಹುದು ,ಆದ್ರೆ ಇದು ನಿಜ .

ಮಂಗಳೂರಿನಲ್ಲಿ ಮತಾಂತರ ಆದ್ರೆ ನಮಗೇನು ಪ್ರಾಬ್ಲೆಮ್ ಅಂತ ಅನ್ನಿಸಬಹುದು ನಿಮಗೆ.!
ಇಲ್ಲಿ ಬೆಂಗಳೂರಿನಲ್ಲಿ ಚಿಕನ್ ಗುನ್ಯ ಬಂದಾಗ ಮಂಗಳೂರಿನವ್ರಿಗೂ ಹಾಗೇ ಅನ್ನಿಸಿತ್ತು .ಅಲ್ಲಿ ಚಿಕನ್ ಗುನ್ಯ ಬಂದ್ರೆ ನಮಗೇನು ಅಂತ .ಆದ್ರೆ ಪುತ್ತೂರಲ್ಲಿ ಬಂದು ಹಾಸಿಗೆ ಹಿಡಿದು ಮಲಗಿದಾಗಲೇ ಗೊತ್ತಾಗಿದ್ದು ಅದರ ಕಷ್ಟ !!

ಹೀಗೆ ಮತಾಂತರ ಮುಂದುವರೀತ ಇದ್ರೆ ಪ್ರತ್ಯೇಕ ಕ್ರಿಶ್ಚಿಯನ್ ರಾಜ್ಯ/ರಾಷ್ಟ್ರಗಳಿಗೆ ಬೇಡಿಕೆ ಬರೋದಂತೂ ನಿಜ.ಬೇಡಿಕೆ ಬಂದ್ರೇನಂತೆ ಕೊಡೋಣ ಅಂತೀರಾ ಅಲ್ವ??
ಒಂದು ಕಾಶ್ಮೀರದ ಸಮಸ್ಯೇನೆ ಇನ್ನೂ ಬಗೆ ಹರಿದಿಲ್ಲ ಗೊತ್ತಲ್ವ??
ಹಿಂದಿಯಲ್ಲಿ ಒಂದು ಶಾಯರಿ ಇದೆ .

"ಹಮೇ ತೊ ಅಪ್ನೋನೆ ಲೂಟಾ ,ಗೈರೋಂ ಮೇ ಕಹಾಂ ದಮ್ ಥಾ .....
ಹಮೇ ತೊ ಅಪ್ನೋನೆ ಲೂಟಾ ,ಗೈರೋಂ ಮೇ ಕಹಾಂ ದಮ್ ಥಾ .....
ಜಹಾಂ ಮೇರಿ ಕಶ್ತೀ ಡೂಬಿ ಪಾನೀ ವಹಾಂ ಕಮ್ ಥಾ............."

ಹಿಂದುಗಳೇ ಹಿಂದುಗಳ ಶತ್ರುಗಳಾಗಿರೋದು ಶೋಚನೀಯ!!!!!

Photo Courtesy : http://www.sciy.org/

Tuesday, September 16, 2008

ಉದ್ಯೊಗಂ ಪುರುಷ ಲಕ್ಷಣಂ !



’ಪುರುಷರಿಗಾಗಿ ಮಾತ್ರ ’ ಅಂತ ಒಂದು ಪತ್ರಿಕೆ ಬರುತ್ತೆ ,ಟೈಟಲ್ ಕೆಳಗೆ ಪುರುಷರನ್ನು ಪ್ರೀತಿಸುವ ಮಹಿಳೆಯರೂ ಓದಬಹುದು ! ಅಂತ caption ಇದೆ .ಅದೇ ರೀತಿ ’ಉದ್ಯೋಗಂ ಪುರುಷ ಲಕ್ಷಣಂ ’ ಅನ್ನೋದು ಬರೀ ಟೈಟಲ್ಲು ! ಉದ್ಯೊಗದಲ್ಲಿರೋ ಮಹಿಳೆಯರೂ ಧಾರಾಳವಾಗಿ ಓದಬಹುದು ಇದನ್ನು !ರೆಡಿಮೇಡ್ ಆಗಿ ಸಿಗುತ್ತಲ್ವ ಇಂಥ ಟೈಟಲ್ ಅದಿಕ್ಕೆ ಉಪಯೋಗಿಸಿದ್ದೀನಿ ,ಮಹಿಳೆಯರು ಬೇಜಾರು ಮಾಡ್ಕೋಬಾರ್ದು .
ಅಂದ ಹಾಗೆ ವಿಷಯ ಅಷ್ಟೆನೂ ಗಂಭೀರ ಇಲ್ಲ ! ಯಾವುದೇ ಥರದ ವಾದಗಳನ್ನಿಲ್ಲಿ ಹುಟ್ಟು ಹಾಕ್ತಾ ಇಲ್ಲ ನಾನು . ಒಂದು ಚಿಕ್ಕ ಪ್ರಾಬ್ಲೆಮ್ಮು ಮಾರಾಯ್ರೆ .ಅದು ನಂದು ಮಾತ್ರ ಅಲ್ಲ ಬಹುತೇಕ ಜನರ ಪ್ರಾಬ್ಲೆಮ್ ಕೂಡಾ .
ವಿಷಯ ಏನಂದ್ರೆ , ಕಷ್ಟಪಟ್ಟು ಇಂಜಿನಿಯರಿಂಗ್ ಮುಗಿಸಿ ಬೆಂಗಳೂರಿಗೆ ಬಂದಿರ್ತೀರ . ಹೇಗೋ ದೇವರ ದಯೆಯಿಂದ ಇಂಟೆಲ್ ಅಂಥ ಒಳ್ಳೆ (?) ಕಂಪೆನಿಯಲ್ಲಿ ಕೈ ತುಂಬಾ ಸಂಬಳ ಇರೋ ಕೆಲಸಾನೂ ಸಿಕ್ಕಿ ಬಿಡುತ್ತೆ .ಇನ್ನೇನು ನಾನೇ ಕಿಂಗು ,ಕ್ವೀನ್ ಸಿಗೋದೊಂದೇ ಬಾಕಿ ಅಂತ ಖುಶಿಯಿಂದ ಬೀಗ್ತಿರ್ತೀರ. ಹಂಗೆ ಸೀರೆ ,ಸ್ವೀಟ್ಸು ಅಂತೆಲ್ಲ ಕಟ್ಟಿಕೊಂಡು ಊರಿಗೆ ಹೋಗಿ ಮನೆಯವರಿಗೆಲ್ಲ ಹಂಚ್ತೀರ .
ನಿಮ್ಮ ಗಲಾಟೆ ಕೇಳಿ ಪಕ್ಕದ ಮನೆಯವ್ರು ಬಂದು ’ಏನಪ್ಪ ಹೆಂಗಿದ್ದೀಯ?? ಕೆಲ್ಸ ಸಿಗ್ತಾ?? ಯಾವ ಕಂಪೆನಿ ? ’ ಅಂತ ಕೇಳ್ತಾರೆ.
ನೀವೂ ಖುಷಿಯಿಂದ ,’ಹೌದು ಸಿಗ್ತು ಇಂಟೆಲ್ ಅಂತ ಬೆಂಗ್ಳೂರಲ್ಲಿ ’ ಅಂತೀರ .ನಿಮ್ಮ ಪ್ರಕಾರ ಇಂಟೆಲ್ ಬಿಲಿಯನ್ ಡಾಲರ್ ಕಂಪೆನಿ .ನೆಕ್ಸ್ಟ್ ಪೆಂಟಿಯಮ್ ಪ್ರೊಸೆಸರ್ ನಾನೇ ಡಿಸೈನ್ ಮಾಡೊದು ಅನ್ನೊ ರೀತಿಯ ಉತ್ಸಾಹ !

ಅವರು ಅದಿಕ್ಕೆ ’ಇಂಟೆಲ್ ಆ??....... ಛೆ ಯಾಕಪ್ಪಾ ಇನ್ಫೋಸಿಸ್ ಟ್ರೈ ಮಾಡಿಲ್ವ ’....... ಅಂತಾರೆ.ಅದೂ ಸಾಲದು ಅನ್ನೋ ಹಾಗೆ ವಿಪ್ರೋ ಗೂ ಒಂದು ಅರ್ಜಿ ಹಾಕಿ ನೋಡು ಅಂತಾರೆ .
.
.
ಟುಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್
.
.
ಬಲೂನು ಹಂಗೇ ಒಡೆದು ನಿಧಾನಕ್ಕೆ ತೇಲಿಕೊಂಡು ಭೂಮಿಗೆ ಇಳೀತೀರ .. ಹೆಂಗಿತ್ತು ಆಕಾಶಯಾನ??
ಎಲ್ಲರಿಗೂ ಒಂದು ಆಸೆ ಇರುತ್ತೆ (ಅದಿಕ್ಕೆ ಹೇಳೊದು ಉಪ್ಪು,ಹುಳಿ,ಖಾರ ಸ್ವಲ್ಪ ಕಮ್ಮಿ ತಿನ್ನಿ ಅಂತ) ನಮ್ಮ ಪ್ರಗತಿ ಕಂಡು ಮನೆಯವ್ರು,ಊರವ್ರು ಹೆಮ್ಮೆ ಪಡಬೇಕು ,ಹೊಗಳ್ಬೇಕು ಅಂತ .ಆದ್ರೆ ಇಲ್ಲಿ ನೋಡಿದ್ರೆ ಎಲ್ಲ ಎಡವಟ್ಟು :(
ಹೀಗೆ ಸ್ವಲ್ಪ ದಿನ ಹಿಂದೆ ಊರಿಗೆ ಹೋಗಿದ್ದೆ .ಅಲ್ಲಿ ಪರಿಚಯಸ್ತರೊಬ್ರು ಸಿಕ್ಕಿದ್ರು ,ಅವರಿಗೆ ಚಕ್ಕುಲಿ,ಕೋಡುಬಳೆ ಮುಂತಾದ ಕುರ್ಕಲು ತಿಂಡಿ ಮಾರೋ ವ್ಯವಹಾರ.ಅವರೂ as usual ’ಓಹ್ ಸಂದೀಪ ಏನಪ್ಪ ಹೇಗಿದ್ದೀಯಾ ,ಎಲ್ಲಿ ಕೆಲಸ ’ ಅಂದ್ರು .
’ನಂದು Conexant ಅಂತ ಕಂಪೆನಿ ಹೆಸ್ರು ’ ಅಂದೆ .ಅವ್ರು’ಓಹ್ ಕನೆಕ್ಶನಾ ’ ಅಂದ್ರು .
’ಅಲ್ಲ ,ಕನೆಕ್ಶನ್ ಅಲ್ಲ Conexant ಅಮೆರಿಕಾದ ಕಂಪೆನಿ ’ ಅಂದೆ .
ಅವರು ಮತ್ತೆ ’ಗೊತ್ತಾಯ್ತು ಬಿಡು ಕನೆಕ್ಶನ್ನು’!!! ಅಂದ್ರು . ಇನ್ನೇನ್ ಮಾಡೋದು ’ಹೌದು’ ಅಂತ ಗೋಣಾಡಿಸಿದೆ .
’ಅದಿರ್ಲಿ ಏನು ಕೆಲಸ ಮಾಡ್ತೀರ ಅಲ್ಲಿ ’ ಸುಂಯ್ ಅಂತ ಬಂತು ಎರಡನೇ ಪ್ರಶ್ನೆ !!
ಸಾಫ್ಟ್ ವೇರ್ ಇಂಜಿನಿಯರ್ ಅಂತ ಹೇಳಿ ಎಸ್ಕೇಪ್ ಆಗೋಣ ಅಂತಿದ್ದೆ .ಆದ್ರೆ ಮನಸ್ಸು ಯಾಕೋ ಒಪ್ಪಲಿಲ್ಲ .ಯಾಕಂದ್ರೆ ನಂದು ಸಾಫ್ಟ್ವೇರ್ ಅಲ್ಲ ! ಹಾರ್ಡ್ ವೇರ್ ಕೆಲಸ!!
ಸಿಂಪಲ್ ಆಗಿ ಹೇಳೋಣ ಅಂತ ’ ಅದೂ ನಂದು ಕಂಪ್ಯೂಟರಲ್ಲಿ ಕೆಲಸ ’ ಅಂದೆ .

ಅದಿಕ್ಕೆ ಅವ್ರು ’ ಥೂ ನಿನ್ನ ಅದಕ್ಯಾಕೋ ಬೆಂಗಳೂರಿಗೆ ಹೋಗ್ಬೇಕು ?? ಇಲ್ಲೆ ಪಕ್ಕದೂರಿನಲ್ಲಿ ನಾಯಕ್ ರ ಮಗ ಏನೊ ಸೈಬರ್ ಅಂತ ಇಟ್ಟಿದ್ದಾನೆ . ಬೇಕಾದ್ರೆ ಕೇಳಿ ನೋಡ್ತೀನಿ ಕೆಲಸ ಇದೆಯಾ ’ ಅಂದ್ರು.
ಅವರ ಕಾಳಜಿ ನೋಡಿ ಏನೋ ಖುಷಿ ಆಯ್ತು . ಆದ್ರೆ ’ನಾನು ಏನು ’ ಅಂತ ಕಡೆಗೂ ಅವರಿಗೆ ಅರ್ಥ ಆಗಿಲ್ವಲ್ಲ ಅಂತ ಬೇಜಾರಾಯ್ತು.ಸಧ್ಯ ಬಚಾವಾದೆ ನಂದು ಸಾಫ್ಟ್ ವೇರಲ್ಲ ಹಾರ್ಡ್ ವೇರು ಅಂತ ಗೊತ್ತಾಗಿದ್ರೆ ನಟ್ಟು ,ಬೋಲ್ಟು ,ಅಂಗಡಿಯವ್ರೂ ಗೊತ್ತು ಅಂತಿದ್ರೇನೋ ಪಾಪ!

ಹಾಗೆ ಬೀಚು,ಅದೂ ಇದೂ ಅಂತ ಸುತ್ತಾಡಿ ಮನೆಗೆ ವಾಪಸ್ ಆಗ್ಬೇಕಾದ್ರೆ ಇನ್ನೊಬ್ರು ಪರಿಚಯದವ್ರು ಸಿಕ್ಕಿದ್ರು ! ಮತ್ತೆ ಇವರಿಂದ ಮುಖಭಂಗ ಆಗೋದು ಬೇಡ ಅಂತ ಎಸ್ಕೇಪ್ ಆಗೋಣ ಅನ್ನೊ ಅಷ್ಟರಲ್ಲಿ ಹಿಡಿದು ಬಿಟ್ರು .....
’ಸಂದೀಪ.................’
’ಬೆಂಗ್ಳೂರಲ್ವ ಈಗ ,ಹೇಗಿದ್ದೀಯ ’ಅಂದ್ರು .’ಚೆನ್ನಾಗಿದ್ದೀನಿ ಅಂಕಲ್ ಎಲ್ಲಾ ನಿಮ್ಮ ಆಶೀರ್ವಾದ ’ ಅಂದೆ.
ಅದಿಕ್ಕೆ ಅವ್ರು ’ನೀನು ಇಲೆಕ್ಟಾನಿಕ್ಸ್ ಡಿಪ್ಲೋಮಾ ಅಲ್ವಾ ಓದಿರೋದು ’ .ಸಕ್ಕತ್ ಖುಶಿ ಅಯ್ತು .
ನಾನು ಏನು ಓದಿದ್ದೀನಿ ಅಂತ ಇವ್ರಿಗೆ ಗೊತ್ತಿದ್ದ ಮೇಲೆ ಖಂಡಿತ ಇವ್ರಿಗೆ ’ನಾನು ಏನು’ ಅಂಥ ಅರ್ಥ ಆಗುತ್ತೆ ಅಂದುಕೊಂಡೆ.
’ಏನಿಲ್ಲ ಸಂದೀಪ ನಂದೊಂದು ಟಿ.ವಿ ರಿಪೇರಿ ಆಗ್ಬೇಕಿತ್ತು ,ಮಾಡ್ ಕೊಡೋಕಾಗುತ್ತಾ ?????’

ಮತ್ತೆ ಟುಸ್ಸ್ ಸ್ ಸ್ ಸ್ ಸ್ ಸ್..............
’ಸಾರಿ ಅಂಕಲ್ ನಂಗೆ ಬರಲ್ಲ ಅದೆಲ್ಲ ’ ಅಂದೆ . ಸಿಟ್ಟಾಗ್ಬಿಟ್ರು ಅಂಕಲ್ಲು !!!!
’ಇನ್ನ್ಯಾವ್ ಸೀಮೆ ಇಲೆಕ್ಟ್ರಾನಿಕ್ಸ್ ಕಲಿತೆ ಕಣಯ್ಯ ನೀನು ? ಒಂದು ಟಿವಿ ರಿಪೇರಿ ಬರಲ್ಲ ಅಂತೀಯ ’ ಶುರು ಹಚ್ಚಿಕೊಂಡ್ರು .
’ಅದು ಹಾಗಲ್ಲ ಅಂಕಲ್ ,ಬರುತ್ತೆ ಆದ್ರೆ ಅದಿಕ್ಕೆ ಮಲ್ಟಿಮೀಟರ್ ಅಂತ ಬೇಕು ,ಅದು ಬೆಂಗಳೂರಲ್ಲೇ ಬಿಟ್ಟು ಬಂದಿದ್ದೀನಿ .ನೆಕ್ಸ್ಟ್ ಟೈಮ್ ಬಂದಾಗ ಖಂಡಿತ ತರ್ತೀನಿ .ಸಾರಿ ’ ಅಂತ ಹಲ್ಲು ಕಿಸಿದೆ.
’ಹೋ ಹಾಗ ಮೊದಲೇ ಹೇಳೊದಲ್ವೇನೊ .ಇಂಥದ್ದೆಲ್ಲ ಬ್ಯಾಗ್ ನಲ್ಲೇ ಇಟ್ಕೊಂಡಿರ್ಬೇಕಯ್ಯ ’ ಅಂತ ಬುದ್ಧಿವಾದ ಬೇರೆ .

ಪರಿ ಪರಿ ಶಾಸ್ತ್ರವನೋದಿದರೇನು ವ್ಯರ್ಥವಾಯ್ತು ಡಿಗ್ರಿ -ಅಂತ ನನ್ನ ನಾನೇ ಬಯ್ ಕೋತಾ ಕಳಚಿಕೊಂಡೆ ಅಲ್ಲಿಂದ.

ನಂಗೇನಾದ್ರೂ ’ಆಪಲ್ ’ ಕಂಪೆನಿಯಲ್ಲಿ ಕೆಲಸ ಸಿಕ್ಕಿದ್ದಿದ್ರೆ ಏನ್ ಗತಿ ಅಂತ ನೆನೆಸಿಕೊಂಡ್ರೇನೆ ಭಯ ಆಗುತ್ತೆ. Apple ಬಿಲಿಯನ್ ಡಾಲರ್ ಕಂಪೆನಿ .Apple iPod,iPhone ತುಂಬಾನೇ ಫೇಮಸ್ಸು !
ಆದ್ರೇ ಊರಿಗೆ ಹೋಗಿ ’apple' ನಲ್ಲಿ ಕೆಲಸ ಅಂದ್ರೆ ,’ಯಾಕೋ ಹಲಸಿನ ಹಣ್ಣು ,ಮಾವಿನ ಹಣ್ಣು ಅಂತ ಕಂಪೆನಿ ಇಲ್ವ ಅಲ್ಲಿ ’ ಅಂತ ಹೇಳಿಸ್ಕೋಬೇಕಾಗಿತ್ತು. ಅಷ್ಟರ ಮಟ್ಟಿಗೆ ಲಕ್ಕಿ ನಾನು !

ರೀ,ಇನ್ಫೋಸಿಸ್ ,ವಿಪ್ರೊ ,ಅಥವ TCS ಈ ಮೂರರಲ್ಲಿ ಕೆಲಸ ಇದ್ರೆ ಹೇಳ್ತೀರಾ ಪ್ಲೀಸ್ .....

Monday, September 1, 2008

ಡುಂಡಿರಾಜರೊಡನೆ ಒಂದು ಸಂಜೆ



ಬೆಂಗಳೂರಿಗೆ ಬಂದು ಆರು ವರ್ಷ ನಾಲ್ಕು ತಿಂಗಳಾಯ್ತು .ಇದರಲ್ಲಿ ನಾನು ಸರಿಯಾಗಿ ಒಳ್ಳೆಯ ಕಾರ್ಯಕ್ರಮಗಳಲ್ಲಿ ಭಾಗವಸಿದ್ದು ಬೆರಳೆಣಿಕೆಯಷ್ಟು !

ಎಲ್ಲೋ ಗಣೇಶ ಹಬ್ಬದಲ್ಲಿ ಆರ್ಕೆಷ್ಟ್ರಾ ಆಗ್ತ್ರಿಬೇಕಾದ್ರೆ ಹಿಂದೆ ಟಪ್ಪಾಂಗ್ಗುಚ್ಚಿ ಹಾಕಿದ್ದು ಬಿಟ್ರೆ ಅಂಥ ಘನಂದಾರಿ ಕೆಲಸ ಏನೂ ಮಾಡಿರ್ಲಿಲ್ಲ ನಾನು.

ಆದ್ರೆ ಈ ಶನಿವಾರ ಒಂದು ಒಳ್ಳೆಯ ಕಾರ್ಯಕ್ರಮದಲ್ಲಿ ಭಾಗವಹಿಸೋ ಅವಕಾಶ ಸಿಕ್ತು ನಂಗೆ .ಥ್ಯಾಂಕ್ಸ್ ಟು ಮೇ ಫ್ಲವರ್ !

ಈ ಶನಿವಾರ ಸೆಂಟ್ರಲ್ ಕಾಲೇಜಿನ ಪಕ್ಕದ ಕೆಂಪು ಕಟ್ಟಡದಲ್ಲಿ ಕರೆಂಟ್ ಇಲ್ಲದಿದ್ದರಿಂದ ನನಗೆ ’ಫಿಶ್ ಮಾರ್ಕೆಟ್’ ಗೆ ಹೋಗಿ ಡುಂಡಿರಾಜ್ ರನ್ನು ಭೇಟಿ ಆಗೋ ಸೌಭಾಗ್ಯ ಸಿಕ್ತು !.ಕೆಂಪು ಕಟ್ಟಡದಲ್ಲಿ ಕರೆಂಟು ಇಲ್ಲದ್ದಕ್ಕೂ ನಾನು ’ಫಿಶ್ ಮಾರ್ಕೆಟ್’ ಕಾರ್ಯಕ್ರಮಕ್ಕೆ ಹೋಗೋದಕ್ಕೂ ಏನು ಸಂಬಂಧ ಅಂತ ಕೇಳ್ತೀರಾ??

ಕೇಳ್ಬೇಡಿ ನಾನು ಹೇಳಲ್ಲ ಅದು ಪರ್ಸನಲ್ !!

ಡುಂಡಿರಾಜ್ ನನ್ನ ನೆಚ್ಚಿನ ಲೇಖಕ/ಕವಿ . ಎಂಥಾ ಹಾಸ್ಯ ಪ್ರಜ್ಞೆ ಅವರಿಗೆ ! ಬರೆಯೊದ್ರಲ್ಲಿ ಮಾತ್ರ ಅಲ್ಲ ಮಾತಾಡೋದು ಅಷ್ಟೇ ತಮಾಷೆಯಾಗಿ ! ನಮ್ಮ ಮೋಹನ್ ಅವ್ರಿಗೂ ಒಳ್ಳೆ ಹಾಸ್ಯ ಪ್ರಜ್ಞೆ ಇದೆ ತುಂಬಾ ಚೆನ್ನಾಗಿ ಮಾತಾಡ್ತಾರೆ ಅವ್ರೂ . ಬಹುಶ: ಮಂಗಳೂರಿನ ಗಾಳಿ ಬೀಸಿದವ್ರೆಲ್ಲಾ ಹಾಗೇ ಏನೋ??

ಕಾರ್ಯಕ್ರಮಕ್ಕೆ ಫಿಶ್ ಮಾರ್ಕೆಟ್ ಅಂತ ಯಾಕೆ ಹೆಸರಿಟ್ಟಿದ್ದು ಅಂತ ಮೋಹನ್ ಮತ್ತೆ ಸಮಜಾಯಿಷಿ ನೀಡಬೇಕಾಯಿತು .ನನಗ್ಯಾಕೋ ಅನ್ನಿಸುತ್ತೆ ಇನ್ನೂ ಬಹಳಷ್ಟು ಸಲ ಹೀಗೇ ಸಮಜಾಯಿಷಿ ನೀಡ್ಬೇಕಾಗಿ ಬರುತ್ತೋ ಏನೋ?

ನಾನೂ ಚಿಕ್ಕಂದಿನಲ್ಲಿ ಮೀನು ತರಲು ಫಿಶ್ ಮಾರ್ಕೆಟ್ ಗೆ ಹೋಗ್ತಾ ಇದ್ದೆ ,ಆದ್ರೆ ಮೀನು ಮಾರುವ ಹೆಂಗಸರ ಕಾಟ ವಿಪರೀತವಾಗಿತ್ತು ! ನನ್ನ ಚೀಲವನ್ನು ಕಿತ್ತುಕೊಂಡು ಅವರ ಹತ್ರ ಇರೋ ಮೀನನ್ನು ಬಲವಂತವಾಗಿ ತುರುಕಿ ಹಣ ಕಿತ್ತು ಕಳಿಸ್ತಾ ಇದ್ರು !!

ಆದ್ರೆ ಈ ಫಿಶ್ ಮಾರ್ಕೆಟ್ ನಲ್ಲಿದ್ದ ಹೆಂಗಸರೆಲ್ಲಾ ತುಂಬಾನೆ ಒಳ್ಳೆಯವರಿದ್ರು! ಎರಡು(?) ಜನ ಹುಡುಗಿಯರು ಇದ್ದ ೫೦ ಜನರ ಎಲ್ಲಾ ಭಂಗಿಯ ಫೋಟೊ ತೆಗೆದದ್ದು ಬಿಟ್ರೆ (ಎಲ್ಲಿ ದೇವೇಗೌಡರ ಥರ ಆಕಳಿಸೋ ಫೋಟೊ ತೆಗೀತಾರೊ ಅಂತ ಭಯ ಇತ್ತು !) ಏನೂ ಕಾಟ ಕೊಡ್ಲಿಲ್ಲ ,ಬದಲಾಗಿ ಕಾಫಿ ತಿಂಡಿ ಅಂತ ಸತ್ಕಾರ ಮಾಡಿದ್ರು . ಅವರಿಗೂ ಅಭಿನಂದನೆಗಳು.

ಡುಂಡಿರಾಜ್ ರವರು ತುಂಬಾ ಚೆನ್ನಾಗಿ ತಮ್ಮ ಹನಿಗವನ,ಗಂಭೀರ ಕವನಗಳನ್ನು ವಾಚಿಸಿದರು . ಅವರ ಬಗ್ಗೆ ಎಷ್ಟೋ ತಿಳಿಯದ ವಿಷಯಗಳು ತಿಳಿದವು ನಮಗೆ .
ನನಗೆ ತುಂಬಾ ಇಷ್ಟವಾದ ಹನಿಗವನವನ್ನೂ ಅವರು ಹೇಳಿದ್ರು ! ಅದೇ ಹನಿಗವನಗಳಲ್ಲಿ Punch ಇರಲೇಬೆಕು Punchಏ ಇರದಿದ್ದರೆ ಅವಮಾನ ಅನ್ನೋ ಅರ್ಥದ್ದು ! ಈ ಹನಿಗವನ ಕೇಳಿದಾಗೆಲ್ಲ ನಂಗೆ ಪಾಪ ಹರಿಕೃಷ್ಣ ಪುನರೂರು ಅವರ ನೆನಪಾಗುತ್ತೆ !ಯಾಕೆ ಅಂತೀರಾ ?
ಅವರು ನಮ್ಮ ಶಾಲೆಯ (ಮೂಲ್ಕಿಯಲ್ಲಿ) ಅಭಿವೃದ್ಧಿ ಸಂಘಕ್ಕೆ ಅಧ್ಯಕ್ಷರಾಗಿದ್ದರು ಅದಿಕ್ಕೆ!(ಅವರ ಪಂಚೆ ಎಳೆದ ಘಟನೆಯಿಂದಾಗಿ ಅಂತ ನೀವು ತಿಳ್ಕೊಂಡ್ರೆ ನನ್ನ ತಪ್ಪಲ್ಲ!).

ಡುಂಡಿರಾಜ್ ಅವರು ತಮ್ಮ ಕಾಲೇಜ್ ಜೀವನದಲ್ಲಿ ಬರೆತಿದ್ದ ಕವನಗಳ ಬಗ್ಗೆ ,ಅವ್ರಿಗೆ ಯಾಕೆ ಆಗ ಬಂಡಾಯ ಸಾಹಿತ್ಯ ಇಷ್ಟ ಆಗ್ತಿತ್ತು ಅನ್ನೋದರ ಬಗ್ಗೆ ತುಂಬಾ ಹಾಸ್ಯಮಯವಾಗಿ ಮಾತಾಡಿದ್ರು .

ದೇವರ ದಯೆಯಿಂದ ಅವರು ಹಾಸ್ಯ ಲೇಖಕ/ಕವಿ ಆಗಿದ್ದೇ ಒಳ್ಳೇದಾಯ್ತು.ಯಾಕಂದ್ರೆ ,ನಗೋದು ಸುಲಭ ಆದ್ರೆ ನಗಿಸೋದು ತುಂಬಾ ಕಷ್ಟ ! ಈ ನಗಿಸೋ ಅಂಥ ಕಷ್ಟದ ಕೆಲಸಕ್ಕೆ ಅವರು ಕೈ ಹಾಕಿದ್ದು ಒಳ್ಳೇದೇ ಆಯ್ತು .ಈಗೀಗ ಯಾವ ಪತ್ರಿಕೆಗಳನ್ನು,ಬ್ಲಾಗ್ ಗಳನ್ನು ನೋಡಿದ್ರೂ ಬರೀ ಗಂಭೀರ ಸಾಹಿತ್ಯ/ಕವಿತೆಗಳೆ ಇರೋದು .ಇಂಥ ಕವಿತೆಗಳನ್ನು ಬರಿಯೋರು ಹತ್ತು ಜನ ಆದ್ರೆ ,ಅರ್ಥ ಆಗೋದು ಬರೆ ಇಬ್ರಿಗೆ.
ನಮಗೆಲ್ಲ ಅರ್ಥ ಆಗಿಲ್ಲ ಅಂದ್ರೂ ಗೋಣಾಡಿಸೋ ಪರಿಸ್ಥಿತಿ !

ಅದಕ್ಕಿಂತ ಡುಂಡಿರಾಜ್ ಅಂಥವರು ಒಬ್ರೇ ಇದ್ರೂ ಹತ್ತು ಜನರನ್ನು ನಗಿಸೋ ಕೆಲಸ ಮಾಡ್ತಾರಲ್ಲ ಅದೂ ನಿಜಕ್ಕೂ ಪ್ರಶಂಸನೀಯ.
ಇವರು ಬರೀ ಹನಿಗವನಗಳನ್ನಲ್ಲದೇ ಲಲಿತ ಪ್ರಬಂಧಗಳನ್ನೂ ಬರೆಯತೊಡಗಿದ್ದು ನಮ್ಮೆಲ್ಲರ ಸೌಭಾಗ್ಯ .ಡುಂಡಿರಾಜ್ ರ ಅಂಕಣಗಳನ್ನು ಓದ್ತಾ ಇದ್ರೆ ಈ ಯಾಂತ್ರಿಕ ಜೀವನದ ಜಂಜಾಟಗಳಿಂದ ಸ್ವಲ್ಪನಾದ್ರೂ ರಿಲೀಫ್ ಸಿಗೋದು ಸತ್ಯ.

ಡುಂಡಿರಾಜ್ ರ ಶೈಲಿಯನ್ನು ಕಾಪಿ ಮಾಡೋರಂತೂ ಬಹಳ ಜನ ಸಿಗ್ತಾರೆ .ಆದ್ರೆ ಅದಕ್ಕಿಂತ ದುಖ:ದ ಸಂಗತಿ ಅಂದ್ರೆ ಕೆಲ ಜನರು ಅವರ ಕವನಗಳನ್ನು ಯಥಾಪ್ರಕಾರ ಓದಿ ಹಾಸ್ಯ ಕಾರ್ಯಕ್ರಮಗಳಲ್ಲಿ ಚಪ್ಪಾಳೆ ಗಿಟ್ಟಿಸ್ಕೋತಾರೆ! ಇದಕ್ಕೆ ಒಬ್ಬನೇ ಅಪವಾದ ಅಂದ್ರೆ ಗೋಲ್ಡನ್ ಸ್ಟಾರ್ ಗಣೇಶ್ !

ಈ ಗಣೇಶ್ ಕಾಮಿಡಿ ಟೈಮ್ ಗಣೇಶ್ ಆಗಿದ್ದಾಗ ಕಾಮಿಡಿ ಟೈಮ್ ನಲ್ಲಿ ಇವರ ಹನಿಗವನಗಳನ್ನು ಓದ್ತಾ ಇದ್ದ,ಆದ್ರೆ ಓದೋದಕ್ಕಿಂತ ಮುಂಚೆ ಡುಂಡಿರಾಜ್ ರ ಹನಿಗವನ ಅಂತ ಹೇಳಿ ಓದ್ತಾ ಇದ್ದ .ಬರೀ ಕಾಮಿಡಿ ಟೈಮ್ ನಲ್ಲಿ ಅಲ್ಲದೆ ಬೇರೆ ಬೇರೆ ಸ್ಟೇಜ್ ಷೋ ಗಳಲ್ಲೂ ಹೇಳ್ತಾ ಇದ್ದ(ಮೊದಲೇ ಹೇಳಿದ್ನಲ್ಲ ಗಣೇಶ ಹಬ್ಬದಲ್ಲಿ ಟಪ್ಪಾಗ್ಗುಂಚಿ ಹಾಕ್ತಾ ಇದ್ದೆ ಅಂತ ಅಲ್ಲೇ ಸಿಕ್ಕಿದ್ದು ಗಣೇಶ್ !)
ಅಂತೂ ಫಿಶ್ ಮಾರ್ಕೆಟ್ ಕಾರ್ಯಕ್ರಮ ಅಂತೂ ಅದ್ಭುತವಾಗಿತ್ತು .ಮೇ ಫ್ಲವರ್ ಬಳಗದವರ ಕೆಲಸ ಅಭಿನಂದನೀಯ .ಅಷ್ಟು ಒಳ್ಳೆಯ ಕಾರ್ಯಕ್ರಮ ಆಯೋಜಿಸೋದಲ್ಲದೆ ಕಾಫಿ ತಿಂಡಿ ಬೇರೆ ಕೊಟ್ಟಿದ್ರು ! ಉಂಡೂ ಹೋದ ಕೊಂಡೂ ಹೋದ ಅನ್ನೋ ಹಾಗಾಯ್ತು ನನ್ನ ಪರಿಸ್ಥಿತಿ .

ಆದ್ರೆ ಆಶ್ಚರ್ಯ ಅಂದ್ರೆ ಅಷ್ಟೆಲ್ಲ ಪಬ್ಲಿಸಿಟಿ ಕೊಟ್ರೂ ಮೋಹನ್ ಅವ್ರು ,ಭಾಗವಹಿಸೋ ಜನ ಮಾತ್ರ ಕಮ್ಮಿ.ಬಹುಶ: ಬಂದಿದ್ದ 50+ ಜನಾನೇ ಜಾಸ್ತಿ ಇರಬಹುದೇನೋ ಮೋಹನ್ ಅವ್ರೇ ಹೇಳ್ಬೇಕು ,ಯಾಕಂದ್ರೆ ನಾನು ಇಂಥ ಕಾರ್ಯಕ್ರಮಕ್ಕೆ ಹೋಗಿದ್ದು ತೀರಾ ಕಮ್ಮಿ .ಇರ್ಲಿ ಬಿಡಿ ಜಾಸ್ತಿ ಜನ ಬಂದ್ರೆ ಅಲ್ಲಿ ಕೂರೋಕೂ ಆಗ್ತಾ ಇರ್ಲಿಲ್ಲ .

Quality of audience is better than quantity ! ಅಲ್ವ??

ಕಾರ್ಯಕ್ರಮದಲ್ಲಿ ಜೋಜಿಗ ಅನ್ನೋ ಒಂದು ಹೆಸರು ಕೇಳಿ ಬಂತು !

ಆ ಹೆಸರಿನ ಅರ್ಥ ಏನೆಂಬುದೇ ಸೋಜಿಗ ನನಗೆ !


ಫೋಟೊ ಕೃಪೆ : ’ಎರಡು(?) ಹುಡುಗಿಯರು ’