Monday, April 19, 2010

ಖುಷಿ - ಬೇಸರ !



ಮೊಟ್ಟ ಮೊದಲ ಬಾರಿಗೆ (ಸಧ್ಯ ಕೊನೆಯ ಬಾರಿಗೆ ಅಲ್ಲ;)) ಸ್ಟೇಡಿಯಂ ಗೆ ಹೋಗಿ IPL match ನೋಡಿ ಬಂದದ್ದಕ್ಕೆ ಖುಷಿ.

ಆದರೆ ಅದೇ ಸಮಯದಲ್ಲಿ ಬಾಂಬ್ ಸ್ಫೊಟದಿಂದ ಜನರಿಗೆ ನೋವುಂಟಾಗಿದ್ದು,ಮ್ಯಾಚ್ ನಲ್ಲಿ ನಮ್ಮ ರಾಯಲ್ ಚ್ಯಾಲೆಂಜರ್ಸ್ ಸೋತಿದ್ದಕ್ಕೆ ಬೇಸರ

ಸಮಯಪ್ರಜ್ಞೆ ಬಳಸಿ ಮ್ಯಾಚ್ ಮುಂದುವರೆಸಿ ಕಾಲ್ತುಳಿತವನ್ನು ತಪ್ಪಿಸಿದ ಶಂಕರ ಬಿದರಿಯವರ ಬಗ್ಗೆ ಖುಷಿ .

ಆದರೆ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಮ್ಯಾಚ್ ಗಳನ್ನು ಭದ್ರತೆಯ ನೆಪ ಒಡ್ಡಿ ಸ್ಥಳಾಂತರಿಸಿದ್ದು ಬೇಸರ.

ರಾಯಲ್ ಚ್ಯಾಲೆಂಜರ್ಸ್ ಸೆಮಿ ಫೈನಲ್ ಗೆ ತಲುಪಿದ್ದು ಖುಷಿ.

ಸೆಮಿಫೈನಲ್ ನೋಡಲು ಮತ್ತೊಮ್ಮೆ ಹೋಗಬೇಕೆಂದಿದ್ದ ಆಸೆ ನಿರಾಸೆಯಾಗಿದ್ದಕ್ಕೆ ಬೇಸರ .

ಆಲ್ ದಿ ಬೆಸ್ಟ್ ರಾಯಲ್ ಚ್ಯಾಲೆಂಜರ್ಸ್ ಬೆಂಗಳೂರು !

ಆಲ್ ದಿ ಬೆಸ್ಟ್ ಮುಂಬೈ ಕಮಿಷನರ್ !!