Monday, July 28, 2008

ತಾಜ್ ಮಹಲ್



ಬೆಂಗಳೂರಿನಲ್ಲೆಡೆ ಬಾಂಬ್ ಗಲಾಟೆ! ಆದ್ರೆ ’ತಾಜ್ ಮಹಲ್’ ನೋಡಲು ವೀರೇಶ್ ಚಿತ್ರ ಮಂದಿರಕ್ಕೆ ಹೋದ್ರೆ housefull!!
ನಾನೂ ನನ್ನ ಸ್ನೇಹಿತರು ’ಮೊಗ್ಗಿನ ಮನಸ್ಸು’ ಚಿತ್ರ ನೋಡಲು ಹೊರಟವರು,ಆದ್ರೆ ಟಿಕೆಟ್ ಸಿಗದ ಕಾರಣ ’ತಾಜ್ ಮಹಲ್’ ಗೆ ಹೋಗಬೇಕಾಯಿತು ಬಂತು.ಬಾಲ್ಕನಿ ಟಿಕೆಟ್ ಗಳು ಎಲ್ಲಾ ಖಾಲಿ.ಬ್ಲ್ಯಾಕ್ ನಲ್ಲಿ ೧೦೦ ರೂ ಗೆ ಮಾರ್ತಾ ಇದ್ರು ಥಿಯೇಟರ್ ನವರೇ.ನಾವು ೭ ಜನ ಇದ್ದಿದ್ರಿಂದ ಸೆಕಂಡ್ ಕ್ಲಾಸ್ ಗೆ ತೃಪ್ತಿ ಪಡಬೇಕಾಯಿತು.
ಮೊದಲಿಗೆ ರಾಷ್ಟ್ರ ಗೀತೆ ಮೊಳಗುವಾಗ ಜನ ಚಕ್ಕನೆ ಎದ್ದು ನಿಂತ ಪರಿ ಮಾತ್ರ ಮೆಚ್ಚಬೇಕಾದದ್ದೆ.ರಾಷ್ಟ್ರಗೀತೆ ಮುಗಿದ ನಂತರ ’ಬೋಲೋ ಭಾರತ್ ಮಾತಾ ಕಿ ಜೈ’ ಅಂದಾಗ ಉಗ್ರಗಾಮಿಗಳ ಮೇಲಿನ ಸಿಟ್ಟಿನಂದಲೋ ಏನೋ ’ಜೈ’ ಅನ್ನೋ ಸದ್ದು ಸ್ವಲ್ಪ ಜೋರಾಗೇ ಕೇಳಿಸಿತು ಆ ದಿನ.
ನಂತರ ಚಿತ್ರ ಶುರು ಆಯಿತು.ಮೊದಲ ಹತ್ತು ನಿಮಿಶಗಳು ತುಂಬಾ ಚೆನ್ನಾಗಿತ್ತು. ಕ್ಯಾಮರಾ ವರ್ಕ್ ತುಂಬಾ ಚೆನ್ನಾಗಿತ್ತು.ಆದ್ರೆ ಹೀರೊ ಅಜಯ್ ಆಗಮನವಾದ ನಂತರ ಬೋರ್ ಹೊಡೆಯೋಕೆ ಶುರು ಆಯಿತು :( ಕಾಲೇಜ್ ಸೀನ್ಸ್ ಅಂದ್ರೆ ಸಾಮಾನ್ಯವಾಗಿ ಚೆನ್ನಾಗಿರುತ್ತವೆ. ಕಾಮಿಡಿ ಇರುತ್ತೆ. ಆದ್ರೆ ಇದರಲ್ಲಿ ಮಾತ್ರ ಕಾಲೇಜ್ ಸೀನ್ಸ್ ತುಂಬಾ ಡಲ್ ಆಗಿತ್ತು.
ಚಿತ್ರದ ಇಂಟರ್ವಲ್ ಮತ್ತೆ second half ಚೆನ್ನಾಗಿ ಮೂಡಿ ಬಂದಿದೆ.climax ಕೂಡಾ ಚೆನಾಗೇ ಇದೆ.
ಆದ್ರೆ ನಿರ್ದೇಶಕ ಚಂದ್ರು ಸಂದರ್ಶನ ಒಂದರಲ್ಲಿ ,ಈ ಚಿತ್ರ ಎರಡು ಕಥೆ ಒಂದು climax ಹೊಂದಿದೆ ಅಂದಿದ್ರು.ಎರಡು ಕಥೆ handle ಮಾಡೋದ್ರಲ್ಲಿ ಮಾತ್ರ ಚಂದ್ರು ಸ್ವಲ್ಪ ಎಡವಿದ್ದಾರೆ.
ಕಾಲೇಜ್ ವಾತಾವರಣಕ್ಕೆ ಮೆರುಗು ಕೊಟ್ಟ ಪಾತ್ರಗಳು ಶೇಕರ್ ಮತ್ತೆ ಸೀನಿಯರ್ ಪಾತ್ರಗಳು,ಅವರಿಂದಾಗೆ ಕಾಲೇಜಲ್ಲಿ ಸ್ವಲ್ಪ ಲವಲವಿಕೆ ಇತ್ತು.
ರಂಗಾಯಣ ರಘು ಎಂದಿನಂತೆ ತಗೊಂಡ ಕಾಸಿಗೆ ಮೋಸ ಮಾಡಿಲ್ಲ ,ಚೆನ್ನಾಗಿ ನಿಭಾಯಿಸಿದ್ದಾರೆ.
ಪೂಜಾ ಗಾಂಧಿ ಕೂಡಾ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
overall ಆಗಿ ಸಿನೆಮಾ ಚೆನ್ನಾಗಿದೆ ,ಆದ್ರೆ ಸ್ವಲ್ಪ ತಾಳ್ಮೆ ಬೇಕು ಇಂಟರ್ವಲ್ ತನಕ.....
ಶುಭವಾಗಲಿ ಚಂದ್ರು.

0 comments: