ನನ್ನ ಆಲ್ ಟೈಮ್ ಫೇವರೇಟ್ ಲೇಖಕ ವಸುಧೇಂದ್ರ ರ ಹೊಸ ಪುಸ್ತಕವನ್ನಷ್ಟೇ ಕೊಳ್ಳಬೇಕು ಅಂತ ಅಂದುಕೊಂಡ ನಾನು ಜಯಂತ್ ಕಾಯ್ಕಿಣಿ ಪುಟ್ಟ ಹುಡುಗ ಪೂರ್ಣನ ಬಗ್ಗೆ ಹೇಳುತ್ತಾ ಅವನ ಕೆಲವು ಕವಿತೆಗಳನ್ನು ಓದಿದಾಗ ಅದನ್ನು ಕೊಳ್ಳದೆ ಇರಲಾಗಲಿಲ್ಲ.ಪುಟ್ಟ ಪೂರ್ಣನ ಮುಗ್ಧ ಕವಿತೆಗಳು ಓದಿ ಯಾಕೋ ಖುಷಿ ದುಖಃ ಎರಡೂ ಆಯ್ತು.
ಮಕ್ಕಳ ಪದ್ಯಗಳ ಸಾಲಿಗೆ ಮತ್ತೊಂದು ಪುಸ್ತಕ ’ಹಲೋ ಹಲೋ ಚಂದಮಾಮ’ ಸೇರ್ಪಡೆ ಯಾಯ್ತು.ಅದನ್ನು ಎಷ್ಟು ಮಕ್ಕಳು ಓದ್ತಾರೆ ಅನ್ನೋದು ಗೊತ್ತಿಲ್ಲ.ಮಕ್ಕಳನ್ನು ಮಕ್ಕಳಾಗಿರಲು ನಾವೂ ಬಿಟ್ಟಿಲ್ಲ .ಅವರಾದರೂ ಪಾಪ ಏನು ಮಾಡಿಯಾರು?
’ಅಜ್ಜನ ಕೋಲಿದು ನನ್ನಯ ಕುದುರೆ’ ಕಾಲ ಹೋಯ್ತು,ಈಗ ಹತ್ತು ರೂಪಾಯಿ ಕೊಟ್ರೆ ಮಕ್ಕಳನ್ನು ನಿಜವಾದ ಕುದುರೆ ಮೇಲೆಯೇ ಕೂರಿಸಬಹುದು.ನಾವು ಬಾಯಲ್ಲೇ ಡುರ್ ಡುರ್ ಅಂತ ಕಾರ್ ಓಡಿಸುತ್ತಾ ಖುಷಿ ಪಡ್ತಿದ್ದ ಕಾಲವೂ ಈಗಿಲ್ಲ.ಮಕ್ಕಳು ಹುಟ್ಟುವಾಗಲೇ ನಿಜವಾದ ಕಾರಲ್ಲೆ ಸುತ್ತಾಡಿ ಬೆಳೆಯುತ್ತಿದ್ದಾರೆ.
ಇಂಥದ್ದರಲ್ಲಿ ನಮ್ಮ ಬಾಲ್ಯದಲ್ಲಿ ನಮಗಿದ್ದದ್ದು ಮುಗ್ಧತೆಯಾ ,ಅಥವ ಅವಕಾಶದ ಕೊರತೆಯಾ ? ಒಂದೂ ತಿಳಿಯುತ್ತಿಲ್ಲ.
ನಾವು ಶಾಲೆಯಲ್ಲಿದ್ದಾಗ ಮಕ್ಕಳ ಡ್ಯಾನ್ಸ್ ಅಂದರೆ ಹತ್ತು ಮಕ್ಕಳಿದ್ದಲ್ಲಿ ಒಬ್ಬೊಬ್ಬರದ್ದೂ ಒಂದೊಂದು ದಿಕ್ಕಿನಲ್ಲಿ ಕೈ,ಕಾಲು.ಹಾಡಿಗೂ ನೃತ್ಯಕ್ಕೂ ಸಂಬಂಧವೇ ಇಲ್ಲ.ಈಗ ಅಷ್ಟೇ ಚಿಕ್ಕ ಮಕ್ಕಳು ಮೈಕಲ್ ಜಾಕ್ಸನ್ ನ ಸ್ಟೆಪ್ಸ್ ಹಾಕ್ತಾರೆ.ನಮ್ಮ ಹಾಡು ಅಂದರೆ ತಾಳ,ರಾಗ ಯಾವುದೂ ಇಲ್ಲದ ಗದ್ಯ ವಾಚನವಾಗಿತ್ತು.ಈಗ ಪುಟ್ಟ ಮಕ್ಕಳು ಸ್ಟಾರ್ ಸಿಂಗರ್ ಗಳಾಗಿದ್ದಾರೆ.’ಶ್ರೀ ಮಂಜುನಾಥ’ ದ ಕಠಿಣವಾದ ಹಾಡನ್ನು ಹಾಡಿ ಎಸ್.ಪಿ.ಬಿ ಯವರಿಗೇ ನಡುಕ ಹುಟ್ಟಿಸ್ತಾರೆ.
ಅಪ್ಪ ಅಮ್ಮಂದಿರಿಗೆ ಮೊಬೈಲ್ ಬಳಸಲು ಹೇಳಿ ಕೊಡೋದೇ ಮಕ್ಕಳು.ಇಂಟರ್ನೆಟ್ ನಲ್ಲಿ ಆರ್ಕುಟ್ ಬಳಸೋದು ಹೇಳಿ ಕೊಡೋದೂ ಮಕ್ಕಳೇ.ಟಿ.ವಿ ಯಲ್ಲಿ ಪ್ರಸಾರವಾಗ್ತಿರೊ ಸಿನೆಮಾದ ಹೀರೋ ಯಾರು ಅಂತ ಹೇಳೋದೂ ಅದೇ ಪುಟ್ಟ ಮಗು.ಆ ಸಿನೆಮಾದ ಹಾಡನ್ನೂ ಗುಣುಗುಣಿಸೋದು ಅದೇ ಪುಟ್ಟ ಮಗು.
ಪರಿಸ್ಥಿತಿ ಹೀಗಿದ್ದಾಗ ಮಕ್ಕಳಲ್ಲಿ ಮುಗ್ಧತೆಯನ್ನು ಎಲ್ಲಿ ಹುಡುಕೋದು?
ಛಂದ ಪುಸ್ತಕ ಬಿಡುಗಡೆಯ ಸಮಾರಂಭಕ್ಕೆ ಮುಖ್ಯ ಅಥಿತಿಯಾಗಿ ಬಂದಿದ್ದ ಮುದ್ದು ತೀರ್ಥಹಳಿ ಅನ್ನೋ ಏಳನೇ ಕ್ಲಾಸಿನ ಹುಡುಗಿ ಹೇಗೆ ಮಕ್ಕಳು ಹಳೆಯ ಮಕ್ಕಳ ಪದ್ಯಗಳನ್ನು ಕೇಳಿ ಕೇಳಿ ಬೋರ್ ಆಗಿದ್ದಾರೆ ಅನ್ನೊ ಬಗ್ಗೆ ಮಾತಾಡಿದ್ಲು.ಆದರೆ ಅವಳು ಕೆಂಡಸಂಪಿಗೆಯಲ್ಲಿ ಬರೆದ ಕವಿತೆಗಳನ್ನು ನೋಡಿದ್ರೆ ಅವಳು ಪುಟ್ಟ ಹುಡುಗಿ ಅಲ್ಲ ಅನ್ನೋದು ಗೊತ್ತಾಗಿ ಬಿಡುತ್ತೆ.
ಅದೇ ಸಮಾರಂಭದ ಮತ್ತೊಬ್ಬ ಮುಖ್ಯ ಅತಿಥಿ ಹತ್ತನೆ ಕ್ಲಾಸ್ ಹುಡುಗ ಕೀರ್ತಿರಾಜ ಬರೆದಿರೋದು ಬೇಟೆಯ ಬಗೆಗಿನ ಪುಸ್ತಕ!
ಯಾವುದೇ ಪುಟ್ಟ ಮಗುವನ್ನು ಕರೆದು ಒಂದು ಹಾಡು ಹೇಳಪ್ಪ ಅಂದ್ರೆ ಅವನು ’ಧೂಮ್ ಮಚಾಲೇ ’ ಅಥವಾ ’ಝರಾ ಝರಾ ಟಚ್ ಮಿ ಕಿಸ್ ಮಿ ’ ಹಾಡನ್ನು ತಪ್ಪಿಲ್ಲದೆ ಹಾಡ್ತಾನೆ.ಕನ್ನಡ ಹಾಡು ಅಂದ್ರೆ ’ಹೊಡಿ ಮಗ ಹೊಡಿ ಮಗ’ ಹಾಡ್ತಾನೆ .ಇಂಥ ಸನ್ನಿವೇಶದಲ್ಲಿ ಮಕ್ಕಳ ಪದ್ಯ ಯಾರು ಓದ್ತಾರೆ?
ಕೆಲವೊಮ್ಮೆ ಮಕ್ಕಳು ಈ ಪರಿ ಬುದ್ಧಿವಂತರಾಗಿರೋದಕ್ಕೆ ಖುಷಿ ಅನ್ಸುತ್ತೆ.ಆದರೆ ಅದೇ ಸಮಯಕ್ಕೆ ’ಮಗುವಿನಷ್ಟು ಮುಗ್ಧ’ ಅನ್ನೋ ಶಬ್ದದ ಅರ್ಥವೆ ಕಳೆದು ಹೋಗುತ್ತಿದೆಯಲ್ಲ ಅನ್ನೋ ಆತಂಕವೂ ಆಗುತ್ತೆ!
ಇದು ಆತಂಕವೋ ಅಥವ ಮಕ್ಕಳು ಇನ್ನು ಮೇಲೆ ನಮ್ಮ ಬಳಿ ಏನೂ ಕೇಳಲ್ಲ(ನಾವೇ ಅವರ ಹತ್ತಿರ ಕಲೀಬೇಕು!) ಅನ್ನೋ ಭಯವೋ ಗೊತ್ತಿಲ್ಲ!
Tuesday, May 11, 2010
Sunday, May 2, 2010
ದೇಶಕಾಲ,ವೈದೇಹಿ,ಯಕ್ಷಗಾನ...
ಇದು ಟೂ ಇನ್ ಒನ್ ಬರಹ ,ಹಾಗಾಗಿ ಬರಹದ ತಲೆಬರಹದ ತಲೆ ಬುಡ ಅರ್ಥ ಆಗಿಲ್ಲವಾದರೆ ದಯವಿಟ್ಟು ಕ್ಷಮಿಸಿ!
ನಿಮಗೆಲ್ಲ ಗೊತ್ತಿರುವ ಹಾಗೆ ’ದೇಶಕಾಲ’ದ ವಿಶೇಷ ಸಂಚಿಕೆ ಬಿಡುಗಡೆಯಾಗಿದೆ.ಈ ವಿಶೇಷ ಸಂಚಿಕೆಯಲ್ಲಿ ಎಷ್ಟು ಪುಟಗಳಿವೆ ಅಂತ ಎಣಿಸೋದಕ್ಕೇನೇ(ಪುಟಗಳ ಸಂಖ್ಯೆಯನ್ನು ಅದರಲ್ಲೇ ನಮೂದಿಸಿರುತ್ತಾರೆ ಅಂತ ನಂಗೂ ಗೊತ್ತು ಬಿಡಿ!) ಬಹಳಷ್ಟು ಸಮಯ ಬೇಕು.ಹಾಗಾಗಿ ಅವಸರವಸರದಲ್ಲಿ ದರ್ಶಿನಿ ಶೈಲಿಯಲ್ಲಿ ಇದನ್ನು ಓದಲು ಸಾಧ್ಯವೇ ಇಲ್ಲ.
ಹಾಗೆ ಸುಮ್ಮನೆ ಕಣ್ಣಾಡಿಸುವಾಗಲೇ ನನ್ನನ್ನು ಸೆಳೆದ ಒಂದು ಲೇಖನ ವೈದೇಹಿಯವರ ’ಹೋಟೆಲ್ ಪರ್ವ’!
ಇದು ವೈದೇಹಿಯವರು ಹೋಟೆಲ್ ಮಾಲಕರೊಬ್ಬರೊಂದಿಗೆ ನಡೆಸಿದ ಸಂದರ್ಶನ.ಸಂದರ್ಶನ ಕುಂದಾಪುರ ಕನ್ನಡದಲ್ಲಿದೆ.ಹೋಟಲ್ ಮಾಲಕರಿಗೆ ಸಾಕಷ್ಟು ಹಾಸ್ಯಪ್ರಜ್ಞೆ ಇದ್ದದ್ದರಿಂದ ತುಂಬಾ ತಮಾಷೆಯಾಗಿ ಆದರೆ ಅಷ್ಟೇ ಪರಿಣಾಮಕಾರಿಯಾಗಿ ಮೂಡಿ ಬಂದಿದೆ ಈ ಸಂದರ್ಶನ.ಹೋಟೇಲ್ ಮಾಲೀಕರು ಯಾರಾದರೂ(ಸಂದರ್ಶನ ಕೊಟ್ಟವರನ್ನು ಹೊರತು ಪಡಿಸಿ!) ಇದನ್ನು ಓದಿದರೆ ಸಿಟ್ಟು ಬರದೆ ಇರಲಾರದು !
ಹಾಸ್ಯಭರಿತ ಸಂದರ್ಶನ ಓದಿದ್ರೆ ಸಿಟ್ಟು ಯಾಕೆ ಅಂತೀರಾ?ಯಾಕಂದ್ರೆ ಹೋಟಲ್ ಮಾಲಕರ ಹಲವು ಟ್ರಿಕ್ಸ್ ಗಳನ್ನು ಪಾಪ ಅವರು ಈ ಸಂದರ್ಶನದಲ್ಲಿ ಹೇಳಿ ಬಿಟ್ಟಿದ್ದಾರೆ ! ಈ ಸಂದರ್ಶನ ಓದಿದಲ್ಲಿ ಖಂಡಿತ ಹೋಟಲ್ ಉದ್ಯಮದ ಕಷ್ಟ ನಷ್ಟಗಳು(ಲಾಭದ ವಿಚಾರ ಕೂಡಾ!) ತಿಳಿಯುವುದರಲ್ಲಿ ಸಂಶಯವೇ ಇಲ್ಲ.
ಇನ್ನೊಂದು ತಮಾಷೆಯ ಸಂಗತಿ ಅಂದ್ರೆ ವೈದೇಹಿಯವರ ಪ್ರಶ್ನೆಗಳು ಒಂದು ಸಾಲಿನವು,ಆದರೆ ಹೋಟಲ್ ಮಾಲೀಕರ ಉತ್ತರ ಮಾತ್ರ ಉದ್ದುದ್ದ!ಹೋಟಲ್ ಮಾಲಕರು ಮನ ಬಿಚ್ಚಿ ಮಾತಾಡಿದ್ದಕ್ಕೇ ಬಹುಷಃ ಸಂದರ್ಶನ ಅಷ್ಟು ಇಷ್ಟ ಆಗಿದ್ದು ನನಗೆ.
ಇಂಥ ಒಂದು ಸುಂದರ ಸಂದರ್ಶನ ಪ್ರಕಟಿಸಿದ್ದಕ್ಕೆ ’ದೇಶಕಾಲ’ಕ್ಕೆ ಅಭಿನಂದನೆಗಳು.ಈ ಸಂದರ್ಶನ ನಡೆಸಿದ ವೈದೇಹಿಯವರಿಗೆ ಧನ್ಯವಾದಗಳು.ಕೊನೆಯದಾಗಿ ಸಂದರ್ಶನ ನೀಡಿದ ಹೊಳ್ಳ(?!)ರಿಗೂ ಧನ್ಯವಾದಗಳು!
~~~~~~~~~~~~~~~~~~~~~~~~~~~~~~~~~~~~~~~~~~~~~~~
ಬಹಳಷ್ಟು ದಿನಗಳ ನಂತರ ಬೆಂಗಳೂರಿನಲ್ಲಿ ಶುದ್ಧ ಕನ್ನಡ ಕೇಳಲು ಸಿಕ್ಕಿತು!
FM ಚ್ಯಾನೆಲ್ ಗಳ ಕನ್ನಡ ಮಿಶ್ರಿತ ಇಂಗ್ಲೀಶ್, ಟಿ.ವಿ ಚ್ಯಾನಲ್ ರ ಇಂಗ್ಲೀಶ್ ಮಿಶ್ರಿತ ಕನ್ನಡದ ಹಾವಳಿಯ ನಡುವೆ ಅದೆಲ್ಲಿ ಶುದ್ಧ ಕನ್ನಡ ಕೇಳಿದೆ ಅಂತೀರಾ?
ವಿಜಯನಗರದ ಕರ್ನಾಟಕ ಕಲಾ ದರ್ಶಿನಿ(ರಿ)ಯವರು ಪುಟ್ಟ ಪುಟ್ಟ ಮಕ್ಕಳಿಂದ ’ಕೃಷ್ಣಾರ್ಜುನ ಕಾಳಗ’ ಅನ್ನೋ ಯಕ್ಷಗಾನ ಪ್ರಸಂಗ ಏರ್ಪಡಿಸಿದ್ದರು.ಬೆಂಗಳೂರಿನ ಮಕ್ಕಳ ಬಾಯಲ್ಲಿ ಶುದ್ಧ ಕನ್ನಡ ಕೇಳಿ ನನ್ನ ಕಿವಿಯೂ ಶುದ್ಧ ಆಯ್ತು ಅನ್ನಿ.ಹುಡುಗ/ಹುಡುಗಿಯರಲ್ಲಿ ಕೆಲವರು ಬೇಸಿಗೆ ಶಿಬಿರದ ಅಂಗವಾಗಿ ಯಕ್ಷಗಾನ ಕಲಿತರೆ ಇನ್ನು ಕೆಲವರು ಹವ್ಯಾಸವಾಗಿ ಅದನ್ನು ಕಲಿತವರು.ದಾರುಕನ ಪಾತ್ರ ಮಾಡಿದ ಹುಡುಗನಂತೂ ಅತ್ಯದ್ಭುತವಾಗಿ ಪಾತ್ರ ನಿರ್ವಹಿಸಿ ವೀಕ್ಷಕರನ್ನು ನಗೆಗಡಲಲ್ಲಿ ತೇಲಿಸಿದ್ದ.ಇನ್ನು ಅಭಿಮನ್ಯು ಪಾತ್ರದ ಹುಡುಗ ಧರ ಧರನೆ ತಿರುಗಿ ಕಡೆಗೆ ಚಂಗನೆ ನೆಗೆದು ತಾಯಿಯ ಸೊಂಟದಲ್ಲಿ ಕುಳಿತ ದೃಶ್ಯ ಮಜವಾಗಿತ್ತು.ನೆಗೆದು ಸೊಂಟದಲ್ಲಿ ಕೂತ್ಕೋ ಬೇಕಾದ್ರೆ ಎಷ್ಟು ಚಿಕ್ಕ ಹುಡುಗ ನೀವೇ ಲೆಕ್ಕ ಹಾಕಿ!
ಮಕ್ಕಳೆಲ್ಲ ಬೇಸಿಗೆ ಶಿಬಿರದ ಹೆಸರಲ್ಲಿ ಯಕ್ಷಗಾನ ಕಲಿತದ್ದು ನಿಜಕ್ಕೂ ಶ್ಲಾಘನೀಯ.ಕಲಿಯಲು ಅನುವು ಮಾಡಿಕೊಟ್ಟ ಶ್ರೀನಿವಾಸ ಸಾಸ್ತಾನ ಮತ್ತು ಆದಿಚುಂಚನಗಿರಿ ಮಠಕ್ಕೆ ಅಭಿನಂದನೆಗಳು.
ನಿಮಗೆಲ್ಲ ಗೊತ್ತಿರುವ ಹಾಗೆ ’ದೇಶಕಾಲ’ದ ವಿಶೇಷ ಸಂಚಿಕೆ ಬಿಡುಗಡೆಯಾಗಿದೆ.ಈ ವಿಶೇಷ ಸಂಚಿಕೆಯಲ್ಲಿ ಎಷ್ಟು ಪುಟಗಳಿವೆ ಅಂತ ಎಣಿಸೋದಕ್ಕೇನೇ(ಪುಟಗಳ ಸಂಖ್ಯೆಯನ್ನು ಅದರಲ್ಲೇ ನಮೂದಿಸಿರುತ್ತಾರೆ ಅಂತ ನಂಗೂ ಗೊತ್ತು ಬಿಡಿ!) ಬಹಳಷ್ಟು ಸಮಯ ಬೇಕು.ಹಾಗಾಗಿ ಅವಸರವಸರದಲ್ಲಿ ದರ್ಶಿನಿ ಶೈಲಿಯಲ್ಲಿ ಇದನ್ನು ಓದಲು ಸಾಧ್ಯವೇ ಇಲ್ಲ.
ಹಾಗೆ ಸುಮ್ಮನೆ ಕಣ್ಣಾಡಿಸುವಾಗಲೇ ನನ್ನನ್ನು ಸೆಳೆದ ಒಂದು ಲೇಖನ ವೈದೇಹಿಯವರ ’ಹೋಟೆಲ್ ಪರ್ವ’!
ಇದು ವೈದೇಹಿಯವರು ಹೋಟೆಲ್ ಮಾಲಕರೊಬ್ಬರೊಂದಿಗೆ ನಡೆಸಿದ ಸಂದರ್ಶನ.ಸಂದರ್ಶನ ಕುಂದಾಪುರ ಕನ್ನಡದಲ್ಲಿದೆ.ಹೋಟಲ್ ಮಾಲಕರಿಗೆ ಸಾಕಷ್ಟು ಹಾಸ್ಯಪ್ರಜ್ಞೆ ಇದ್ದದ್ದರಿಂದ ತುಂಬಾ ತಮಾಷೆಯಾಗಿ ಆದರೆ ಅಷ್ಟೇ ಪರಿಣಾಮಕಾರಿಯಾಗಿ ಮೂಡಿ ಬಂದಿದೆ ಈ ಸಂದರ್ಶನ.ಹೋಟೇಲ್ ಮಾಲೀಕರು ಯಾರಾದರೂ(ಸಂದರ್ಶನ ಕೊಟ್ಟವರನ್ನು ಹೊರತು ಪಡಿಸಿ!) ಇದನ್ನು ಓದಿದರೆ ಸಿಟ್ಟು ಬರದೆ ಇರಲಾರದು !
ಹಾಸ್ಯಭರಿತ ಸಂದರ್ಶನ ಓದಿದ್ರೆ ಸಿಟ್ಟು ಯಾಕೆ ಅಂತೀರಾ?ಯಾಕಂದ್ರೆ ಹೋಟಲ್ ಮಾಲಕರ ಹಲವು ಟ್ರಿಕ್ಸ್ ಗಳನ್ನು ಪಾಪ ಅವರು ಈ ಸಂದರ್ಶನದಲ್ಲಿ ಹೇಳಿ ಬಿಟ್ಟಿದ್ದಾರೆ ! ಈ ಸಂದರ್ಶನ ಓದಿದಲ್ಲಿ ಖಂಡಿತ ಹೋಟಲ್ ಉದ್ಯಮದ ಕಷ್ಟ ನಷ್ಟಗಳು(ಲಾಭದ ವಿಚಾರ ಕೂಡಾ!) ತಿಳಿಯುವುದರಲ್ಲಿ ಸಂಶಯವೇ ಇಲ್ಲ.
ಇನ್ನೊಂದು ತಮಾಷೆಯ ಸಂಗತಿ ಅಂದ್ರೆ ವೈದೇಹಿಯವರ ಪ್ರಶ್ನೆಗಳು ಒಂದು ಸಾಲಿನವು,ಆದರೆ ಹೋಟಲ್ ಮಾಲೀಕರ ಉತ್ತರ ಮಾತ್ರ ಉದ್ದುದ್ದ!ಹೋಟಲ್ ಮಾಲಕರು ಮನ ಬಿಚ್ಚಿ ಮಾತಾಡಿದ್ದಕ್ಕೇ ಬಹುಷಃ ಸಂದರ್ಶನ ಅಷ್ಟು ಇಷ್ಟ ಆಗಿದ್ದು ನನಗೆ.
ಇಂಥ ಒಂದು ಸುಂದರ ಸಂದರ್ಶನ ಪ್ರಕಟಿಸಿದ್ದಕ್ಕೆ ’ದೇಶಕಾಲ’ಕ್ಕೆ ಅಭಿನಂದನೆಗಳು.ಈ ಸಂದರ್ಶನ ನಡೆಸಿದ ವೈದೇಹಿಯವರಿಗೆ ಧನ್ಯವಾದಗಳು.ಕೊನೆಯದಾಗಿ ಸಂದರ್ಶನ ನೀಡಿದ ಹೊಳ್ಳ(?!)ರಿಗೂ ಧನ್ಯವಾದಗಳು!
~~~~~~~~~~~~~~~~~~~~~~~~~~~~~~~~~~~~~~~~~~~~~~~
ಬಹಳಷ್ಟು ದಿನಗಳ ನಂತರ ಬೆಂಗಳೂರಿನಲ್ಲಿ ಶುದ್ಧ ಕನ್ನಡ ಕೇಳಲು ಸಿಕ್ಕಿತು!
FM ಚ್ಯಾನೆಲ್ ಗಳ ಕನ್ನಡ ಮಿಶ್ರಿತ ಇಂಗ್ಲೀಶ್, ಟಿ.ವಿ ಚ್ಯಾನಲ್ ರ ಇಂಗ್ಲೀಶ್ ಮಿಶ್ರಿತ ಕನ್ನಡದ ಹಾವಳಿಯ ನಡುವೆ ಅದೆಲ್ಲಿ ಶುದ್ಧ ಕನ್ನಡ ಕೇಳಿದೆ ಅಂತೀರಾ?
ವಿಜಯನಗರದ ಕರ್ನಾಟಕ ಕಲಾ ದರ್ಶಿನಿ(ರಿ)ಯವರು ಪುಟ್ಟ ಪುಟ್ಟ ಮಕ್ಕಳಿಂದ ’ಕೃಷ್ಣಾರ್ಜುನ ಕಾಳಗ’ ಅನ್ನೋ ಯಕ್ಷಗಾನ ಪ್ರಸಂಗ ಏರ್ಪಡಿಸಿದ್ದರು.ಬೆಂಗಳೂರಿನ ಮಕ್ಕಳ ಬಾಯಲ್ಲಿ ಶುದ್ಧ ಕನ್ನಡ ಕೇಳಿ ನನ್ನ ಕಿವಿಯೂ ಶುದ್ಧ ಆಯ್ತು ಅನ್ನಿ.ಹುಡುಗ/ಹುಡುಗಿಯರಲ್ಲಿ ಕೆಲವರು ಬೇಸಿಗೆ ಶಿಬಿರದ ಅಂಗವಾಗಿ ಯಕ್ಷಗಾನ ಕಲಿತರೆ ಇನ್ನು ಕೆಲವರು ಹವ್ಯಾಸವಾಗಿ ಅದನ್ನು ಕಲಿತವರು.ದಾರುಕನ ಪಾತ್ರ ಮಾಡಿದ ಹುಡುಗನಂತೂ ಅತ್ಯದ್ಭುತವಾಗಿ ಪಾತ್ರ ನಿರ್ವಹಿಸಿ ವೀಕ್ಷಕರನ್ನು ನಗೆಗಡಲಲ್ಲಿ ತೇಲಿಸಿದ್ದ.ಇನ್ನು ಅಭಿಮನ್ಯು ಪಾತ್ರದ ಹುಡುಗ ಧರ ಧರನೆ ತಿರುಗಿ ಕಡೆಗೆ ಚಂಗನೆ ನೆಗೆದು ತಾಯಿಯ ಸೊಂಟದಲ್ಲಿ ಕುಳಿತ ದೃಶ್ಯ ಮಜವಾಗಿತ್ತು.ನೆಗೆದು ಸೊಂಟದಲ್ಲಿ ಕೂತ್ಕೋ ಬೇಕಾದ್ರೆ ಎಷ್ಟು ಚಿಕ್ಕ ಹುಡುಗ ನೀವೇ ಲೆಕ್ಕ ಹಾಕಿ!
ಮಕ್ಕಳೆಲ್ಲ ಬೇಸಿಗೆ ಶಿಬಿರದ ಹೆಸರಲ್ಲಿ ಯಕ್ಷಗಾನ ಕಲಿತದ್ದು ನಿಜಕ್ಕೂ ಶ್ಲಾಘನೀಯ.ಕಲಿಯಲು ಅನುವು ಮಾಡಿಕೊಟ್ಟ ಶ್ರೀನಿವಾಸ ಸಾಸ್ತಾನ ಮತ್ತು ಆದಿಚುಂಚನಗಿರಿ ಮಠಕ್ಕೆ ಅಭಿನಂದನೆಗಳು.
Monday, April 19, 2010
ಖುಷಿ - ಬೇಸರ !

ಮೊಟ್ಟ ಮೊದಲ ಬಾರಿಗೆ (ಸಧ್ಯ ಕೊನೆಯ ಬಾರಿಗೆ ಅಲ್ಲ;)) ಸ್ಟೇಡಿಯಂ ಗೆ ಹೋಗಿ IPL match ನೋಡಿ ಬಂದದ್ದಕ್ಕೆ ಖುಷಿ.
ಆದರೆ ಅದೇ ಸಮಯದಲ್ಲಿ ಬಾಂಬ್ ಸ್ಫೊಟದಿಂದ ಜನರಿಗೆ ನೋವುಂಟಾಗಿದ್ದು,ಮ್ಯಾಚ್ ನಲ್ಲಿ ನಮ್ಮ ರಾಯಲ್ ಚ್ಯಾಲೆಂಜರ್ಸ್ ಸೋತಿದ್ದಕ್ಕೆ ಬೇಸರ
ಸಮಯಪ್ರಜ್ಞೆ ಬಳಸಿ ಮ್ಯಾಚ್ ಮುಂದುವರೆಸಿ ಕಾಲ್ತುಳಿತವನ್ನು ತಪ್ಪಿಸಿದ ಶಂಕರ ಬಿದರಿಯವರ ಬಗ್ಗೆ ಖುಷಿ .
ಆದರೆ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಮ್ಯಾಚ್ ಗಳನ್ನು ಭದ್ರತೆಯ ನೆಪ ಒಡ್ಡಿ ಸ್ಥಳಾಂತರಿಸಿದ್ದು ಬೇಸರ.
ರಾಯಲ್ ಚ್ಯಾಲೆಂಜರ್ಸ್ ಸೆಮಿ ಫೈನಲ್ ಗೆ ತಲುಪಿದ್ದು ಖುಷಿ.
ಸೆಮಿಫೈನಲ್ ನೋಡಲು ಮತ್ತೊಮ್ಮೆ ಹೋಗಬೇಕೆಂದಿದ್ದ ಆಸೆ ನಿರಾಸೆಯಾಗಿದ್ದಕ್ಕೆ ಬೇಸರ .
ಆಲ್ ದಿ ಬೆಸ್ಟ್ ರಾಯಲ್ ಚ್ಯಾಲೆಂಜರ್ಸ್ ಬೆಂಗಳೂರು !
ಆಲ್ ದಿ ಬೆಸ್ಟ್ ಮುಂಬೈ ಕಮಿಷನರ್ !!
Wednesday, March 31, 2010
ಪಿ. ಲಂಕೇಶ್ ಮತ್ತು ಲಿನಕ್ಸ್ !!!
ನೀವೆಲ್ಲಾ ಲಂಕೇಶ್ ರ ಪುಸ್ತಕಗಳನ್ನು ಓದೇ ಇರ್ತೀರ.ಆದರೆ ನೀವು ಓದದೇ ಇದ್ದ ಲಂಕೇಶರ ಪುಸ್ತಕ ಒಂದಿದೆ!
ಲಿನಕ್ಸ್ ಬಗ್ಗೆ ಪಿ.ಲಂಕೇಶ್ ಬರೆದ ಪುಸ್ತಕ !
ಚಿತ್ರ ನೋಡಿ.
Sunday, March 14, 2010
ಬದುಕು ಎತ್ತಿನ ಬಂಡಿ...
ಕನ್ನಡದ ಒಂದು ಪ್ರಸಿದ್ಧ ಟಿ.ವಿ ವಾಹಿನಿಯೊಂದಕ್ಕೆ ’ಬದುಕು ಎತ್ತಿನ ಬಂಡಿ’ ಅನ್ನೋ ರಿಯಾಲಿಟಿ ಶೋ ಒಂದನ್ನು ನಿರ್ಮಿಸುವ ಸಲುವಾಗಿ ಹಲವು ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ನಿರೂಪಕಿ:ಈ ಹುದ್ದೆ ಕೇವಲ ಮಹಿಳೆಯರಿಗೆ ಮೀಸಲು.ಪುರುಷರೇ ದಯವಿಟ್ಟು ಕ್ಷಮಿಸಿ.ನೀವು ಕೇವಲ ರಾಜಕಾಣಿಗಳ ಪಿತ್ತ ನೆತ್ತಿಗೇರೋ ಅಂಥ ಪ್ರಶ್ನೆಗಳನ್ನು ಕೇಳಿ ಕೇಳಿ ಜನರ ಪಿತ್ತವೂ ನೆತ್ತಿಗೇರೋ ಹಾಗೆ ಮಾಡಿದ್ದರಿಂದ ನಿಮ್ಮನ್ನು ಈ ಹುದ್ದೆಗೆ ಪರಿಗಣಿಸಲಾಗುವುದಿಲ್ಲ.ಇಲ್ಲಿ ಏನಿದ್ದರೂ ಭಾವನೆಗಳನ್ನು ಕೆದಕೋ ,ಕೆದಕಿ ಕೆದಕಿ ಕಣ್ಣೀರು ತರಿಸೋ ನಿಷ್ಣಾತರ ಅಗತ್ಯವಿದೆ.
ನಿರೂಪಕಿಯರು ಮಾಜಿ ಚಿತ್ರ ನಟಿಯರಾಗಿದ್ದಲ್ಲಿ ಆದ್ಯತೆ.ಗ್ಲಿಸರಿನ್ ಹಾಕದೆ ಅಳುವ ಸಾಮರ್ಥ್ಯವಿದ್ದಲ್ಲಿ ಅದು ಪ್ಲಸ್ ಪಾಯಿಂಟ್.ವೀಕ್ಷಕರನ್ನು ಅಳಿಸಲು ಗ್ಲಿಸರಿನ್ ಉಪಯೋಗಿಸಲು ಸಾಧ್ಯವಿಲ್ಲದೇ ಇದ್ದದ್ದರಿಂದ ಆ ಕೆಲಸವನ್ನು ನಿರೂಪಕಿಯರೇ ಮಾಡತಕ್ಕದ್ದು.
ಈ ಕಾರ್ಯಕ್ರಮದಲ್ಲಿ ಮಾಮೂಲಾಗಿ ಎರಡು ಕುಟುಂಬದವರನ್ನು ಕರೆಸಿ ಜಗಳ ಮಾಡಿಸಲಾಗೋದ್ರಿಂದ ತಮ್ಮ ರಕ್ಷಣೆ ತಾವೇ ಮಾಡಿಕೊಳ್ಳಲು ಗೊತ್ತಿರಬೇಕು.ಎರಡು ಕುಟುಂಬದ ಜಗಳಗಂಟಿ ಹೆಂಗಸರು ಪರಸ್ಪರ ಜಡೆ ಎಳೆದು ಜಗಳವಾಡೋ ಸಮಯದಲ್ಲಿ ನಿಧಾನಕ್ಕೆ ಯಾರಿಗೂ ಕಾಣದೆ ಎಸ್ಕೇಪ್ ಆಗೋ ಕಲೆ ತಮಗೆ ಗೊತ್ತಿದ್ರೆ ಅದು ಪ್ಲಸ್ ಪಾಯಿಂಟ್.ಗೊತ್ತಿಲ್ಲದೇ ಇದ್ದರೂ ಪರ್ವಾಗಿಲ್ಲ ಆ ಬಗ್ಗೆ ತರಬೇತಿ ನೀಡಲಾಗುವುದು.
ಸ್ಕ್ರಿಪ್ಟ್ ಲೇಖಕರು: ಕೌಟುಂಬಿಕ ಕಲಹದ ಬಗ್ಗೆ ಕಥೆ,ಕಾದಂಬರಿ ಬರೆದಿದ್ದರೆ ಆದ್ಯತೆ.ಎರಡೂ ಕುಟುಂಬದ ಇಡೀ ಕಥೆಯನ್ನು ನಿಮಗೆ ವಿವರಿಸಲಾಗುವುದು.ಆ ಮಾರುದ್ದ ಕಥೆಯಲ್ಲಿ ಸ್ಟೂಡಿಯೋದಲ್ಲಿ ಜಗಳ ಮಾಡಿಸಬಲ್ಲ ಅಂಶಗಳನ್ನು ನೋಟ್ ಮಾಡಿ,ಅಂಥ ಪ್ರಶ್ನೆಗಳನ್ನು ಮಾತ್ರ ನಿರೂಪಕಿಯರು ಕೇಳೋ ಹಾಗೆ ಸ್ಕ್ರಿಪ್ಟ್ ಬರೆಯಬೇಕಾಗಿರೋದು ನಿಮ್ಮ ಕೆಲಸ.ಈ ಕೆಲಸ ತುಂಬಾ ಚ್ಯಾಲೆಂಜಿಂಗ್!ಒಂದು ವೇಳೆ "ಪರ್ವಾಗಿಲ್ವೆ ಇವರ ಸಂಸಾರ ಚೆನ್ನಾಗಿದೆ " ಅನ್ನೋ ಭಾವನೆ ಬರೋ ಅಂಥ ಅಂಶಗಳೇನಾದ್ರೂ ಇದ್ರೆ ಅದನ್ನು ಹುಷಾರಾಗಿ ಸ್ಕ್ರಿಪ್ಟ್ ನಿಂದ ತೆಗೆದು ಹಾಕಬೇಕಾಗುತ್ತದೆ.ನೀವೇನಾದ್ರೂ ’ಬಾಬಾ ಬಾಂಡು ’ ಅಥವ ’ಚಿಲ್ಲಿ ಚಲ್ಲಿ’ ಅಂಥ ಸೀರಿಯಲ್ ಗಳಿಗೇನಾದ್ರೂ ಕೆಲಸ ಮಾಡಿದ್ದಲ್ಲಿ ದಯವಿಟ್ಟು ಅರ್ಜಿ ಗುಜರಾಯಿಸದಿರಿ.ಇಲ್ಲಿ ನಗಿಸುವವರಿಗೆ ಕೆಲಸವಿಲ್ಲ.
ಕ್ಯಾಮರಾಮ್ಯಾನ್(ವುಮನ್):ಇದು ಕಾರ್ಯಕ್ರಮದ ಅತ್ಯಂತ ಜವಾಬ್ದಾರಿಯುತ ಕೆಲಸ.ಇಡೀ ಕಾರ್ಯಕ್ರಮದ ಯಶಸ್ಸು ನಿಮ್ಮ ಕೈಯಲ್ಲಿರುತ್ತದೆ.ಇಡೀ ಕಾರ್ಯಕ್ರಮದಲ್ಲಿ ನಿರೂಪಕಿಯ ಕಣ್ಣಿರನ್ನು ಮಾತ್ರವಲ್ಲದೇ ಅಲ್ಲಿಗೆ ಬಂದ ವೀಕ್ಷಕರ ಕಣ್ಣೀರನ್ನೂ ಸೆರೆ ಹಿಡಿಯಬೇಕಾಗುತ್ತದೆ.ಜಗಳಗಂಟಿ ಹೆಂಗಸರು ಜಡೆ ಎಳೆಯೋ ದೃಶ್ಯವನ್ನು ಮಾತ್ರ ಅತ್ಯಂತ ನೈಜವಾಗಿ ಚಿತ್ರಿಸಬೆಕಾಗುತ್ತದೆ.ಅಕಸ್ಮಾತ್ ಯಾರಾದ್ರೂ ಪಿತ್ತ ನೆತ್ತಿಗೇರಿ ನಿರೂಪಕಿಯರಿಗೇನಾದ್ರೂ ಹೊಡೆಯಲು ಹೋದ್ರೆ ಅದನ್ನು ಚಿತ್ರಿಸತಕ್ಕದ್ದಲ್ಲ.ಕೆಲವು ಗಂಡಸರು ಸ್ಪೂರ್ಥಿಗಾಗಿ ಎರಡು(ಅಂದಾಜು) ಪೆಗ್ ಏರಿಸಿ ಬಂದಿದ್ರೆ ಅವರಿಂದ ಹುಷಾರಾಗಿರತಕ್ಕದ್ದು.ಅವರು ಮುನಿದು ನಿಮ್ಮ ಕ್ಯಾಮೆರಾ ಮೆಲೇರಿ ಬಂದರೆ ,ಕ್ಯಾಮೆರಾ ಹಾನಿಗೊಳಗಾದೇ ಅದನ್ನು ರಕ್ಷಿಸೋ ಜವಾಬ್ದಾರಿ ನಿಮ್ಮದೇ!
ಹಿನ್ನೆಲೆ ಸಂಗೀತ ನಿರ್ದೇಶಕರು:ನಮ್ಮ ಅನುಭವಿ ನಿರೂಪಕಿಯರು ಎಷ್ಟೇ ಕಷ್ಟ ಪಟ್ಟು ತಮ್ಮ ಕೆಲಸ ನಿರ್ವಹಿಸಿದರೂ ,ವೀಕ್ಷಕರ ಕಣ್ಣಲ್ಲಿ ಕಣ್ಣಿರು ಬರಿಸಲು ಹಿನ್ನೆಲೆ ಸಂಗೀತದ ಮಹತ್ವ ಬಹಳ.ಕಣ್ಣೀರು ಹಾಕುವಾಗ ಪಿಟೀಲಿನ ಧ್ವನಿಯನ್ನು ಬಳಸೋದು ಈಗಾಗಲೇ ಬಹಳಷ್ಟು ಯಶಸ್ಸು ಕಂಡಿರೋದ್ರಿಂದ ಸಂಗೀತ ನಿರ್ದೇಶಕರಿಗೆ ಪಿಟೀಲನ್ನು ಅತ್ಯಂತ ಸಮರ್ಪಕವಾಗಿ ಬಳಸಲು ಗೊತ್ತಿರಬೇಕು.ಬರೀ ಪೀಟೀಲಲ್ಲದೆ ಕೊಳಲು,ವೀಣೆ ಇನ್ನಿತರ ಪರಿಕರಗಳಿಂದಲೂ ಕಣ್ಣೀರು ತರಿಸುವ ಪ್ರತಿಭೆ ಇದ್ದಲ್ಲಿ ನಿಮ್ಮ ಆಯ್ಕೆ ಗ್ಯಾರಂಟಿ!
ಆಸಕ್ತರು badukuettinabandi@ettinabandi.com ಗೆ ಅರ್ಜಿ ಸಲ್ಲಿಸುವುದು.
ನಿರೂಪಕಿ:ಈ ಹುದ್ದೆ ಕೇವಲ ಮಹಿಳೆಯರಿಗೆ ಮೀಸಲು.ಪುರುಷರೇ ದಯವಿಟ್ಟು ಕ್ಷಮಿಸಿ.ನೀವು ಕೇವಲ ರಾಜಕಾಣಿಗಳ ಪಿತ್ತ ನೆತ್ತಿಗೇರೋ ಅಂಥ ಪ್ರಶ್ನೆಗಳನ್ನು ಕೇಳಿ ಕೇಳಿ ಜನರ ಪಿತ್ತವೂ ನೆತ್ತಿಗೇರೋ ಹಾಗೆ ಮಾಡಿದ್ದರಿಂದ ನಿಮ್ಮನ್ನು ಈ ಹುದ್ದೆಗೆ ಪರಿಗಣಿಸಲಾಗುವುದಿಲ್ಲ.ಇಲ್ಲಿ ಏನಿದ್ದರೂ ಭಾವನೆಗಳನ್ನು ಕೆದಕೋ ,ಕೆದಕಿ ಕೆದಕಿ ಕಣ್ಣೀರು ತರಿಸೋ ನಿಷ್ಣಾತರ ಅಗತ್ಯವಿದೆ.
ನಿರೂಪಕಿಯರು ಮಾಜಿ ಚಿತ್ರ ನಟಿಯರಾಗಿದ್ದಲ್ಲಿ ಆದ್ಯತೆ.ಗ್ಲಿಸರಿನ್ ಹಾಕದೆ ಅಳುವ ಸಾಮರ್ಥ್ಯವಿದ್ದಲ್ಲಿ ಅದು ಪ್ಲಸ್ ಪಾಯಿಂಟ್.ವೀಕ್ಷಕರನ್ನು ಅಳಿಸಲು ಗ್ಲಿಸರಿನ್ ಉಪಯೋಗಿಸಲು ಸಾಧ್ಯವಿಲ್ಲದೇ ಇದ್ದದ್ದರಿಂದ ಆ ಕೆಲಸವನ್ನು ನಿರೂಪಕಿಯರೇ ಮಾಡತಕ್ಕದ್ದು.
ಈ ಕಾರ್ಯಕ್ರಮದಲ್ಲಿ ಮಾಮೂಲಾಗಿ ಎರಡು ಕುಟುಂಬದವರನ್ನು ಕರೆಸಿ ಜಗಳ ಮಾಡಿಸಲಾಗೋದ್ರಿಂದ ತಮ್ಮ ರಕ್ಷಣೆ ತಾವೇ ಮಾಡಿಕೊಳ್ಳಲು ಗೊತ್ತಿರಬೇಕು.ಎರಡು ಕುಟುಂಬದ ಜಗಳಗಂಟಿ ಹೆಂಗಸರು ಪರಸ್ಪರ ಜಡೆ ಎಳೆದು ಜಗಳವಾಡೋ ಸಮಯದಲ್ಲಿ ನಿಧಾನಕ್ಕೆ ಯಾರಿಗೂ ಕಾಣದೆ ಎಸ್ಕೇಪ್ ಆಗೋ ಕಲೆ ತಮಗೆ ಗೊತ್ತಿದ್ರೆ ಅದು ಪ್ಲಸ್ ಪಾಯಿಂಟ್.ಗೊತ್ತಿಲ್ಲದೇ ಇದ್ದರೂ ಪರ್ವಾಗಿಲ್ಲ ಆ ಬಗ್ಗೆ ತರಬೇತಿ ನೀಡಲಾಗುವುದು.
ಸ್ಕ್ರಿಪ್ಟ್ ಲೇಖಕರು: ಕೌಟುಂಬಿಕ ಕಲಹದ ಬಗ್ಗೆ ಕಥೆ,ಕಾದಂಬರಿ ಬರೆದಿದ್ದರೆ ಆದ್ಯತೆ.ಎರಡೂ ಕುಟುಂಬದ ಇಡೀ ಕಥೆಯನ್ನು ನಿಮಗೆ ವಿವರಿಸಲಾಗುವುದು.ಆ ಮಾರುದ್ದ ಕಥೆಯಲ್ಲಿ ಸ್ಟೂಡಿಯೋದಲ್ಲಿ ಜಗಳ ಮಾಡಿಸಬಲ್ಲ ಅಂಶಗಳನ್ನು ನೋಟ್ ಮಾಡಿ,ಅಂಥ ಪ್ರಶ್ನೆಗಳನ್ನು ಮಾತ್ರ ನಿರೂಪಕಿಯರು ಕೇಳೋ ಹಾಗೆ ಸ್ಕ್ರಿಪ್ಟ್ ಬರೆಯಬೇಕಾಗಿರೋದು ನಿಮ್ಮ ಕೆಲಸ.ಈ ಕೆಲಸ ತುಂಬಾ ಚ್ಯಾಲೆಂಜಿಂಗ್!ಒಂದು ವೇಳೆ "ಪರ್ವಾಗಿಲ್ವೆ ಇವರ ಸಂಸಾರ ಚೆನ್ನಾಗಿದೆ " ಅನ್ನೋ ಭಾವನೆ ಬರೋ ಅಂಥ ಅಂಶಗಳೇನಾದ್ರೂ ಇದ್ರೆ ಅದನ್ನು ಹುಷಾರಾಗಿ ಸ್ಕ್ರಿಪ್ಟ್ ನಿಂದ ತೆಗೆದು ಹಾಕಬೇಕಾಗುತ್ತದೆ.ನೀವೇನಾದ್ರೂ ’ಬಾಬಾ ಬಾಂಡು ’ ಅಥವ ’ಚಿಲ್ಲಿ ಚಲ್ಲಿ’ ಅಂಥ ಸೀರಿಯಲ್ ಗಳಿಗೇನಾದ್ರೂ ಕೆಲಸ ಮಾಡಿದ್ದಲ್ಲಿ ದಯವಿಟ್ಟು ಅರ್ಜಿ ಗುಜರಾಯಿಸದಿರಿ.ಇಲ್ಲಿ ನಗಿಸುವವರಿಗೆ ಕೆಲಸವಿಲ್ಲ.
ಕ್ಯಾಮರಾಮ್ಯಾನ್(ವುಮನ್):ಇದು ಕಾರ್ಯಕ್ರಮದ ಅತ್ಯಂತ ಜವಾಬ್ದಾರಿಯುತ ಕೆಲಸ.ಇಡೀ ಕಾರ್ಯಕ್ರಮದ ಯಶಸ್ಸು ನಿಮ್ಮ ಕೈಯಲ್ಲಿರುತ್ತದೆ.ಇಡೀ ಕಾರ್ಯಕ್ರಮದಲ್ಲಿ ನಿರೂಪಕಿಯ ಕಣ್ಣಿರನ್ನು ಮಾತ್ರವಲ್ಲದೇ ಅಲ್ಲಿಗೆ ಬಂದ ವೀಕ್ಷಕರ ಕಣ್ಣೀರನ್ನೂ ಸೆರೆ ಹಿಡಿಯಬೇಕಾಗುತ್ತದೆ.ಜಗಳಗಂಟಿ ಹೆಂಗಸರು ಜಡೆ ಎಳೆಯೋ ದೃಶ್ಯವನ್ನು ಮಾತ್ರ ಅತ್ಯಂತ ನೈಜವಾಗಿ ಚಿತ್ರಿಸಬೆಕಾಗುತ್ತದೆ.ಅಕಸ್ಮಾತ್ ಯಾರಾದ್ರೂ ಪಿತ್ತ ನೆತ್ತಿಗೇರಿ ನಿರೂಪಕಿಯರಿಗೇನಾದ್ರೂ ಹೊಡೆಯಲು ಹೋದ್ರೆ ಅದನ್ನು ಚಿತ್ರಿಸತಕ್ಕದ್ದಲ್ಲ.ಕೆಲವು ಗಂಡಸರು ಸ್ಪೂರ್ಥಿಗಾಗಿ ಎರಡು(ಅಂದಾಜು) ಪೆಗ್ ಏರಿಸಿ ಬಂದಿದ್ರೆ ಅವರಿಂದ ಹುಷಾರಾಗಿರತಕ್ಕದ್ದು.ಅವರು ಮುನಿದು ನಿಮ್ಮ ಕ್ಯಾಮೆರಾ ಮೆಲೇರಿ ಬಂದರೆ ,ಕ್ಯಾಮೆರಾ ಹಾನಿಗೊಳಗಾದೇ ಅದನ್ನು ರಕ್ಷಿಸೋ ಜವಾಬ್ದಾರಿ ನಿಮ್ಮದೇ!
ಹಿನ್ನೆಲೆ ಸಂಗೀತ ನಿರ್ದೇಶಕರು:ನಮ್ಮ ಅನುಭವಿ ನಿರೂಪಕಿಯರು ಎಷ್ಟೇ ಕಷ್ಟ ಪಟ್ಟು ತಮ್ಮ ಕೆಲಸ ನಿರ್ವಹಿಸಿದರೂ ,ವೀಕ್ಷಕರ ಕಣ್ಣಲ್ಲಿ ಕಣ್ಣಿರು ಬರಿಸಲು ಹಿನ್ನೆಲೆ ಸಂಗೀತದ ಮಹತ್ವ ಬಹಳ.ಕಣ್ಣೀರು ಹಾಕುವಾಗ ಪಿಟೀಲಿನ ಧ್ವನಿಯನ್ನು ಬಳಸೋದು ಈಗಾಗಲೇ ಬಹಳಷ್ಟು ಯಶಸ್ಸು ಕಂಡಿರೋದ್ರಿಂದ ಸಂಗೀತ ನಿರ್ದೇಶಕರಿಗೆ ಪಿಟೀಲನ್ನು ಅತ್ಯಂತ ಸಮರ್ಪಕವಾಗಿ ಬಳಸಲು ಗೊತ್ತಿರಬೇಕು.ಬರೀ ಪೀಟೀಲಲ್ಲದೆ ಕೊಳಲು,ವೀಣೆ ಇನ್ನಿತರ ಪರಿಕರಗಳಿಂದಲೂ ಕಣ್ಣೀರು ತರಿಸುವ ಪ್ರತಿಭೆ ಇದ್ದಲ್ಲಿ ನಿಮ್ಮ ಆಯ್ಕೆ ಗ್ಯಾರಂಟಿ!
ಆಸಕ್ತರು badukuettinabandi@ettinabandi.com ಗೆ ಅರ್ಜಿ ಸಲ್ಲಿಸುವುದು.
Monday, March 1, 2010
ಬಡವನ ಗುಡಿಸಲಲಿ...
ಒಬ್ಬ ಕನ್ನಡದ ದೈತ್ಯ ಬರಹಗಾರರರು! ಅವರ ಬರಹಗಳನ್ನು ನಾನು ಬಹಳಷ್ಟು ಮೆಚ್ಚಿ ಓದ್ತಾ ಇದ್ದೆ.ಲೇಖಕರು ಹಿಂದೆ ಪಟ್ಟಿದ್ದ ಪಾಡು,ಬಡತನದಲ್ಲಿ ಬೆಂದು ಮೇಲೆ ಬಂದ ಬಗೆ ಇದೆಲ್ಲಾ ತುಂಬ ಹೃದಯಸ್ಪರ್ಶಿ,ಆಪ್ಯಾಯಮಾನವಾಗಿತ್ತು ಆಗ ನನಗೆ.ಬಹಳಷ್ಟು ಸಲ ಪ್ರೇರಣಾ ಶಕ್ತಿಯೂ ಆಗಿತ್ತು.
ಆದ್ರೆ ಈಗೀಗ ಹಿಡಿಸ್ತಾ ಇಲ್ಲ!ಕಾರಣ ಗೊತ್ತಿಲ್ಲ.
ನಾವು ಬಹುಷಃ ಬಡತನವನ್ನು ಇಷ್ಟಪಡದಿದ್ದರೂ ಬಡತನದ ಬಗ್ಗೆ ಕಥೆ,ಕವನಗಳನ್ನ ತುಂಬಾ ಇಷ್ಟ ಪಡ್ತೀವೇನೋ ಅನ್ಸುತ್ತೆ.ಒಬ್ಬ ಲೇಖಕ ತಾನು ಕೊಂಡ ದುಬಾರಿ ಕಾರಿನ ಬಗ್ಗೆ ಏನಾದ್ರೂ ಬರೆದ್ರೆ ನಮಗೆ ಬಹುಷಃ ಹಿಡಿಸದೆ ಹೋದೀತೇನೋ.ಆದ್ರೆ ಅದೇ ಲೇಖಕ ತಾನು ಹೊಟ್ಟೆಗಿಲ್ಲದೆ,ಕೆಲಸ ಇಲ್ಲದೆ, ಪಟ್ಟ ಪಾಡೇನಾದ್ರೂ ಬರೆದ್ರೆ ತುಂಬಾ ಇಷ್ಟ ಪಟ್ಟು ಓದ್ತೀವಿ.
ನಾವು ಬಡವರಾಗಿರಲು ಖಂಡಿತ ಇಷ್ಟಪಡದಿದ್ದರೂ ’ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು ’ ಕವಿತೆ ಇಷ್ಟ ಪಡ್ತೀವಿ( ಕವಿತೆಯ ಆಶಯ ಅದಲ್ಲ ಅಂತ ಬಯ್ಯಬೇಡಿ ದಯವಿಟ್ಟು!)
ಲೇಖಕ ಊಟಕ್ಕೆ ಕಾಸಿಲ್ಲದೆ ಇದ್ದಾಗ ಕಮ್ಮಿ ಖರ್ಚಿಗೆ ಜಾಸ್ತಿ ತಿನ್ನೋಕೆ ಸಿಗುತ್ತೆ ಅನ್ನೋ ಕಾರಣಕ್ಕೆ ಶಿವಾಜಿನಗರಕ್ಕೆ ಹೋಗಿ ದನದ ಮಾಂಸ ತಿಂದ ಘಟನೆಯನ್ನು ಬರೆದಾಗ ಓದೋ ಖುಷಿ(ಖುಷಿ ಅಂದ್ರೆ ಬಹುಷಃ ಸರಿ ಆಗಲ್ಲ!) ’ನನ್ನ ಅಳಿಯ ಒಂದು ಕೋಟಿ ಖರ್ಚಿ ಮಾಡಿ ಜಿಮ್ ಮಾಡಿದ್ದಾನೆ ’ ಅನ್ನೋದನ್ನು ಬರೆದಾಗ ಯಾಕೆ ಆಗಲ್ಲ ?
ಹೊಸ ಫ್ರಾಕ್ ಕೊಡಿಸಲು ಅಪ್ಪನ ಬಳಿ ಕಾಸಿಲ್ಲದೇ ಇದ್ದಾಗ ಮಗಳು ಹಳೇ ಫ್ರಾಕ್ ಹಾಕ್ಕೊಂಡು ಹೋಗ್ತೀನಿ ಅಂತ ಹೇಳಿದ್ದನ್ನು ಬರೆದಾಗ ಓದಿದಷ್ಟು ಇಂಟೆನ್ಸ್ ಆಗಿ ’ಮಗಳಿಗೆ ಈಗ ಐದಂಕಿ ಸಂಬಳ ’ ಅಂತ ಲೇಖಕ ಹೆಮ್ಮೆಯಿಂದ ಬರೆದಾಗ ಯಾಕೆ ಓದಿಸಿಕೊಂಡು ಹೋಗಲ್ಲ?
ಕಾಸಿಲ್ಲದೆ ಇದ್ದದ್ದಕ್ಕೆ ಸಣ್ಣ ಸಣ್ಣ ಪುಸ್ತಕಗಳನ್ನು ಅಂಗಡಿಯಲ್ಲೇ ಓದ್ತಿದ್ದೆ ಅನ್ನೋದನ್ನು ಲೇಖಕ ಬರೆದಾಗ ಆಗೋ ಖುಷಿ ’ನಾನು ಕಾದಂಬರಿಗಳನ್ನು ಅಮೆಝಾನ್ ಕಿಂಡಲ್ ನಲ್ಲೇ ಓದೋದು ’ ಅಂತ ಹೇಳಿದಾಗ ಯಾಕೆ ಆಗಲ್ಲ?
’ಮುಕ್ತ ಮುಕ್ತ ’ದ ಪೆದ್ದು ಪೆದ್ದಾಗಿ ಮಾತಾಡೋ ಶಾರದತ್ತೆ ಇಷ್ಟ ಆದಷ್ಟು ’ಕ್ಯೋಂಕಿ ಸಾಸ್ ಭಿ ’ ಸೀರಿಯಲ್ ನ ಜರತಾರಿ ಸೀರೆಯ ಆಂಟಿಯರು ಯಾಕೆ ಇಷ್ಟ ಆಗಲ್ಲ?
ಎಲ್ಲೋ ನಮಗೆ ಶ್ರೀಮಂತರು ಅಂದ್ರೆ ಸರಿ ಇಲ್ಲ,ಅವರಿಗೆ ಸಂವೇದನೆಗಳೇ ಇಲ್ಲ ಅನ್ನೋ ಭಾವನೆ ಮೂಡಿದೆ ಅನ್ಸುತ್ತೆ.ಅಥವಾ ನಮಗೆ ಬೆರೆಯವರ ಉನ್ನತಿ,ಶ್ರೀಮಂತಿಕೆ ಮೆಚ್ಚೋದಕ್ಕೆ ಆಗಲ್ವೇನೋ!
ನಾನೂ ಶ್ರೀಮಂತ,ಅವಳೂ ಶ್ರೀಮಂತೆ , ಮರ್ಸಿಡಿಸ್ ನಲ್ಲೇ ನಮ್ಮ ಓಡಾಟ ಅನ್ನೋ ಥರ ಕವಿತೆಗಳು ನಮಗೆ ಇಷ್ಟವಾಗೋದೇ ಇಲ್ವೇನೋ?
ಗುಲಾಬಿ ಟಾಕೀಸ್ ನ ಗುಲಾಬಿ ಒಂದು ವೇಳೆ ಶ್ರೀಮಂತೆ ಆಗಿದ್ರೆ ನಾವು ಅವಳನ್ನು ಈಗ ಇಷ್ಟ ಪಟ್ಟಷ್ಟೇ ಇಷ್ಟ ಪಡ್ತಿದ್ವಾ?ಬಡತನದಲ್ಲಿ ಬೆಂದದ್ದಕ್ಕೇ ಉಮಾಶ್ರೀಯವರಿಗೆ ಅಂಥ ಮನೋಜ್ಞ ಅಭಿನಯ ನೀಡೋದಕ್ಕೆ ಸಾಧ್ಯ ಆಯ್ತಾ?
ಇದು ಹ್ಯೂಮನ್ ಸೈಕಾಲಜಿ ಗೆ ಸಂಬಂಧ ಪಟ್ಟಿದ್ದಾ?
ಆದ್ರೆ ಈಗೀಗ ಹಿಡಿಸ್ತಾ ಇಲ್ಲ!ಕಾರಣ ಗೊತ್ತಿಲ್ಲ.
ನಾವು ಬಹುಷಃ ಬಡತನವನ್ನು ಇಷ್ಟಪಡದಿದ್ದರೂ ಬಡತನದ ಬಗ್ಗೆ ಕಥೆ,ಕವನಗಳನ್ನ ತುಂಬಾ ಇಷ್ಟ ಪಡ್ತೀವೇನೋ ಅನ್ಸುತ್ತೆ.ಒಬ್ಬ ಲೇಖಕ ತಾನು ಕೊಂಡ ದುಬಾರಿ ಕಾರಿನ ಬಗ್ಗೆ ಏನಾದ್ರೂ ಬರೆದ್ರೆ ನಮಗೆ ಬಹುಷಃ ಹಿಡಿಸದೆ ಹೋದೀತೇನೋ.ಆದ್ರೆ ಅದೇ ಲೇಖಕ ತಾನು ಹೊಟ್ಟೆಗಿಲ್ಲದೆ,ಕೆಲಸ ಇಲ್ಲದೆ, ಪಟ್ಟ ಪಾಡೇನಾದ್ರೂ ಬರೆದ್ರೆ ತುಂಬಾ ಇಷ್ಟ ಪಟ್ಟು ಓದ್ತೀವಿ.
ನಾವು ಬಡವರಾಗಿರಲು ಖಂಡಿತ ಇಷ್ಟಪಡದಿದ್ದರೂ ’ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು ’ ಕವಿತೆ ಇಷ್ಟ ಪಡ್ತೀವಿ( ಕವಿತೆಯ ಆಶಯ ಅದಲ್ಲ ಅಂತ ಬಯ್ಯಬೇಡಿ ದಯವಿಟ್ಟು!)
ಲೇಖಕ ಊಟಕ್ಕೆ ಕಾಸಿಲ್ಲದೆ ಇದ್ದಾಗ ಕಮ್ಮಿ ಖರ್ಚಿಗೆ ಜಾಸ್ತಿ ತಿನ್ನೋಕೆ ಸಿಗುತ್ತೆ ಅನ್ನೋ ಕಾರಣಕ್ಕೆ ಶಿವಾಜಿನಗರಕ್ಕೆ ಹೋಗಿ ದನದ ಮಾಂಸ ತಿಂದ ಘಟನೆಯನ್ನು ಬರೆದಾಗ ಓದೋ ಖುಷಿ(ಖುಷಿ ಅಂದ್ರೆ ಬಹುಷಃ ಸರಿ ಆಗಲ್ಲ!) ’ನನ್ನ ಅಳಿಯ ಒಂದು ಕೋಟಿ ಖರ್ಚಿ ಮಾಡಿ ಜಿಮ್ ಮಾಡಿದ್ದಾನೆ ’ ಅನ್ನೋದನ್ನು ಬರೆದಾಗ ಯಾಕೆ ಆಗಲ್ಲ ?
ಹೊಸ ಫ್ರಾಕ್ ಕೊಡಿಸಲು ಅಪ್ಪನ ಬಳಿ ಕಾಸಿಲ್ಲದೇ ಇದ್ದಾಗ ಮಗಳು ಹಳೇ ಫ್ರಾಕ್ ಹಾಕ್ಕೊಂಡು ಹೋಗ್ತೀನಿ ಅಂತ ಹೇಳಿದ್ದನ್ನು ಬರೆದಾಗ ಓದಿದಷ್ಟು ಇಂಟೆನ್ಸ್ ಆಗಿ ’ಮಗಳಿಗೆ ಈಗ ಐದಂಕಿ ಸಂಬಳ ’ ಅಂತ ಲೇಖಕ ಹೆಮ್ಮೆಯಿಂದ ಬರೆದಾಗ ಯಾಕೆ ಓದಿಸಿಕೊಂಡು ಹೋಗಲ್ಲ?
ಕಾಸಿಲ್ಲದೆ ಇದ್ದದ್ದಕ್ಕೆ ಸಣ್ಣ ಸಣ್ಣ ಪುಸ್ತಕಗಳನ್ನು ಅಂಗಡಿಯಲ್ಲೇ ಓದ್ತಿದ್ದೆ ಅನ್ನೋದನ್ನು ಲೇಖಕ ಬರೆದಾಗ ಆಗೋ ಖುಷಿ ’ನಾನು ಕಾದಂಬರಿಗಳನ್ನು ಅಮೆಝಾನ್ ಕಿಂಡಲ್ ನಲ್ಲೇ ಓದೋದು ’ ಅಂತ ಹೇಳಿದಾಗ ಯಾಕೆ ಆಗಲ್ಲ?
’ಮುಕ್ತ ಮುಕ್ತ ’ದ ಪೆದ್ದು ಪೆದ್ದಾಗಿ ಮಾತಾಡೋ ಶಾರದತ್ತೆ ಇಷ್ಟ ಆದಷ್ಟು ’ಕ್ಯೋಂಕಿ ಸಾಸ್ ಭಿ ’ ಸೀರಿಯಲ್ ನ ಜರತಾರಿ ಸೀರೆಯ ಆಂಟಿಯರು ಯಾಕೆ ಇಷ್ಟ ಆಗಲ್ಲ?
ಎಲ್ಲೋ ನಮಗೆ ಶ್ರೀಮಂತರು ಅಂದ್ರೆ ಸರಿ ಇಲ್ಲ,ಅವರಿಗೆ ಸಂವೇದನೆಗಳೇ ಇಲ್ಲ ಅನ್ನೋ ಭಾವನೆ ಮೂಡಿದೆ ಅನ್ಸುತ್ತೆ.ಅಥವಾ ನಮಗೆ ಬೆರೆಯವರ ಉನ್ನತಿ,ಶ್ರೀಮಂತಿಕೆ ಮೆಚ್ಚೋದಕ್ಕೆ ಆಗಲ್ವೇನೋ!
ನಾನೂ ಶ್ರೀಮಂತ,ಅವಳೂ ಶ್ರೀಮಂತೆ , ಮರ್ಸಿಡಿಸ್ ನಲ್ಲೇ ನಮ್ಮ ಓಡಾಟ ಅನ್ನೋ ಥರ ಕವಿತೆಗಳು ನಮಗೆ ಇಷ್ಟವಾಗೋದೇ ಇಲ್ವೇನೋ?
ಗುಲಾಬಿ ಟಾಕೀಸ್ ನ ಗುಲಾಬಿ ಒಂದು ವೇಳೆ ಶ್ರೀಮಂತೆ ಆಗಿದ್ರೆ ನಾವು ಅವಳನ್ನು ಈಗ ಇಷ್ಟ ಪಟ್ಟಷ್ಟೇ ಇಷ್ಟ ಪಡ್ತಿದ್ವಾ?ಬಡತನದಲ್ಲಿ ಬೆಂದದ್ದಕ್ಕೇ ಉಮಾಶ್ರೀಯವರಿಗೆ ಅಂಥ ಮನೋಜ್ಞ ಅಭಿನಯ ನೀಡೋದಕ್ಕೆ ಸಾಧ್ಯ ಆಯ್ತಾ?
ಇದು ಹ್ಯೂಮನ್ ಸೈಕಾಲಜಿ ಗೆ ಸಂಬಂಧ ಪಟ್ಟಿದ್ದಾ?
Sunday, February 14, 2010
ಸಂಸ್ಕೃತಿ ,ಸಭ್ಯತೆ....
ವ್ಯಾಲೆಂಟೈನ್ಸ್ ದಿನದ ಆಚರಣೆಯ ಪರ ವಿರೋಧದ ಚರ್ಚೆಯನ್ನು ನೋಡುತ್ತಾ ಇದ್ರೆ ತಲೆ ಕೆಟ್ಟೇ ಹೋಯ್ತು!ವ್ಯಾಲೆಂಟೈನ್ಸ್ ದಿನದ ಆಚರಣೆ ನಮ್ಮ ಭಾರತೀಯ ಸಂಸ್ಕೃತಿ ಅಲ್ಲ ಅನ್ನೋದು ತಡವಾಗಿ ಜನರ ಗಮನಕ್ಕೆ ಬಂದ ಹಾಗಿದೆ.ವ್ಯಾಲೆಂಟೈನ್ಸ್ ದಿನದಂಥ ಕ್ಷುಲ್ಲಕ ವಿಷಯದ ಬಗ್ಗೆ ತಲೆ ಕೆಡಿಸಿಕೊಳ್ಳೋದಕ್ಕಿಂತ ನೈಸ್ ರೋಡ್ ನಿಂದಾಗಿ ರೈತರಿಗಾದ ಅನ್ಯಾಯದ ಬಗ್ಗೆ ದನಿ ಎತ್ತಿದ್ರೆ ಯಾರಿಗಾದ್ರೂ ಅಲ್ಪ ಸ್ವಲ್ಪ ಸಹಾಯವಾದ್ರೂ ಅಗ್ತಿತ್ತು.
ಅದ್ರೆ ಇದು ಸಾಧ್ಯ ಇಲ್ಲ ! ಛೇ ದೇವೇಗೌಡ್ರಿಗೆ ಸಪೋರ್ಟ್ ಮಾಡೋದಾ? (ವಿಶ್ವೇಶ್ವರ ಭಟ್ರಿಗೆ ಮಂಡೆ ಸಮ ಇಲ್ಲ!)
ಪ್ರೀತಿಯನ್ನು ಒಪ್ಪದೇ ಇದ್ದದ್ದಕ್ಕೆ acid ದಾಳಿಗೆ ತುತ್ತಾದ ಯುವತಿಯರ ಬೆಂಬಲ ನೀಡಲು ಈ ಸಂಘಟನೆಗಳಿಗೆ ಪುರುಸೊತ್ತಿದೆಯಾ ಅದೂ ಇಲ್ಲ.
ಇವರಿಗೆ ಸಿಕ್ಕಿದ್ದು ವರ್ಷಕ್ಕೊಂದು ದಿನ ಆಚರಿಸೋ ವ್ಯಾಲೆಂಟೈನ್ಸ್ ದಿನ.
ವ್ಯಾಲೆಂಟೈನ್ಸ್ ದಿನದ ಆಚರಣೆಯಿಂದ ಭಾರತೀಯ ಸಂಸ್ಕೃತಿಗೆ ಹೇಗೆ ಧಕ್ಕೆ ಉಂಟಾಗ್ತಿದೆಯೋ ಗೊತ್ತಾಗ್ತಿಲ್ಲ.ಗ್ರೀಟಿಂಗ್ಸ್ ಕಾರ್ಡ್ ಕಂಪೆನಿಗಳದ್ದೇ ಶಡ್ಯಂತ್ರ ಈ ವ್ಯಾಲೆಂಟೈನ್ಸ್ ಡೇ ಅನ್ನೋದು ಕೆಲವರ ಅಭಿಪ್ರಾಯ.ಅದನ್ನು ಒಪ್ಪಿದರೂ ಭಾರತೀಯ ಸಂಸೃತಿಗೆ ಧಕ್ಕೆ ಅಗೋ ಅಂಥದ್ದು ಏನೂ ಕಾಣಲ್ಲ.ನಾಳೆ ದೀಪಾವಳಿಗೆ ಗ್ರೀಟಿಂಗ್ಸ್ ಹೆಚ್ಚಾಗಿ ಖರ್ಚಾಗುತ್ತೆ ಅನ್ನೋ ರಿಪೋರ್ಟ್ ಬಂದ್ರೆ ಅದನ್ನೂ ಗ್ರೀಟಿಂಗ್ಸ್ ಕಾರ್ಡ್ ಮಾಫಿಯಾ ಅನ್ನೋಕಾಗುತ್ತಾ?ನಾಳೆ ಯಾರಾದ್ರೂ ಸತ್ತರೆ ಅವರ ಮನೆಯವರಿಗೆ ಶೋಕ ವ್ಯಕ್ತಪಡಿಸೋ ಅಂಥ ಗ್ರೀಟಿಂಗ್ಸ್(ಗ್ರೀಟ್ ಅನ್ನೋದು ತಪ್ಪಾಗುತ್ತೆ!)ಕಾರ್ಡ್ ಏನಾದ್ರೂ ಬಂದ್ರೆ ಅದನ್ನೂ ಮಾರ್ತಾರೆ ಈ ಕಂಪೆನಿಯವರು.
ಕೆಲವೊಂದು ಸಲ ಈ ವ್ಯಾಲೆಂಟೈನ್ಸ್ ಡೇ ಹಿಂದೆ ಗುಲಾಬಿ ತೋಟದವರ ಕೈವಾಡ ಇದ್ರೂ ಇರಬಹುದು ಅನ್ಸುತ್ತೆ ! ಯಾಕಂದ್ರೆ ತಮ್ಮ ಗುಲಾಬಿಗಳು ಖರ್ಚಾಗ್ಲಿ ಅನ್ನೋ ಕಾರಣಕ್ಕೇನಾದ್ರೂ ಈ ರೈತರು ಇಂಥ ದಿನವನ್ನು ಹುಟ್ಟು ಹಾಕಿರಬಹುದೇ? ’ಮುಕ್ತ ಮುಕ್ತದ’ ಶಶಿಯಂಥವರು ಹಾರಿಕಲ್ಚರ್ ಶುರು ಮಾಡಿದ ಹಾಗೆ,ಲಾಭ ಗಳಿಸೋದಕ್ಕೋಸ್ಕರ ಆಧುನಿಕ ರೈತರು ಇಂಥ ಗಿಮಿಕ್ ಏನಾದ್ರೂ ಶುರು ಮಾಡಿರಬಹುದೇ ? ಹಾಗಿದ್ರೆ ಅಂತ ರೈತರ ಹೊಟ್ಟೆ ತಣ್ಣಗಿರಲಿ ಪಾಪ.ಯಾವಾಗ್ಲೂ ರೈತರು ನಷ್ಟದಲ್ಲೇ ಇರೋದು.ಈ ವ್ಯಾಲೆಂಟೈನ್ಸ್ ಡೇ ನೆಪದಲ್ಲಾದ್ರೂ ಲಾಭ ಮಾಡಿಕೊಳ್ಳಲಿ ಬಿಡಿ.
ವ್ಯಾಲೆಂಟೈನ್ಸ್ ಡೇ ದಿನ ಸ್ವೇಚ್ಛೆ ಸಿಗುತ್ತೆ ಅನ್ನೋದು ಬಹಳಷ್ಟು ಜನರ ಕಂಪ್ಲೇಂಟು.ಆದರೆ ಹೆಬ್ಬಾಳ ಪಾರ್ಕ್ ,ಕಬ್ಬನ್ ಪಾರ್ಕ್ ಅಥವಾ ಬೆಂಗಳೂರಿನ ಯಾವುದೇ ಪಾರ್ಕ್ ಗೆ ಹೋದ್ರೂ ನಿತ್ಯ ಇಂಥ ಸ್ವೇಚ್ಛಾಚಾರಗಳೇ ನೋಡೋದಕ್ಕೆ ಸಿಗುತ್ತೆ.ಈ ಒಂದು ದಿನ ಅಂಥ ಅನಾಹುತ ಏನಾಗುತ್ತೋ ದೇವರೇ ಬಲ್ಲ.ಬಹುಷಃ ’ವ್ಯಾಲೆಂಟೈನ್ಸ್ ಡೇ ಆದ ಒಂಬತ್ತು ತಿಂಗಳ ನಂತರ ಚಿಲ್ಡ್ರನ್ಸ್ ಡೇ ಬರುತ್ತೆ’ ಅನ್ನೋ ಜೋಕನ್ನೇ ಪಾಪ ಇವರು ಸೀರಿಯಸ್ ಆಗಿ ತಗೊಂಡ್ರೋ ಏನೋ?
ನಮ್ಮ ಊರಲ್ಲೊಬ್ಬ ಸ್ನೆಹಿತರಿದ್ದಾರೆ.ಅವರಿಗೆ ರಕ್ಷಾಬಂಧನ ಮಾಡೋ ಬಿಸಿನೆಸ್!RSS ನವರೇ ಹೆಚ್ಚಾಗಿ ಬಳಸುವ ಕೇಸರಿ ಬಣ್ಣದ ರಕ್ಷಾಬಂಧನ ಅದು.ವರ್ಷಕ್ಕೆ ಒಂದು ದಿನ ಬರೋ ಈ ರಕ್ಷಾಬಂಧನ ಹಬ್ಬಕ್ಕೆ ಪಾಪ ಅವರು ವರ್ಷಪೂರ್ತಿ ತಯಾರಿ ನಡೆಸ್ತಾರೆ.
ನಮಗೆ ರಕ್ಷಾಬಂಧನ ಸಂಸ್ಕೃತಿ .ಆದರೆ ಪಾಪ ಅವರಿಗೆ ಅದು ಹೊಟ್ಟೆಪಾಡು,ಬಿಸಿನೆಸ್ ! ನಮಗೆ ದೇವಸ್ಥಾನಕ್ಕೆ ಹೋಗೋದು ಸಂಸ್ಕೃತಿ ಆದರೆ ಅರ್ಚಕರಿಗೆ ಅದು ಹೊಟ್ಟೆಪಾಡು.ಚಪ್ಪಲಿ ಹೊರಬಿಟ್ಟು ದೇವಸ್ಥಾನದ ಒಳಗೆ ಹೋಗೋದು ನಮ್ಮ ಸಂಸ್ಕೃತಿ ಆದ್ರೆ ಹೊರಗೆ ಚಪ್ಪಲಿ ಕಾಯೋ ಬಡ ಹುಡುಗನಿಗೆ ಅದು ಹೊಟ್ಟೆ ಪಾಡು.ಒಳಗೆ ಹಣ್ಣು ಕಾಯಿ ಮಾಡಿಸೋದು ನಮಗೆ ಸಂಸ್ಕೃತಿ ಆದರೆ ಹೊರಗೆ ಅದನ್ನು ಮಾರೋನಿಗೆ ಅದು ಹೊಟ್ಟೆಪಾಡು.ಮದುವೆಗೆ ವಾಲಗ ಊದಿಸೋದು ನಮ್ಮ ಸಂಸ್ಕೃತಿ,ವಾಲಗ ಊದೋನಿಗೆ ಅದು ಹೊಟ್ಟೆಪಾಡು.
ಹಿಂದೆ ಗ್ರಾಮಾಫೋನ್ ತಟ್ಟೆಯ ಭಕ್ತಿ ಗೀತೆ ಹಾಕುತ್ತಿದ್ದ ದೇವಸ್ಥಾನಗಳಿಗೆ ಇವತ್ತು MP3 ಪ್ಲೇಯರ್ ಗಳು ಬಂದಿವೆ.ನಗಾರಿ ಬಾರಿಸಲು ಜನ ಸಿಗದೆ(?) ಮೋಟರೈಸ್ಡ್ ನಗಾರಿ,ಜಾಗಟೆ ಬಂದಿದೆ.ಅರ್ಚಕರು ತಮ್ಮದೇ ಆದ ಮೊಬೈಲ್ ನೆಟ್ ವರ್ಕ್ ಇಟ್ಟುಕೊಂಡಿದ್ದಾರೆ.ದೇವಸ್ಥಾನಗಳೂ ISO certified ಆಗಿವೆ!
ಯಾವುದೇ ದೇಶದ ಸಂಸ್ಕೃತಿಯೂ ಒಂದು ದಿನದಲ್ಲಿ ಉದಯವಾಗಿಲ್ಲ,ಹಾಗೆಯೇ ಒಂದು ದಿನದಲ್ಲಿ ಹಾಳೂ ಆಗಿಲ್ಲ.ಕಾಲ ಕಾಲಕ್ಕೆ ಸಂಸ್ಕೃತಿ ಬದಲಾಗಿದೆ,ಬದಲಾಗುತ್ತೆ ಅಷ್ಟೇ.ನಮಗೆ ಇಷ್ಟ ಇರಲಿ ಇಲ್ಲದೇ ಇರಲಿ!
ಪರಸ್ಪರ ಇಷ್ಟ ಇದ್ದು ತಬ್ಬಿಕೊಳ್ಳೋ ಪ್ರೇಮಿಗಳಿಂದ ಸಂಸ್ಕೃತಿ ಹಾಳಾಗ್ತಾ ಇದೆ ಅನ್ನೋ ನಮಗೆ ಅದೆಷ್ಟೊ ಹೆಂಗಸರು ಗಾರ್ಮೆಂಟ್ ಮತ್ತಿತರ ಕಂಪೆನಿಗಳಲ್ಲಿ ಲೈಂಗಿಕ ದೌರ್ಜನ್ಯಕ್ಕೀಡಾಗೋದು ಅರಿವಾಗೋದೇ ಇಲ್ಲ!ಮುಂಬೈನ ಕಾಮಾಟಿಪುರದಲ್ಲಿ ’ಇಷ್ಟ ಇಲ್ಲದೇ ಇದ್ರೂ’ ಮೈ ಮಾರಿ ಕೊಳ್ಳೋ ಹೆಂಗಸರು ಕಾಣಿಸೋದೇ ಇಲ್ಲ!
ಯಾಕಂದ್ರೆ ಅಂಥ ಸಮಸ್ಯೆಗಳು ದಿನಾ ಇರುತ್ತೆ.ವ್ಯಾಲೆಂಟೈನ್ಸ್ ಡೇ ಥರ ವರ್ಷಕ್ಕೊಂದು ಸಲ ಅಲ್ವಲ್ಲ!
ಅದ್ರೆ ಇದು ಸಾಧ್ಯ ಇಲ್ಲ ! ಛೇ ದೇವೇಗೌಡ್ರಿಗೆ ಸಪೋರ್ಟ್ ಮಾಡೋದಾ? (ವಿಶ್ವೇಶ್ವರ ಭಟ್ರಿಗೆ ಮಂಡೆ ಸಮ ಇಲ್ಲ!)
ಪ್ರೀತಿಯನ್ನು ಒಪ್ಪದೇ ಇದ್ದದ್ದಕ್ಕೆ acid ದಾಳಿಗೆ ತುತ್ತಾದ ಯುವತಿಯರ ಬೆಂಬಲ ನೀಡಲು ಈ ಸಂಘಟನೆಗಳಿಗೆ ಪುರುಸೊತ್ತಿದೆಯಾ ಅದೂ ಇಲ್ಲ.
ಇವರಿಗೆ ಸಿಕ್ಕಿದ್ದು ವರ್ಷಕ್ಕೊಂದು ದಿನ ಆಚರಿಸೋ ವ್ಯಾಲೆಂಟೈನ್ಸ್ ದಿನ.
ವ್ಯಾಲೆಂಟೈನ್ಸ್ ದಿನದ ಆಚರಣೆಯಿಂದ ಭಾರತೀಯ ಸಂಸ್ಕೃತಿಗೆ ಹೇಗೆ ಧಕ್ಕೆ ಉಂಟಾಗ್ತಿದೆಯೋ ಗೊತ್ತಾಗ್ತಿಲ್ಲ.ಗ್ರೀಟಿಂಗ್ಸ್ ಕಾರ್ಡ್ ಕಂಪೆನಿಗಳದ್ದೇ ಶಡ್ಯಂತ್ರ ಈ ವ್ಯಾಲೆಂಟೈನ್ಸ್ ಡೇ ಅನ್ನೋದು ಕೆಲವರ ಅಭಿಪ್ರಾಯ.ಅದನ್ನು ಒಪ್ಪಿದರೂ ಭಾರತೀಯ ಸಂಸೃತಿಗೆ ಧಕ್ಕೆ ಅಗೋ ಅಂಥದ್ದು ಏನೂ ಕಾಣಲ್ಲ.ನಾಳೆ ದೀಪಾವಳಿಗೆ ಗ್ರೀಟಿಂಗ್ಸ್ ಹೆಚ್ಚಾಗಿ ಖರ್ಚಾಗುತ್ತೆ ಅನ್ನೋ ರಿಪೋರ್ಟ್ ಬಂದ್ರೆ ಅದನ್ನೂ ಗ್ರೀಟಿಂಗ್ಸ್ ಕಾರ್ಡ್ ಮಾಫಿಯಾ ಅನ್ನೋಕಾಗುತ್ತಾ?ನಾಳೆ ಯಾರಾದ್ರೂ ಸತ್ತರೆ ಅವರ ಮನೆಯವರಿಗೆ ಶೋಕ ವ್ಯಕ್ತಪಡಿಸೋ ಅಂಥ ಗ್ರೀಟಿಂಗ್ಸ್(ಗ್ರೀಟ್ ಅನ್ನೋದು ತಪ್ಪಾಗುತ್ತೆ!)ಕಾರ್ಡ್ ಏನಾದ್ರೂ ಬಂದ್ರೆ ಅದನ್ನೂ ಮಾರ್ತಾರೆ ಈ ಕಂಪೆನಿಯವರು.
ಕೆಲವೊಂದು ಸಲ ಈ ವ್ಯಾಲೆಂಟೈನ್ಸ್ ಡೇ ಹಿಂದೆ ಗುಲಾಬಿ ತೋಟದವರ ಕೈವಾಡ ಇದ್ರೂ ಇರಬಹುದು ಅನ್ಸುತ್ತೆ ! ಯಾಕಂದ್ರೆ ತಮ್ಮ ಗುಲಾಬಿಗಳು ಖರ್ಚಾಗ್ಲಿ ಅನ್ನೋ ಕಾರಣಕ್ಕೇನಾದ್ರೂ ಈ ರೈತರು ಇಂಥ ದಿನವನ್ನು ಹುಟ್ಟು ಹಾಕಿರಬಹುದೇ? ’ಮುಕ್ತ ಮುಕ್ತದ’ ಶಶಿಯಂಥವರು ಹಾರಿಕಲ್ಚರ್ ಶುರು ಮಾಡಿದ ಹಾಗೆ,ಲಾಭ ಗಳಿಸೋದಕ್ಕೋಸ್ಕರ ಆಧುನಿಕ ರೈತರು ಇಂಥ ಗಿಮಿಕ್ ಏನಾದ್ರೂ ಶುರು ಮಾಡಿರಬಹುದೇ ? ಹಾಗಿದ್ರೆ ಅಂತ ರೈತರ ಹೊಟ್ಟೆ ತಣ್ಣಗಿರಲಿ ಪಾಪ.ಯಾವಾಗ್ಲೂ ರೈತರು ನಷ್ಟದಲ್ಲೇ ಇರೋದು.ಈ ವ್ಯಾಲೆಂಟೈನ್ಸ್ ಡೇ ನೆಪದಲ್ಲಾದ್ರೂ ಲಾಭ ಮಾಡಿಕೊಳ್ಳಲಿ ಬಿಡಿ.
ವ್ಯಾಲೆಂಟೈನ್ಸ್ ಡೇ ದಿನ ಸ್ವೇಚ್ಛೆ ಸಿಗುತ್ತೆ ಅನ್ನೋದು ಬಹಳಷ್ಟು ಜನರ ಕಂಪ್ಲೇಂಟು.ಆದರೆ ಹೆಬ್ಬಾಳ ಪಾರ್ಕ್ ,ಕಬ್ಬನ್ ಪಾರ್ಕ್ ಅಥವಾ ಬೆಂಗಳೂರಿನ ಯಾವುದೇ ಪಾರ್ಕ್ ಗೆ ಹೋದ್ರೂ ನಿತ್ಯ ಇಂಥ ಸ್ವೇಚ್ಛಾಚಾರಗಳೇ ನೋಡೋದಕ್ಕೆ ಸಿಗುತ್ತೆ.ಈ ಒಂದು ದಿನ ಅಂಥ ಅನಾಹುತ ಏನಾಗುತ್ತೋ ದೇವರೇ ಬಲ್ಲ.ಬಹುಷಃ ’ವ್ಯಾಲೆಂಟೈನ್ಸ್ ಡೇ ಆದ ಒಂಬತ್ತು ತಿಂಗಳ ನಂತರ ಚಿಲ್ಡ್ರನ್ಸ್ ಡೇ ಬರುತ್ತೆ’ ಅನ್ನೋ ಜೋಕನ್ನೇ ಪಾಪ ಇವರು ಸೀರಿಯಸ್ ಆಗಿ ತಗೊಂಡ್ರೋ ಏನೋ?
ನಮ್ಮ ಊರಲ್ಲೊಬ್ಬ ಸ್ನೆಹಿತರಿದ್ದಾರೆ.ಅವರಿಗೆ ರಕ್ಷಾಬಂಧನ ಮಾಡೋ ಬಿಸಿನೆಸ್!RSS ನವರೇ ಹೆಚ್ಚಾಗಿ ಬಳಸುವ ಕೇಸರಿ ಬಣ್ಣದ ರಕ್ಷಾಬಂಧನ ಅದು.ವರ್ಷಕ್ಕೆ ಒಂದು ದಿನ ಬರೋ ಈ ರಕ್ಷಾಬಂಧನ ಹಬ್ಬಕ್ಕೆ ಪಾಪ ಅವರು ವರ್ಷಪೂರ್ತಿ ತಯಾರಿ ನಡೆಸ್ತಾರೆ.
ನಮಗೆ ರಕ್ಷಾಬಂಧನ ಸಂಸ್ಕೃತಿ .ಆದರೆ ಪಾಪ ಅವರಿಗೆ ಅದು ಹೊಟ್ಟೆಪಾಡು,ಬಿಸಿನೆಸ್ ! ನಮಗೆ ದೇವಸ್ಥಾನಕ್ಕೆ ಹೋಗೋದು ಸಂಸ್ಕೃತಿ ಆದರೆ ಅರ್ಚಕರಿಗೆ ಅದು ಹೊಟ್ಟೆಪಾಡು.ಚಪ್ಪಲಿ ಹೊರಬಿಟ್ಟು ದೇವಸ್ಥಾನದ ಒಳಗೆ ಹೋಗೋದು ನಮ್ಮ ಸಂಸ್ಕೃತಿ ಆದ್ರೆ ಹೊರಗೆ ಚಪ್ಪಲಿ ಕಾಯೋ ಬಡ ಹುಡುಗನಿಗೆ ಅದು ಹೊಟ್ಟೆ ಪಾಡು.ಒಳಗೆ ಹಣ್ಣು ಕಾಯಿ ಮಾಡಿಸೋದು ನಮಗೆ ಸಂಸ್ಕೃತಿ ಆದರೆ ಹೊರಗೆ ಅದನ್ನು ಮಾರೋನಿಗೆ ಅದು ಹೊಟ್ಟೆಪಾಡು.ಮದುವೆಗೆ ವಾಲಗ ಊದಿಸೋದು ನಮ್ಮ ಸಂಸ್ಕೃತಿ,ವಾಲಗ ಊದೋನಿಗೆ ಅದು ಹೊಟ್ಟೆಪಾಡು.
ಹಿಂದೆ ಗ್ರಾಮಾಫೋನ್ ತಟ್ಟೆಯ ಭಕ್ತಿ ಗೀತೆ ಹಾಕುತ್ತಿದ್ದ ದೇವಸ್ಥಾನಗಳಿಗೆ ಇವತ್ತು MP3 ಪ್ಲೇಯರ್ ಗಳು ಬಂದಿವೆ.ನಗಾರಿ ಬಾರಿಸಲು ಜನ ಸಿಗದೆ(?) ಮೋಟರೈಸ್ಡ್ ನಗಾರಿ,ಜಾಗಟೆ ಬಂದಿದೆ.ಅರ್ಚಕರು ತಮ್ಮದೇ ಆದ ಮೊಬೈಲ್ ನೆಟ್ ವರ್ಕ್ ಇಟ್ಟುಕೊಂಡಿದ್ದಾರೆ.ದೇವಸ್ಥಾನಗಳೂ ISO certified ಆಗಿವೆ!
ಯಾವುದೇ ದೇಶದ ಸಂಸ್ಕೃತಿಯೂ ಒಂದು ದಿನದಲ್ಲಿ ಉದಯವಾಗಿಲ್ಲ,ಹಾಗೆಯೇ ಒಂದು ದಿನದಲ್ಲಿ ಹಾಳೂ ಆಗಿಲ್ಲ.ಕಾಲ ಕಾಲಕ್ಕೆ ಸಂಸ್ಕೃತಿ ಬದಲಾಗಿದೆ,ಬದಲಾಗುತ್ತೆ ಅಷ್ಟೇ.ನಮಗೆ ಇಷ್ಟ ಇರಲಿ ಇಲ್ಲದೇ ಇರಲಿ!
ಪರಸ್ಪರ ಇಷ್ಟ ಇದ್ದು ತಬ್ಬಿಕೊಳ್ಳೋ ಪ್ರೇಮಿಗಳಿಂದ ಸಂಸ್ಕೃತಿ ಹಾಳಾಗ್ತಾ ಇದೆ ಅನ್ನೋ ನಮಗೆ ಅದೆಷ್ಟೊ ಹೆಂಗಸರು ಗಾರ್ಮೆಂಟ್ ಮತ್ತಿತರ ಕಂಪೆನಿಗಳಲ್ಲಿ ಲೈಂಗಿಕ ದೌರ್ಜನ್ಯಕ್ಕೀಡಾಗೋದು ಅರಿವಾಗೋದೇ ಇಲ್ಲ!ಮುಂಬೈನ ಕಾಮಾಟಿಪುರದಲ್ಲಿ ’ಇಷ್ಟ ಇಲ್ಲದೇ ಇದ್ರೂ’ ಮೈ ಮಾರಿ ಕೊಳ್ಳೋ ಹೆಂಗಸರು ಕಾಣಿಸೋದೇ ಇಲ್ಲ!
ಯಾಕಂದ್ರೆ ಅಂಥ ಸಮಸ್ಯೆಗಳು ದಿನಾ ಇರುತ್ತೆ.ವ್ಯಾಲೆಂಟೈನ್ಸ್ ಡೇ ಥರ ವರ್ಷಕ್ಕೊಂದು ಸಲ ಅಲ್ವಲ್ಲ!
Friday, January 22, 2010
ಸ್ವಮೇಕ್----ರಿಮೇಕ್----ಕಿರಿಕ್....!
~~~~~~~~~~~~~~~~~~~~~~~ಸ್ವಮೇಕ್~~~~~~~~~~~~~~~~~~~~~~
'ರಾಮ್’ ತೆಲುಗಿನ ’ರೆಡಿ’ಯ ರಿಮೇಕ್ ಅಂತೆ. ’ಸೂರ್ಯಕಾಂತಿ’ ತೆಲುಗಿನ ’ಅತಿಥಿ’ಯ ಹಾಗೇ ಇದೆಯಂತೆ.ಗಣೇಶ್ ’ತ್ರೀ ಈಡಿಯಟ್ಸ್ ’ ಮಾಡ್ತಾರಂತೆ.ಈ ಸುದ್ದಿಗಳನ್ನೆಲ್ಲಾ ಕೇಳ್ತಾ ಇದ್ರೆ ನಖಶಿಖಾಂತ ಉರಿಯುತ್ತೆ.ಎಷ್ಟು ಅಂತ ಸಹಿಸೋದು ?
ಪರಭಾಷಾ ಚಿತ್ರಗಳ ಹಾವಳಿ ಬಗ್ಗೆ ನಮ್ಮ ಕನ್ನಡ ಚಿತ್ರರಂಗದವರು ಅಸಮಧಾನ ವ್ಯಕ್ತ ಪಡಿಸ್ತಾನೆ ಇರ್ತಾರೆ.ಆದ್ರೆ ಅವರಿಗೆ ರಿಮೇಕ್ ಮಾಡಲು ಪರಭಾಷಾ ಚಿತ್ರಗಳೇ ಬೇಕು.
ಮೊನ್ನೆ ಲೂಸ್ ಮಾದನ ಹೊಸ(?) ಚಿತ್ರ ’ರಾವಣ’ದ ಬಗ್ಗೆ ಚಿತ್ರದ ನಿರ್ಮಾಪಕರು ತಮ್ಮ ಅಭಿಪ್ರಾಯ ಹೇಳ್ತಾ ’ತಮಿಳಿನ ಧನುಷ್ ಗಿಂತ ನಮ್ಮ ಯೋಗೇಶ್ ಚೆನ್ನಾಗಿ ಮಾಡಿದ್ದಾನೆ ’ ಅಂದುಬಿಡೋದಾ?ಕನ್ನಡದ ಧನುಷ್ ಅಂತ ಹೆಸರು ಪಡೆದುಕೊಂಡಿದ್ದಕ್ಕೆ ಒಂದರ ಮೇಲೊಂದು ಧನುಷ್ ನ ಚಿತ್ರಗಳನ್ನು ಭಟ್ಟಿ ಇಳಿಸ್ತಾ ಇದ್ದಾನೆ ಯೋಗೀಶ !
ಸಧ್ಯದ ಮಟ್ಟಿಗೆ ಖುಶಿ ಪಡಲು ಒಂದೇ ಕಾರಣ ಚಲನಚಿತ್ರಗಳ ಸಂಗೀತ ! ಸಧ್ಯ ನಮ್ಮ ಸಂಗೀತ ನಿರ್ದೇಶಕರೇ ನಾವೆಲ್ಲಾ ಕೊಂಚ ತಲೆ ಎತ್ತಿ ಗರ್ವದಿಂದ ಓಡಾಡೋ ಹಾಗೆ ಮಾಡಿದ್ದಾರೆ.ಅವರಿಗೆ ಅಭಿನಂದನೆಗಳು.
ಕನ್ನಡ ನಿರ್ದೇಶಕರ ಬಳಿ ಕೇಳಿದ್ರೆ ’ ಕಥೆ ಇಲ್ಲ ಸ್ವಾಮಿ ’ ಅಂತಾರೆ.ನಾವೇನು ಕನ್ನಡದ್ದೇ ಕಥೆ ಬೇಕು ಅಂದಿದ್ದೀವಾ? ಯವುದೋ ಜಪಾನೀಸ್ ಭಾಷೆಯ ಕಥೆಯ ಅಧರಿತ ಚಿತ್ರವನ್ನೂ ಸೂಕ್ತ ತಿದ್ದುಪಡಿ ಮಾಡಿ ಬಳಸಬಹುದು.ಕನ್ನಡದಲ್ಲಿ ಬೇಕಾದಷ್ಟು ಕಥೆಗಾರರಿದ್ದಾರೆ.ಆದರೂ ಹಿತ್ತಲ ಗಿಡ ಮದ್ದಲ್ಲ ಅನ್ನೋದೆ ನಮ್ಮ ಅನಿಸಿಕೆ ಆದ್ರೆ ಬೇರೆ ಹಿತ್ತಲಿನ ಗಿಡವನ್ನು ಬಳಸಿ ಮದ್ದು ಮಾಡಿ.ಯಾಕೆ ಮದ್ದನ್ನೆ ತಗೊಂಡು ಬರ್ತೀರಾ?ತಮಿಳು ಕಥೆಯೇ ಬೇಕಿದ್ರೆ ತಮಿಳುನಾಡಿನ ಯಾವುದೋ ಕತೆಯನ್ನೆ ಚಿತ್ರ ಮಾಡಬಹುದು(ಕದಿಯೋದಲ್ಲ,ಕಥೆಗಾರನಿಗೆ ಸೂಕ್ತ ಸಂಭಾವನೆ ಕೊಟ್ಟು!).ಈ ರೀತಿ ಹೇಳಿದ್ರೆ ನಮ್ಮ ಬಳಿ ಅವರಿಗೆ ಕೊಡೋಕೆ ಕಾಸಿಲ್ಲ ಅಂತಾರೆ.
ಎಲ್ಲೋ ಫಾರಿನ್ ಗೆ ಹೋಗಿ ಅಲ್ಲಿ ಪಟ್ಟಾ ಪಟ್ಟಿ ಚಡ್ಡಿ ಹಾಕಿ ಡ್ಯಾನ್ಸ್ ಶೂಟ್ ಮಾಡೋಕೆ ಕಾಸಿದೆ. ಆದ್ರೆ ಕಥೆಗೆ ಕಾಸಿಲ್ಲ!!!
ಏನ್ ಮಾಡೋದ್ ಹೇಳಿ ನಮ್ ಹಣೆ ಬರಹ!
~~~~~~~~~~~~~~~~~~~~~~~ರಿಮೇಕ್~~~~~~~~~~~~~~~~~~~~~~
ಈ ಜನ ಯಾಕೆ ರಿಮೇಕ್ ಬಗ್ಗೆ ಕಿಡಿ ಕಾರ್ತಾರೋ ಗೊತ್ತಿಲ್ಲ ಕಣ್ರಿ!ನೋಡಿ ನಮಗೆ ಎಲ್ಲಾ ಭಾಷೆಗಳು ಅರ್ಥ ಆಗಲ್ಲ.ಹಾಗಾಗಿ ನಾವು ಆ ಭಾಷೆಯಲ್ಲಿ ತಯಾರಾಗಿರೋ ಸಿನೆಮಾ ನೋಡೋ ಸಾಧ್ಯತೆಗಳು ತೀರಾ ಕಮ್ಮಿ.ಅಂಥದ್ದರಲ್ಲಿ ನಮ್ಮ ಚಿತ್ರ ನಿರ್ಮಾಪಕರು ಪಾಪ ಅನ್ಯ ಭಾಷೆಯ ಬರೀ ಹಿಟ್ ಆಗಿರೋ ಚಿತ್ರಗಳನ್ನಷ್ಟೇ ನಮಗೆ ರಿಮೇಕ್ ಮಾಡಿ ತೋರಿಸಿದ್ರೆ ಏನ್ ನಷ್ಟ ಅಂತ ನಂಗೆ ಗೊತ್ತಾಗ್ತಿಲ್ಲ! ಅವರು ಆ ರೀತಿ ಮಾಡಿದ್ರಿಂದಲೇನಮಗೆ ’ಆಟೋಗ್ರಾಫ್’ ,’ಹುಚ್ಚ’ ,ಮುಂತಾದ ಒಳ್ಳೆಯ ಸಿನೆಮಾಗಳು ನೋಡೋಕೆ ಸಾಧ್ಯ ಆಗಿದ್ದು.
ನಮಗೆ ಗೋಬಿ ಮಂಚೂರಿ ತಿನ್ನೋವಾಗ ಅದು ರಿಮೇಕ್ ಅನ್ಸೋದೇ ಇಲ್ಲ! ನೂಡಲ್ಸ್ ತಿನ್ನೋವಾಗ್ಲೂ ’ಅದು ಚೈನಿಸ್ ಆಗಿರ್ಬಹುದು ಆದ್ರೆ ಮಾಡಿರೋದು ನಮ್ಮ ’ಅಡಿಗಾಸ್’ ನವ್ರೇ ತಾನೇ ’ಅಂತ ಬಾಯಿ ಚಪ್ಪರಿಸಿ ತಿಂತೀವಿ.ಯಾಕೆ ಗೋಬಿ ,ನೂಡಲ್ಸ್ ಗಳು ಚೈನೀಸ್ ನಮಗೆ ರಿಮೇಕ್ ಥರ ಅನ್ಸಲ್ಲ?ಹಾಗೇ ನೋಡೋದಕ್ಕೆ ಹೋದ್ರೆ ಕಾಫಿ,ಟೀ ಕೂಡ ನಮ್ಮ ದೇಶದ್ದಲ್ಲ.ಯಾರೋ ಕೊಟ್ಟ ರಿಮೇಕ್ ಸರಕು! ರೇಶ್ಮೆ ಕೂಡ ಎಲ್ಲಿಂದಲೋ ಭಾರತಕ್ಕೆ ಬಂದಿದ್ದು.ಆದ್ರೂ ನಾವು ಅದನ್ನು ಪ್ರೀತಿಯಿಂದಲೆ ಸ್ವೀಕರಿಸಿದ್ದೀವಿ.
ರಿಮೇಕ್ ಚಿತ್ರಗಳ ಬಗ್ಗೆ ಈ ಮುನಿಸು ತರವೇ?
~~~~~~~~~~~~~~~~~~~~~~~ಕಿರಿಕ್~~~~~~~~~~~~~~~~~~~~~~
ಎರಡೂ ನಾನೇ ಬರೆದಿದ್ದು ! ದಯವಿಟ್ಟು ಹೊಡೆಯೋಕೆ ಕೋಲು ಹುಡುಕ್ಬೇಡಿ!
ನಿಮಗೆ ಯಾವುದು ಬೇಕೋ ಅದನ್ನು ಮಾತ್ರ ಸ್ವೀಕರಿಸಿ .
'ರಾಮ್’ ತೆಲುಗಿನ ’ರೆಡಿ’ಯ ರಿಮೇಕ್ ಅಂತೆ. ’ಸೂರ್ಯಕಾಂತಿ’ ತೆಲುಗಿನ ’ಅತಿಥಿ’ಯ ಹಾಗೇ ಇದೆಯಂತೆ.ಗಣೇಶ್ ’ತ್ರೀ ಈಡಿಯಟ್ಸ್ ’ ಮಾಡ್ತಾರಂತೆ.ಈ ಸುದ್ದಿಗಳನ್ನೆಲ್ಲಾ ಕೇಳ್ತಾ ಇದ್ರೆ ನಖಶಿಖಾಂತ ಉರಿಯುತ್ತೆ.ಎಷ್ಟು ಅಂತ ಸಹಿಸೋದು ?
ಪರಭಾಷಾ ಚಿತ್ರಗಳ ಹಾವಳಿ ಬಗ್ಗೆ ನಮ್ಮ ಕನ್ನಡ ಚಿತ್ರರಂಗದವರು ಅಸಮಧಾನ ವ್ಯಕ್ತ ಪಡಿಸ್ತಾನೆ ಇರ್ತಾರೆ.ಆದ್ರೆ ಅವರಿಗೆ ರಿಮೇಕ್ ಮಾಡಲು ಪರಭಾಷಾ ಚಿತ್ರಗಳೇ ಬೇಕು.
ಮೊನ್ನೆ ಲೂಸ್ ಮಾದನ ಹೊಸ(?) ಚಿತ್ರ ’ರಾವಣ’ದ ಬಗ್ಗೆ ಚಿತ್ರದ ನಿರ್ಮಾಪಕರು ತಮ್ಮ ಅಭಿಪ್ರಾಯ ಹೇಳ್ತಾ ’ತಮಿಳಿನ ಧನುಷ್ ಗಿಂತ ನಮ್ಮ ಯೋಗೇಶ್ ಚೆನ್ನಾಗಿ ಮಾಡಿದ್ದಾನೆ ’ ಅಂದುಬಿಡೋದಾ?ಕನ್ನಡದ ಧನುಷ್ ಅಂತ ಹೆಸರು ಪಡೆದುಕೊಂಡಿದ್ದಕ್ಕೆ ಒಂದರ ಮೇಲೊಂದು ಧನುಷ್ ನ ಚಿತ್ರಗಳನ್ನು ಭಟ್ಟಿ ಇಳಿಸ್ತಾ ಇದ್ದಾನೆ ಯೋಗೀಶ !
ಸಧ್ಯದ ಮಟ್ಟಿಗೆ ಖುಶಿ ಪಡಲು ಒಂದೇ ಕಾರಣ ಚಲನಚಿತ್ರಗಳ ಸಂಗೀತ ! ಸಧ್ಯ ನಮ್ಮ ಸಂಗೀತ ನಿರ್ದೇಶಕರೇ ನಾವೆಲ್ಲಾ ಕೊಂಚ ತಲೆ ಎತ್ತಿ ಗರ್ವದಿಂದ ಓಡಾಡೋ ಹಾಗೆ ಮಾಡಿದ್ದಾರೆ.ಅವರಿಗೆ ಅಭಿನಂದನೆಗಳು.
ಕನ್ನಡ ನಿರ್ದೇಶಕರ ಬಳಿ ಕೇಳಿದ್ರೆ ’ ಕಥೆ ಇಲ್ಲ ಸ್ವಾಮಿ ’ ಅಂತಾರೆ.ನಾವೇನು ಕನ್ನಡದ್ದೇ ಕಥೆ ಬೇಕು ಅಂದಿದ್ದೀವಾ? ಯವುದೋ ಜಪಾನೀಸ್ ಭಾಷೆಯ ಕಥೆಯ ಅಧರಿತ ಚಿತ್ರವನ್ನೂ ಸೂಕ್ತ ತಿದ್ದುಪಡಿ ಮಾಡಿ ಬಳಸಬಹುದು.ಕನ್ನಡದಲ್ಲಿ ಬೇಕಾದಷ್ಟು ಕಥೆಗಾರರಿದ್ದಾರೆ.ಆದರೂ ಹಿತ್ತಲ ಗಿಡ ಮದ್ದಲ್ಲ ಅನ್ನೋದೆ ನಮ್ಮ ಅನಿಸಿಕೆ ಆದ್ರೆ ಬೇರೆ ಹಿತ್ತಲಿನ ಗಿಡವನ್ನು ಬಳಸಿ ಮದ್ದು ಮಾಡಿ.ಯಾಕೆ ಮದ್ದನ್ನೆ ತಗೊಂಡು ಬರ್ತೀರಾ?ತಮಿಳು ಕಥೆಯೇ ಬೇಕಿದ್ರೆ ತಮಿಳುನಾಡಿನ ಯಾವುದೋ ಕತೆಯನ್ನೆ ಚಿತ್ರ ಮಾಡಬಹುದು(ಕದಿಯೋದಲ್ಲ,ಕಥೆಗಾರನಿಗೆ ಸೂಕ್ತ ಸಂಭಾವನೆ ಕೊಟ್ಟು!).ಈ ರೀತಿ ಹೇಳಿದ್ರೆ ನಮ್ಮ ಬಳಿ ಅವರಿಗೆ ಕೊಡೋಕೆ ಕಾಸಿಲ್ಲ ಅಂತಾರೆ.
ಎಲ್ಲೋ ಫಾರಿನ್ ಗೆ ಹೋಗಿ ಅಲ್ಲಿ ಪಟ್ಟಾ ಪಟ್ಟಿ ಚಡ್ಡಿ ಹಾಕಿ ಡ್ಯಾನ್ಸ್ ಶೂಟ್ ಮಾಡೋಕೆ ಕಾಸಿದೆ. ಆದ್ರೆ ಕಥೆಗೆ ಕಾಸಿಲ್ಲ!!!
ಏನ್ ಮಾಡೋದ್ ಹೇಳಿ ನಮ್ ಹಣೆ ಬರಹ!
~~~~~~~~~~~~~~~~~~~~~~~ರಿಮೇಕ್~~~~~~~~~~~~~~~~~~~~~~
ಈ ಜನ ಯಾಕೆ ರಿಮೇಕ್ ಬಗ್ಗೆ ಕಿಡಿ ಕಾರ್ತಾರೋ ಗೊತ್ತಿಲ್ಲ ಕಣ್ರಿ!ನೋಡಿ ನಮಗೆ ಎಲ್ಲಾ ಭಾಷೆಗಳು ಅರ್ಥ ಆಗಲ್ಲ.ಹಾಗಾಗಿ ನಾವು ಆ ಭಾಷೆಯಲ್ಲಿ ತಯಾರಾಗಿರೋ ಸಿನೆಮಾ ನೋಡೋ ಸಾಧ್ಯತೆಗಳು ತೀರಾ ಕಮ್ಮಿ.ಅಂಥದ್ದರಲ್ಲಿ ನಮ್ಮ ಚಿತ್ರ ನಿರ್ಮಾಪಕರು ಪಾಪ ಅನ್ಯ ಭಾಷೆಯ ಬರೀ ಹಿಟ್ ಆಗಿರೋ ಚಿತ್ರಗಳನ್ನಷ್ಟೇ ನಮಗೆ ರಿಮೇಕ್ ಮಾಡಿ ತೋರಿಸಿದ್ರೆ ಏನ್ ನಷ್ಟ ಅಂತ ನಂಗೆ ಗೊತ್ತಾಗ್ತಿಲ್ಲ! ಅವರು ಆ ರೀತಿ ಮಾಡಿದ್ರಿಂದಲೇನಮಗೆ ’ಆಟೋಗ್ರಾಫ್’ ,’ಹುಚ್ಚ’ ,ಮುಂತಾದ ಒಳ್ಳೆಯ ಸಿನೆಮಾಗಳು ನೋಡೋಕೆ ಸಾಧ್ಯ ಆಗಿದ್ದು.
ನಮಗೆ ಗೋಬಿ ಮಂಚೂರಿ ತಿನ್ನೋವಾಗ ಅದು ರಿಮೇಕ್ ಅನ್ಸೋದೇ ಇಲ್ಲ! ನೂಡಲ್ಸ್ ತಿನ್ನೋವಾಗ್ಲೂ ’ಅದು ಚೈನಿಸ್ ಆಗಿರ್ಬಹುದು ಆದ್ರೆ ಮಾಡಿರೋದು ನಮ್ಮ ’ಅಡಿಗಾಸ್’ ನವ್ರೇ ತಾನೇ ’ಅಂತ ಬಾಯಿ ಚಪ್ಪರಿಸಿ ತಿಂತೀವಿ.ಯಾಕೆ ಗೋಬಿ ,ನೂಡಲ್ಸ್ ಗಳು ಚೈನೀಸ್ ನಮಗೆ ರಿಮೇಕ್ ಥರ ಅನ್ಸಲ್ಲ?ಹಾಗೇ ನೋಡೋದಕ್ಕೆ ಹೋದ್ರೆ ಕಾಫಿ,ಟೀ ಕೂಡ ನಮ್ಮ ದೇಶದ್ದಲ್ಲ.ಯಾರೋ ಕೊಟ್ಟ ರಿಮೇಕ್ ಸರಕು! ರೇಶ್ಮೆ ಕೂಡ ಎಲ್ಲಿಂದಲೋ ಭಾರತಕ್ಕೆ ಬಂದಿದ್ದು.ಆದ್ರೂ ನಾವು ಅದನ್ನು ಪ್ರೀತಿಯಿಂದಲೆ ಸ್ವೀಕರಿಸಿದ್ದೀವಿ.
ರಿಮೇಕ್ ಚಿತ್ರಗಳ ಬಗ್ಗೆ ಈ ಮುನಿಸು ತರವೇ?
~~~~~~~~~~~~~~~~~~~~~~~ಕಿರಿಕ್~~~~~~~~~~~~~~~~~~~~~~
ಎರಡೂ ನಾನೇ ಬರೆದಿದ್ದು ! ದಯವಿಟ್ಟು ಹೊಡೆಯೋಕೆ ಕೋಲು ಹುಡುಕ್ಬೇಡಿ!
ನಿಮಗೆ ಯಾವುದು ಬೇಕೋ ಅದನ್ನು ಮಾತ್ರ ಸ್ವೀಕರಿಸಿ .
Monday, January 4, 2010
ರಣ್...

ಮತ್ತೊಂದು ಹಿಂದಿ ಚಿತ್ರ ತುಂಬಾ ನಿರೀಕ್ಷೆಯನ್ನು ಹುಟ್ಟಿಸಿದೆ!
’ರಣ್ ’ ಚಿತ್ರ ಬಿಡುಗಡೆಯಾಗೋದನ್ನೇ ಕಾಯ್ತಾ ಇದ್ದೀನಿ ನಾನು.ಚಿತ್ರದ trailers ತುಂಬಾ ಕುತೂಹಲ ಹುಟ್ಟಿಸಿದೆ.'Next time when you watch News ,think again ' ಅನ್ನೋ ಬುದ್ಧಿಮಾತು ಕೂಡಾ ಬರ್ತಾ ಇದೆ ಟ್ರೇಲರ್ ನಲ್ಲಿ.ರಣ್ ಚಿತ್ರ ಸುದ್ದಿ ಮಾಧ್ಯಮದ ಹುಳುಕುಗಳನ್ನು ತೋರಿಸುವಲ್ಲಿ ಬಹುಷಃ ಯಶಸ್ವಿಯಾಗಬಹುದೇನೋ.
ಅಮಿತಾಬ್ ನಟಿಸಿರೋದ್ರಿಂದ ಕೊಟ್ಟ ಕಾಸಿಗೇನೂ ಮೋಸವಾಗಲಾರದು!ಚಿತ್ರದ ಇನ್ನೊಂದು ಆಕರ್ಷಣೆ ’ನಮ್ಮ’ ಸುದೀಪ್! ’ಫೂಂಕ್’ ಚಿತ್ರದಲ್ಲಿ ತಮ್ಮ ಉತ್ತಮ ಅಭಿನಯದಿಂದ ಎಲ್ಲರ ಮನ ಗೆದ್ದಿರೋ ಕಿಚ್ಚ ’ರಣ್’ ಸಿನೆಮಾದಿಂದ ಖಾಯಂ ಆಗಿ ಬಾಲಿವುಡ್ ಕಡೆ ವಲಸೆ ಹೋಗದಿರಲಿ ಅನ್ನೋದೇ ಹಾರೈಕೆ(ಹಾರೈಕೆ ಕೆಟ್ಟದಾ ಒಳ್ಳೆಯದಾ ಗೊತ್ತಾಗ್ತಿಲ್ಲ!)
ಚಿತ್ರದ ಟೈಟಲ್ ಹಾಡಿನ ಬಗ್ಗೆ ಮಾತ್ರ ನಂದೂ ತಕರಾರಿದೆ.ರಾಷ್ಟ್ರಗೀತೆ ಯನ್ನು ತಿರುಚುವ ಹಾಳು ಐಡಿಯಾ ಅದ್ಯಾವನು ಕೊಟ್ಟನೋ ದೇವರಿಗೇ ಗೊತ್ತು !ಇದನ್ನೇ ನ್ಯೂಸ್ ಚ್ಯಾನೆಲ್ ಗಳು ಅಸ್ತ್ರವಾಗಿ ಬಳಸುವ ಸಾಧ್ಯತೆಗಳಿವೆ.
ಬಾಲಿವುಡ್ ನ ಜನ ಸದಾ ಕಾಂಟ್ರೋವರ್ಶಿಯಲ್ ವಸ್ತುಗಳನ್ನಿಟ್ಟುಕೊಂಡು ಸಿನೆಮಾ ಮಾಡ್ತಾ ಇರ್ತಾರೆ.ಹಾಗಾಗಿ ನಮಗೆ ಕೆಲವು ಕರಾಳ ಮುಖಗಳ ದರ್ಶನ ಆಗ್ತಾ ಇರುತ್ತೆ.ಆದ್ರೆ ನಮ್ಮಲ್ಲಿ ಪಾಪ ’ ಮಠ ’ ದ ಗುರುಪ್ರಸಾದ್ ಕಾಂಟ್ರೋವರ್ಷಿಯಲ್ ಸಬ್ಜೆಕ್ಟ್ ಕೈಗೆತ್ತಿ ಕೊಂಡಾಗಲೇ ಹೀರೋ ಎಸ್ಕೇಪ್ ಅಂದು ಬಿಟ್ಟಿದ್ದಾರೆ.ಆದರೆ ಗುರು ಹಿಂಜರಿದಿಲ್ಲ.
'ಡೈರೆಕ್ಟರ್ ಸ್ಪೆಷಲ್ ’ ನ ಡೈರೆಕ್ಟರ್ ಇನ್ನೂ ಸ್ಪೆಶಲ್!
Photo Courtesy :http://www.moviethread.com/
Thursday, December 31, 2009
Saturday, December 26, 2009
ಶಿಶಿರದ ಜೊತೆಯಲಿ ತ್ರೀ ಈಡಿಯಟ್ಸ್...

ಈ ಶುಕ್ರವಾರ ಮೂರು ಚಲನಚಿತ್ರ ನೋಡಿದೆ !
ಬೆಳಗಿನ ಶೋ ’ಶಿಶಿರ’.ಮ್ಯಾಟನಿ ಶೋ ’ಮಳೆಯಲಿ ಜೊತೆಯಲಿ’ ರಾತ್ರಿ ಶೋ ’ತ್ರೀ ಈಡಿಯಟ್ಸ್’!!!
’ಶಿಶಿರ’ ತುಂಬಾ ಉತ್ತಮ ಪ್ರಯತ್ನ.ಛಾಯಾಗ್ರಹಣ,ನಿರ್ದೇಶನ,ಸಂಗೀತ, ನಾಯಕ ಯಶಸ್ ನ ನಟನೆ ಎಲ್ಲವೂ ಚೆನ್ನಾಗಿತ್ತು.ಚಿತ್ರಕಥೆಯೊಂದನ್ನು ಬಿಟ್ಟು:( ಸಸ್ಪೆನ್ಸ್ ಚಿತ್ರಕ್ಕಿರಬೇಕಾದ ಕೆಲವು ಅಂಶಗಳು ಕಡಿಮೆ ಆಗಿದ್ದೇ ಎಡವಟ್ಟು.ನಿರ್ದೇಶಕರು ಮುಂದಿನ ಪ್ರಯತ್ನದಲ್ಲಿ ಖಂಡಿತ ಯಶಸ್ವಿಯಾಗ್ತಾರೆ ಅನ್ನೋ ಭರವಸೆ ನನಗಿದೆ.
ಬಹುನಿರೀಕ್ಷಿತ ’ತ್ರೀ ಈಡಿಯಟ್ಸ್ ’ ಮಾತ್ರ ನಿರೀಕ್ಷೆಗೆ ಮೀರಿ ಚೆನ್ನಾಗಿದೆ.ತುಂಬಾನೇ ಖುಷಿ ಕೊಟ್ಟಿತು ಇಡೀ ಚಿತ್ರ.ಒಂದೇ ಒಂದು ನಿಮಿಷ ಬೋರ್ ಹೊಡೆಸಿಲ್ಲ.ಅದ್ಭುತ ನಿರ್ದೇಶನ,ಅದ್ಭುತ ಕಥೆ,ಅದ್ಭುತ ಹಾಡುಗಳು ಹಾಗೆಯೇ ತುಂಬಾ ಒಳ್ಳೆಯ ಸಂದೇಶ.
ಬೊಮನ್ ಇರಾನಿ ಸಂಪೂರ್ಣ ವಿಭಿನ್ನವಾಗಿ ನಟಿಸಿದ್ದಾರೆ.ಬಾಡಿ ಲ್ಯಾಂಗ್ವೇಜ್ ಆಗಲಿ,ಡೈಲಾಗ್ ಡೆಲಿವರಿಯಾಗಲಿ ಎಲ್ಲವೂ ಸೂಪರ್! ಬೊಮನ್ ರ ನಟನೆ ’ಮುನ್ನಾಭಾಯಿಯ’ ಥರದ್ದೇ ಇರಬಹುದೇನೊ ಅಂದುಕೊಂಡವರಿಗೆ ದೊಡ್ಡ ಅಚ್ಚರಿ ಕೊಡ್ತಾರೆ ಅವರು.
ಚೇತನ್ ಭಗತ್ ರ ಕಾದಂಬರಿಯ ಎಳೆಯನ್ನಷ್ಟೇ ಹಿಡಿದು ಚಿತ್ರ ಮಾಡಿದರೂ ಕಾದಂಬರಿಯ ಆಶಯಕ್ಕೆ ಒಂದಿಷ್ಟೂ ಚ್ಯುತಿ ಬಂದಿಲ್ಲ ಬದಲಾಗಿ ಸರಿಯಾದ ನ್ಯಾಯ ದೊರಕಿದೆ.ಭಾರತದ ಶಿಕ್ಷಣ ವ್ಯವಸ್ಥೆಯ ಬಗ್ಗೆ ಎಲ್ಲರೂ ಮತ್ತೊಮ್ಮೆ ಯೋಚಿಸುವಂತೆ ಮಾಡುತ್ತೆ ಈ ಚಿತ್ರ.
ಆಮೀರ್ ,ಶರ್ಮನ್ ಜೋಷಿ,ಮಾಧವನ್,ಬೊಮನ್,ಕರೀನಾ ಗೆ ಸರಿ ಸಾಟಿಯಾಗಿ ಓಮಿ ಅನ್ನೊ ನಟ ಅದ್ಭುತವಾಗಿ ನಟಿಸಿದ್ದಾನೆ.ಚಿತ್ರದುದ್ದಕ್ಕೂ ನಕ್ಕು ನಲಿಸುವ ಸಂಭಾಷಣೆಗಳು.
ಶಿಕ್ಷಣ ಬರೀ ಮಾರ್ಕ್ಸ್ ಗಳಿಸೋದಷ್ಟೇ ಕಲಿಸುತ್ತೆ ,ಬದುಕುವುದನ್ನಲ್ಲ!
Sunday, December 20, 2009
ತ್ರೀ ಈಡಿಯಟ್ಸ್...

Five Point Some One-What not to do at IIT ಇದು ಚೇತನ್ ಭಗತ್ ರ ಚೊಚ್ಚಲ ಕೃತಿ.ಇದರ ಕಥಾವಸ್ತು ದೇಶದಲ್ಲೇ ಅತ್ತ್ಯುತ್ತಮ ಇಂಜಿನಿಯರಿಂಗ್ ಕಾಲೇಜ್ ಅನಿಸಿಕೊಂಡಿರುವ ಐಐಟಿ ದಿಲ್ಲಿಯ ಮೂರು ಹುಡುಗರು.ಲೇಖಕರೇ ಹೇಳುವಂತೆ ಈ ಕೃತಿ ಐಐಟಿಗೆ ಯಾವ ರೀತಿ ಸೇರಬಹುದು ಅನ್ನೋದರ ಬಗ್ಗೆ ಖಂಡಿತ ಅಲ್ಲ.ಈ ಕೃತಿ ಆ ಮೂರು ಹುಡುಗರು ಐಐಟಿಯಲ್ಲಿ ತಮ್ಮ ಜೀವನದ ಪ್ರಮುಖ ಘಟ್ಟವೊಂದನ್ನು ದಾಟಲು ಯಾವ ರೀತಿ ಹೆಣಗಿದರು ,ನಮ್ಮ ದೇಶದ ಶೈಕ್ಷಣಿಕ ಪದ್ದತಿ ಯಾವ ರೀತಿ ವಿದ್ಯಾರ್ಥಿಗಳ ಜೀವನವನ್ನು ರೂಪಿಸುವುರಲ್ಲಿ ಎಡವುತ್ತಿದೆ ಅನ್ನೋದರ ಬಗ್ಗೆ ಬೆಳಕು ಚೆಲ್ಲುತ್ತದೆ.ಇಡೀ ಕಥಾವಸ್ತು ನವಿರಾದ ಹಾಸ್ಯವನ್ನೊಳಗೋಂಡಿರುವುದರಿಂದ ಯುವ ಜನರ ಮನಸ್ಸನ್ನು ಗೆಲ್ಲುವುದರಲ್ಲಿ ಯಶಸ್ವಿಯಾಗಿದೆ.ಐಐಟಿಗಳಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಸಾಮರ್ಥ್ಯವನ್ನು GPA ಗಳಲ್ಲಿ ಅಳೆಯುತ್ತಾರೆ .ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿಯ GPA ಒಂಭತ್ತು ಮತ್ತೆ ಹತ್ತರ ಮಧ್ಯೆ ಇರುತ್ತದೆ.ನಮ್ಮ ಕಥಾನಾಯಕರ GPA ಯಾವತ್ತೂ ಐದರ ಆಸು ಪಾಸಿರುವುದರಿಂದ ಅವರು ಐಐಟಿಗಳಲ್ಲಿ five pointers ಅನ್ನಿಸಿಕೊಳ್ಳುತ್ತಾರೆ.
ಐಐಟಿಗಳಿಗೆ ದಾಖಲಾಗುವ ಪ್ರತಿ ವಿದ್ಯಾರ್ಥಿಯೂ ಅತ್ಯಂತ ಪ್ರತಿಭಾವಂತರಾಗಿರುತ್ತಾನೆ.ಅದಾಗ್ಯೂ ಈ ವಿದ್ಯಾರ್ಥಿಗಳು ಅಷ್ಟು ಕಷ್ಟ ಪಡಲು ಕಾರಣವೇನು ಅನ್ನೋದೇ ಕಥೆಯ ತಿರುಳು.ಈ ಕಥೆ ಹರಿ ,ಆಲೋಕ್ ಹಾಗೂ ರಯಾನ್ ಒಬೆರಾಯ್ ಅನ್ನೋ ಮೂವರು ಹುಡುಗರ ಸುತ್ತಲೇ ಸುತ್ತುತ್ತದೆ.ಹರಿ ಈ ಕಥೆಯ ಸೂತ್ರಧಾರ,ನೋಡೋದಕ್ಕೆ ಡುಮ್ಮನೆ ಅಷ್ಟೇನೂ ಚೆನ್ನಾಗಿರೋದಿಲ್ಲ.ಇವನಿಗೆ ಯಾವಾಗಲೂ ತನ್ನ ಬಗ್ಗೆ ಕೀಳರಿಮೆ .ಗೆಳೆಯ ರಯಾನ್ ಥರ ಧೈರ್ಯಶಾಲಿಯಾಗ್ಬೇಕು ,ಅವನೆ ರೀತಿ ಪರ್ಸನಾಲಿಟಿ ಬೆಳೆಸಿಕೊಳ್ಳಬೇಕು ಅನ್ನೋ ಆಸೆ!ರಯಾನ್ ಒಬೆರಾಯ್ ಶ್ರೀಮಂತರ ಮಗ.ಸಾಂಪ್ರದಾಯಿಕ ಶಿಕ್ಷಣ ಪದ್ದತಿಯ ಬಗ್ಗೆ ಯಾವಗಲೂ ಇವನಿಗೆ ಅಸಮಧಾನ.ಅವನದ್ದೇ ಶೈಲಿಯಲ್ಲಿ ಬದುಕುವವನು.ಗೆಳೆತನದ ವಿಷಯಕ್ಕೆ ಬಂದರೆ ಮಾತ್ರ ಜೀವಕ್ಕೆ ಜೀವ ಕೊಡುವಂಥ ಗೆಳೆಯ .ಯಾವತ್ತೂ ಗೆಳೆಯರಾದ ಹರಿ ಮತ್ತೆ ಆಲೋಕ್ ಕಷ್ಟದಲ್ಲಿದ್ದರೆ ಇವನು ಅಲ್ಲಿ ಹಾಜರ್!ಆಲೋಕ್ ತುಂಬಾ ಬುದ್ಧಿವಂತ ಹುಡುಗ.ಬಡ ಕುಟುಂಬದಿಂದ ಬಂದಿರುತ್ತಾನೆ.ಇವನ ತಂದೆ ಪಾರ್ಶ್ವವಾಯು ಪೀಡಿತರಾಗಿದ್ದರಿಂದ ಕುಟುಂಬದ ಹೊಣೆಯನ್ನು ಆಲೋಕ್ ನ ತಾಯಿ ನೋಡಿಕೊಳ್ಳುತ್ತಿರುತ್ತಾರೆ.ಆಲೋಕ್ ಬೇಗ ಐಐಟಿಯಿಂದ ಡಿಗ್ರಿ ಮುಗಿಸಿ ಕೆಲಸಕ್ಕೆ ಸೇರಿಕೊಂಡು ತನ್ನ ತಂಗಿಯ ಮದುವೆ ನಡೆಸಿಕೊಡಲಿ,ತಂದೆ ಆರೋಗ್ಯದ ಖರ್ಚು ನೋಡಿಕೊಳ್ಳಲಿ ಅನ್ನೋದು ಅವನ ತಾಯಿಯ ಆಸೆ.
ಈ ಮೂವರು ವಿದ್ಯಾರ್ಥಿಗಳು ತಮ್ಮ GPA ಉತ್ತಮಪಡಿಸಲು ಹೆಣಗಾಡೋದು,ಹಾಸ್ಟೆಲ್ ಜಗತ್ತಿನ ರೋಚಕ ಘಟನೆಗಳು.ಹರಿ ತನ್ನ ಪ್ರೊಫೆಸರ್ ಚೆರಿಯನ್ ರ ಮಗಳನ್ನು ಪ್ರೀತಿಸೋದು,ಪ್ರಶ್ನೆ ಪತ್ರಿಕೆ ಕದಿಯಲು ಹೋಗಿ ಸಿಕ್ಕಿ ಬೀಳೋದು ಮುಂತಾವುದನ್ನು ಚೇತನ್ ಭಗತ್ ನವಿರಾದ ಹಾಸ್ಯದೊಂದಿಗೆ ಚಿತ್ರಿಸಿದ್ದಾರೆ.
ಈ ಪುಸ್ತಕ ಈಗ ಹಿಂದಿಯಲ್ಲಿ ಚಲನಚಿತ್ರವಾಗಿ ಬರ್ತಾ ಇದೆ ’ತ್ರೀ ಈಡಿಯಟ್ಸ್ ’ ಅನ್ನೋ ಹೆಸರಲ್ಲಿ .ಆಮೀರ್ ಖಾನ್ ನಟನೆಯ ಈ ಚಿತ್ರ ಬೆಂಗಳೂರಿನ ಐಐಎಮ್ ನಲ್ಲಿ ಚಿತ್ರೀಕರಣಗೊಂಡಿದೆ.
ಈ ಪುಸ್ತಕ ನಾನು ಫುಟ್ ಪಾತ್ ನಲ್ಲಿ ತಗೊಂಡಿದ್ದೆ.ಪೈರೇಟೆಡ್ ಪುಸ್ತಕಗಳ ಬಗ್ಗೆ ನನಗೆ ಅಷ್ಟಾಗಿ ಗೊತ್ತಿರಲಿಲ್ಲ.ಎಲ್ಲರೂ ತಮ್ಮ ಆರ್ಕುಟ್ ಪ್ರೊಫೈಲ್ ನಲ್ಲಿ ಚೇತನ್ ಭಗತ್ ರ ಈ ಪುಸ್ತಕದ ಉಲ್ಲೇಖ ಮಾಡಿದ್ದರಿಂದ ನಾನೂ ಈ ಪುಸ್ತಕ ಕೊಳ್ಳಲು ಉತ್ಸುಕನಾಗಿದ್ದೆ.ಬೆಲೆ ಎಷ್ಟು ಅಂತ ಕೇಳಿದ್ದಕ್ಕೆ 300Rs ಅಂದಿದ್ದ ಮಾರುವವ.ಬಹಳ ಚರ್ಚೆ ಮಾಡಿ 150Rs ಗೆ ತಗೊಂಡಿದ್ದೆ ಪುಸ್ತಕವನ್ನು(ಅದೂ ಪೈರೇಟೆಡ್).
ಚೇತನ್ ಭಗತ್ ರ ಎರಡನೇ ಪುಸ್ತಕ ಕೊಂಡ ಮೇಲಷ್ಟೇ ನನಗೆ ಗೊತ್ತಾಗಿದ್ದು ಚೇತನ್ ರ ಎಲ್ಲಾ ಪುಸ್ತಕಗಳ ಬೆಲೆ 95Rs ಅನ್ನೋದು!
ಕುತೂಹಲದಿಂದ ಕಾಯ್ತಾ ಇದ್ದೇನೆ ಚಿತ್ರ ಬಿಡುಗಡೆಗೆ.
Saturday, October 31, 2009
ಇದು ಎಂಥ ಮಾರಾಯ್ರೇ...
ಜನ ಯಾರನ್ನಾದರೂ ಹೇಗೆ ನೆನಪಿಟ್ಟುಕೋತಾರೆ?ನನಗೆ ಗೊತ್ತಿರೋ ಪ್ರಕಾರ ಜನರು ಯಾರದಾದರೂ ಮುಖವನ್ನು ನೋಡಿ ನೆನಪಿಟ್ಟುಕೋತಾರೆ.ಹಾಗಾಗಿ ’ನನಗೆ ಅವರ ಮುಖ ಪರಿಚಯವಿದೆ’ ಅನ್ನೋ ಮಾತು ಬಂದಿದೆ.
ಇತ್ತೀಚೆಗೆ ರಾತ್ರಿ ಟಿ.ವಿ ನೋಡುತ್ತಿದ್ದಾಗ ಒಂದು ಕಾರ್ಯಕ್ರಮ ನೋಡಿದೆ.ಅದು ಸೆಲೆಬ್ರಿಟಿಯೊಬ್ಬರನ್ನು ಗುರುತಿಸುವ ಸ್ಪರ್ಧೆ.ಮಾಮೂಲಿಯಾಗಿ ಇಂಥ ಸ್ಪರ್ಧೆಗಳಲ್ಲಿ ಅಮಿತಾಬ್ ಬಚ್ಚನ್ ,ಅಕ್ಷಯ್ ಕುಮಾರ್ ಇಂಥ ಖ್ಯಾತ ನಾಮರ ಮುಖವನ್ನು ಮಬ್ಬುಗೊಳಿಸಿ -’ಗುರುತಿಸಿ ಹಣ ಗೆಲ್ಲಿ ’ ಅನ್ನೋದು ಮಾಮೂಲಿಯಾಗಿ ಬರ್ತಾ ಇತ್ತು.
ಆದರೆ ಇತ್ತೀಚೆಗೆ ಟ್ರೆಂಡ್ ಬದಲಾಗಿದೆ!
ಮೇಲಿನ ಚಿತ್ರ ನೋಡಿ.ಇಂಥ ಕಾರ್ಯಕ್ರಮ ಪ್ರಸಾರ ಮಾಡುತ್ತಿರೋರ ’ಎದೆ’ಗಾರಿಕೆ ಮೆಚ್ಚಬೇಕಾದದ್ದೇ!
ಏನೋ ಪಮೇಲಾ ಅಂಡರ್ಸನ್,ಶಕೀಲಾ ಅಂಥವರನ್ನು ತೋರಿಸಿದ್ರೆ ಗುರುತು ಹಿಡಿಯಬಹುದು .ಎಲ್ಲರನ್ನೂ ಗುರುತಿಸೋ ಬಗೆ ಏನೋ??
ಈ ಸೆಲೆಬ್ರಿಟಿಯ ಗುರುತು ಸಿಕ್ಕಿದರೆ ನನಗೂ ತಿಳಿಸಿ ಪ್ಲೀಸ್(ಯಾವುದೇ ಬಹುಮಾನವಿರುವುದಿಲ್ಲ!)
Friday, September 18, 2009
ಸೀಟ್ ಬೇಕಾ ಸೀಟ್....?
ಬೆಂಗಳೂರಿನ ಜನರಿಗೆ ಯಾವಾಗ ತುಂಬಾ ಖುಷಿಯಾಗುತ್ತೆ ಅಂತ ಒಮ್ಮೆ ಕೇಳಿ ನೋಡಿ.ಎಲ್ಲರ ಉತ್ತರ ಒಂದೇ ಆಗಿರುತ್ತೆ.’ ಬಿ.ಎಂ.ಟಿ.ಸಿ ಬಸ್ ನಲ್ಲಿ ಸೀಟ್ ಸಿಕ್ಕಾಗ !’ ನೀವು ಮಂಗಳೂರಿನವರೋ ಅಥವ ಗದಗದವರೋ ಆಗಿದ್ರೆ ಈ ಮಾತು ಕೇಳಿ ಒಮ್ಮೆ ಪುಸಕ್ಕನೆ ನಕ್ಕರೂ ನಗಬಹುದು.ಆದರೆ ಬೆಂಗಳೂರಿನ ಬಸ್ ಗಳಲ್ಲಿ ಪ್ರಯಾಣಿಸಿ ಅಭ್ಯಾಸ ಇದ್ದರೆ ನೀವು ನಗೋದು ಸಾಧ್ಯವೇ ಇಲ್ಲ ಅಂತ ನನಗೆ ಗೊತ್ತು.
ಬಹುಷ ಯಡಿಯೂರಪ್ಪನವರಿಗೆ ಮುಖ್ಯಮಂತ್ರಿ ಸೀಟ್ ಸಿಕ್ಕಿದಾಗ ಕೂಡಾ ಅಷ್ಟು ಖುಷಿಯಾಗಿರಲ್ಲ,ಅಷ್ಟು ಖುಷಿ ಬಿ.ಎಮ್.ಟಿ.ಸಿ ಬಸ್ ನಲ್ಲಿ ಸೀಟ್ ಸಿಕ್ಕಾಗ ಆಗುತ್ತೆ.ನೀವು ಧಡೂತಿ ವ್ಯಕ್ತಿ ಆಗಿದ್ದಲ್ಲಿ ಬಹುಷ ಮೀಸೆ ಅಡಿಯಲ್ಲಿ ನಗುತ್ತಿರಬಹುದು ,’ನನ್ನಂಥ ಧಡೂತಿ ವ್ಯಕ್ತಿಗೆ ಸೀಟ್ ಸಿಗೋದು ಏನ್ ಮಹಾ ಕಷ್ಟ .ನಾಲ್ಕು ಜನರನ್ನು ಒಂದೇ ಕೈಯಲ್ಲಿ ಎತ್ತಿ ಬಿಸಾಕಿ ಸೀಟ್ ಪಡ್ಕೊಳ್ತೀನಿ ’ ಅಂತ.ಆದ್ರೆ ತಮಾಷೆ ಇರೋದು ಅಲ್ಲೇ ಸ್ವಾಮಿ ! ಜನ ನಿಮ್ಮ ಕೈಗೆ ಸಿಕ್ಕಿದ್ರೆ ತಾನೇ ಬಿಸಾಕೋದು ?ಅವರು ಪುಸಕ್ಕನೆ ನಿಮ್ಮ ಕಾಲ ಕೆಳಗಿಂದ ತೂರಿ ಸೀಟ್ ಪಡೆದಿಲ್ಲ ಅಂದ್ರೆ ಆಮೇಲೆ ಹೇಳಿ.
ಸುಮಾರು ಏಳು ವರ್ಷಗಳಿಂದ ಬೆಂಗಳೂರಿನಲ್ಲಿ ಸೀಟ್ ಗಾಗಿ(ಬಸ್ ನಲ್ಲಿ!) ಯಡಿಯೂರಪ್ಪನವರಷ್ಟೇ ಕಷ್ಟ ಪಟ್ಟಿರೋದ್ರಿಂದ ಬಹುಷ ನನ್ನ ಅನುಭವ ಹಂಚಿಕೊಂಡರೆ ನಿಮಗೆ ಸಹಾಯವಾಗಬಹುದೇನೋ?ಆದರೆ ಒಂದೇ ಒಂದು ಕಂಡೀಶನ್ ! ಬಸ್ ನಲ್ಲಿ ನಾನೇನಾದ್ರೊ ನಿಮಗೆ ಸಿಕ್ಕರೆ ನನಗೆ ಸೀಟು ಬಿಟ್ಟುಕೊಡಬೇಕು.ನನ್ನ ಮೇಲೆ ನನ್ನ ತಂತ್ರಗಳನ್ನು ಪ್ರಯೋಗಿಸಬಾರದು!
ಮೊದಲೇ ಹೇಳಿದ ಹಾಗೆ ತೆಳ್ಳಗಿದ್ದರೆ ಮಾತ್ರ ಇಲ್ಲಿರುವ ತಂತ್ರಗಳನ್ನು ಉಪಯೋಗಿಸಬಹುದು.ಹಾಗಾಗಿ ನೀವೇನಾದ್ರೂ ಸ್ಥೂಲಕಾಯಿಯಾಗಿದ್ದಲ್ಲಿ ದಯವಿಟ್ಟು ಈ ಲೇಖನದ ಬದಲು ’ತೆಳ್ಳಗಾಗೋದು ಹೇಗೆ ?’ ಅನ್ನೋ ಲೇಖನವನ್ನು ಮೊದಲು ಓದಿ.ಸೀಟ್ ನಲ್ಲಿ ಆರಾಮಾಗಿ ಕುಳಿತು ಪ್ರಯಾಣ ಮಾಡಬೇಕೆಂದರೆ ತುಸು ತಯಾರಿ ಬೇಕಾಗುತ್ತೆ.ಬಸ್ ಸ್ಟ್ಯಾಂಡ್ ನಲ್ಲಿ ಕಲ್ಲುಬೆಂಚು ಹಾಕಿದ್ದಾರೆ ಅಂತ ನೀವೇನಾದ್ರೂ ಅದರಲ್ಲಿ ಕುಳಿತು ಹೋಗೋ ಬರೋ ಹುಡುಗಿಯರ ಅಂದ ಸವೀತಾ ಇದ್ರೆ ರಾತ್ರಿ ಇಡೀ ಬಸ್ ಸ್ಟ್ಯಾಂಡ್ ನಲ್ಲೇ ಕೂತಿರ್ಬೇಕಾದೀತು ಹುಷಾರ್ !
ನಿಮ್ಮ ಬಸ್ಸು 22ನೇ ಪ್ಲ್ಯಾಟ್ ಫಾರ್ಮ್ ಬರೋದಾದ್ರೆ ನೀವು ಅದಕ್ಕಿಂತ ಎರಡು ಪ್ಲ್ಯಾಟ್ ಫಾರ್ಮ್ ಮುಂಚೆ ನಿಂತಿರ್ಬೇಕು.ಬಸ್ ಮೆಜೆಸ್ಟಿಕ್ ಆ ಪ್ಲ್ಯಾಟ್ ಫಾರ್ಮ್ ಮುಂದೆ ಬಂದ ತಕ್ಷಣ ನಿಮ್ಮ ದೃಷ್ಟಿ ಕೇವಲ ಬಾಗಿಲಿನ ಮೇಲಿಟ್ಟು ಅದರ ಹಿಂದೆಯೇ ಓಡೋಡಿ ಬನ್ನಿ.ಬಸ್ ನೋಡುವ ಅಗತ್ಯವೇ ಇಲ್ಲ.ಯಾಕಂದ್ರೆ ಬಾಗಿಲಿನ ಜೊತೆ ಬಸ್ ಬಂದೇ ಬರುತ್ತೆ ಅಲ್ವೇ? ಬಸ್ ಸಂಪೂರ್ಣ ನಿಂತ ತಕ್ಷಣ ಥಟ್ ಅಂತ ಹತ್ತೋಕೆ ಹೋಗಬೇಡಿ.ಮೊದಲು ಇಳಿಯುವವರಿಗೆ ಜಾಗ ಮಾಡಿ ಕೊಡಿ.ಇಳಿಯುವವರ ಶಾಪ ಏನಾದ್ರೂ ತಗುಲಿ ಬಿಟ್ರೆ ನೀವು ಜೀವನ ಪರ್ಯಂತ ಬಸ್ ನಲ್ಲಿ ನಿಂತುಕೊಂಡೇ ಹೋಗುವ ಪರಿಸ್ಥಿತಿ ಬರಬಹುದು!ಹಾಗಂತ ಆರಾಮಾಗಿದ್ದಲ್ಲಿ ನಿಮ್ಮನ್ನೂ ಅವರು ಎಳೆದುಕೊಂಡು ಹೋಗುವ ಸಂಭವವಿದೆ.ಯಾವ ಕಾರಣಕ್ಕೂ ಬಾಗಿಲ ಕಂಬಿ ಬಿಡಕೂಡದು.ಎಲ್ಲರೂ ಇಳಿದ ತಕ್ಷಣ ಚಕ್ ಅಂತ ಹತ್ತಿ ಓಡಿ ಹೋಗಿ ಸೀಟ್ ಹಿಡಿದುಕೊಳ್ಳಿ.ನಾನೇ ಮೊದಲಿರುವುದರಿಂದ ಸೀಟ್ ಸಿಕ್ಕೇ ಸಿಗುತ್ತೆ ಅನ್ನೋ ಅಹಂ ಬೇಡ.ಹೆಂಗಸರ ಹಾಗೇ ಕಾಣಿಸುವ ಕೆಲವು ಗಂಡಸರು ಹೆಂಗಸರಿಗಾಗಿ ಮೀಸಲಿರುವ ಮುಂಬಾಗಿಲಿನಿಂದ ಹತ್ತಿ ನಿಮಗಿಂತ ಮುಂಚೆ ಸೀಟ್ ಆಕ್ರಮಿಸುವ ಸಾಧ್ಯತೆಗಳೂ ಇವೆ.ಹಾಗಾಗಿ ಮೊದಲು ನೀವೇ ಹತ್ತಿದರೂ ಸೀಟ್ ಸಿಗುವ ತನಕ ವಿರಮಿಸಬೇಡಿ.ಕೆಲವರಿಗೆ ಖಾಲಿ ಸೀಟ್ ನೋಡಿದ ತಕ್ಷಣ ತಮ್ಮನ್ನು ತಾವು ನಂಬಲೇ ಆಗದೇ ,ತಮ್ಮ ಕೈಯನ್ನು ಚಿವುಟಿ ನೋಡಿ,ಆನಂದಭಾಷ್ಪ ಸುರಿಸುವಷ್ಟರಲ್ಲಿ ಸೀಟ್ ಬೇರೊಬ್ಬರ ಪಾಲಾಗಿರುವ ನಿದರ್ಶನಗಳೂ ಇವೆ!
ಖಾಲಿ ಸೀಟ್ ನೋಡಿ ಖುಶಿಯಾದರೂ ಸ್ಥಿತಪ್ರಜ್ಞರಾಗಿದ್ದರೆ ಸ್ವಲ್ಪ ಒಳ್ಳೆಯದು.
ಇಷ್ಟೆಲ್ಲಾ ಸರ್ಕಸ್ ಮಾಡಿದರೂ ಕೆಲವೊಮ್ಮೆ ಸೀಟ್ ತಪ್ಪೋದುಂಟು.ಕಾರಣ - ಈ ಉತ್ತರಭಾರತದ ಕೆಲವು ಕಾರ್ಮಿಕರು ನಮಗಿಂತ ತೆಳ್ಳಗಿರೋದ್ರಿಂದ ಮಾಮೂಲಿ ಬಾಗಿಲು ಬಿಟ್ಟು ಬಸ್ ನ ಕಿಟಕಿಯಿಂದಲೇ ತೂರಿ ಸೀಟ್ ಹಿಡಿಯೋದುಂಟು.ಆದರೆ ನೀವು ಈ ರೀತಿ ಮಾಡೋದು ಬೇಡ.ಕರ್ನಾಟಕದ ಘನತೆ ಗೌರವ ಕಾಪಾಡೋದು ನಮ್ಮ ಆದ್ಯ ಕರ್ತವ್ಯ.ಈ ರೀತಿ ಏನಾದ್ರೂ ಆಗಿ ಸೀಟ್ ಮಿಸ್ ಆದ್ರೆ ನೀವು ಕೊರಗೋದೇನೂ ಬೇಡ.ಇನ್ನೊಂದು ಉಪಾಯ ಇದೆ,ಅದೇನಂದ್ರೆ ಬಸ್ ನಲ್ಲಿ ಮುಂದಿನ ಒಂದೆರಡು ಸ್ಟಾಪ್ ನಲ್ಲಿ ಇಳಿಯುವವರನ್ನು ಗುರುತಿಸೋದು!ಒಂದೆರಡು ವಾರ ಗಮನಿಸಿದರೆ ಇಂಥ ಪ್ರಯಾಣಿಕರನ್ನು ಗುರುತಿಸುವುದು ಕಷ್ಟ ಏನಲ್ಲ.ಬಸ್ ಒಳಗೆ ಒಂದು ಸಲ ಕಣ್ಣು ಹಾಯಿಸಿ ನೋಡಿ.ಯಾವಾನಾದ್ರೂ ತನ್ನ ಕಿಸೆಯಿಂದ ಏನನ್ನಾದ್ರೂ ಹುಡುಕ್ತಾ ಇದ್ದಾನೆ ಅಂದ್ರೆ ಅವನ ಬಳಿ ನಿಲ್ಲಲೇ ಬೇಡಿ.ಭಯ ಪಡಬೇಡಿ ಅವನೇನೂ ಬಾಂಬ್ ಹುಡುಕ್ತಾ ಇಲ್ಲ,ಅವನು ಇಯರ್ ಫೋನ್ ಹುಡುಕ್ತಾ ಇರ್ತಾನೆ ಅಷ್ಟೆ.ಅದನ್ನು ಒಮ್ಮೆ ಕಿವಿಗೆ ಹಾಕಿ ಮೊಬೈಲ್ ನಲ್ಲಿ ಎಫ್.ಎಮ್ ರೇಡಿಯೋ ಕೇಳ್ತಾ ಕೂತರೆ ಸ್ಟಾಪ್ ಬಂದ ಮೇಲಷ್ಟೇ ತೆಗೆಯೋದು ಅವನು.ಇದು ದೂ.ಪ್ರ(ದೂರ ಪ್ರಯಾಣಿಕ)ರ ಲಕ್ಷಣ.
ಹೀಗೆ ಬಸ್ ಒಳಗಡೆ ಕಣ್ಣು ಹಾಯಿಸ್ಬೇಕಾದ್ರೆ ಯಾರಾದ್ರೂ ಹಾಯ್ ಬೆಂಗಳೂರು,ಲಂಕೇಶ್ ,ಗೃಹಶೋಭ(ಗಂಡಸರೂ ಓದ್ತಾರೆ!)ಥರ ಪತ್ರಿಕೆ ಏನಾದ್ರೂ ಬಿಚ್ಚತೊಡಗಿದರೆ ಅವರೂ ದೂ.ಪ್ರಗಳು ಅಂದುಕೋಬೇಕು.ಕೆಲವು ಸಾಹಿತ್ಯಾಭಿಮಾನಿಗಳು ಮುಂದಿನ ಸ್ಟಾಪ್ ನಲ್ಲಿ ಇಳಿಯುವುದಾದರೂ ಒಂದೇ ಒಂದು ಪುಟ ಓದಿ ಮುಗಿಸೋಣ ಅನ್ನಿಸಿ ಪತ್ರಿಕೆ ಓದೋದೂ ಉಂಟು! ಆದ್ರೆ ಅಂತವರ ಸಂತತಿ ಕಡಿಮೆ.
ಬಸ್ ನಲ್ಲಿ ಯಾರಾದ್ರೂ ಸೀಟ್ ನ ತುದಿಯಲ್ಲಿ ಕುಳಿತು ಪದೇ ಪದೇ ಕಿಟಕಿಯಿಂದ ಹೊರಗೆ ನೋಡ್ತಾ ಇದ್ರೆ ಅವರು ಮುಂದಿನ ಸ್ಟಾಪ್ ನಲ್ಲಿ ಇಳಿಯುವ ಸಾಧ್ಯತೆಗಳು ಹೆಚ್ಚು.ಅಂಥವರ ಪಕ್ಕ ನಿಂತುಕೊಂಡರೆ ನಿಮಗೆ ಸೀಟ್ ಸಿಗೋ ಅವಕಾಶಗಳು ಹೆಚ್ಚು.ಆದರೆ ಒಮ್ಮೆ ಏನಾಯ್ತು ಅಂದ್ರೆ ಒಬ್ಬ ಸೀಟ್ ತುದಿಯಲ್ಲಿ ಕೂತು ಪದೇ ಪದೇ ಕಿಟಕಿಯ ಹೊರಗೆ ನೋಡ್ತಾ ಇದ್ದ.ಅದೂ ಸಾಲದು ಅನ್ನೋ ಹಾಗೆ ಪದೇ ಪದೇ ನಿಂತುಕೊಳ್ತಾ ಇದ್ದ.ನಾನು ಇವನೇನೋ ಈಗ ಇಳಿತಾನೆ ಅಂದುಕೊಂಡು ಕಾದಿದ್ದೇ ಬಂತು.ಅವನು ಇಳಿದದ್ದು ನನ್ನದೇ ಸ್ಟಾಪ್ ನಲ್ಲಿ ಮುಕ್ಕಾಲು ಘಂಟೆ ಪ್ರಯಾಣದ ನಂತರ!.ನನಗೂ ತಲೆ ಕೆಟ್ಟು ಹೋಗಿ ಕೇಳೇ ಬಿಟ್ಟೆ ’ಏನ್ ಸಾರ್ ಪದೇ ಪದೇ ಸ್ಟಾಪ್ ಬಂತಾ ಅಂತ ನೋಡ್ತಾ ಇದ್ರಲ್ವ ಬೆಂಗಳೂರಿಗೆ ಹೊಸಬರಾ ?’ ಅಂತ.ಅದಕ್ಕೆ ಆಸಾಮಿ ’ಇಲ್ಲ ಸಾರ್ ಇಪ್ಪತ್ತು ವರ್ಷದಿಂದ ಇಲ್ಲೇ ಇದ್ದೀನಿ ನನಗೆ ಜಾಸ್ತಿ ಹೊತ್ತು ಕೂತ್ಕೊಳ್ಳೋಕೆ ಆಗಲ್ಲ ಸ್ವಲ್ಪ ಪರ್ಸನಲ್ ಪ್ರಾಬ್ಲೆಮ್ ಇದೆ ’ ಅನ್ನೋದಾ!
ಒಂದೆರಡು ಸಲ ಎಡವಟ್ಟಾದ್ರೂ ಬಹುತೇಕ ಸಂದರ್ಭಗಳಲ್ಲಿ ಸೀಟ್ ಸಿಗೋದು ಗ್ಯಾರಂಟಿ ಕಣ್ರಿ.ಆದ್ರೆ ಬಸ್ ಹಿಂದೆ ಓಡ್ಬೇಕಾದ್ರೆ ಸ್ವಲ್ಪ ಹುಶಾರಾಗಿ ಓಡಿ.ಚಕ್ರದ ಕೆಳಗೇನಾದ್ರೂ ಬಿದ್ದು ಗಿದ್ದು ಆಮೇಲೇ ಯಮಲೋಕದಲ್ಲಿ ಸೀಟ್ ಸಿಗೋ ಥರ ಆಗಬಾರದು ನೋಡಿ.
ಬಹುಷ ಯಡಿಯೂರಪ್ಪನವರಿಗೆ ಮುಖ್ಯಮಂತ್ರಿ ಸೀಟ್ ಸಿಕ್ಕಿದಾಗ ಕೂಡಾ ಅಷ್ಟು ಖುಷಿಯಾಗಿರಲ್ಲ,ಅಷ್ಟು ಖುಷಿ ಬಿ.ಎಮ್.ಟಿ.ಸಿ ಬಸ್ ನಲ್ಲಿ ಸೀಟ್ ಸಿಕ್ಕಾಗ ಆಗುತ್ತೆ.ನೀವು ಧಡೂತಿ ವ್ಯಕ್ತಿ ಆಗಿದ್ದಲ್ಲಿ ಬಹುಷ ಮೀಸೆ ಅಡಿಯಲ್ಲಿ ನಗುತ್ತಿರಬಹುದು ,’ನನ್ನಂಥ ಧಡೂತಿ ವ್ಯಕ್ತಿಗೆ ಸೀಟ್ ಸಿಗೋದು ಏನ್ ಮಹಾ ಕಷ್ಟ .ನಾಲ್ಕು ಜನರನ್ನು ಒಂದೇ ಕೈಯಲ್ಲಿ ಎತ್ತಿ ಬಿಸಾಕಿ ಸೀಟ್ ಪಡ್ಕೊಳ್ತೀನಿ ’ ಅಂತ.ಆದ್ರೆ ತಮಾಷೆ ಇರೋದು ಅಲ್ಲೇ ಸ್ವಾಮಿ ! ಜನ ನಿಮ್ಮ ಕೈಗೆ ಸಿಕ್ಕಿದ್ರೆ ತಾನೇ ಬಿಸಾಕೋದು ?ಅವರು ಪುಸಕ್ಕನೆ ನಿಮ್ಮ ಕಾಲ ಕೆಳಗಿಂದ ತೂರಿ ಸೀಟ್ ಪಡೆದಿಲ್ಲ ಅಂದ್ರೆ ಆಮೇಲೆ ಹೇಳಿ.
ಸುಮಾರು ಏಳು ವರ್ಷಗಳಿಂದ ಬೆಂಗಳೂರಿನಲ್ಲಿ ಸೀಟ್ ಗಾಗಿ(ಬಸ್ ನಲ್ಲಿ!) ಯಡಿಯೂರಪ್ಪನವರಷ್ಟೇ ಕಷ್ಟ ಪಟ್ಟಿರೋದ್ರಿಂದ ಬಹುಷ ನನ್ನ ಅನುಭವ ಹಂಚಿಕೊಂಡರೆ ನಿಮಗೆ ಸಹಾಯವಾಗಬಹುದೇನೋ?ಆದರೆ ಒಂದೇ ಒಂದು ಕಂಡೀಶನ್ ! ಬಸ್ ನಲ್ಲಿ ನಾನೇನಾದ್ರೊ ನಿಮಗೆ ಸಿಕ್ಕರೆ ನನಗೆ ಸೀಟು ಬಿಟ್ಟುಕೊಡಬೇಕು.ನನ್ನ ಮೇಲೆ ನನ್ನ ತಂತ್ರಗಳನ್ನು ಪ್ರಯೋಗಿಸಬಾರದು!
ಮೊದಲೇ ಹೇಳಿದ ಹಾಗೆ ತೆಳ್ಳಗಿದ್ದರೆ ಮಾತ್ರ ಇಲ್ಲಿರುವ ತಂತ್ರಗಳನ್ನು ಉಪಯೋಗಿಸಬಹುದು.ಹಾಗಾಗಿ ನೀವೇನಾದ್ರೂ ಸ್ಥೂಲಕಾಯಿಯಾಗಿದ್ದಲ್ಲಿ ದಯವಿಟ್ಟು ಈ ಲೇಖನದ ಬದಲು ’ತೆಳ್ಳಗಾಗೋದು ಹೇಗೆ ?’ ಅನ್ನೋ ಲೇಖನವನ್ನು ಮೊದಲು ಓದಿ.ಸೀಟ್ ನಲ್ಲಿ ಆರಾಮಾಗಿ ಕುಳಿತು ಪ್ರಯಾಣ ಮಾಡಬೇಕೆಂದರೆ ತುಸು ತಯಾರಿ ಬೇಕಾಗುತ್ತೆ.ಬಸ್ ಸ್ಟ್ಯಾಂಡ್ ನಲ್ಲಿ ಕಲ್ಲುಬೆಂಚು ಹಾಕಿದ್ದಾರೆ ಅಂತ ನೀವೇನಾದ್ರೂ ಅದರಲ್ಲಿ ಕುಳಿತು ಹೋಗೋ ಬರೋ ಹುಡುಗಿಯರ ಅಂದ ಸವೀತಾ ಇದ್ರೆ ರಾತ್ರಿ ಇಡೀ ಬಸ್ ಸ್ಟ್ಯಾಂಡ್ ನಲ್ಲೇ ಕೂತಿರ್ಬೇಕಾದೀತು ಹುಷಾರ್ !
ನಿಮ್ಮ ಬಸ್ಸು 22ನೇ ಪ್ಲ್ಯಾಟ್ ಫಾರ್ಮ್ ಬರೋದಾದ್ರೆ ನೀವು ಅದಕ್ಕಿಂತ ಎರಡು ಪ್ಲ್ಯಾಟ್ ಫಾರ್ಮ್ ಮುಂಚೆ ನಿಂತಿರ್ಬೇಕು.ಬಸ್ ಮೆಜೆಸ್ಟಿಕ್ ಆ ಪ್ಲ್ಯಾಟ್ ಫಾರ್ಮ್ ಮುಂದೆ ಬಂದ ತಕ್ಷಣ ನಿಮ್ಮ ದೃಷ್ಟಿ ಕೇವಲ ಬಾಗಿಲಿನ ಮೇಲಿಟ್ಟು ಅದರ ಹಿಂದೆಯೇ ಓಡೋಡಿ ಬನ್ನಿ.ಬಸ್ ನೋಡುವ ಅಗತ್ಯವೇ ಇಲ್ಲ.ಯಾಕಂದ್ರೆ ಬಾಗಿಲಿನ ಜೊತೆ ಬಸ್ ಬಂದೇ ಬರುತ್ತೆ ಅಲ್ವೇ? ಬಸ್ ಸಂಪೂರ್ಣ ನಿಂತ ತಕ್ಷಣ ಥಟ್ ಅಂತ ಹತ್ತೋಕೆ ಹೋಗಬೇಡಿ.ಮೊದಲು ಇಳಿಯುವವರಿಗೆ ಜಾಗ ಮಾಡಿ ಕೊಡಿ.ಇಳಿಯುವವರ ಶಾಪ ಏನಾದ್ರೂ ತಗುಲಿ ಬಿಟ್ರೆ ನೀವು ಜೀವನ ಪರ್ಯಂತ ಬಸ್ ನಲ್ಲಿ ನಿಂತುಕೊಂಡೇ ಹೋಗುವ ಪರಿಸ್ಥಿತಿ ಬರಬಹುದು!ಹಾಗಂತ ಆರಾಮಾಗಿದ್ದಲ್ಲಿ ನಿಮ್ಮನ್ನೂ ಅವರು ಎಳೆದುಕೊಂಡು ಹೋಗುವ ಸಂಭವವಿದೆ.ಯಾವ ಕಾರಣಕ್ಕೂ ಬಾಗಿಲ ಕಂಬಿ ಬಿಡಕೂಡದು.ಎಲ್ಲರೂ ಇಳಿದ ತಕ್ಷಣ ಚಕ್ ಅಂತ ಹತ್ತಿ ಓಡಿ ಹೋಗಿ ಸೀಟ್ ಹಿಡಿದುಕೊಳ್ಳಿ.ನಾನೇ ಮೊದಲಿರುವುದರಿಂದ ಸೀಟ್ ಸಿಕ್ಕೇ ಸಿಗುತ್ತೆ ಅನ್ನೋ ಅಹಂ ಬೇಡ.ಹೆಂಗಸರ ಹಾಗೇ ಕಾಣಿಸುವ ಕೆಲವು ಗಂಡಸರು ಹೆಂಗಸರಿಗಾಗಿ ಮೀಸಲಿರುವ ಮುಂಬಾಗಿಲಿನಿಂದ ಹತ್ತಿ ನಿಮಗಿಂತ ಮುಂಚೆ ಸೀಟ್ ಆಕ್ರಮಿಸುವ ಸಾಧ್ಯತೆಗಳೂ ಇವೆ.ಹಾಗಾಗಿ ಮೊದಲು ನೀವೇ ಹತ್ತಿದರೂ ಸೀಟ್ ಸಿಗುವ ತನಕ ವಿರಮಿಸಬೇಡಿ.ಕೆಲವರಿಗೆ ಖಾಲಿ ಸೀಟ್ ನೋಡಿದ ತಕ್ಷಣ ತಮ್ಮನ್ನು ತಾವು ನಂಬಲೇ ಆಗದೇ ,ತಮ್ಮ ಕೈಯನ್ನು ಚಿವುಟಿ ನೋಡಿ,ಆನಂದಭಾಷ್ಪ ಸುರಿಸುವಷ್ಟರಲ್ಲಿ ಸೀಟ್ ಬೇರೊಬ್ಬರ ಪಾಲಾಗಿರುವ ನಿದರ್ಶನಗಳೂ ಇವೆ!
ಖಾಲಿ ಸೀಟ್ ನೋಡಿ ಖುಶಿಯಾದರೂ ಸ್ಥಿತಪ್ರಜ್ಞರಾಗಿದ್ದರೆ ಸ್ವಲ್ಪ ಒಳ್ಳೆಯದು.
ಇಷ್ಟೆಲ್ಲಾ ಸರ್ಕಸ್ ಮಾಡಿದರೂ ಕೆಲವೊಮ್ಮೆ ಸೀಟ್ ತಪ್ಪೋದುಂಟು.ಕಾರಣ - ಈ ಉತ್ತರಭಾರತದ ಕೆಲವು ಕಾರ್ಮಿಕರು ನಮಗಿಂತ ತೆಳ್ಳಗಿರೋದ್ರಿಂದ ಮಾಮೂಲಿ ಬಾಗಿಲು ಬಿಟ್ಟು ಬಸ್ ನ ಕಿಟಕಿಯಿಂದಲೇ ತೂರಿ ಸೀಟ್ ಹಿಡಿಯೋದುಂಟು.ಆದರೆ ನೀವು ಈ ರೀತಿ ಮಾಡೋದು ಬೇಡ.ಕರ್ನಾಟಕದ ಘನತೆ ಗೌರವ ಕಾಪಾಡೋದು ನಮ್ಮ ಆದ್ಯ ಕರ್ತವ್ಯ.ಈ ರೀತಿ ಏನಾದ್ರೂ ಆಗಿ ಸೀಟ್ ಮಿಸ್ ಆದ್ರೆ ನೀವು ಕೊರಗೋದೇನೂ ಬೇಡ.ಇನ್ನೊಂದು ಉಪಾಯ ಇದೆ,ಅದೇನಂದ್ರೆ ಬಸ್ ನಲ್ಲಿ ಮುಂದಿನ ಒಂದೆರಡು ಸ್ಟಾಪ್ ನಲ್ಲಿ ಇಳಿಯುವವರನ್ನು ಗುರುತಿಸೋದು!ಒಂದೆರಡು ವಾರ ಗಮನಿಸಿದರೆ ಇಂಥ ಪ್ರಯಾಣಿಕರನ್ನು ಗುರುತಿಸುವುದು ಕಷ್ಟ ಏನಲ್ಲ.ಬಸ್ ಒಳಗೆ ಒಂದು ಸಲ ಕಣ್ಣು ಹಾಯಿಸಿ ನೋಡಿ.ಯಾವಾನಾದ್ರೂ ತನ್ನ ಕಿಸೆಯಿಂದ ಏನನ್ನಾದ್ರೂ ಹುಡುಕ್ತಾ ಇದ್ದಾನೆ ಅಂದ್ರೆ ಅವನ ಬಳಿ ನಿಲ್ಲಲೇ ಬೇಡಿ.ಭಯ ಪಡಬೇಡಿ ಅವನೇನೂ ಬಾಂಬ್ ಹುಡುಕ್ತಾ ಇಲ್ಲ,ಅವನು ಇಯರ್ ಫೋನ್ ಹುಡುಕ್ತಾ ಇರ್ತಾನೆ ಅಷ್ಟೆ.ಅದನ್ನು ಒಮ್ಮೆ ಕಿವಿಗೆ ಹಾಕಿ ಮೊಬೈಲ್ ನಲ್ಲಿ ಎಫ್.ಎಮ್ ರೇಡಿಯೋ ಕೇಳ್ತಾ ಕೂತರೆ ಸ್ಟಾಪ್ ಬಂದ ಮೇಲಷ್ಟೇ ತೆಗೆಯೋದು ಅವನು.ಇದು ದೂ.ಪ್ರ(ದೂರ ಪ್ರಯಾಣಿಕ)ರ ಲಕ್ಷಣ.
ಹೀಗೆ ಬಸ್ ಒಳಗಡೆ ಕಣ್ಣು ಹಾಯಿಸ್ಬೇಕಾದ್ರೆ ಯಾರಾದ್ರೂ ಹಾಯ್ ಬೆಂಗಳೂರು,ಲಂಕೇಶ್ ,ಗೃಹಶೋಭ(ಗಂಡಸರೂ ಓದ್ತಾರೆ!)ಥರ ಪತ್ರಿಕೆ ಏನಾದ್ರೂ ಬಿಚ್ಚತೊಡಗಿದರೆ ಅವರೂ ದೂ.ಪ್ರಗಳು ಅಂದುಕೋಬೇಕು.ಕೆಲವು ಸಾಹಿತ್ಯಾಭಿಮಾನಿಗಳು ಮುಂದಿನ ಸ್ಟಾಪ್ ನಲ್ಲಿ ಇಳಿಯುವುದಾದರೂ ಒಂದೇ ಒಂದು ಪುಟ ಓದಿ ಮುಗಿಸೋಣ ಅನ್ನಿಸಿ ಪತ್ರಿಕೆ ಓದೋದೂ ಉಂಟು! ಆದ್ರೆ ಅಂತವರ ಸಂತತಿ ಕಡಿಮೆ.
ಬಸ್ ನಲ್ಲಿ ಯಾರಾದ್ರೂ ಸೀಟ್ ನ ತುದಿಯಲ್ಲಿ ಕುಳಿತು ಪದೇ ಪದೇ ಕಿಟಕಿಯಿಂದ ಹೊರಗೆ ನೋಡ್ತಾ ಇದ್ರೆ ಅವರು ಮುಂದಿನ ಸ್ಟಾಪ್ ನಲ್ಲಿ ಇಳಿಯುವ ಸಾಧ್ಯತೆಗಳು ಹೆಚ್ಚು.ಅಂಥವರ ಪಕ್ಕ ನಿಂತುಕೊಂಡರೆ ನಿಮಗೆ ಸೀಟ್ ಸಿಗೋ ಅವಕಾಶಗಳು ಹೆಚ್ಚು.ಆದರೆ ಒಮ್ಮೆ ಏನಾಯ್ತು ಅಂದ್ರೆ ಒಬ್ಬ ಸೀಟ್ ತುದಿಯಲ್ಲಿ ಕೂತು ಪದೇ ಪದೇ ಕಿಟಕಿಯ ಹೊರಗೆ ನೋಡ್ತಾ ಇದ್ದ.ಅದೂ ಸಾಲದು ಅನ್ನೋ ಹಾಗೆ ಪದೇ ಪದೇ ನಿಂತುಕೊಳ್ತಾ ಇದ್ದ.ನಾನು ಇವನೇನೋ ಈಗ ಇಳಿತಾನೆ ಅಂದುಕೊಂಡು ಕಾದಿದ್ದೇ ಬಂತು.ಅವನು ಇಳಿದದ್ದು ನನ್ನದೇ ಸ್ಟಾಪ್ ನಲ್ಲಿ ಮುಕ್ಕಾಲು ಘಂಟೆ ಪ್ರಯಾಣದ ನಂತರ!.ನನಗೂ ತಲೆ ಕೆಟ್ಟು ಹೋಗಿ ಕೇಳೇ ಬಿಟ್ಟೆ ’ಏನ್ ಸಾರ್ ಪದೇ ಪದೇ ಸ್ಟಾಪ್ ಬಂತಾ ಅಂತ ನೋಡ್ತಾ ಇದ್ರಲ್ವ ಬೆಂಗಳೂರಿಗೆ ಹೊಸಬರಾ ?’ ಅಂತ.ಅದಕ್ಕೆ ಆಸಾಮಿ ’ಇಲ್ಲ ಸಾರ್ ಇಪ್ಪತ್ತು ವರ್ಷದಿಂದ ಇಲ್ಲೇ ಇದ್ದೀನಿ ನನಗೆ ಜಾಸ್ತಿ ಹೊತ್ತು ಕೂತ್ಕೊಳ್ಳೋಕೆ ಆಗಲ್ಲ ಸ್ವಲ್ಪ ಪರ್ಸನಲ್ ಪ್ರಾಬ್ಲೆಮ್ ಇದೆ ’ ಅನ್ನೋದಾ!
ಒಂದೆರಡು ಸಲ ಎಡವಟ್ಟಾದ್ರೂ ಬಹುತೇಕ ಸಂದರ್ಭಗಳಲ್ಲಿ ಸೀಟ್ ಸಿಗೋದು ಗ್ಯಾರಂಟಿ ಕಣ್ರಿ.ಆದ್ರೆ ಬಸ್ ಹಿಂದೆ ಓಡ್ಬೇಕಾದ್ರೆ ಸ್ವಲ್ಪ ಹುಶಾರಾಗಿ ಓಡಿ.ಚಕ್ರದ ಕೆಳಗೇನಾದ್ರೂ ಬಿದ್ದು ಗಿದ್ದು ಆಮೇಲೇ ಯಮಲೋಕದಲ್ಲಿ ಸೀಟ್ ಸಿಗೋ ಥರ ಆಗಬಾರದು ನೋಡಿ.
Tuesday, September 8, 2009
ರಿಯಾಲಿಟಿ ಷೋಗೆ ಟಿಪ್ಸ್ ಗಳು !
ಈಗ ಯಾವ ಚ್ಯಾನಲ್ ನೋಡಿದ್ರೂ ರಿಯಾಲಿಟಿ ಷೋಗಳು.ರಿಯಾಲಿಟಿ ಶೋ ಅಂದ ಮಾತ್ರಕ್ಕೆ ಇಲ್ಲಿ ತೋರಿಸೋದೆಲ್ಲಾ ರಿಯಲ್ ಅಂದುಕೊಂಡ್ರೆ ನಮ್ಮಂಥ ಮೂರ್ಖರು ಬೇರೊಬ್ಬರಿಲ್ಲ!
ಬಹಳಷ್ಟು ಜನರಿಗೆ ಇಂಥ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಬೇಕು ಅಂತ ಆಸೆ ,ಆದ್ರೆ ಹೇಗೆ ಅನ್ನೋದು ಗೊತ್ತಿಲ್ಲ.
ನನ್ನ ಬಳಿ ಕೆಲವು ಟಿಪ್ಸ್ ಗಳಿವೆ ! ನೋಡಿ ಉಪಯೋಗಕ್ಕೆ ಬಂದ್ರೂ ಬರಬಹುದು .ಯೋಚನೆ ಮಾಡ್ಬೇಡಿ ಕಾಸೇನೂ ಕೇಳಲ್ಲ ಇದಕ್ಕೆಲ್ಲ.
ರಿಯಾಲಿಟಿ ಶೋಗಳಲ್ಲಿ ಭಾಗವಸೋದಕ್ಕೆ ಮಿನಿಮಮ್ ಯೋಗ್ಯತೆ ಅಂದ್ರೆ ನಿಮಗೊಂದಿಷ್ಟು ಟ್ಯಾಲೆಂಟ್ ಇರ್ಬೇಕು.ಟ್ಯಾಲೆಂಟ್ ಇರದಿದ್ದೂ ನಡೆಯುತ್ತೆ ಅಂದುಕೊಂಡಿದ್ರೆ ತಪ್ಪು ಕಣ್ರಿ.ಆ ಮಟ್ಟಿಗೇನೂ ಇಳಿದಿಲ್ಲ ರಿಯಾಲಿಟಿ ಶೋಗಳ ಕ್ವಾಲಿಟಿ!
ನಿಮಗೆ ಹಾಡೋದು ಅಥವಾ ಕುಣಿಯೋದು ಗೊತ್ತಿದ್ರೆ ಒಳ್ಳೇದು.ಎರಡೂ ಗೊತ್ತು ಅಂದ್ರೆ ಇನ್ನೂ ಒಳ್ಳೇದು. ಎರಡೂ ಗೊತ್ತಿಲ್ಲ ಅಂದ್ರೆ ನಿಮಗೆ ಏನು ಗೊತ್ತಿದೆ ಹೇಳಿ ಆಮೇಲೆ ನಿರ್ಧಾರ ಮಾಡೋಣ ಯಾವುದರಲ್ಲಿ ಭಾಗವಹಿಸೋದು ಅಂತ.
ನಿಮಗೆ ಚೆನ್ನಾಗಿ ಹಾಡೋದಕ್ಕೆ ಗೊತ್ತಿದ್ದು ಚೆನ್ನಾಗಿರೋ ಮನೆಯಲ್ಲಿ ನೀವೇನಾದ್ರೂ ವಾಸವಾಗಿದ್ರೆ ನಿಮ್ಮ ಬ್ಯಾಡ್ ಲಕ್ ಕಣ್ರಿ.ಯಾಕಂದ್ರೆ ಟಿ.ವಿ ನವ್ರು ಕಾರ್ಯಕ್ರಮದ ಮಧ್ಯೆ ತೋರ್ಸೋದಕ್ಕೆ ಒಂದು ಹಳೆ ಮನೆ ,ಅದರಲ್ಲಿ ಒಲೆ ಹಚ್ಚುತ್ತಿರೋ ನಿಮ್ಮ ತಾಯಿ ,ನೀವು ಪಕ್ಕದ ಹಳ್ಳಿಯಿಂದ ಕೊಡದಲ್ಲಿ ನೀರು ತುಂಬಿಸಿ ತರೋ ದೃಶ್ಯ ಇವೆಲ್ಲಾ ಬೇಕು.ಹೀಗೆ ನಿಮ್ಮ ಬಡತನವನ್ನು ತೋರಿಸ್ತಾ ಇದ್ದಾಗ ಹಿನ್ನೆಲೆಯಲ್ಲಿ ಒಂದು ಪಿಟೀಲಿನ ಕುಂಯ್ ಕುಂಯ್ ಅನ್ನೋ ಟ್ಯೂನ್ ಹಾಕಿದ್ರಂತೂ SMS ಗಳ ಮಹಾಪೂರ ಗ್ಯಾರಂಟಿ.
ಬದಲಾಗಿ ಮಲ್ಲೇಶ್ವರಂ ನ ಚೆನ್ನಾಗಿರೋ ಅಪಾರ್ಟ್ಮೆಂಟ್ ನಲ್ಲಿ ನೀವು ಸಂಗೀತ ಅಭ್ಯಾಸ ಮಾಡ್ತಾ ಇರೋದು ,ನಿಮ್ಮ ತಾಯಿ ನಿಮಗೆ ಹಾರ್ಲಿಕ್ಸ್ ತಂದು ಕೊಡೋದು ಇದೆಲ್ಲಾ ತೋರ್ಸಿದ್ರೆ ನಿಮಗ್ಯಾರ್ರಿ SMS ಕಳಿಸ್ತಾರೆ?
ಇನ್ನು ನೀವು ಚೆನ್ನಾಗಿ ಡ್ಯಾನ್ಸ್ ಮಾಡೋರಾದ್ರೆ ಒಳ್ಳೇ ವಿಚಾರ.ಆದ್ರೆ ನೀವು ಮಾಮೂಲಿ ಸ್ಟೆಪ್ಸ್ ಜೊತೆ ಒಂದು ಎಕ್ಸ್ಟ್ರಾ ಸ್ಟೆಪ್ ಕಲೀಬೇಕಾಗುತ್ತೆ.ಅದೇನಂದ್ರೆ ಮೇಲಿಂದ ಹಾರಿ ಲ್ಯಾಂಡ್ ಆಗ್ಬೇಕಾದ್ರೆ ಎಡವಟ್ಟಾಗಿ ಬಿದ್ದು ಕಾಲು ತಿರುಚಿಕೊಳ್ಳೋದು!
ನೋಡಿ ಸರಿಯಾಗಿ ಅಭ್ಯಾಸ ಮಾಡ್ಬೇಕು ಈ ಸ್ಟೆಪ್ ನ.ಅಪ್ಪಿ ತಪ್ಪಿ ನಿಜವಾಗ್ಲೂ ಕಾಲು ತಿರುಚಿಕೊಂಡ್ರೆ ನನ್ನನ್ನ ಬಯ್ಬೇಡಿ ಮತ್ತೆ.ನೀವು ಕಾಲು ತಿರುಚಿ ಬಿದ್ದಾಗ ಬೇಜಾರಲ್ಲಿ ಸುಮ್ನೆ ಬಿದ್ದುಕೊಳ್ಳಿ.ಆ ದೃಶ್ಯವನ್ನು ಕಪ್ಪು ಬಿಳುಪಿನಲ್ಲಿ ಒಂದು ಸಲ ,ಸಿಡಿಲು ಬಡಿದ ಹಾಗೆ ಲೈಟ್ ಎಫೆಕ್ಟ್ ಹಾಕಿ ಒಂದು ಸಲ ತೋರ್ಸೋ ಕೆಲಸ ಟಿ.ವಿ ಯವರಿಗೆ ಬಿಟ್ಟು ಬಿಡಿ.ನೀವೇನೂ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ ಈ ಬಗ್ಗೆ.
ಸತ್ಯವಂತರಿಗಿದು ಕಾಲವಲ್ಲ ಅಂತ ದಾಸರು ತಪ್ಪಿ ಹೇಳಿರೋದು.ಅವರು ’ಸಚ್ ಕಾ ಸಾಮ್ನಾ’ ನೋಡಿಲ್ವಲ್ಲ ಪಾಪ.ಸತ್ಯವಂತರಿಗಿದು ದುಡ್ಡು ಮಾಡೋ ಕಾಲ.ಆದ್ರೆ ಈ ಶೋ ಗೆ ಎಂಟ್ರಿ ಸಿಗೋದು ಸ್ವಲ್ಪ ಕಷ್ಟ.ನಿಮಗೆ ಒಂದೆರಡು ಅನೈತಿಕ ಸಂಬಂಧಗಳಿದ್ರೆ ಆರಾಮಾಗಿ ಭಾಗವಹಿಸಬಹುದು.ಎರಡಕ್ಕಿಂತ ಜಾಸ್ತಿ ಇದ್ರೆ ನಿಮ್ಮನ್ನು ಮನೆಗೆ ಬಂದು ಕರ್ಕೊಂಡು ಹೋಗ್ತಾರೆ ಬಿಡಿ ಚ್ಯಾನೆಲ್ ನವರು!ಯಾವುದಕ್ಕೂ ನೀವು ಯಾರ್ಯಾರ ಜೊತೆ ಮಲಗಿದ್ರಿ ,ಎಷ್ಟು ಜನ ವೇಶ್ಯೆಯವರ ಜೊತೆ ಮಜಾ ಉಡಾಯಿಸಿದ್ರಿ ಇದೆಲ್ಲ ಒಂದು ಪುಟ್ಟ ಡೈರಿಯಲ್ಲಿ ಬರೆದಿಟ್ಟು ಆಗಾಗ ನೆನಪು ಮಾಡಿಕೊಳ್ತಾ ಇದ್ರೆ ಜಾಸ್ತಿ ಹಣ ಬಹುಮಾನವಾಗಿ ಗೆಲ್ಲಲು ಸಹಕಾರಿಯಾಗುತ್ತೆ .
ನಿಮ್ಮದು ತೀರಾ ಸಪ್ಪೆ ಜೀವನವಾದ್ರೆ ಏನೂ ಮಾಡೋದಕ್ಕಾಗಲ್ಲ ಸಾರಿ.ನಿಮಗೆ ಅಲ್ಲಿ ಪ್ರವೇಶವಿಲ್ಲ :(
ನಿಮಗೆ ಇಂಗ್ಲೀಶ್ ಅಥವ ಹಿಂದಿ ಬೈಗುಳ ಚೆನ್ನಾಗಿ ಗೊತ್ತಿದ್ರೆ ನೀವು ಎಂ.ಟಿ.ವಿ ರೋಡೀಸ್ ಥರದ ಶೋಗಳಿಗೆ ಪ್ರಯತ್ನಿಸಬಹುದು ನೋಡಿ.ಬರೀ ಕನ್ನಡ ಬೈಗುಳ ಗೊತ್ತಿದ್ರೆ once again sorry! ಕನ್ನಡದಲ್ಲಿ ’ಇನ್ನೂ’ ಆ ಥರದ ಶೋ ಶುರು ಆಗಿಲ್ಲ!
ಇನ್ನು ಜಾಸ್ತಿ ಜಾಸ್ತಿ SMS ಗಳನ್ನು ಬಾಚಿಕೊಳ್ಳೋದು ಅನ್ನೋದರ ರಹಸ್ಯ ಗೊತ್ತಾಗ್ಬೇಕಾ ನಿಮಗೆ ? !
ತುಂಬಾ ಸಿಂಪಲ್ ! ನೀವು ಕರ್ನಾಟಕದಲ್ಲೇ ಹುಟ್ಟಿ ಬೆಳೆದರೂ , ’ನಾನು ಹುಟ್ಟಿದ್ದು ದೆಹಲಿಯಲ್ಲಿ,ನಮ್ಮ ಅಪ್ಪ ಕರ್ನಾಟಕದವರು,ಅಮ್ಮ ತಮಿಳುನಾಡಿನವರು ಆದ್ರೆ ಈಗ ನಾವು ರಾಜಸ್ತಾನದಲ್ಲಿ ಮನೆ ಮಾಡಿಕೊಂದಿದ್ದೀವಿ ’ ಅನ್ನಿ !
ಕರ್ನಾಟಕ ,ದೆಹಲಿ,ತಮಿಳುನಾಡು,ರಾಜಸ್ತಾನದವರೆಲ್ಲರೂ ’ಇಂವ ನಮ್ಮವ ಇಂವ ನಮ್ಮವ ’ ಅಂದುಕೊಂಡು SMS ಮಾಡೇ ಮಾಡ್ತಾರೆ!
ಬಹಳಷ್ಟು ಜನರಿಗೆ ಇಂಥ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಬೇಕು ಅಂತ ಆಸೆ ,ಆದ್ರೆ ಹೇಗೆ ಅನ್ನೋದು ಗೊತ್ತಿಲ್ಲ.
ನನ್ನ ಬಳಿ ಕೆಲವು ಟಿಪ್ಸ್ ಗಳಿವೆ ! ನೋಡಿ ಉಪಯೋಗಕ್ಕೆ ಬಂದ್ರೂ ಬರಬಹುದು .ಯೋಚನೆ ಮಾಡ್ಬೇಡಿ ಕಾಸೇನೂ ಕೇಳಲ್ಲ ಇದಕ್ಕೆಲ್ಲ.
ರಿಯಾಲಿಟಿ ಶೋಗಳಲ್ಲಿ ಭಾಗವಸೋದಕ್ಕೆ ಮಿನಿಮಮ್ ಯೋಗ್ಯತೆ ಅಂದ್ರೆ ನಿಮಗೊಂದಿಷ್ಟು ಟ್ಯಾಲೆಂಟ್ ಇರ್ಬೇಕು.ಟ್ಯಾಲೆಂಟ್ ಇರದಿದ್ದೂ ನಡೆಯುತ್ತೆ ಅಂದುಕೊಂಡಿದ್ರೆ ತಪ್ಪು ಕಣ್ರಿ.ಆ ಮಟ್ಟಿಗೇನೂ ಇಳಿದಿಲ್ಲ ರಿಯಾಲಿಟಿ ಶೋಗಳ ಕ್ವಾಲಿಟಿ!
ನಿಮಗೆ ಹಾಡೋದು ಅಥವಾ ಕುಣಿಯೋದು ಗೊತ್ತಿದ್ರೆ ಒಳ್ಳೇದು.ಎರಡೂ ಗೊತ್ತು ಅಂದ್ರೆ ಇನ್ನೂ ಒಳ್ಳೇದು. ಎರಡೂ ಗೊತ್ತಿಲ್ಲ ಅಂದ್ರೆ ನಿಮಗೆ ಏನು ಗೊತ್ತಿದೆ ಹೇಳಿ ಆಮೇಲೆ ನಿರ್ಧಾರ ಮಾಡೋಣ ಯಾವುದರಲ್ಲಿ ಭಾಗವಹಿಸೋದು ಅಂತ.
ನಿಮಗೆ ಚೆನ್ನಾಗಿ ಹಾಡೋದಕ್ಕೆ ಗೊತ್ತಿದ್ದು ಚೆನ್ನಾಗಿರೋ ಮನೆಯಲ್ಲಿ ನೀವೇನಾದ್ರೂ ವಾಸವಾಗಿದ್ರೆ ನಿಮ್ಮ ಬ್ಯಾಡ್ ಲಕ್ ಕಣ್ರಿ.ಯಾಕಂದ್ರೆ ಟಿ.ವಿ ನವ್ರು ಕಾರ್ಯಕ್ರಮದ ಮಧ್ಯೆ ತೋರ್ಸೋದಕ್ಕೆ ಒಂದು ಹಳೆ ಮನೆ ,ಅದರಲ್ಲಿ ಒಲೆ ಹಚ್ಚುತ್ತಿರೋ ನಿಮ್ಮ ತಾಯಿ ,ನೀವು ಪಕ್ಕದ ಹಳ್ಳಿಯಿಂದ ಕೊಡದಲ್ಲಿ ನೀರು ತುಂಬಿಸಿ ತರೋ ದೃಶ್ಯ ಇವೆಲ್ಲಾ ಬೇಕು.ಹೀಗೆ ನಿಮ್ಮ ಬಡತನವನ್ನು ತೋರಿಸ್ತಾ ಇದ್ದಾಗ ಹಿನ್ನೆಲೆಯಲ್ಲಿ ಒಂದು ಪಿಟೀಲಿನ ಕುಂಯ್ ಕುಂಯ್ ಅನ್ನೋ ಟ್ಯೂನ್ ಹಾಕಿದ್ರಂತೂ SMS ಗಳ ಮಹಾಪೂರ ಗ್ಯಾರಂಟಿ.
ಬದಲಾಗಿ ಮಲ್ಲೇಶ್ವರಂ ನ ಚೆನ್ನಾಗಿರೋ ಅಪಾರ್ಟ್ಮೆಂಟ್ ನಲ್ಲಿ ನೀವು ಸಂಗೀತ ಅಭ್ಯಾಸ ಮಾಡ್ತಾ ಇರೋದು ,ನಿಮ್ಮ ತಾಯಿ ನಿಮಗೆ ಹಾರ್ಲಿಕ್ಸ್ ತಂದು ಕೊಡೋದು ಇದೆಲ್ಲಾ ತೋರ್ಸಿದ್ರೆ ನಿಮಗ್ಯಾರ್ರಿ SMS ಕಳಿಸ್ತಾರೆ?
ಇನ್ನು ನೀವು ಚೆನ್ನಾಗಿ ಡ್ಯಾನ್ಸ್ ಮಾಡೋರಾದ್ರೆ ಒಳ್ಳೇ ವಿಚಾರ.ಆದ್ರೆ ನೀವು ಮಾಮೂಲಿ ಸ್ಟೆಪ್ಸ್ ಜೊತೆ ಒಂದು ಎಕ್ಸ್ಟ್ರಾ ಸ್ಟೆಪ್ ಕಲೀಬೇಕಾಗುತ್ತೆ.ಅದೇನಂದ್ರೆ ಮೇಲಿಂದ ಹಾರಿ ಲ್ಯಾಂಡ್ ಆಗ್ಬೇಕಾದ್ರೆ ಎಡವಟ್ಟಾಗಿ ಬಿದ್ದು ಕಾಲು ತಿರುಚಿಕೊಳ್ಳೋದು!
ನೋಡಿ ಸರಿಯಾಗಿ ಅಭ್ಯಾಸ ಮಾಡ್ಬೇಕು ಈ ಸ್ಟೆಪ್ ನ.ಅಪ್ಪಿ ತಪ್ಪಿ ನಿಜವಾಗ್ಲೂ ಕಾಲು ತಿರುಚಿಕೊಂಡ್ರೆ ನನ್ನನ್ನ ಬಯ್ಬೇಡಿ ಮತ್ತೆ.ನೀವು ಕಾಲು ತಿರುಚಿ ಬಿದ್ದಾಗ ಬೇಜಾರಲ್ಲಿ ಸುಮ್ನೆ ಬಿದ್ದುಕೊಳ್ಳಿ.ಆ ದೃಶ್ಯವನ್ನು ಕಪ್ಪು ಬಿಳುಪಿನಲ್ಲಿ ಒಂದು ಸಲ ,ಸಿಡಿಲು ಬಡಿದ ಹಾಗೆ ಲೈಟ್ ಎಫೆಕ್ಟ್ ಹಾಕಿ ಒಂದು ಸಲ ತೋರ್ಸೋ ಕೆಲಸ ಟಿ.ವಿ ಯವರಿಗೆ ಬಿಟ್ಟು ಬಿಡಿ.ನೀವೇನೂ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ ಈ ಬಗ್ಗೆ.
ಸತ್ಯವಂತರಿಗಿದು ಕಾಲವಲ್ಲ ಅಂತ ದಾಸರು ತಪ್ಪಿ ಹೇಳಿರೋದು.ಅವರು ’ಸಚ್ ಕಾ ಸಾಮ್ನಾ’ ನೋಡಿಲ್ವಲ್ಲ ಪಾಪ.ಸತ್ಯವಂತರಿಗಿದು ದುಡ್ಡು ಮಾಡೋ ಕಾಲ.ಆದ್ರೆ ಈ ಶೋ ಗೆ ಎಂಟ್ರಿ ಸಿಗೋದು ಸ್ವಲ್ಪ ಕಷ್ಟ.ನಿಮಗೆ ಒಂದೆರಡು ಅನೈತಿಕ ಸಂಬಂಧಗಳಿದ್ರೆ ಆರಾಮಾಗಿ ಭಾಗವಹಿಸಬಹುದು.ಎರಡಕ್ಕಿಂತ ಜಾಸ್ತಿ ಇದ್ರೆ ನಿಮ್ಮನ್ನು ಮನೆಗೆ ಬಂದು ಕರ್ಕೊಂಡು ಹೋಗ್ತಾರೆ ಬಿಡಿ ಚ್ಯಾನೆಲ್ ನವರು!ಯಾವುದಕ್ಕೂ ನೀವು ಯಾರ್ಯಾರ ಜೊತೆ ಮಲಗಿದ್ರಿ ,ಎಷ್ಟು ಜನ ವೇಶ್ಯೆಯವರ ಜೊತೆ ಮಜಾ ಉಡಾಯಿಸಿದ್ರಿ ಇದೆಲ್ಲ ಒಂದು ಪುಟ್ಟ ಡೈರಿಯಲ್ಲಿ ಬರೆದಿಟ್ಟು ಆಗಾಗ ನೆನಪು ಮಾಡಿಕೊಳ್ತಾ ಇದ್ರೆ ಜಾಸ್ತಿ ಹಣ ಬಹುಮಾನವಾಗಿ ಗೆಲ್ಲಲು ಸಹಕಾರಿಯಾಗುತ್ತೆ .
ನಿಮ್ಮದು ತೀರಾ ಸಪ್ಪೆ ಜೀವನವಾದ್ರೆ ಏನೂ ಮಾಡೋದಕ್ಕಾಗಲ್ಲ ಸಾರಿ.ನಿಮಗೆ ಅಲ್ಲಿ ಪ್ರವೇಶವಿಲ್ಲ :(
ನಿಮಗೆ ಇಂಗ್ಲೀಶ್ ಅಥವ ಹಿಂದಿ ಬೈಗುಳ ಚೆನ್ನಾಗಿ ಗೊತ್ತಿದ್ರೆ ನೀವು ಎಂ.ಟಿ.ವಿ ರೋಡೀಸ್ ಥರದ ಶೋಗಳಿಗೆ ಪ್ರಯತ್ನಿಸಬಹುದು ನೋಡಿ.ಬರೀ ಕನ್ನಡ ಬೈಗುಳ ಗೊತ್ತಿದ್ರೆ once again sorry! ಕನ್ನಡದಲ್ಲಿ ’ಇನ್ನೂ’ ಆ ಥರದ ಶೋ ಶುರು ಆಗಿಲ್ಲ!
ಇನ್ನು ಜಾಸ್ತಿ ಜಾಸ್ತಿ SMS ಗಳನ್ನು ಬಾಚಿಕೊಳ್ಳೋದು ಅನ್ನೋದರ ರಹಸ್ಯ ಗೊತ್ತಾಗ್ಬೇಕಾ ನಿಮಗೆ ? !
ತುಂಬಾ ಸಿಂಪಲ್ ! ನೀವು ಕರ್ನಾಟಕದಲ್ಲೇ ಹುಟ್ಟಿ ಬೆಳೆದರೂ , ’ನಾನು ಹುಟ್ಟಿದ್ದು ದೆಹಲಿಯಲ್ಲಿ,ನಮ್ಮ ಅಪ್ಪ ಕರ್ನಾಟಕದವರು,ಅಮ್ಮ ತಮಿಳುನಾಡಿನವರು ಆದ್ರೆ ಈಗ ನಾವು ರಾಜಸ್ತಾನದಲ್ಲಿ ಮನೆ ಮಾಡಿಕೊಂದಿದ್ದೀವಿ ’ ಅನ್ನಿ !
ಕರ್ನಾಟಕ ,ದೆಹಲಿ,ತಮಿಳುನಾಡು,ರಾಜಸ್ತಾನದವರೆಲ್ಲರೂ ’ಇಂವ ನಮ್ಮವ ಇಂವ ನಮ್ಮವ ’ ಅಂದುಕೊಂಡು SMS ಮಾಡೇ ಮಾಡ್ತಾರೆ!
Sunday, August 30, 2009
ರೇಡಿಯೋ ಮೋಡಿ..
ಬೆಂಗಳೂರಿಗೆ ಬಂದ ಹೊಸದರಲ್ಲಿ ನಾನು ತೆಗೆದುಕೊಂಡ ಮೊದಲ ವಸ್ತು ಅಂದ್ರೆ FM Radio.ಮೈಸೂರು ಬ್ಯಾಂಕ್ ಸಿಗ್ನಲ್ ನಲ್ಲಿ ಗೋಡೆಗೆ ನೇತು ಹಾಕಿರುತ್ತಿದ್ದ ಉದ್ಯೋಗ ಜಾಹೀರಾತುಗಳನ್ನು ನೋಡುತ್ತಾ ಇರ್ಬೇಕಾದ್ರೆ ಅಲ್ಲೇ ಒಬ್ಬ ರೇಡಿಯೋ ಮಾರ್ತಾ ಇದ್ದ.ಚಿಕ್ಕದಾಗಿ ಪೆನ್ ಟಾರ್ಚ್ ಥರ ಇದ್ದ ರೇಡಿಯೋ ಇಯರ್ ಫೋನ್ ನ ಅವನು ನನ್ನ ಕಿವಿಗೆ ಬಲವಂತವಾಗಿ ತುರುಕಿರದೇ ಇದ್ದರೆ ಬಹುಷ ನಾನು ಆ ದಿನ ಅದನ್ನು ತಗೊಳ್ತಾ ಇರ್ಲಿಲ್ಲ.ನನಗೆ ಎಫ್.ಎಮ್ ರೇಡಿಯೋ ಸಿಗ್ನಲ್ ಕ್ವಾಲಿಟಿ ಅಷ್ಟೊಂದು ಚೆನ್ನಾಗಿರುತ್ತೆ ಅಂತ ಅದೇ ಮೊದಲ ಸಲ ಗೊತ್ತಾಗಿದ್ದು.ಊರಲ್ಲಿದ್ದಾಗ ಮನೆಯಲ್ಲಿ ಟು ಇನ್ ಒನ್ ಟೇಪ್ ರೆಕಾರ್ಡರ್ ಇದ್ದರೂ ಅಷ್ಟಾಗಿ ರೇಡಿಯೋ ಕೇಳ್ತಾ ಇರ್ಲಿಲ್ಲ.ಅದರಲ್ಲೂ ರೇಡಿಯೋ ಅನ್ನು ಎಫ್.ಎಮ್ ಮೋಡ್ ಗೆ ಹಾಕಿದಾಗಲಂತೂ ಬರೀ ಪುಸ್ ಅಂತ ಗಾಳಿಯ ಶಬ್ದವಷ್ಟೇ ಕೇಳಿ ಬರ್ತಾ ಇತ್ತು. ಆಮೇಲೆ ಒಂದು ದಿನ ಯಾರೋ ಹೇಳಿದ್ರು ಎಫ್.ಎಮ್ ಟ್ರಾನ್ಸ್ಮಿಶನ್ ಮಂಗಳೂರಿನಲ್ಲಿಲ್ಲ ಅದಿಕ್ಕೇ ಏನೂ ಕೇಳ್ಸಲ್ಲ ಅಂತ!
ಮೈಸೂರು ಬ್ಯಾಂಕ್ ಸಿಗ್ನಲ್ ನ ಆ ವ್ಯಾಪಾರಿ ನೂರು ರೂ ಕೇಳಿದ್ದ ಆ ರೇಡಿಯೋ ಗೆ.ಆದ್ರೆ ಬೆಂಗಳೂರಿನಲ್ಲಿ ಯಾವ ವಸ್ತುವನ್ನೂ ಚೌಕಾಶಿ ಮಾಡದೇ ತಗೋಬೇಡ ಅನ್ನೋ ಹಿತವಚನ ಬಹಳಷ್ಟು ಜನ ನೀಡಿದ್ದರಿಂದ ಅವನ ಬಳಿ ’ಬೆಲೆ ಕಡಿಮೆ ಮಾಡು’ ಅಂತ ವಾದಕ್ಕೆ ನಿಂತಿದ್ದೆ.ಕೊನೆಗೆ ಐವತ್ತು ರೂಗೆ ಡೀಲ್ ಕುದುರಿಸಿ ಅದಕ್ಕೆ ಚೈನಾ ಸೆಲ್ ಹಾಕಿ ಹಾಡು ಕೇಳಿದಾಗಲಂತೂ ಸಕ್ಕತ್ ಖುಷಿಯಾಗಿತ್ತು.
ಅಂದಿನಿಂದ ರೇಡಿಯೋ ಜೊತೆ ಲವ್ ಶುರು ಆಯ್ತು.
ಆಗ (೨೦೦೨) ಇದ್ದಿದ್ದೇ ಎರಡು ಎಫ್.ಎಂ ಸ್ಟೇಶನ್ .ಒಂದು ರೇಡಿಯೋ ಸಿಟಿ ಇನ್ನೊಂದು ಎಫ್.ಎಮ್ ರೇನ್ಬೋ.ಎಫ್.ಎಮ್ ರೇನ್ಬೋ ದ RJ ಗಳು ಹಳೇ ಶೈಲಿಯಲ್ಲೇ ಮಾತಾಡ್ತಾ ಇದ್ದಿದ್ದರಿಂದ ಅಷ್ಟೊಂದು ಇಷ್ಟವಾಗಿರಲಿಲ್ಲ.ಬದಲಾಗಿ ಚಟಪಟನೆ ಮಾತಾಡೋ ರೇಡಿಯೋ ಸಿಟಿ ತುಂಬಾನೇ ಇಷ್ಟ ಆಗಿತ್ತು.ಅದರಲ್ಲಿ ಬರೋ ಜಾಹೀರಾತುಗಳೂ ತುಂಬಾ ವಿಭಿನ್ನವಾಗಿದ್ದರಿಂದ ಸಂಪೂರ್ಣವಾಗಿ ಮನಸೋತು ಹೋಗಿದ್ದೆ ರೇಡಿಯೋ ಸಿಟಿಗೆ.ರಘು ದೀಕ್ಷಿತ್ ರ ಸ್ಪೈಸ್ ಟೆಲಿಕಾಮ್ ನ ’ಲೈಫಿನಲ್ಲಿ ಆಪರ್ಚುನಿಟಿ’ ಮುಂತಾದ ಜಾಹಿರಾತುಗಳು ಕೇಳಿ ರೇಡಿಯೋದಲ್ಲಿ ಕೂಡ ಇಷ್ಟೊಂದು ಕ್ರಿಯೇಟಿವಿಟಿ ಬಳಸಬಹುದು ಅನ್ನೋದು ಗೊತ್ತಾಗಿ ಬೆರಗಾಗಿತ್ತು.
ನನಗೆ ಇಷ್ಟವಾಗ್ತಾ ಇದ್ದಿದ್ದು ಚೈತನ್ಯಾ ಹೆಗ್ಡೆಯ ’ಚೌ ಚೌ ಬಾತ್’ ಕಾರ್ಯಕ್ರಮ.ಭಾನುವಾರ ಹನ್ನೊಂದು ಘಂಟೆಗೆ ಮುಂಚೆ ಯಾವತ್ತೂ ಏಳದ ನಾನು ಅವನ ಧ್ವನಿ ಕೇಳಲೆಂದೇ ಬೇಗ ಏಳ್ತಾ ಇದ್ದೆ.(ಕಿವಿಗೆ ರೇಡಿಯೋ ಇಯರ್ ಫೋನ್ ಸಿಕ್ಕಿಸಿ ಮತ್ತೆ ಬಿದ್ದುಕೋತಾ ಇದ್ದೆ ಆ ವಿಷಯ ಬೇರೆ!).ಒಂಥರಾ ಮಾಂತ್ರಿಕ ಶಕ್ತಿ ಇತ್ತು ಚೈತನ್ಯಾ ಹೆಗ್ಡೆಯ ಮಾತಿಗೆ.ಗಡುಸಾದರೂ ಮಾತಿನ ಮಧ್ಯೆ ಚೆಂದನೆಯ ನಗು, ಸಕ್ಕತ್ ಹಾಸ್ಯ ಪ್ರಜ್ಜ್ಞೆ,ಕನ್ನಡ ಇಂಗ್ಲೀಷ್ ಎರಡೂ ಮಿಕ್ಸ್ ಮಾಡಿ ಮಾತಾಡೋ ಅವನ ಭಾಷೆ ತುಂಬಾನೇ ಇಷ್ಟ ಆಗಿತ್ತು.ರೇಡಿಯೋದಲ್ಲಿ ಬರೀ ಧ್ವನಿ ಮಾತ್ರ ಕೇಳಿಸೋದ್ರಿಂದ ಚೈತನ್ಯಾ ಹೆಗ್ಡೆ ಅನಿಲ್ ಕುಂಬ್ಳೆ ಥರ ದಪ್ಪ ಮೀಸೆ ಇಟ್ಕೊಂಡಿರ್ತಾನೆ,ಹೀಗಿರ್ತಾನೆ ಹಾಗಿರ್ತಾನೆ ಅಂತೆಲ್ಲ ಮನಸಲ್ಲೇ ಕಲ್ಪಿಸಿಕೊಂಡಿದ್ದೆ.ಚೈತನ್ಯಾ ಹೆಗ್ಡೆ ರೇಡಿಯೋ ಸಿಟಿ ಬಿಟ್ಟು ಹೋದ ಮೇಲಂತೂ ರೇಡಿಯೋ ಕೇಳೋದೇ ಬಿಟ್ಟಿದ್ದೆ ನಾನು.
ಮತ್ತೆ ರೇಡಿಯೋ ಕೇಳೋಕೆ ಶುರು ಮಾಡಿದಾಗ ವಾಸಂತಿ ಇಷ್ಟವಾಗತೊಡಗಿದಳು.ತುಂಬಾ ಸ್ಪಷ್ಟವಾದ ಧ್ವನಿ,ಎನರ್ಜೆಟಿಕ್ ಆಗಿ ಮಾತಾಡೋ ವಿಭಿನ್ನ ಶೈಲಿ ಇಷ್ಟವಾಗಿತ್ತು.ಯಥಾಪ್ರಕಾರ ವಾಸಂತಿ ರೇಡಿಯೋ ಸಿಟಿ ಬಿಟ್ಟಾಗ ಮತ್ತೆ ರೇಡಿಯೋ ಕೇಳೋದು ಬಿಟ್ಟು ಬಿಟ್ಟೆ.
ತೀರಾ ಈಚೆಗೆ ಮತ್ತೆ ರೇಡಿಯೊ ಕೇಳೋಕೆ ಶುರು ಮಾಡಿದ ಮೇಲೆ ಬಿಗ್ ಎಫ್ ನ ’ದೀಪು -ನಾನು ನಿಮ್ಮ ಟೈಪು ’ತುಂಬಾ ಇಷ್ಟವಾಗಿದ್ದ.ಸಕ್ಕತ್ ತರಲೆ ಮಾಡೋ ಅವನು ಶೋ ನಲ್ಲಿ ಕಾಂಟೆಸ್ಟ್ ಕೂಡಾ ಇಡ್ತಾ ಇದ್ದ.ಒಂದು ದಿನ ’ಯಾವುದಾದರೂ ತರಕಾರಿ ಇಟ್ಕೊಂಡು ಯವುದಾದರೂ ಹುಡುಗೀನ ಪ್ರಪೋಸ್ ಮಾಡೋದಾದ್ರೆ ಹೇಗೆ ಪ್ರಪೋಸ್ ಮಾಡ್ತೀರಾ? ’ ಅಂತ ಕೇಳಿದ್ದ.ಅದಕ್ಕೆ ನಾನು ಬದನೆಕಾಯಿ ಇಟ್ಕೊಂಡು ಉಪೇಂದ್ರ ಶೈಲಿಯಲ್ಲಿ ಪ್ರಪೋಸ್ ಮಾಡ್ತೀನಿ ಅಂತ ದೊಡ್ಡ SMS ಕಂಪೋಸ್ ಮಾಡಿ ಕಳಿಸಿದ್ದೆ.
ಹೀಗಿತ್ತು ಆ SMS :- " ಚಾಂದಿನಿ ನೋಡು ಈ ಪ್ರೀತಿ ಪ್ರೇಮ ಎಲ್ಲಾ ಪುಸ್ತಕದ ಬದನೆಕಾಯಿ ಅಂತ ಯಾರೋ ತಲೆ ಕೆಟ್ಟೋನು ಹೇಳಿದ್ದಾನೆ.ಅವನ ಮಾತು ಕೇಳ್ಬೇಡ ನೀನು.ಆ ರೀತಿ ಹೇಳೋರೆಲ್ಲಾ ’ಹೇಳೋದು ಶಾಸ್ತ್ರ ತಿನ್ನೋದು ಬದನೆಕಾಯಿ’ ಅನ್ನೋ ರೀತಿಯ ಜನ.ನೀನು ಚೆನ್ನಾಗಿರ್ಬೇಕು ಆಗ್ಲೇ ನಾನು ನಿನ್ನನ್ನು ಪ್ರೀತಿಸೋಕಾಗೊದು.ಮನೆಗೆ ಹೋಗಿ ಈ ಬದನೆಕಾಯಿ ಸಾಂಬಾರ್ ಮಾಡಿ ಊಟ ಮಾಡು. ಚಾಂದಿನಿ ನೀನು ಚೆನ್ನಾಗಿರ್ಬೆಕು,ನೀನು ಚೆನ್ನಾಗಿದ್ರೇನೇ ನಾನೂ ಚೆನ್ನಾಗಿರೋದು " ಅಂತ ಉಪೇಂದ್ರನಿಗೇ ಡೋಸ್ ಇಟ್ಟು ಬರೆದಿದ್ದೆ.
ಯಾಕೋ ದೀಪು ಗೆ ಈ ಉತ್ತರ ಸಕ್ಕತ್ ಇಷ್ಟ ಆಗಿ ನನಗೆ ಕಾಲ್ ಮಾಡಿ ನನ್ನನ್ನು On Air ಹಾಕಿಬಿಟ್ಟ.ಯಾಕೋ ಇಡೀ ಬೆಂಗಳೂರು ಕೇಳಿಸ್ಕೊಳ್ಳುತ್ತೆ ಅನ್ನೋದು ಗೊತ್ತಾಗಿ ತುಂಬಾ ನರ್ವಸ್ ಆಗಿ ಸರಿಯಾಗಿ ಮಾತಾಡೋಕೇ ಆಗಿರ್ಲಿಲ್ಲ ನಂಗೆ.ಆದರೆ ಆ ದಿನ ದೀಪು ನನಗೆ ಸಾವರಿಯಾ ಸಿ.ಡಿ ಬಹುಮಾನವಾಗಿ ಕೊಟ್ಟಿದ್ದ .
ಇನ್ನೊಂದು ದಿನ ದೀಪು ಗೋಲ್ ಅನ್ನೊ ಶಬ್ದಕ್ಕೆ ಕನ್ನಡ ಶಬ್ದ ನೀಡಿ ಅಂತ ಕೇಳಿದ್ದ.ಎಲ್ಲರೂ ಧ್ಯೇಯ ,ಗುರಿ ಅಂತೆಲ್ಲಾ ಮೆಸೇಜ್ ಮಾಡಿದ್ರು.ಆದ್ರೆ ಅವನು ಕೇಳಿದ್ದು ಫುಟ್ಬಾಲ್ ಗೋಲ್ ಬಗ್ಗೆ!
ನಾನು ಅದಕ್ಕೆ ’ಚೆಂಡ್ಜಾಲ ಪ್ರವೇಶ’ ಅಂತ ಉತ್ತರ ಕಳಿಸಿದ್ದಕ್ಕೆ ’ಗೋಲ್’ ಸಿನೆಮಾದ ಕಪಲ್ ಪಾಸ್ ಕೊಟ್ಟಿದ್ದ.ನಾನು ಕಪಲ್ ಆಗಿರದೇ ಇದ್ದಿದ್ರಿಂದ(ನಿಜ ಹೇಳ್ಬೇಕೂಂದ್ರೆ ಸಿನೆಮಾ ಪಿ.ವಿ.ಆರ್ ನಲ್ಲಿ ರಾತ್ರಿ ಏಳಕ್ಕೆ ಇದ್ದದ್ದರಿಂದ!)ಸಿನೆಮಾಗೆ ಹೋಗೋಕೆ ಆಗಿರ್ಲಿಲ್ಲ ನನಗೆ.
ದೀಪು ಬಿಗ್ ಎಫ್ ಎಮ್ ಬಿಟ್ಟ ಮೇಲೆ ನಾನು ಮತ್ತೆ ರೇಡಿಯೋ ಕೇಳೋದು ಬಿಟ್ಟು ಬಿಟ್ಟೆ.
ಮೈಸೂರು ಬ್ಯಾಂಕ್ ಸಿಗ್ನಲ್ ನ ಆ ವ್ಯಾಪಾರಿ ನೂರು ರೂ ಕೇಳಿದ್ದ ಆ ರೇಡಿಯೋ ಗೆ.ಆದ್ರೆ ಬೆಂಗಳೂರಿನಲ್ಲಿ ಯಾವ ವಸ್ತುವನ್ನೂ ಚೌಕಾಶಿ ಮಾಡದೇ ತಗೋಬೇಡ ಅನ್ನೋ ಹಿತವಚನ ಬಹಳಷ್ಟು ಜನ ನೀಡಿದ್ದರಿಂದ ಅವನ ಬಳಿ ’ಬೆಲೆ ಕಡಿಮೆ ಮಾಡು’ ಅಂತ ವಾದಕ್ಕೆ ನಿಂತಿದ್ದೆ.ಕೊನೆಗೆ ಐವತ್ತು ರೂಗೆ ಡೀಲ್ ಕುದುರಿಸಿ ಅದಕ್ಕೆ ಚೈನಾ ಸೆಲ್ ಹಾಕಿ ಹಾಡು ಕೇಳಿದಾಗಲಂತೂ ಸಕ್ಕತ್ ಖುಷಿಯಾಗಿತ್ತು.
ಅಂದಿನಿಂದ ರೇಡಿಯೋ ಜೊತೆ ಲವ್ ಶುರು ಆಯ್ತು.
ಆಗ (೨೦೦೨) ಇದ್ದಿದ್ದೇ ಎರಡು ಎಫ್.ಎಂ ಸ್ಟೇಶನ್ .ಒಂದು ರೇಡಿಯೋ ಸಿಟಿ ಇನ್ನೊಂದು ಎಫ್.ಎಮ್ ರೇನ್ಬೋ.ಎಫ್.ಎಮ್ ರೇನ್ಬೋ ದ RJ ಗಳು ಹಳೇ ಶೈಲಿಯಲ್ಲೇ ಮಾತಾಡ್ತಾ ಇದ್ದಿದ್ದರಿಂದ ಅಷ್ಟೊಂದು ಇಷ್ಟವಾಗಿರಲಿಲ್ಲ.ಬದಲಾಗಿ ಚಟಪಟನೆ ಮಾತಾಡೋ ರೇಡಿಯೋ ಸಿಟಿ ತುಂಬಾನೇ ಇಷ್ಟ ಆಗಿತ್ತು.ಅದರಲ್ಲಿ ಬರೋ ಜಾಹೀರಾತುಗಳೂ ತುಂಬಾ ವಿಭಿನ್ನವಾಗಿದ್ದರಿಂದ ಸಂಪೂರ್ಣವಾಗಿ ಮನಸೋತು ಹೋಗಿದ್ದೆ ರೇಡಿಯೋ ಸಿಟಿಗೆ.ರಘು ದೀಕ್ಷಿತ್ ರ ಸ್ಪೈಸ್ ಟೆಲಿಕಾಮ್ ನ ’ಲೈಫಿನಲ್ಲಿ ಆಪರ್ಚುನಿಟಿ’ ಮುಂತಾದ ಜಾಹಿರಾತುಗಳು ಕೇಳಿ ರೇಡಿಯೋದಲ್ಲಿ ಕೂಡ ಇಷ್ಟೊಂದು ಕ್ರಿಯೇಟಿವಿಟಿ ಬಳಸಬಹುದು ಅನ್ನೋದು ಗೊತ್ತಾಗಿ ಬೆರಗಾಗಿತ್ತು.
ನನಗೆ ಇಷ್ಟವಾಗ್ತಾ ಇದ್ದಿದ್ದು ಚೈತನ್ಯಾ ಹೆಗ್ಡೆಯ ’ಚೌ ಚೌ ಬಾತ್’ ಕಾರ್ಯಕ್ರಮ.ಭಾನುವಾರ ಹನ್ನೊಂದು ಘಂಟೆಗೆ ಮುಂಚೆ ಯಾವತ್ತೂ ಏಳದ ನಾನು ಅವನ ಧ್ವನಿ ಕೇಳಲೆಂದೇ ಬೇಗ ಏಳ್ತಾ ಇದ್ದೆ.(ಕಿವಿಗೆ ರೇಡಿಯೋ ಇಯರ್ ಫೋನ್ ಸಿಕ್ಕಿಸಿ ಮತ್ತೆ ಬಿದ್ದುಕೋತಾ ಇದ್ದೆ ಆ ವಿಷಯ ಬೇರೆ!).ಒಂಥರಾ ಮಾಂತ್ರಿಕ ಶಕ್ತಿ ಇತ್ತು ಚೈತನ್ಯಾ ಹೆಗ್ಡೆಯ ಮಾತಿಗೆ.ಗಡುಸಾದರೂ ಮಾತಿನ ಮಧ್ಯೆ ಚೆಂದನೆಯ ನಗು, ಸಕ್ಕತ್ ಹಾಸ್ಯ ಪ್ರಜ್ಜ್ಞೆ,ಕನ್ನಡ ಇಂಗ್ಲೀಷ್ ಎರಡೂ ಮಿಕ್ಸ್ ಮಾಡಿ ಮಾತಾಡೋ ಅವನ ಭಾಷೆ ತುಂಬಾನೇ ಇಷ್ಟ ಆಗಿತ್ತು.ರೇಡಿಯೋದಲ್ಲಿ ಬರೀ ಧ್ವನಿ ಮಾತ್ರ ಕೇಳಿಸೋದ್ರಿಂದ ಚೈತನ್ಯಾ ಹೆಗ್ಡೆ ಅನಿಲ್ ಕುಂಬ್ಳೆ ಥರ ದಪ್ಪ ಮೀಸೆ ಇಟ್ಕೊಂಡಿರ್ತಾನೆ,ಹೀಗಿರ್ತಾನೆ ಹಾಗಿರ್ತಾನೆ ಅಂತೆಲ್ಲ ಮನಸಲ್ಲೇ ಕಲ್ಪಿಸಿಕೊಂಡಿದ್ದೆ.ಚೈತನ್ಯಾ ಹೆಗ್ಡೆ ರೇಡಿಯೋ ಸಿಟಿ ಬಿಟ್ಟು ಹೋದ ಮೇಲಂತೂ ರೇಡಿಯೋ ಕೇಳೋದೇ ಬಿಟ್ಟಿದ್ದೆ ನಾನು.
ಮತ್ತೆ ರೇಡಿಯೋ ಕೇಳೋಕೆ ಶುರು ಮಾಡಿದಾಗ ವಾಸಂತಿ ಇಷ್ಟವಾಗತೊಡಗಿದಳು.ತುಂಬಾ ಸ್ಪಷ್ಟವಾದ ಧ್ವನಿ,ಎನರ್ಜೆಟಿಕ್ ಆಗಿ ಮಾತಾಡೋ ವಿಭಿನ್ನ ಶೈಲಿ ಇಷ್ಟವಾಗಿತ್ತು.ಯಥಾಪ್ರಕಾರ ವಾಸಂತಿ ರೇಡಿಯೋ ಸಿಟಿ ಬಿಟ್ಟಾಗ ಮತ್ತೆ ರೇಡಿಯೋ ಕೇಳೋದು ಬಿಟ್ಟು ಬಿಟ್ಟೆ.
ತೀರಾ ಈಚೆಗೆ ಮತ್ತೆ ರೇಡಿಯೊ ಕೇಳೋಕೆ ಶುರು ಮಾಡಿದ ಮೇಲೆ ಬಿಗ್ ಎಫ್ ನ ’ದೀಪು -ನಾನು ನಿಮ್ಮ ಟೈಪು ’ತುಂಬಾ ಇಷ್ಟವಾಗಿದ್ದ.ಸಕ್ಕತ್ ತರಲೆ ಮಾಡೋ ಅವನು ಶೋ ನಲ್ಲಿ ಕಾಂಟೆಸ್ಟ್ ಕೂಡಾ ಇಡ್ತಾ ಇದ್ದ.ಒಂದು ದಿನ ’ಯಾವುದಾದರೂ ತರಕಾರಿ ಇಟ್ಕೊಂಡು ಯವುದಾದರೂ ಹುಡುಗೀನ ಪ್ರಪೋಸ್ ಮಾಡೋದಾದ್ರೆ ಹೇಗೆ ಪ್ರಪೋಸ್ ಮಾಡ್ತೀರಾ? ’ ಅಂತ ಕೇಳಿದ್ದ.ಅದಕ್ಕೆ ನಾನು ಬದನೆಕಾಯಿ ಇಟ್ಕೊಂಡು ಉಪೇಂದ್ರ ಶೈಲಿಯಲ್ಲಿ ಪ್ರಪೋಸ್ ಮಾಡ್ತೀನಿ ಅಂತ ದೊಡ್ಡ SMS ಕಂಪೋಸ್ ಮಾಡಿ ಕಳಿಸಿದ್ದೆ.
ಹೀಗಿತ್ತು ಆ SMS :- " ಚಾಂದಿನಿ ನೋಡು ಈ ಪ್ರೀತಿ ಪ್ರೇಮ ಎಲ್ಲಾ ಪುಸ್ತಕದ ಬದನೆಕಾಯಿ ಅಂತ ಯಾರೋ ತಲೆ ಕೆಟ್ಟೋನು ಹೇಳಿದ್ದಾನೆ.ಅವನ ಮಾತು ಕೇಳ್ಬೇಡ ನೀನು.ಆ ರೀತಿ ಹೇಳೋರೆಲ್ಲಾ ’ಹೇಳೋದು ಶಾಸ್ತ್ರ ತಿನ್ನೋದು ಬದನೆಕಾಯಿ’ ಅನ್ನೋ ರೀತಿಯ ಜನ.ನೀನು ಚೆನ್ನಾಗಿರ್ಬೇಕು ಆಗ್ಲೇ ನಾನು ನಿನ್ನನ್ನು ಪ್ರೀತಿಸೋಕಾಗೊದು.ಮನೆಗೆ ಹೋಗಿ ಈ ಬದನೆಕಾಯಿ ಸಾಂಬಾರ್ ಮಾಡಿ ಊಟ ಮಾಡು. ಚಾಂದಿನಿ ನೀನು ಚೆನ್ನಾಗಿರ್ಬೆಕು,ನೀನು ಚೆನ್ನಾಗಿದ್ರೇನೇ ನಾನೂ ಚೆನ್ನಾಗಿರೋದು " ಅಂತ ಉಪೇಂದ್ರನಿಗೇ ಡೋಸ್ ಇಟ್ಟು ಬರೆದಿದ್ದೆ.
ಯಾಕೋ ದೀಪು ಗೆ ಈ ಉತ್ತರ ಸಕ್ಕತ್ ಇಷ್ಟ ಆಗಿ ನನಗೆ ಕಾಲ್ ಮಾಡಿ ನನ್ನನ್ನು On Air ಹಾಕಿಬಿಟ್ಟ.ಯಾಕೋ ಇಡೀ ಬೆಂಗಳೂರು ಕೇಳಿಸ್ಕೊಳ್ಳುತ್ತೆ ಅನ್ನೋದು ಗೊತ್ತಾಗಿ ತುಂಬಾ ನರ್ವಸ್ ಆಗಿ ಸರಿಯಾಗಿ ಮಾತಾಡೋಕೇ ಆಗಿರ್ಲಿಲ್ಲ ನಂಗೆ.ಆದರೆ ಆ ದಿನ ದೀಪು ನನಗೆ ಸಾವರಿಯಾ ಸಿ.ಡಿ ಬಹುಮಾನವಾಗಿ ಕೊಟ್ಟಿದ್ದ .
ಇನ್ನೊಂದು ದಿನ ದೀಪು ಗೋಲ್ ಅನ್ನೊ ಶಬ್ದಕ್ಕೆ ಕನ್ನಡ ಶಬ್ದ ನೀಡಿ ಅಂತ ಕೇಳಿದ್ದ.ಎಲ್ಲರೂ ಧ್ಯೇಯ ,ಗುರಿ ಅಂತೆಲ್ಲಾ ಮೆಸೇಜ್ ಮಾಡಿದ್ರು.ಆದ್ರೆ ಅವನು ಕೇಳಿದ್ದು ಫುಟ್ಬಾಲ್ ಗೋಲ್ ಬಗ್ಗೆ!
ನಾನು ಅದಕ್ಕೆ ’ಚೆಂಡ್ಜಾಲ ಪ್ರವೇಶ’ ಅಂತ ಉತ್ತರ ಕಳಿಸಿದ್ದಕ್ಕೆ ’ಗೋಲ್’ ಸಿನೆಮಾದ ಕಪಲ್ ಪಾಸ್ ಕೊಟ್ಟಿದ್ದ.ನಾನು ಕಪಲ್ ಆಗಿರದೇ ಇದ್ದಿದ್ರಿಂದ(ನಿಜ ಹೇಳ್ಬೇಕೂಂದ್ರೆ ಸಿನೆಮಾ ಪಿ.ವಿ.ಆರ್ ನಲ್ಲಿ ರಾತ್ರಿ ಏಳಕ್ಕೆ ಇದ್ದದ್ದರಿಂದ!)ಸಿನೆಮಾಗೆ ಹೋಗೋಕೆ ಆಗಿರ್ಲಿಲ್ಲ ನನಗೆ.
ದೀಪು ಬಿಗ್ ಎಫ್ ಎಮ್ ಬಿಟ್ಟ ಮೇಲೆ ನಾನು ಮತ್ತೆ ರೇಡಿಯೋ ಕೇಳೋದು ಬಿಟ್ಟು ಬಿಟ್ಟೆ.
Sunday, August 2, 2009
ಕಲ್ಪವೃಕ್ಷದ ನೆನಪಿನ ಸುತ್ತ....
ಬೆಂಗಳೂರಿನಲ್ಲಿ ಬಹಳ ದಿನದಿಂದ ತಣ್ಣನೆಯ ವಾತಾವರಣ.ಈ ತಂಪಾದ ವಾತಾವರಣದಲ್ಲೂ ಕೆಲ ಜನರು ಎಳನೀರು ಹೀರುತ್ತಿದ್ದಿದ್ದು ನೋಡಿ ವಿಚಿತ್ರ ಅನ್ನಿಸಿತ್ತು.ಆದರೆ ಆಮೇಲೆ ಗೊತ್ತಾಯ್ತು ,ಬೆಂಗಳೂರಿನಲ್ಲಿ ಜನರು ಎಳನೀರು ಕುಡಿಯೋದು ಆರೋಗ್ಯಕ್ಕಾಗಿ ಅಂತ!ಹಾಗೆ ನೋಡಿದ್ರೆ ನಾನು ಕೂಡ ಅಪರೂಪಕ್ಕೊಮ್ಮೆ ಎಳನೀರು ಕುಡಿಯೋದು ಆರೋಗ್ಯದ ದೃಷ್ಟಿಯಿಂದಲೇ.
ಪ್ರತಿ ಸಲ ಎಳನೀರು ಕುಡಿಯುವಾಗಲೂ ಊರಿನ ನೆನಪು ಕಿತ್ತು ತಿನ್ನುವಂತೆ ಕಾಡುತ್ತದೆ.ಎಳನೀರು ಕೀಳಲೆಂದೇ ನಾನು ತೆಂಗಿನ ಮರ ಹತ್ತಲು ಕಲಿತಿದ್ದು ನೆನಪಾಗುತ್ತದೆ.ಮಂಗಳೂರಿನಲ್ಲಿದ್ದಷ್ಟು ದಿನ ಒಂದು ದಿನವೂ ಕಾಸು ಕೊಟ್ಟು ಎಳನೀರು ಕುಡಿದದ್ದು ನನಗೆ ನೆನಪಿಲ್ಲ.ಹಾಗಂತ ಬಿಟ್ಟಿ ಕುಡಿದೆ ಅಂದುಕೋಬೇಡಿ.ನಾನು ಯಾವತ್ತೂ ಕುಡೀತಾ ಇದ್ದಿದ್ದು ನಮ್ಮದೇ ತೋಟದ ,ನಾನೇ ಕಿತ್ತ ಹಚ್ಚ ಹಸುರು ಬಣ್ಣದ ತಂಪನೆಯ ಎಳನೀರು.
ನಮ್ಮ ತೋಟದಲ್ಲಿರೋ ತೆಂಗಿನ ಮರದಿಂದ ತೆಂಗಿನಕಾಯಿಗಳನ್ನು ಕೀಳಲು ಕರಿಯ ಅನ್ನೋನು ಬರ್ತಿದ್ದ. ’ದುನಿಯಾ’ ಸಿನೆಮಾಗೂ ಅವನಿಗೂ ಏನೂ ಸಂಬಂದವಿಲ್ಲ ಬಿಡಿ .ಇದು ಹನ್ನೆರಡು ವರ್ಷ ಹಿಂದಿನ ಕಥೆ!ಆಗೆಲ್ಲ ನಮಗೆ ಅವನೇ ಜೀವಂತ ಸೂಪರ್ ಮ್ಯಾನ್ .ಕೈಗೊಂದು ಹಗ್ಗ,ಕಾಲಿಗೊಂದು ಹಗ್ಗ ಕಟ್ಟಿ ಕುಪ್ಪಳಿಸುತ್ತ ಮರ ಹತ್ತುತ್ತಿದ್ದರೆ ಅದನ್ನು ನೋಡೋದೆ ದೊಡ್ಡ ಬೆರಗು ನಮಗೆ.ಆದ್ರೆ ಅವನು ತೋಟದ ಎಲ್ಲಾ ಮರಗಳಿಂದ ಕಾಯಿಗಳನ್ನು ಕಿತ್ತಾದ ಮೇಲೆ ಮಾತ್ರ ಅವನ ಮೇಲೆ ಅವನ ಪ್ರಾಣ ತೆಗ್ಯೋ ಅಷ್ಟು ಸಿಟ್ಟು ಬರ್ತಿತ್ತು ನನಗೆ.
ನಮ್ಮ ತೋಟದ ಕಂಪೌಂಡ್ ಸುತ್ತಲೂ ಹೆಂಚಿನ ಮನೆಗಳಿದ್ದವು.ಈ ಪಾಪಿ ಕರಿಯ.ಪ್ರತಿ ಮನೆಯ ಮೇಲೂ ಕನಿಷ್ಟ ಎರಡು ತೆಂಗಿನ ಕಾಯಿ ಬೀಳಿಸದೆ ಕೆಳಗೆ ಇಳೀತಿರಲಿಲ್ಲ.
ಹೀಗಾಗು ಕಾಯಿ ಕೀಳಲು ಕರಿಯ ಬಂದ ದಿನ ಸುತ್ತ ಮುತ್ತಲಿರುವ ಅಷ್ಟೂ ಮನೆಯವರಿಗೆ ’ಎಚ್ಚರಿಕೆ’ ನೀಡಿ ಬರ್ಬೇಕಿತ್ತು ನಾನು.ಅದಕ್ಕಿಂತ ದೊಡ್ಡ ತಲೆನೋವಿನ ಕೆಲಸ ಅಂದ್ರೆ ಅವರ ಮನೆಯ ಎಷ್ಟು ಹಂಚುಗಳು ಮುರಿದಿದೆ ಅನ್ನೋ ಲೆಕ್ಕ ಹಾಕಿ ಹಣ ಪಾವತಿ ಮಾಡೋ ಕೆಲಸ.ಹಲವು ಸಲ ಈ ಕರಿಯ ಬೇಕೂಂತ್ಲೇ ಆ ಮನೆಗಳ ಮೇಲೆ ಕಾಯಿ ಬೀಳಿಸ್ತಿದ್ದ ಅನ್ನೋ ಅನುಮಾನ ನನಗಿತ್ತು.ಯಾಕಂದ್ರೆ ಎಲ್ಲಾ ಮನೆಯವರೂ ಹಂಚಿನ ಮೂಲ ಬೆಲೆಗಿಂತ ಜಾಸ್ತಿ ಹಣ ಕೀಳುತ್ತಿದ್ದರು ನಮ್ಮಿಂದ!ಈ ಕರಿಯ ಆ ಮನೆಯವರ ಜೊತೆ ಸೇರಿ ’ಹಂಚು ಫಿಕ್ಸಿಂಗ್’ ಏನಾದ್ರೂ ಮಾಡಿರಬಹುದಾ ಅನ್ನೋ ಅನುಮಾನ ಯಾವಾಗ್ಲೂ ಕಾಡ್ತಾ ಇತ್ತು ನನಗೆ .
ಅವನು ತೋಟವಿಡೀ ಕಿತ್ತು ಬಿಸಾಕಿದ ಕಾಯಿಗಳನ್ನೆಲ್ಲ ಒಟ್ಟುಗೂಡಿಸಿ ಒಂದು ಕಡೆ ರಾಶಿ ಹಾಕೋ ಅಷ್ಟರಲ್ಲಿ ಪ್ರಾಣ ಹೋಗ್ತಿತ್ತು.ಆದರೆ ಎಲ್ಲಾ ಕೆಲಸ ಆದ ಮೇಲೆ ನಮಗೆಂದೇ ಕಿತ್ತ ಎಳನೀರು ಕುಡಿಯುವಾಗ ಮಾತ್ರ ಹೋದ ಪ್ರಾಣ ವಾಪಾಸ್ ಬರ್ತಿತ್ತು.
ಎಳನೀರಿನ ಅದ್ಭುತ ರುಚಿ ಸಿಕ್ಕಿದ ನನಗೆ ಕರಿಯನಿಗೋಸ್ಕರ ತಿಂಗಳು ಕಾಯೋದು ದೊಡ್ಡ ತಲೆ ನೋವಾಗಿತ್ತು.ಅದಕ್ಕಾಗೆ ತೆಂಗಿನ ಮರ ಹತ್ತಲು ಕಲಿಯೋದು ನನಗೆ ಅನಿವಾರ್ಯವಾಗಿತ್ತು .ತೆಂಗಿನ ಮರ ಹತ್ತಲು ಕಲಿಸುವ ಯಾವ ಕೋರ್ಸೂ ಇರದ ಕಾರಣ ನಾವೇ ಸ್ವಥ ಕಲೀಬೇಕಾಗಿತ್ತು ಅದನ್ನು.ಕರಿಯನ ಹಾಗೆ ಚಕ ಚಕನೆ ಹತ್ತಲು ಕಲಿಯಬೇಕು ಅನ್ನೋದು ನನ್ನ ಓರಗೆಯ ಹುಡುಗರ ದೊಡ್ಡ ಆಸೆಯಾಗಿತ್ತು ಆ ಕಾಲದಲ್ಲಿ!
ಆದರೆ ಎಷ್ಟು ಪ್ರಯತ್ನಿಸಿದರೂ ಅವನ ಕಲೆ ನಮಗೆ ಸಿದ್ಧಿಸಲೇ ಇಲ್ಲ!
ಅವನ ಆ ಚಾತುರ್ಯಕ್ಕೆ ಕಾರಣ ೭ ರೂಪಾಯಿಯ ಸಾರಾಯಿ ಪಾಕೀಟು(ನನಗೆ ರೇಟ್ ಹೇಗೆ ಗೊತ್ತು ಅಂತ ಆಶ್ಚರ್ಯ ಪಡಬೇಡಿ ಅದು ಜನರಲ್ ನಾಲೆಡ್ಜ್!) ಅಂತ ನಾವೆಲ್ಲಾ ಬಲವಾಗಿ ನಂಬಿದ್ವಿ!ಅದು ಒಂದು ರೀತಿಯಲ್ಲಿ ನಿಜವೂ ಆಗಿತ್ತು.
ದೂರದಲ್ಲಿ ನಿಂತು ನೋಡೋರಿಗೆ ತೆಂಗಿನ ಮರ ಹತ್ತೋದು ಒಂದು ಸುಲಭದ ಕೆಲಸ.ಆದರೆ ಬಲ್ಲವನೇ ಬಲ್ಲ ತೆಂಗಿನ ಮರ ಹತ್ತೋ ಕಷ್ಟವನ್ನು!
ತೆಂಗಿನ ಮರ ಹತ್ತೋದಕ್ಕೆ ಸಿಕ್ಕಾಪಟ್ಟೆ ಸ್ಟ್ಯಾಮಿನಾ ಬೇಕು.ಅದಕ್ಕಾಗೇ ಪಾಪ ಕರಿಯ ಎನರ್ಜಿ ಡ್ರಿಂಕ್ ಕುಡಿದೇ ಕೆಲಸ ಶುರು ಮಾಡ್ತಿದ್ದಿದ್ದು.
ಒಂದು ದಿನ ಅದು ಹೇಗೋ ಕಷ್ಟ ಪಟ್ಟು ಮರವನ್ನು ಅಪ್ಪಿ ಹಿಡಿದು ಒಂದೋಂದೇ ಇಂಚು ಹತ್ತಿ ಹತ್ತಿ ಅರ್ಧದಷ್ಟು ಹೋಗಿದ್ದೆ ನಾನು.ಅರ್ಧ ಮರ ಹತ್ತಿದ ಮೇಲೆ ಸುಸ್ತಾಗಿ ಹೋಗಿತ್ತು.ಸುಸ್ತಾಗಿದೆ ಅಂತ ಕೂರಲು ಸೀಟ್ ಬೇರೆ ಇರಲ್ವಲ್ಲ ಮರದಲ್ಲಿ! ಹಾಗೇ ಸುಧಾರಿಸಿ ಮುಂದುವರಿಸೋಣ ಅಂದುಕೊಂಡು ಹಾಗೇ ಮರವನ್ನು ಅಪ್ಪಿಕೊಂಡೇ ಸ್ವಲ್ಪ ಸಮಯ ಕಳೆದೆ.
ದುರಾದೃಷ್ಟವಶಾತ್ ಸುಸ್ತು ಕಡಿಮೆ ಆಗೋ ಬದಲು ಜಾಸ್ತಿ ಆಗ್ತಿತ್ತು.ಒಂದು ಹಂತದಲ್ಲಂತೂ ಕೈ ಬಿಟ್ಟೇ ಬಿಡೋಣ ಅಂತ ಕೂಡಾ ಅನ್ನಿಸಿತ್ತು !
ಕೈ ಬಿಟ್ಟಿದ್ದೆನಾ ಅಂತ ಕೇಳಬೇಡಿ.ಬಿಟ್ಟಿದ್ರೆ ನಾನೆಲ್ಲಿ ಇರ್ತಾ ಇದ್ದೆ ಈ ಬ್ಲಾಗ್ ಬರೆಯಲು !ಪ್ರಾಣ ಭಯದಿಂದ ಹಾಗೆ ಒಂದೊಂದೆ ಇಂಚು ಜಾರುತ್ತಾ ಜಾರುತ್ತಾ ನೆಲದ ಮೇಲೆ ಲ್ಯಾಂಡ್ ಆಗಿದ್ದೆ ಆ ದಿನ.ಆದರೂ ತೆಂಗಿನ ಮರ ಹತ್ತೋದನ್ನು ಕಲಿಯಲೇ ಬೇಕು ಅನ್ನೋ ಛಲ ಮೂಡಿತ್ತು ನನಗೆ.
ಅದು ಹೇಗೋ ಸತತ ಪ್ರಯತ್ನದಿಂದ ಆ ಕಲೆ ನನಗೂ ಸಿದ್ಧಿಸಿತು!(ಪಾಕೀಟಿನ ಸಹಾಯ ಇಲ್ಲದೆ!)
ಪ್ರೊಫೆಶನಲ್ ಆಗಿ ತೆಂಗಿನ ಮರ ಹತ್ತೋರು ಮರದ ತುದಿಯ ತನಕ ಹೋಗಲ್ಲ.ಮರದಲ್ಲೇ ಉದ್ದುದ್ದಕ್ಕೆ ನಿಂತು ಕಾಯಿಗಳನ್ನೆಲ್ಲಾ ಕತ್ತಿಯಿಂದ ಕಡಿದು ಕಡಿದು ಬೀಳಿಸುತ್ತಾರೆ.ಆದರೆ ನಮಗೆ ಪಾಕೀಟು ಇಲ್ಲದೇ ಇದ್ದದ್ದರಿಂದ -ಕ್ಷಮಿಸಿ ಅಷ್ಟೊಂದು ಸ್ಟ್ಯಾಮಿನಾ ಇಲ್ಲದೆ ಇದ್ದುದರಿಂದ ನಾವು ಮರದ ತುದಿ ತಲುಪಿದ ತಕ್ಷಣ ಮರದ ತುತ್ತ ತುದಿಗೆ ಹೋಗಿ ರೆಸ್ಟ್ ತಗೋತಾ ಇದ್ವಿ.ಸುಸ್ತೆಲ್ಲಾ ಕಡಿಮೆ ಆದ ಮೇಲೆ ಎಳನೀರನ್ನು ಕಿತ್ತು ಹುಷಾರಾಗಿ ನೆಲಕ್ಕೆಸೀಬೇಕು.ಸ್ವಲ್ಪ ಎಡವಟ್ಟಾದ್ರೂ ಎಳನೀರು ಒಡೆದು ಹೋಗ್ತಾ ಇತ್ತು.
ಮರ ಹತ್ತೋದೇ ದೊಡ್ಡ ಸಮಸ್ಯೆ ಅಂತ ಭಾವಿಸಿದ್ದ ನನಗೆ ಮರ ಹತ್ತಿದ ಮೇಲೆ ಒಳ್ಳೆಯ ಎಳನೀರನ್ನು ಗುರುತಿಸೋದೂ ಕಲೆ ಅಂತ ಗೊತ್ತಾಗಿದ್ದು ನಾನೂ ಮರ ಹತ್ತಲು ಕಲಿತ ಮೇಲೆ.ಕರಿಯ ಮಾತ್ರ ಕಾಯಿಗೆ ಬೆರಳಿನಿಂದ ಬಡಿದೇ ಯಾವುದು ಚೆನ್ನಾಗಿರೋ ಕಾಯಿ ಅಂತ ಗುರುತಿಸ್ತಾ ಇದ್ದ.ಅದನ್ನು ಗುರುತಿಸೋ ರಹಸ್ಯ ಹೇಳಿಕೊಡು ಅಂತ ಕೇಳಿದ್ರೆ ’ದಣಿ ಡಬ್ ಡಬ್ ಶಬ್ದ ಬಂದ್ರೆ ಚೆನ್ನಾಗಿರುತ್ತೆ ಟಕ್ ಟಕ್ ಅಂತ ಶಬ್ದ ಬಂದ್ರೆ ಅದು ಆಲ್ ಮೋಸ್ಟ್ ತೆಂಗಿನಕಾಯಿ ಅಂತ ಅರ್ಥ’ ಅಂತ ಹೇಳಿದ್ದ ಕರಿಯ.ಅದೆಷ್ಟು ಬಡಿದರೂ ನಮಗೆ ಏನೋ ಒಂದು ಶಬ್ದ ಕೇಳಿಸುತ್ತಿತ್ತೇ ವಿನಹ ಅದು ಡಬ್ ಡಬ್ ಆ ಅಥವ ಟಕ್ ಟಕ್ ಆ ಅನ್ನೋದು ಗೊತ್ತಾಗ್ತಾ ಇರ್ಲಿಲ್ಲ !ನಾನು ಹಾಗೇ ಸುಮ್ಮನೆ ನೋಡೋದಕ್ಕೆ ಗುಂಡಗಿರೋ ,ಹಸಿರಾಗಿರೋ ಎಳನೀರನ್ನು ಕಿತ್ತು ಬಿಸಾಕಿ ವಾಪಾಸ್ ಇಳಿದು ಬರ್ತಾ ಇದ್ದೆ.ಅದನ್ನು ಕುಡಿದು ನೋಡಿದ ಮೇಲೇನೇ ಗೊತ್ತಾಗೋದು ಅದು ಚೆನ್ನಾಗಿದೆಯೋ ಇಲ್ವೋ ಅನ್ನೋದು.
ಈ ತೆಂಗಿನ ಮರ ಹತ್ತೋ ವಿದ್ಯೆ ಕಲಿತ ಮೇಲೆ ನನಗೆ ಅದು ಬಹುತೇಕ ಉಪಯೋಗ ಬಿದ್ದಿದ್ದು ಪರೀಕ್ಷೆಯ ಸಮಯದಲ್ಲಿ.ಪರೀಕ್ಷೆಗೆ ಓದಲೆಂದು ಹುಡುಗರು ಕೆರೆ ದಡಕ್ಕೆ ,ಮರದ ಕೆಳಕ್ಕೆ ಅಂತ ಹೋಗ್ತಿದ್ರೆ ನಾನು ಮಾತ್ರ ಸೀದಾ ತೆಂಗಿನ ಮರ ಹತ್ತಿ ಅಲ್ಲೇ ಕೂತು ಓದ್ತಾ ಇದ್ದೆ.ಐದನೆಯ ತರಗತಿಯ ಎಲ್ಲಾ ಪರೀಕ್ಷೆಗೆ ಬಹುಷಃ ಅಲ್ಲೇ ಕೂತು ತಯಾರಿ ನಡೆಸಿದ್ದೆ.
ಬೆಂಗಳೂರಿನಲ್ಲಿ ತೆಂಗಿನ ಮರಗಳೇ ಅಪರೂಪ.ಅದೃಷ್ಟವಶಾತ್ ನಾವಿರುವ ರೂಮ್ ಹಿಂದೆ ಎರಡು ತೆಂಗಿನ ಮರಗಳಿವೆ.ಒಂದು ಮಧ್ಯರಾತ್ರಿ ಈ ಮರದ ತೆಂಗಿನಗರಿ ಕರೆಂಟ್ ವೈರ್ ಮೇಲೆ ಬಿದ್ದು ಸುಮಾರು ಎರಡು ನಿಮಿಷ ಟಪ್ ಟಪ್ ಅನ್ನೋ ಶಬ್ದ ಬಂದಿತ್ತು.ನಾವು ಎಲ್ಲೋ ಬಾಂಬ್ ಸ್ಫೋಟ ಆಗಿರ್ಬೇಕೇನೋ ಅನ್ನೋ ಆತಂಕದಿಂದ ಹೊರಗೆ ಬಂದು ನೋಡಿದಾಗಲೇ ಗೊತ್ತಾಗಿದ್ದು ನಮಗೆ ನಮ್ಮ ಕಂಪೌಂಡ್ ನಲ್ಲೇ ತೆಂಗಿನ ಮರ ಇದೆ ಅನ್ನೋದು!
ಈ ತೆಂಗಿನ ಮರ ಹತ್ತೋದಕ್ಕೆ ಮಾತ್ರ ಟ್ರೈ ಮಾಡಿಲ್ಲ ನಾನು !ಈಗ ಅಷ್ಟೊಂದು ಸ್ಟ್ಯಾಮಿನಾ ಇಲ್ಲ!(ಸರಕಾರದವರು ಮಾಡಿರೋ ಪಾಕೀಟು ಸಾರಾಯಿ ನಿಶೇಧಕ್ಕೂ ಸ್ಟ್ಯಾಮಿನಾಗೂ ಯಾವುದೇ ಸಂಬಂಧ ಕಲ್ಪಿಸಬೇಡಿ ಪ್ಲೀಸ್!)
ಪ್ರತಿ ಸಲ ಎಳನೀರು ಕುಡಿಯುವಾಗಲೂ ಊರಿನ ನೆನಪು ಕಿತ್ತು ತಿನ್ನುವಂತೆ ಕಾಡುತ್ತದೆ.ಎಳನೀರು ಕೀಳಲೆಂದೇ ನಾನು ತೆಂಗಿನ ಮರ ಹತ್ತಲು ಕಲಿತಿದ್ದು ನೆನಪಾಗುತ್ತದೆ.ಮಂಗಳೂರಿನಲ್ಲಿದ್ದಷ್ಟು ದಿನ ಒಂದು ದಿನವೂ ಕಾಸು ಕೊಟ್ಟು ಎಳನೀರು ಕುಡಿದದ್ದು ನನಗೆ ನೆನಪಿಲ್ಲ.ಹಾಗಂತ ಬಿಟ್ಟಿ ಕುಡಿದೆ ಅಂದುಕೋಬೇಡಿ.ನಾನು ಯಾವತ್ತೂ ಕುಡೀತಾ ಇದ್ದಿದ್ದು ನಮ್ಮದೇ ತೋಟದ ,ನಾನೇ ಕಿತ್ತ ಹಚ್ಚ ಹಸುರು ಬಣ್ಣದ ತಂಪನೆಯ ಎಳನೀರು.
ನಮ್ಮ ತೋಟದಲ್ಲಿರೋ ತೆಂಗಿನ ಮರದಿಂದ ತೆಂಗಿನಕಾಯಿಗಳನ್ನು ಕೀಳಲು ಕರಿಯ ಅನ್ನೋನು ಬರ್ತಿದ್ದ. ’ದುನಿಯಾ’ ಸಿನೆಮಾಗೂ ಅವನಿಗೂ ಏನೂ ಸಂಬಂದವಿಲ್ಲ ಬಿಡಿ .ಇದು ಹನ್ನೆರಡು ವರ್ಷ ಹಿಂದಿನ ಕಥೆ!ಆಗೆಲ್ಲ ನಮಗೆ ಅವನೇ ಜೀವಂತ ಸೂಪರ್ ಮ್ಯಾನ್ .ಕೈಗೊಂದು ಹಗ್ಗ,ಕಾಲಿಗೊಂದು ಹಗ್ಗ ಕಟ್ಟಿ ಕುಪ್ಪಳಿಸುತ್ತ ಮರ ಹತ್ತುತ್ತಿದ್ದರೆ ಅದನ್ನು ನೋಡೋದೆ ದೊಡ್ಡ ಬೆರಗು ನಮಗೆ.ಆದ್ರೆ ಅವನು ತೋಟದ ಎಲ್ಲಾ ಮರಗಳಿಂದ ಕಾಯಿಗಳನ್ನು ಕಿತ್ತಾದ ಮೇಲೆ ಮಾತ್ರ ಅವನ ಮೇಲೆ ಅವನ ಪ್ರಾಣ ತೆಗ್ಯೋ ಅಷ್ಟು ಸಿಟ್ಟು ಬರ್ತಿತ್ತು ನನಗೆ.
ನಮ್ಮ ತೋಟದ ಕಂಪೌಂಡ್ ಸುತ್ತಲೂ ಹೆಂಚಿನ ಮನೆಗಳಿದ್ದವು.ಈ ಪಾಪಿ ಕರಿಯ.ಪ್ರತಿ ಮನೆಯ ಮೇಲೂ ಕನಿಷ್ಟ ಎರಡು ತೆಂಗಿನ ಕಾಯಿ ಬೀಳಿಸದೆ ಕೆಳಗೆ ಇಳೀತಿರಲಿಲ್ಲ.
ಹೀಗಾಗು ಕಾಯಿ ಕೀಳಲು ಕರಿಯ ಬಂದ ದಿನ ಸುತ್ತ ಮುತ್ತಲಿರುವ ಅಷ್ಟೂ ಮನೆಯವರಿಗೆ ’ಎಚ್ಚರಿಕೆ’ ನೀಡಿ ಬರ್ಬೇಕಿತ್ತು ನಾನು.ಅದಕ್ಕಿಂತ ದೊಡ್ಡ ತಲೆನೋವಿನ ಕೆಲಸ ಅಂದ್ರೆ ಅವರ ಮನೆಯ ಎಷ್ಟು ಹಂಚುಗಳು ಮುರಿದಿದೆ ಅನ್ನೋ ಲೆಕ್ಕ ಹಾಕಿ ಹಣ ಪಾವತಿ ಮಾಡೋ ಕೆಲಸ.ಹಲವು ಸಲ ಈ ಕರಿಯ ಬೇಕೂಂತ್ಲೇ ಆ ಮನೆಗಳ ಮೇಲೆ ಕಾಯಿ ಬೀಳಿಸ್ತಿದ್ದ ಅನ್ನೋ ಅನುಮಾನ ನನಗಿತ್ತು.ಯಾಕಂದ್ರೆ ಎಲ್ಲಾ ಮನೆಯವರೂ ಹಂಚಿನ ಮೂಲ ಬೆಲೆಗಿಂತ ಜಾಸ್ತಿ ಹಣ ಕೀಳುತ್ತಿದ್ದರು ನಮ್ಮಿಂದ!ಈ ಕರಿಯ ಆ ಮನೆಯವರ ಜೊತೆ ಸೇರಿ ’ಹಂಚು ಫಿಕ್ಸಿಂಗ್’ ಏನಾದ್ರೂ ಮಾಡಿರಬಹುದಾ ಅನ್ನೋ ಅನುಮಾನ ಯಾವಾಗ್ಲೂ ಕಾಡ್ತಾ ಇತ್ತು ನನಗೆ .
ಅವನು ತೋಟವಿಡೀ ಕಿತ್ತು ಬಿಸಾಕಿದ ಕಾಯಿಗಳನ್ನೆಲ್ಲ ಒಟ್ಟುಗೂಡಿಸಿ ಒಂದು ಕಡೆ ರಾಶಿ ಹಾಕೋ ಅಷ್ಟರಲ್ಲಿ ಪ್ರಾಣ ಹೋಗ್ತಿತ್ತು.ಆದರೆ ಎಲ್ಲಾ ಕೆಲಸ ಆದ ಮೇಲೆ ನಮಗೆಂದೇ ಕಿತ್ತ ಎಳನೀರು ಕುಡಿಯುವಾಗ ಮಾತ್ರ ಹೋದ ಪ್ರಾಣ ವಾಪಾಸ್ ಬರ್ತಿತ್ತು.
ಎಳನೀರಿನ ಅದ್ಭುತ ರುಚಿ ಸಿಕ್ಕಿದ ನನಗೆ ಕರಿಯನಿಗೋಸ್ಕರ ತಿಂಗಳು ಕಾಯೋದು ದೊಡ್ಡ ತಲೆ ನೋವಾಗಿತ್ತು.ಅದಕ್ಕಾಗೆ ತೆಂಗಿನ ಮರ ಹತ್ತಲು ಕಲಿಯೋದು ನನಗೆ ಅನಿವಾರ್ಯವಾಗಿತ್ತು .ತೆಂಗಿನ ಮರ ಹತ್ತಲು ಕಲಿಸುವ ಯಾವ ಕೋರ್ಸೂ ಇರದ ಕಾರಣ ನಾವೇ ಸ್ವಥ ಕಲೀಬೇಕಾಗಿತ್ತು ಅದನ್ನು.ಕರಿಯನ ಹಾಗೆ ಚಕ ಚಕನೆ ಹತ್ತಲು ಕಲಿಯಬೇಕು ಅನ್ನೋದು ನನ್ನ ಓರಗೆಯ ಹುಡುಗರ ದೊಡ್ಡ ಆಸೆಯಾಗಿತ್ತು ಆ ಕಾಲದಲ್ಲಿ!
ಆದರೆ ಎಷ್ಟು ಪ್ರಯತ್ನಿಸಿದರೂ ಅವನ ಕಲೆ ನಮಗೆ ಸಿದ್ಧಿಸಲೇ ಇಲ್ಲ!
ಅವನ ಆ ಚಾತುರ್ಯಕ್ಕೆ ಕಾರಣ ೭ ರೂಪಾಯಿಯ ಸಾರಾಯಿ ಪಾಕೀಟು(ನನಗೆ ರೇಟ್ ಹೇಗೆ ಗೊತ್ತು ಅಂತ ಆಶ್ಚರ್ಯ ಪಡಬೇಡಿ ಅದು ಜನರಲ್ ನಾಲೆಡ್ಜ್!) ಅಂತ ನಾವೆಲ್ಲಾ ಬಲವಾಗಿ ನಂಬಿದ್ವಿ!ಅದು ಒಂದು ರೀತಿಯಲ್ಲಿ ನಿಜವೂ ಆಗಿತ್ತು.
ದೂರದಲ್ಲಿ ನಿಂತು ನೋಡೋರಿಗೆ ತೆಂಗಿನ ಮರ ಹತ್ತೋದು ಒಂದು ಸುಲಭದ ಕೆಲಸ.ಆದರೆ ಬಲ್ಲವನೇ ಬಲ್ಲ ತೆಂಗಿನ ಮರ ಹತ್ತೋ ಕಷ್ಟವನ್ನು!
ತೆಂಗಿನ ಮರ ಹತ್ತೋದಕ್ಕೆ ಸಿಕ್ಕಾಪಟ್ಟೆ ಸ್ಟ್ಯಾಮಿನಾ ಬೇಕು.ಅದಕ್ಕಾಗೇ ಪಾಪ ಕರಿಯ ಎನರ್ಜಿ ಡ್ರಿಂಕ್ ಕುಡಿದೇ ಕೆಲಸ ಶುರು ಮಾಡ್ತಿದ್ದಿದ್ದು.
ಒಂದು ದಿನ ಅದು ಹೇಗೋ ಕಷ್ಟ ಪಟ್ಟು ಮರವನ್ನು ಅಪ್ಪಿ ಹಿಡಿದು ಒಂದೋಂದೇ ಇಂಚು ಹತ್ತಿ ಹತ್ತಿ ಅರ್ಧದಷ್ಟು ಹೋಗಿದ್ದೆ ನಾನು.ಅರ್ಧ ಮರ ಹತ್ತಿದ ಮೇಲೆ ಸುಸ್ತಾಗಿ ಹೋಗಿತ್ತು.ಸುಸ್ತಾಗಿದೆ ಅಂತ ಕೂರಲು ಸೀಟ್ ಬೇರೆ ಇರಲ್ವಲ್ಲ ಮರದಲ್ಲಿ! ಹಾಗೇ ಸುಧಾರಿಸಿ ಮುಂದುವರಿಸೋಣ ಅಂದುಕೊಂಡು ಹಾಗೇ ಮರವನ್ನು ಅಪ್ಪಿಕೊಂಡೇ ಸ್ವಲ್ಪ ಸಮಯ ಕಳೆದೆ.
ದುರಾದೃಷ್ಟವಶಾತ್ ಸುಸ್ತು ಕಡಿಮೆ ಆಗೋ ಬದಲು ಜಾಸ್ತಿ ಆಗ್ತಿತ್ತು.ಒಂದು ಹಂತದಲ್ಲಂತೂ ಕೈ ಬಿಟ್ಟೇ ಬಿಡೋಣ ಅಂತ ಕೂಡಾ ಅನ್ನಿಸಿತ್ತು !
ಕೈ ಬಿಟ್ಟಿದ್ದೆನಾ ಅಂತ ಕೇಳಬೇಡಿ.ಬಿಟ್ಟಿದ್ರೆ ನಾನೆಲ್ಲಿ ಇರ್ತಾ ಇದ್ದೆ ಈ ಬ್ಲಾಗ್ ಬರೆಯಲು !ಪ್ರಾಣ ಭಯದಿಂದ ಹಾಗೆ ಒಂದೊಂದೆ ಇಂಚು ಜಾರುತ್ತಾ ಜಾರುತ್ತಾ ನೆಲದ ಮೇಲೆ ಲ್ಯಾಂಡ್ ಆಗಿದ್ದೆ ಆ ದಿನ.ಆದರೂ ತೆಂಗಿನ ಮರ ಹತ್ತೋದನ್ನು ಕಲಿಯಲೇ ಬೇಕು ಅನ್ನೋ ಛಲ ಮೂಡಿತ್ತು ನನಗೆ.
ಅದು ಹೇಗೋ ಸತತ ಪ್ರಯತ್ನದಿಂದ ಆ ಕಲೆ ನನಗೂ ಸಿದ್ಧಿಸಿತು!(ಪಾಕೀಟಿನ ಸಹಾಯ ಇಲ್ಲದೆ!)
ಪ್ರೊಫೆಶನಲ್ ಆಗಿ ತೆಂಗಿನ ಮರ ಹತ್ತೋರು ಮರದ ತುದಿಯ ತನಕ ಹೋಗಲ್ಲ.ಮರದಲ್ಲೇ ಉದ್ದುದ್ದಕ್ಕೆ ನಿಂತು ಕಾಯಿಗಳನ್ನೆಲ್ಲಾ ಕತ್ತಿಯಿಂದ ಕಡಿದು ಕಡಿದು ಬೀಳಿಸುತ್ತಾರೆ.ಆದರೆ ನಮಗೆ ಪಾಕೀಟು ಇಲ್ಲದೇ ಇದ್ದದ್ದರಿಂದ -ಕ್ಷಮಿಸಿ ಅಷ್ಟೊಂದು ಸ್ಟ್ಯಾಮಿನಾ ಇಲ್ಲದೆ ಇದ್ದುದರಿಂದ ನಾವು ಮರದ ತುದಿ ತಲುಪಿದ ತಕ್ಷಣ ಮರದ ತುತ್ತ ತುದಿಗೆ ಹೋಗಿ ರೆಸ್ಟ್ ತಗೋತಾ ಇದ್ವಿ.ಸುಸ್ತೆಲ್ಲಾ ಕಡಿಮೆ ಆದ ಮೇಲೆ ಎಳನೀರನ್ನು ಕಿತ್ತು ಹುಷಾರಾಗಿ ನೆಲಕ್ಕೆಸೀಬೇಕು.ಸ್ವಲ್ಪ ಎಡವಟ್ಟಾದ್ರೂ ಎಳನೀರು ಒಡೆದು ಹೋಗ್ತಾ ಇತ್ತು.
ಮರ ಹತ್ತೋದೇ ದೊಡ್ಡ ಸಮಸ್ಯೆ ಅಂತ ಭಾವಿಸಿದ್ದ ನನಗೆ ಮರ ಹತ್ತಿದ ಮೇಲೆ ಒಳ್ಳೆಯ ಎಳನೀರನ್ನು ಗುರುತಿಸೋದೂ ಕಲೆ ಅಂತ ಗೊತ್ತಾಗಿದ್ದು ನಾನೂ ಮರ ಹತ್ತಲು ಕಲಿತ ಮೇಲೆ.ಕರಿಯ ಮಾತ್ರ ಕಾಯಿಗೆ ಬೆರಳಿನಿಂದ ಬಡಿದೇ ಯಾವುದು ಚೆನ್ನಾಗಿರೋ ಕಾಯಿ ಅಂತ ಗುರುತಿಸ್ತಾ ಇದ್ದ.ಅದನ್ನು ಗುರುತಿಸೋ ರಹಸ್ಯ ಹೇಳಿಕೊಡು ಅಂತ ಕೇಳಿದ್ರೆ ’ದಣಿ ಡಬ್ ಡಬ್ ಶಬ್ದ ಬಂದ್ರೆ ಚೆನ್ನಾಗಿರುತ್ತೆ ಟಕ್ ಟಕ್ ಅಂತ ಶಬ್ದ ಬಂದ್ರೆ ಅದು ಆಲ್ ಮೋಸ್ಟ್ ತೆಂಗಿನಕಾಯಿ ಅಂತ ಅರ್ಥ’ ಅಂತ ಹೇಳಿದ್ದ ಕರಿಯ.ಅದೆಷ್ಟು ಬಡಿದರೂ ನಮಗೆ ಏನೋ ಒಂದು ಶಬ್ದ ಕೇಳಿಸುತ್ತಿತ್ತೇ ವಿನಹ ಅದು ಡಬ್ ಡಬ್ ಆ ಅಥವ ಟಕ್ ಟಕ್ ಆ ಅನ್ನೋದು ಗೊತ್ತಾಗ್ತಾ ಇರ್ಲಿಲ್ಲ !ನಾನು ಹಾಗೇ ಸುಮ್ಮನೆ ನೋಡೋದಕ್ಕೆ ಗುಂಡಗಿರೋ ,ಹಸಿರಾಗಿರೋ ಎಳನೀರನ್ನು ಕಿತ್ತು ಬಿಸಾಕಿ ವಾಪಾಸ್ ಇಳಿದು ಬರ್ತಾ ಇದ್ದೆ.ಅದನ್ನು ಕುಡಿದು ನೋಡಿದ ಮೇಲೇನೇ ಗೊತ್ತಾಗೋದು ಅದು ಚೆನ್ನಾಗಿದೆಯೋ ಇಲ್ವೋ ಅನ್ನೋದು.
ಈ ತೆಂಗಿನ ಮರ ಹತ್ತೋ ವಿದ್ಯೆ ಕಲಿತ ಮೇಲೆ ನನಗೆ ಅದು ಬಹುತೇಕ ಉಪಯೋಗ ಬಿದ್ದಿದ್ದು ಪರೀಕ್ಷೆಯ ಸಮಯದಲ್ಲಿ.ಪರೀಕ್ಷೆಗೆ ಓದಲೆಂದು ಹುಡುಗರು ಕೆರೆ ದಡಕ್ಕೆ ,ಮರದ ಕೆಳಕ್ಕೆ ಅಂತ ಹೋಗ್ತಿದ್ರೆ ನಾನು ಮಾತ್ರ ಸೀದಾ ತೆಂಗಿನ ಮರ ಹತ್ತಿ ಅಲ್ಲೇ ಕೂತು ಓದ್ತಾ ಇದ್ದೆ.ಐದನೆಯ ತರಗತಿಯ ಎಲ್ಲಾ ಪರೀಕ್ಷೆಗೆ ಬಹುಷಃ ಅಲ್ಲೇ ಕೂತು ತಯಾರಿ ನಡೆಸಿದ್ದೆ.
ಬೆಂಗಳೂರಿನಲ್ಲಿ ತೆಂಗಿನ ಮರಗಳೇ ಅಪರೂಪ.ಅದೃಷ್ಟವಶಾತ್ ನಾವಿರುವ ರೂಮ್ ಹಿಂದೆ ಎರಡು ತೆಂಗಿನ ಮರಗಳಿವೆ.ಒಂದು ಮಧ್ಯರಾತ್ರಿ ಈ ಮರದ ತೆಂಗಿನಗರಿ ಕರೆಂಟ್ ವೈರ್ ಮೇಲೆ ಬಿದ್ದು ಸುಮಾರು ಎರಡು ನಿಮಿಷ ಟಪ್ ಟಪ್ ಅನ್ನೋ ಶಬ್ದ ಬಂದಿತ್ತು.ನಾವು ಎಲ್ಲೋ ಬಾಂಬ್ ಸ್ಫೋಟ ಆಗಿರ್ಬೇಕೇನೋ ಅನ್ನೋ ಆತಂಕದಿಂದ ಹೊರಗೆ ಬಂದು ನೋಡಿದಾಗಲೇ ಗೊತ್ತಾಗಿದ್ದು ನಮಗೆ ನಮ್ಮ ಕಂಪೌಂಡ್ ನಲ್ಲೇ ತೆಂಗಿನ ಮರ ಇದೆ ಅನ್ನೋದು!
ಈ ತೆಂಗಿನ ಮರ ಹತ್ತೋದಕ್ಕೆ ಮಾತ್ರ ಟ್ರೈ ಮಾಡಿಲ್ಲ ನಾನು !ಈಗ ಅಷ್ಟೊಂದು ಸ್ಟ್ಯಾಮಿನಾ ಇಲ್ಲ!(ಸರಕಾರದವರು ಮಾಡಿರೋ ಪಾಕೀಟು ಸಾರಾಯಿ ನಿಶೇಧಕ್ಕೂ ಸ್ಟ್ಯಾಮಿನಾಗೂ ಯಾವುದೇ ಸಂಬಂಧ ಕಲ್ಪಿಸಬೇಡಿ ಪ್ಲೀಸ್!)
Sunday, July 26, 2009
ಇನ್ನಾದರೂ ಎದ್ದೇಳಿ!
’ಎದ್ದೇಳು ಮಂಜುನಾಥ’ ಚಿತ್ರ ನೋಡಿದೆ.ಚಿತ್ರದ ವಿಮರ್ಶೆ ಬರೆಯಲು ನನಗೆ ಬರಲ್ಲ.ಬರಲ್ಲ ಅನ್ನೋದಕ್ಕಿಂತ ಬರೆಯಲು ಮನಸ್ಸಿಲ್ಲ ಅನ್ನೋದೇ ಸೂಕ್ತ.
ನಾನು ಚಿತ್ರ ಚೆನ್ನಾಗಿದೆ ಅನ್ನೋದು ಅದಕ್ಕೆ ಇನ್ನೊಬ್ಬ(ಳು) ’ಥೂ ನಿನ್ನ ಏನ್ ಕಚಡಾ ಟೇಸ್ಟ್ ನಿನ್ನದು’ ಅನ್ನೋದು.ನಾನೂ ಸೋಲೊಪ್ಪಲಾರದೆ ಸಮರ್ಥನೆ ನೀಡೋದು ,ಇಂಥ ಕಿರಿಕ್ ಗಳು ಬಹಳಷ್ಟು ಸಲ ಆಗಿವೆ.ಅದಿಕ್ಕೆ ಚಿತ್ರ ನೋಡಿ ಅಂತ ಹೇಳೋದು ತುಂಬಾ ಕಡಿಮೆ.
’ಎದ್ದೇಳು ಮಂಜುನಾಥ’ ಕೂಡಾ ನೋಡಿ ಅಂತ ಯಾರಿಗೂ ಹೇಳಲ್ಲ ನಾನು.ನಿಮ್ ದುಡ್ಡು ನೀವು ಅದನ್ನು ಯಾವ ರೀತಿ ಬೇಕಾದ್ರೂ ಖರ್ಚು ಮಾಡಿ ಸ್ವಾಮಿ ,ನಾನ್ಯಾರು ಸಲಹೆ ಕೊಡೋಕೆ ಅಲ್ವ?
ಅಷ್ಟಕ್ಕೂ ನನಗೆ ಈ ಚಿತ್ರದ ಬಗ್ಗೆ ಬರೀಬೇಕು ಅನಿಸಿದ್ದು ಯಾಕಂದ್ರೆ ಇದೊಂದು ವಿಭಿನ್ನ ರೀತಿಯ ಸಿನೆಮಾ. ಕಡಿಮೆ ಬಜೆಟ್ ನ(ಎಷ್ಟು ಅಂತ ಗೊತ್ತಿಲ್ಲ!) ಬರೀ ಸಂಭಾಷಣೆ ಮತ್ತು ಜಗ್ಗೇಶ್ ಅಭಿನಯವನ್ನು ನಂಬಿಕೊಂಡು ಮಾಡಿದ ಒಂದು ಚಿತ್ರ.ಬರೀ ಸಂಭಾಷಣೆಯಿಂದಲೂ ಚಿತ್ರ ಗೆಲ್ಲಿಸಬಹುದು ಅಂತ ನಿರೂಪಿಸಿದ ಚಿತ್ರ.
ಚಿತ್ರ ಬರೀ ಒಂದು ಲಾಡ್ಜ್ ರೂಮ್ ,ಅಥವಾ ಒಂದು ಪುಟ್ಟ ಮನೆಯಲ್ಲಿ ಮುಗಿದು ಬಿಡುತ್ತೆ.ಅದ್ಯಾಕೆ ಕೆಲವು ನಿರ್ದೇಶಕರಿಗೆ ಬ್ಯಾಂಕಾಕ್ ,ಸ್ವಿಟ್ಜರ್ಲ್ಯಾಂಡ್ ನಂಥ ಊರಿನ ಮೇಲೆ ’ಪ್ರೇಮ್’ ವೋ ಗೊತ್ತಿಲ್ಲ.ಅನಾವಶ್ಯಕ ಕೋಟಿಗಟ್ಟಲೆ ಖರ್ಚು ಮಾಡ್ತಾರೆ.ಕೇಳಿದ್ರೆ ’ ತಮಿಳು ,ತೆಲುಗಿನವರು ಮಾಡ್ತಾರೆ ಅದಕ್ಕೆ ನಾವೇನ್ ಕಮ್ಮಿ ’ ಅಂತಾರೆ.
ಅಲ್ಲಾ ನಮ್ ಶಿವಣ್ಣ ಹಳ್ಳಿಯಲ್ಲಿ ಹಾಕೋ ಅಂಥ ಪಟ್ಟಾಪಟ್ಟಿ ಚಡ್ಡಿ ಹಾಕ್ಕೊಂಡು ವಿದೇಶದಲ್ಲಿ ಹೋಗಿ ಕುಣೀತಾರೆ.ಇದರಿಂದ ಅದೇನು ಸಾಧಿಸ್ತಾರೋ ದೇವರಿಗೆ ಗೊತ್ತು.ಪಟ್ಟಾಪಟ್ಟಿ ಚಡ್ಡಿ ಡ್ಯಾನ್ಸ್ ಮಾಡ್ಲೇ ಬೇಕೂಂದ್ರೆ ಇಲ್ಲೆ ಕೆ.ಆರ್ ಮಾರ್ಕೆಟ್ ನಲ್ಲೂ ಮಾಡಬಹುದಲ್ಲ.ಅದಕ್ಕ್ಯಾಕೆ ವಿದೇಶಕ್ಕೆ ಹೋಗ್ಬೇಕು.
ಹೀಗೇನಾದ್ರೂ ಕೇಳಿದ್ರೆ ’ನಿಂಗೇನಪ್ಪ ಗೊತ್ತು ಸಿನೆಮಾ ಬಗ್ಗೆ ’ ಅಂತಾರೆ.ನಂಗೆ ಗೊತ್ತಾಗೋದೂ ಬೇಡ ಬಿಡಿ.
ಸಿದ್ಧಸೂತ್ರಗಳನ್ನು ಬಳಸದೆ ತಯಾರಿಸಿದ್ದಕ್ಕೆ ನನಗೆ ’ಎದ್ದೇಳು ’ ಇಷ್ಟ ಆಗಿದ್ದು.ಸಿನೆಮಾ ಅಂದ್ರೆ ಐದು ಸಾಂಗ್,ನಾಲ್ಕು ಫೈಟ್ ಎರಡು ರೇಪ್ ಅನ್ನೋ ಅಂಥ ರೆಡಿಮೇಡ್ ಫಾರ್ಮುಲಾಗಳನ್ನು ಬಿಟ್ಟು ರಿಸ್ಕ್ ತಗೊಂಡಿದ್ದಕ್ಕೆ ಗುರುಪ್ರಸಾದ್ ಗೆ ಅಭಿನಂದನೆಗಳು.
ನನ್ನ ಗೆಳೆಯನೊಬ್ಬನ ಬಳಿ ’ನಾನು ಜಬ್ ವಿ ಮೆಟ್ ನೋಡಿದೆ ’ ಅಂದಿದ್ದಕ್ಕೆ ’ಥೂ ನಿನ್ನಂಥವರಿರೋದ್ರಿಂದಾ ಕಣೋ ಕನ್ನಡ ಚಿತ್ರರಂಗ ಬೆಳೀತಾ ಇಲ್ಲ.ಯಾವಾಗ ನೊಡಿದ್ರೂ ಹಿಂದಿ,ತಮಿಳು ಹೀಗೇ ಬೇರೆ ಭಾಷೆಯ ಚಿತ್ರ ನೋಡ್ತೀರಾ ’ ಅಂತ ಉದ್ದುದ್ದ ಲೆಕ್ಚರ್ ಕೊಟ್ಟಿದ್ದ.
ಅವನು ಹೇಳಿದ್ದೆಲ್ಲಾ ಕೇಳಿಸ್ಕೊಂಡೆ.
ಆಮೇಲೆ ಅವನ ಹತ್ತಿರ ’ನಿನಗೆ ಪರಾಮರ್ಶಿಸು ಅನ್ನೋ ಶಬ್ದದ ಅರ್ಥ ಗೊತ್ತಾ?’ ಕೇಳಿದೆ. ’ಇಲ್ಲ ’ ಅಂದ .ಇರಲಿ ಅವಲೋಕನ ಅಂದ್ರೆ ಗೊತ್ತಾ ಅಂದೆ ’ಗೊತ್ತಿಲ್ಲ ’ ಅಂದ.
ನೋಡು ನಿನಗೆ ಕನ್ನಡದ ಎರಡೇ ಎರಡು ಶಬ್ದದ ಬಗ್ಗೆ ಕೇಳೀದೆ.ಅದನ್ನು ನೀನು ಕೇಳಿಯೇ ಇಲ್ಲ. ನಾನು ನಿನ್ನಷ್ಟು ಕನ್ನಡ ಸಿನೆಮಾ ನೋಡಿಲ್ಲ ಆದ್ರೂ ನನ್ನ ಕನ್ನಡ ಚೆನ್ನಾಗೆ ಇದೆ ’ನಿನ್ನ ಕನ್ನಡ ಪ್ರೇಮಕ್ಕೆ ನನ್ನ ಅಭಿನಂದನೆ ’ ಅಂದೆ.
ಕನ್ನಡ ಸಿನಿಮಾ ನೋಡೋದ್ರಿಂದ ಕನ್ನಡದ ಸೇವೆ ಮಾಡ್ತೀನಿ ಅಂತ ನನಗೆ ಯಾವತ್ತೂ ಅನಿಸಿಲ್ಲ.ಸಿನಿಮಾ ಗೆದ್ರೆ ಅದರಿಂದ ಆ ಸಿನೆಮಾದ ನಿರ್ದೇಶಕ ,ನಿರ್ಮಾಪಕರು ಹಣ ಮಾಡ್ತಾರಷ್ಟೇ.ಅವರು ಕನ್ನಡಕ್ಕೆ ಯಾವುದೇ ರೀತಿಯ ಕಾಣಿಕೆ ನೀಡೋದು ಸಂಶಯವೇ.ಕಾಣಿಕೆ ನೀಡಿಲ್ಲ ಅಂದ್ರೂ ಪರ್ವಾಗಿಲ್ಲ.ಅದು ಬಿಟ್ಟು ಕನ್ನಡದ ಆಸ್ತಿ ಮಾಸ್ತಿಯ ಹೆಸರಿನಲ್ಲಿ ರೌಡಿಯೊಬ್ಬನ ಸಿನೆಮಾ ತೆಗೆಯೋದಕ್ಕೆ ಹೊರಡ್ತಾರೆ.
ಬೇರೆ ಭಾಷೆಯ ಸರಕನ್ನು ಕದ್ದು ತರೋರಿಗಿಂತ ಇಲ್ಲೇ ಇದ್ದು ವಿಭಿನ್ನವಾಗಿ ಯೋಚಿಸಿ ಸಿನೆಮಾ ತೆಗೆಯೋ ಗುರುಪ್ರಸಾದ್ ಜಾಸ್ತಿ ಇಷ್ಟ ಆಗ್ತಾರೆ ನನಗೆ.
ಪತ್ರಿಕೆಗಳಲ್ಲಿ ಕೆಲವೊಮ್ಮೆ ಬರೋ ಹಾಗೆ ’ಮನೆಮಂದಿಯೆಲ್ಲಾ ಕೂತು ನೋಡೋ ಚಿತ್ರ’ ಅನ್ನೋ ಮಾತಿನ ಬಗ್ಗೆ ನನಗೆ ಅಷ್ಟೊಂದು ವಿಶ್ವಾಸವಿಲ್ಲ.ಅಂತ ಚಿತ್ರಗಳು ಹಿಂದೆ ದೂರದರ್ಶನದಲ್ಲಷ್ಟೆ ಬರ್ತಾ ಇತ್ತು.ಹಿಂದೆ ಅಂತ ಯಾಕೆ ಹೇಳಿದೆ ಗೊತ್ತಾ? ಹಿಂದೆ ಇದ್ದಿದ್ದೇ ದೂರದರ್ಶನ ಒಂದೇ.ಮನೆಮಂದಿಯೆಲ್ಲ ಇಷ್ಟ ಇಲ್ಲ ಅಂದ್ರೂ ಆ ಸಿನೆಮಾನ ಜೊತೆಯಲ್ಲಿ ಕೂತು ನೋಡಲೇ ಬೇಕಾದ ಅನಿವಾರ್ಯತೆ ಇತ್ತು.
ಚಿತ್ರದಲ್ಲಿ ರೇಪ್ ಸೀನ್ ಬಂದ್ರೂ ಪಾಪ ಮನೆಮಂದಿಯೆಲ್ಲಾ ಮುಜುಗರದಿಂದಲೇ ಅದನ್ನು ಸಹಿಸಿಕೊಳ್ಳಬೇಕಿತ್ತು.ಹಾಗಾಗಿ ಆ ಚಿತ್ರ ಹೇಗೇ ಇದ್ರೂ ಅದು ’ಮನೆಮಂದಿ ಎಲ್ಲಾ ಜೊತೆಯಾಗಿ ಕೂತು ನೋಡೋ ಚಿತ್ರ’ !
ಆದ್ರೆ ಇವತ್ತು ಅಮ್ಮ ಉದಯದಲ್ಲಿ ’ಶಾಂತಿನಿವಾಸ ’ ನೋಡ್ತಾ ಇದ್ರೆ ಮಗ ರಿಮೋಟ್ ಕಿತ್ಕೊಂಡು ’ಕಸ್ತೂರಿ’ ಯಲ್ಲಿ ಬರೋ ’ಹೊಂಗನಸು’ ನೋಡ್ತಾನೆ.
ಕನ್ನಡದ ಬಗ್ಗೆ ಅಷ್ಟೊಂದು ಅಭಿಮಾನ ಇರೋ ನಿರ್ದೇಶಕರು ಸಿನೆಮಾಗಳಿಗೆ ಹಾಡಲು ಮಾತ್ರ ಅದ್ಯಾಕೆ ಹಿಂದಿ ಗಾಯಕರನ್ನೇ ಹಾಕ್ತಾರೆ ಅನ್ನೋದು ಇನ್ನೂ ಅರ್ಥ ಆಗದ ವಿಷಯ.ಬಹುಷ ಕನ್ನಡೇತರ ಗಾಯಕರಿಗೆ ಕನ್ನಡ ಕಲಿಸುವಂಥ ’ಪುಣ್ಯ’ದ ಕೆಲಸವನ್ನು ಮಾಡ್ತಾ ಇದ್ದಾರೇನೋ ಅವರು.ಪಾಪ ನಾನೇ ಅವರನ್ನು ತಪ್ಪು ತಿಳಿದಿದ್ದೇನೆ ಅನ್ಸುತ್ತೆ!
ಕನ್ನಡದ ನಿರ್ದೇಶಕರೇ ಇನ್ನಾದರೂ ಎದ್ದೇಳಿ!
ನಾನು ಚಿತ್ರ ಚೆನ್ನಾಗಿದೆ ಅನ್ನೋದು ಅದಕ್ಕೆ ಇನ್ನೊಬ್ಬ(ಳು) ’ಥೂ ನಿನ್ನ ಏನ್ ಕಚಡಾ ಟೇಸ್ಟ್ ನಿನ್ನದು’ ಅನ್ನೋದು.ನಾನೂ ಸೋಲೊಪ್ಪಲಾರದೆ ಸಮರ್ಥನೆ ನೀಡೋದು ,ಇಂಥ ಕಿರಿಕ್ ಗಳು ಬಹಳಷ್ಟು ಸಲ ಆಗಿವೆ.ಅದಿಕ್ಕೆ ಚಿತ್ರ ನೋಡಿ ಅಂತ ಹೇಳೋದು ತುಂಬಾ ಕಡಿಮೆ.
’ಎದ್ದೇಳು ಮಂಜುನಾಥ’ ಕೂಡಾ ನೋಡಿ ಅಂತ ಯಾರಿಗೂ ಹೇಳಲ್ಲ ನಾನು.ನಿಮ್ ದುಡ್ಡು ನೀವು ಅದನ್ನು ಯಾವ ರೀತಿ ಬೇಕಾದ್ರೂ ಖರ್ಚು ಮಾಡಿ ಸ್ವಾಮಿ ,ನಾನ್ಯಾರು ಸಲಹೆ ಕೊಡೋಕೆ ಅಲ್ವ?
ಅಷ್ಟಕ್ಕೂ ನನಗೆ ಈ ಚಿತ್ರದ ಬಗ್ಗೆ ಬರೀಬೇಕು ಅನಿಸಿದ್ದು ಯಾಕಂದ್ರೆ ಇದೊಂದು ವಿಭಿನ್ನ ರೀತಿಯ ಸಿನೆಮಾ. ಕಡಿಮೆ ಬಜೆಟ್ ನ(ಎಷ್ಟು ಅಂತ ಗೊತ್ತಿಲ್ಲ!) ಬರೀ ಸಂಭಾಷಣೆ ಮತ್ತು ಜಗ್ಗೇಶ್ ಅಭಿನಯವನ್ನು ನಂಬಿಕೊಂಡು ಮಾಡಿದ ಒಂದು ಚಿತ್ರ.ಬರೀ ಸಂಭಾಷಣೆಯಿಂದಲೂ ಚಿತ್ರ ಗೆಲ್ಲಿಸಬಹುದು ಅಂತ ನಿರೂಪಿಸಿದ ಚಿತ್ರ.
ಚಿತ್ರ ಬರೀ ಒಂದು ಲಾಡ್ಜ್ ರೂಮ್ ,ಅಥವಾ ಒಂದು ಪುಟ್ಟ ಮನೆಯಲ್ಲಿ ಮುಗಿದು ಬಿಡುತ್ತೆ.ಅದ್ಯಾಕೆ ಕೆಲವು ನಿರ್ದೇಶಕರಿಗೆ ಬ್ಯಾಂಕಾಕ್ ,ಸ್ವಿಟ್ಜರ್ಲ್ಯಾಂಡ್ ನಂಥ ಊರಿನ ಮೇಲೆ ’ಪ್ರೇಮ್’ ವೋ ಗೊತ್ತಿಲ್ಲ.ಅನಾವಶ್ಯಕ ಕೋಟಿಗಟ್ಟಲೆ ಖರ್ಚು ಮಾಡ್ತಾರೆ.ಕೇಳಿದ್ರೆ ’ ತಮಿಳು ,ತೆಲುಗಿನವರು ಮಾಡ್ತಾರೆ ಅದಕ್ಕೆ ನಾವೇನ್ ಕಮ್ಮಿ ’ ಅಂತಾರೆ.
ಅಲ್ಲಾ ನಮ್ ಶಿವಣ್ಣ ಹಳ್ಳಿಯಲ್ಲಿ ಹಾಕೋ ಅಂಥ ಪಟ್ಟಾಪಟ್ಟಿ ಚಡ್ಡಿ ಹಾಕ್ಕೊಂಡು ವಿದೇಶದಲ್ಲಿ ಹೋಗಿ ಕುಣೀತಾರೆ.ಇದರಿಂದ ಅದೇನು ಸಾಧಿಸ್ತಾರೋ ದೇವರಿಗೆ ಗೊತ್ತು.ಪಟ್ಟಾಪಟ್ಟಿ ಚಡ್ಡಿ ಡ್ಯಾನ್ಸ್ ಮಾಡ್ಲೇ ಬೇಕೂಂದ್ರೆ ಇಲ್ಲೆ ಕೆ.ಆರ್ ಮಾರ್ಕೆಟ್ ನಲ್ಲೂ ಮಾಡಬಹುದಲ್ಲ.ಅದಕ್ಕ್ಯಾಕೆ ವಿದೇಶಕ್ಕೆ ಹೋಗ್ಬೇಕು.
ಹೀಗೇನಾದ್ರೂ ಕೇಳಿದ್ರೆ ’ನಿಂಗೇನಪ್ಪ ಗೊತ್ತು ಸಿನೆಮಾ ಬಗ್ಗೆ ’ ಅಂತಾರೆ.ನಂಗೆ ಗೊತ್ತಾಗೋದೂ ಬೇಡ ಬಿಡಿ.
ಸಿದ್ಧಸೂತ್ರಗಳನ್ನು ಬಳಸದೆ ತಯಾರಿಸಿದ್ದಕ್ಕೆ ನನಗೆ ’ಎದ್ದೇಳು ’ ಇಷ್ಟ ಆಗಿದ್ದು.ಸಿನೆಮಾ ಅಂದ್ರೆ ಐದು ಸಾಂಗ್,ನಾಲ್ಕು ಫೈಟ್ ಎರಡು ರೇಪ್ ಅನ್ನೋ ಅಂಥ ರೆಡಿಮೇಡ್ ಫಾರ್ಮುಲಾಗಳನ್ನು ಬಿಟ್ಟು ರಿಸ್ಕ್ ತಗೊಂಡಿದ್ದಕ್ಕೆ ಗುರುಪ್ರಸಾದ್ ಗೆ ಅಭಿನಂದನೆಗಳು.
ನನ್ನ ಗೆಳೆಯನೊಬ್ಬನ ಬಳಿ ’ನಾನು ಜಬ್ ವಿ ಮೆಟ್ ನೋಡಿದೆ ’ ಅಂದಿದ್ದಕ್ಕೆ ’ಥೂ ನಿನ್ನಂಥವರಿರೋದ್ರಿಂದಾ ಕಣೋ ಕನ್ನಡ ಚಿತ್ರರಂಗ ಬೆಳೀತಾ ಇಲ್ಲ.ಯಾವಾಗ ನೊಡಿದ್ರೂ ಹಿಂದಿ,ತಮಿಳು ಹೀಗೇ ಬೇರೆ ಭಾಷೆಯ ಚಿತ್ರ ನೋಡ್ತೀರಾ ’ ಅಂತ ಉದ್ದುದ್ದ ಲೆಕ್ಚರ್ ಕೊಟ್ಟಿದ್ದ.
ಅವನು ಹೇಳಿದ್ದೆಲ್ಲಾ ಕೇಳಿಸ್ಕೊಂಡೆ.
ಆಮೇಲೆ ಅವನ ಹತ್ತಿರ ’ನಿನಗೆ ಪರಾಮರ್ಶಿಸು ಅನ್ನೋ ಶಬ್ದದ ಅರ್ಥ ಗೊತ್ತಾ?’ ಕೇಳಿದೆ. ’ಇಲ್ಲ ’ ಅಂದ .ಇರಲಿ ಅವಲೋಕನ ಅಂದ್ರೆ ಗೊತ್ತಾ ಅಂದೆ ’ಗೊತ್ತಿಲ್ಲ ’ ಅಂದ.
ನೋಡು ನಿನಗೆ ಕನ್ನಡದ ಎರಡೇ ಎರಡು ಶಬ್ದದ ಬಗ್ಗೆ ಕೇಳೀದೆ.ಅದನ್ನು ನೀನು ಕೇಳಿಯೇ ಇಲ್ಲ. ನಾನು ನಿನ್ನಷ್ಟು ಕನ್ನಡ ಸಿನೆಮಾ ನೋಡಿಲ್ಲ ಆದ್ರೂ ನನ್ನ ಕನ್ನಡ ಚೆನ್ನಾಗೆ ಇದೆ ’ನಿನ್ನ ಕನ್ನಡ ಪ್ರೇಮಕ್ಕೆ ನನ್ನ ಅಭಿನಂದನೆ ’ ಅಂದೆ.
ಕನ್ನಡ ಸಿನಿಮಾ ನೋಡೋದ್ರಿಂದ ಕನ್ನಡದ ಸೇವೆ ಮಾಡ್ತೀನಿ ಅಂತ ನನಗೆ ಯಾವತ್ತೂ ಅನಿಸಿಲ್ಲ.ಸಿನಿಮಾ ಗೆದ್ರೆ ಅದರಿಂದ ಆ ಸಿನೆಮಾದ ನಿರ್ದೇಶಕ ,ನಿರ್ಮಾಪಕರು ಹಣ ಮಾಡ್ತಾರಷ್ಟೇ.ಅವರು ಕನ್ನಡಕ್ಕೆ ಯಾವುದೇ ರೀತಿಯ ಕಾಣಿಕೆ ನೀಡೋದು ಸಂಶಯವೇ.ಕಾಣಿಕೆ ನೀಡಿಲ್ಲ ಅಂದ್ರೂ ಪರ್ವಾಗಿಲ್ಲ.ಅದು ಬಿಟ್ಟು ಕನ್ನಡದ ಆಸ್ತಿ ಮಾಸ್ತಿಯ ಹೆಸರಿನಲ್ಲಿ ರೌಡಿಯೊಬ್ಬನ ಸಿನೆಮಾ ತೆಗೆಯೋದಕ್ಕೆ ಹೊರಡ್ತಾರೆ.
ಬೇರೆ ಭಾಷೆಯ ಸರಕನ್ನು ಕದ್ದು ತರೋರಿಗಿಂತ ಇಲ್ಲೇ ಇದ್ದು ವಿಭಿನ್ನವಾಗಿ ಯೋಚಿಸಿ ಸಿನೆಮಾ ತೆಗೆಯೋ ಗುರುಪ್ರಸಾದ್ ಜಾಸ್ತಿ ಇಷ್ಟ ಆಗ್ತಾರೆ ನನಗೆ.
ಪತ್ರಿಕೆಗಳಲ್ಲಿ ಕೆಲವೊಮ್ಮೆ ಬರೋ ಹಾಗೆ ’ಮನೆಮಂದಿಯೆಲ್ಲಾ ಕೂತು ನೋಡೋ ಚಿತ್ರ’ ಅನ್ನೋ ಮಾತಿನ ಬಗ್ಗೆ ನನಗೆ ಅಷ್ಟೊಂದು ವಿಶ್ವಾಸವಿಲ್ಲ.ಅಂತ ಚಿತ್ರಗಳು ಹಿಂದೆ ದೂರದರ್ಶನದಲ್ಲಷ್ಟೆ ಬರ್ತಾ ಇತ್ತು.ಹಿಂದೆ ಅಂತ ಯಾಕೆ ಹೇಳಿದೆ ಗೊತ್ತಾ? ಹಿಂದೆ ಇದ್ದಿದ್ದೇ ದೂರದರ್ಶನ ಒಂದೇ.ಮನೆಮಂದಿಯೆಲ್ಲ ಇಷ್ಟ ಇಲ್ಲ ಅಂದ್ರೂ ಆ ಸಿನೆಮಾನ ಜೊತೆಯಲ್ಲಿ ಕೂತು ನೋಡಲೇ ಬೇಕಾದ ಅನಿವಾರ್ಯತೆ ಇತ್ತು.
ಚಿತ್ರದಲ್ಲಿ ರೇಪ್ ಸೀನ್ ಬಂದ್ರೂ ಪಾಪ ಮನೆಮಂದಿಯೆಲ್ಲಾ ಮುಜುಗರದಿಂದಲೇ ಅದನ್ನು ಸಹಿಸಿಕೊಳ್ಳಬೇಕಿತ್ತು.ಹಾಗಾಗಿ ಆ ಚಿತ್ರ ಹೇಗೇ ಇದ್ರೂ ಅದು ’ಮನೆಮಂದಿ ಎಲ್ಲಾ ಜೊತೆಯಾಗಿ ಕೂತು ನೋಡೋ ಚಿತ್ರ’ !
ಆದ್ರೆ ಇವತ್ತು ಅಮ್ಮ ಉದಯದಲ್ಲಿ ’ಶಾಂತಿನಿವಾಸ ’ ನೋಡ್ತಾ ಇದ್ರೆ ಮಗ ರಿಮೋಟ್ ಕಿತ್ಕೊಂಡು ’ಕಸ್ತೂರಿ’ ಯಲ್ಲಿ ಬರೋ ’ಹೊಂಗನಸು’ ನೋಡ್ತಾನೆ.
ಕನ್ನಡದ ಬಗ್ಗೆ ಅಷ್ಟೊಂದು ಅಭಿಮಾನ ಇರೋ ನಿರ್ದೇಶಕರು ಸಿನೆಮಾಗಳಿಗೆ ಹಾಡಲು ಮಾತ್ರ ಅದ್ಯಾಕೆ ಹಿಂದಿ ಗಾಯಕರನ್ನೇ ಹಾಕ್ತಾರೆ ಅನ್ನೋದು ಇನ್ನೂ ಅರ್ಥ ಆಗದ ವಿಷಯ.ಬಹುಷ ಕನ್ನಡೇತರ ಗಾಯಕರಿಗೆ ಕನ್ನಡ ಕಲಿಸುವಂಥ ’ಪುಣ್ಯ’ದ ಕೆಲಸವನ್ನು ಮಾಡ್ತಾ ಇದ್ದಾರೇನೋ ಅವರು.ಪಾಪ ನಾನೇ ಅವರನ್ನು ತಪ್ಪು ತಿಳಿದಿದ್ದೇನೆ ಅನ್ಸುತ್ತೆ!
ಕನ್ನಡದ ನಿರ್ದೇಶಕರೇ ಇನ್ನಾದರೂ ಎದ್ದೇಳಿ!
Thursday, June 18, 2009
ಈ ಸಾಫ್ಟ್ ವೇರ್ ಅಂದ್ರೆ ಏನಣ್ಣಾ ...?
ಬಹಳಷ್ಟು ಜನರಿಗೆ ’ಆಗಾಗ’ ಕಾಡುವ ಪ್ರಶ್ನೆ ಅಂದ್ರೆ ಈ ಸಾಫ್ಟ್ವೇರ್ ಇಂಜಿನಿಯರ್ ಗಳು ಏನ್ ಕೆಲಸ ಮಾಡ್ತಾರೆ ? ಅನ್ನೋದು.ನಿಜವಾಗಿ ನೋಡೋದಕ್ಕೆ ಹೋದ್ರೆ ಅವರಿಗೆಲ್ಲಾ ಕಾಡೋದು ’ಅಷ್ಟೊಂದು ಜಾಸ್ತಿ ಸಂಬಳ ಕೊಡೋ ಅಂಥ ಘನಂದಾರಿ ಕೆಲಸ ಏನ್ ಮಾಡ್ತಾರೆ? ’ ಅಂತ ! ಆದ್ರೆ ಕೆಲವರು ಸ್ವಲ್ಪ ಜಾಣತನ ಉಪಯೋಗಿಸಿ ಮೊದಲನೇ ಪ್ರಶ್ನೆ ಕೇಳಿ ಬಿಡ್ತಾರೆ !
ಎರಡನೇ ಪ್ರಶ್ನೆಗೆ ಉತ್ತರ ಸ್ವಲ್ಪ ಸರಳವಾಗಿದೆ.ಚಿಕ್ಕ ದರ್ಶಿನಿ ಹೋಟೇಲಿನಲ್ಲಿ ತಟ್ಟೆ ಎತ್ತೋನಿಗೆ ತಿಂಗಳಿಗೆ ಎರಡು ಸಾವಿರ ಕೊಡ್ತಾರೆ ಅದೇ ಪಂಚತಾರಾ ಹೋಟೇಲಿನಲ್ಲಿ ತಟ್ಟೆ ಎತ್ತಿದ್ರೆ ’ಸ್ವಲ್ಪ’ ಜಾಸ್ತಿ ಸಂಬಳ ಕೊಡಲ್ವ ಹಾಗೇ ಇದು .ಅದರ ಬಗ್ಗೆ ಜಾಸ್ತಿ ತಲೆ ಕೆಡಿಸ್ಕೊಳ್ಳಬೇಡಿ ನೀವು.
ಅಲ್ಪ ಸ್ವಲ್ಪ ಸಾಫ್ಟ್ವೇರ್ ಬಗ್ಗೆ ತಿಳ್ಕೊಂಡಿದ್ರೆ ಎಲ್ಲರಿಗೂ ಉಪಯೋಗವಾಗುತ್ತೆ ಅನ್ನೋ ಕಾರಣಕ್ಕೆ ಈ ಲೇಖನ(ಬರೆಯೋಕೆ ನನಗೆ ಬೇರೆ ವಿಷಯ ಸಿಕ್ಕಿಲ್ಲ ಅಂತ ನೀವು ತಪ್ಪು ತಿಳ್ಕೊಂಡ್ರೆ ನಾನೇನೂ ಮಾಡೋಕಾಗಲ್ಲ ಬಿಡಿ!) ಬರೀತಾ ಇದ್ದೀನಿ.
ಇಂಥ ಲೇಖನವನ್ನು ಗೆಳೆಯ ವಿಜಯ್ ರಾಜ್ ಕನ್ನಂತರವರು ಈಗಾಗಲೇ ಬರೆದಿದ್ದಾರೆ.ಅದನ್ನು ಓದದೆ ಇರೋರು,ಓದಿದ್ದರೂ ಮರೆತು ಹೋದವರು ಮತ್ತೊಮ್ಮೆ ಓದಲಿ ಅಂತ ಅಷ್ಟೆ .
ನಾನು ಸಾಫ್ಟ್ವೇರ್ ಇಂಜಿನಿಯರ್ ಅಲ್ಲ ! ನಾನು ಹಾರ್ಡ್ವೇರ್ ಇಂಜಿನಿಯರ್ ,ನಾವುಗಳು ತಯಾರಿಸಿದ ಹಾರ್ಡ್ವೇರ್ ನಲ್ಲಿ ನಮ್ಮ ಗೆಳೆಯ/ಗೆಳತಿಯರು ಬರೆದ ಸಾಫ್ಟ್ವೇರ್ ಕೆಲಸ ಮಾಡೋದು .ಇದರಿಂದ ತಿಳಿಯೋದೇನೆಂದರೆ ಹಾರ್ಡ್ವೇರ್ ಇಲ್ಲದೆ ಸಾಫ್ಟ್ವೇರ್ ಕೆಲಸ ನಡೆಯಲ್ಲ ಅಂತ.ಹಾರ್ಡ್ವೇರ್ ಅಂದ ತಕ್ಷಣ ಬಹಳಷ್ಟು ಜನರಿಗೆ ತಲೆಗೆ ಹೊಳೆಯೋದು ನಟ್ಟು ಬೋಲ್ಟು ,ಪೇಂಯ್ಟು!
ಆ ಹಾರ್ಡ್ವೇರ್ ಬೇರೆ ಸ್ವಾಮಿ .ಒಬ್ಬ ಇಂಜಿನಿಯರ್ ಗೆ ಹಾರ್ಡ್ವೇರ್ ಅಂದರೆ ಕಂಪ್ಯೂಟರ್ ಮದರ್ ಬೋರ್ಡ್ ಥರದ್ದು.ಹಾಗೆ ನೋಡೋದಕ್ಕೆ ಹೋದರೆ ಬಹಳಷ್ಟು ವಸ್ತುಗಳು ಕಂಪ್ಯೂಟರ್ ಗಳೆ.ಕಂಪ್ಯೂಟರ್ ಅನ್ನು ನಮಗೆ ಬೇಕಾದ ಕೆಲಸಕ್ಕೆ ಬಹಳ ಸುಲಭವಾಗಿ ಬಗ್ಗಿಸಬಹುದು.ಅಂದರೆ ಹಾಡು ಕೇಳಬಹುದು ಅಥವಾ ಅದೇ ಕಂಪ್ಯೂಟರ್ ನಲ್ಲಿ ಕಡತಗಳನ್ನು ಟೈಪಿಸಿ ಮುದ್ರಿಸಲೂ ಬಹುದು.
ಅದೇ ಒಂದು MP3 Player ಆದ್ರೆ ಬರೀ ಹಾಡನ್ನಷ್ಟೇ ಕೇಳಬಹುದು.ಅದರಲ್ಲೂ ಕಂಪ್ಯೂಟರ್ನಲ್ಲಿರೋ ಅಂಥದ್ದೇ ಒಂದು ಶಕ್ತಿಶಾಲಿ ಪ್ರಾಸೆಸರ್ ಇದೆ.ಆದರೆ ಅದಕ್ಕೆ ಬರೀ ಹಾಡು ಹಾಡಿಸೋದಷ್ಟೆ ಗೊತ್ತು!ಅದು ಬರೀ ಒಂದು ರೀತಿಯ ಕೆಲಸವನ್ನು ಮಾತ್ರ ಮಾಡೋದರಿಂದ ಅದರಲ್ಲಿ ಉಪಯೋಗಿಸೋ ಪ್ರಾಸೆಸರ್ ಬೆಲೆ ತುಂಬಾ ಕಮ್ಮಿ ಇರುತ್ತೆ.ಹಾಗಾಗಿ MP3 Player ಬೆಲೆ ಕಡಿಮೆ.ಕಂಪ್ಯೂಟರ್ ಬೆಲೆ ತೀರಾ ಜಾಸ್ತಿ.
ಅದೇ ರೀತಿ ವಾಷಿಂಗ್ ಮೆಶಿನ್ ನಲ್ಲೂ ಒಂದು ಪ್ರಾಸೆಸರ್ ಇದೆ.ಆದರೆ ಪಾಪ ಅದಕ್ಕೆ ಬಟ್ಟೆ ಒಗೆಯೊದು ಬಿಟ್ಟು ಬೇರೇನೂ ಗೊತ್ತಿಲ್ಲ! ಈಗೀಗ ಅದರ ಬುದ್ಧಿ ಸ್ವಲ್ಪ ಬೆಳೆದಿದೆ ಅನ್ನಿ.ಬಟ್ಟೆ ಒಗೆಯೋದಲ್ಲದೆ ಒಣಗಿಸಿಯೂ ಕೊಡುತ್ತೆ.ಟಿ.ವಿ ಯಲ್ಲೂ ಪ್ರಾಸೆಸರ್ ಇದೆ ಆದರೆ ಅದಕ್ಕೆ ವಿಡೀಯೋ ತೋರಿಸೋದು ಬಿಟ್ಟರೆ ಬೇರೇನೂ ಗೊತ್ತಿಲ್ಲ.
ಸಾರಾಂಶ ಇಷ್ಟೇ .ಈ ಎಲ್ಲಾ ವಸ್ತುಗಳೂ ಒಂದು ಮಿನಿ ಕಂಪ್ಯೂಟರ್ ಇದ್ದ ಹಾಗೆ .ಹಾಗಾಗಿ ಈ ಎಲ್ಲಾ ವಸ್ತುಗಳಲ್ಲೂ ಸಾಫ್ಟ್ವೆರ್ ಇದ್ದೇ ಇದೆ.ಕಂಪ್ಯೂಟರ್ ನಲ್ಲಿರೋ ಹಾಗೇನೇ ಈ ಟಿ.ವಿ ,ವಾಷಿಂಗ್ ಮೆಶಿನ್,ಸೆಟ್ ಟಾಪ್ ಬಾಕ್ಸ್ ,ಶೇವಿಂಗ್ ಮೆಶಿನ್,ಮಿಕ್ಸಿ ಎಲ್ಲಾದರಲ್ಲೂ ಪ್ರಾಸೆಸರ್ ,ಸಾಫ್ಟ್ವೇರ್ ಎರಡೂ ಇದ್ದೇ ಇರುತ್ತೆ .
ನಮಗೆ ಗೊತ್ತಿಲ್ಲ ಅಷ್ಟೇ !
ಮನುಷ್ಯನ ಉದಾಹರಣೆ ತಗೊಳ್ಳೋದಾದ್ರೆ ಕೈ ಒಂದು ಹಾರ್ಡ್ವೇರ್ ಅದೇ ಮೆದುಳು ಪ್ರಾಸೆಸರ್. ನಿಮಗೆ ಯಾರಿಗಾದರೂ ಹೊಡೆಯಬೇಕೆಂದರೆ.....ಬೇಡ ಬಿಡಿ ನೆಗೆಟಿವ್ ಥಿಂಕಿಂಗ್ ಬೇಡ! ನಿಮಗೆ ಯಾರನ್ನಾದರೂ ಮುಟ್ಟಬೇಕೆನಿಸಿದ ತಕ್ಷಣ ಏನಾಗುತ್ತೆ ಅಂದರೆ ಪ್ರಾಸೆಸರ್ ಆದ ಮೆದುಳಿಗೆ ಸಂಕೇತಗಳು ಹೋಗಿ ನಿಮ್ಮ ಕೈ ಯಾರನ್ನು ಮುಟ್ಟಬೇಕೋ ಅವರನ್ನು ಮುಟ್ಟುತ್ತೆ.ಇಲ್ಲಿ ಕೈ ಹಾರ್ಡ್ವೇರ್, ಮೆದುಳು ಪ್ರಾಸೆಸರ್ ,ಆದರೆ ಯಾರನ್ನು ಮುಟ್ಟಬೇಕು ,ಹೇಗೆ ಮುಟ್ಟಬೇಕು ,ಎಲ್ಲಿ ಮುಟ್ಟಬೇಕು ಅನ್ನೋ ಸಂಕೇತಗಳು ಕೊಡೋದಕ್ಕೆ ಒಂದು ಸಾಫ್ಟ್ವೇರ್ ಇದೆ.ದುರ್ದೈವವಶಾತ್ ಮಾಮೂಲಿನಂತೆ ಇಲ್ಲೂ ಸಾಫ್ಟ್ವೇರ್ ಕಣ್ಣಿಗೆ ಕಾಣಿಸಲ್ಲ!ಇಂಥ ಒಂದು ಅದ್ಭುತ ಸಾಫ್ಟ್ವೇರ್ ಬರೆದ ಇಂಜಿನಿಯರ್ ಹೆಸರು ’ದೇವರು’!
ಯಾರ್ಯಾರನ್ನೋ ಮುಟ್ಟೋದಕ್ಕೆ ನಿಮಗೆ ನಿಮ್ಮ ಪ್ರಾಸೆಸರ್ ಹೇಳಿದ್ರೆ ನಿಮ್ಮ ಸಾಫ್ಟ್ವೇರ್ ಹಾಳಾಗಿದೆ ಅಂತ ಅರ್ಥ!
ವಾಶಿಂಗ್ ಮೆಶಿನ್ ಉದಾಹರಣೆ ತಗೊಂಡ್ರೆ ಮೋಟರ್ ಎಷ್ಟು ಹೊತ್ತು ತಿರುಗಬೇಕು ,ಯಾವಾಗ ತಿರುಗೋದನ್ನು ನಿಲ್ಲಿಸಬೇಕು,ಯಾವಾಗ ಬಿಸಿಗಾಳಿ ಊದಬೇಕು ಎಲ್ಲಾದನ್ನು ನಿರ್ಧರಿಸೋದು ಸಾಫ್ಟ್ಟ್ವೇರ್ ಕೆಲಸ.
ಅದೇ ರೀತಿ ಟಿ.ವಿ ಯಲ್ಲಿ ರಿಮೋಟ್ ನಲ್ಲಿ ಬಟನ್ ಒತ್ತಿದ ತಕ್ಷಣ ಯಾವ ಚಾನೆಲ್ ಬದಲಾಯಿಸಬೇಕು ಅನ್ನೋದನ್ನು ನಿರ್ಧರಿಸೋದು ಸಾಫ್ಟ್ವೇರ್ .ಬದಲಾಯಿಸೋದು ಮಾತ್ರ ಪ್ರಾಸೆಸರ್ !ಈ ಹಾರ್ಡ್ವೇರ್ ಒಂಥರಾ ಗುಲಾಮ ಕಣ್ರಿ ಅದಕ್ಕೆ ಸಾಫ್ಟ್ವೇರ್ ಇಂಜಿನಿಯರ್ಗಳಿಗೆ ಸ್ವಲ್ಪ ಕೊಬ್ಬು ಜಾಸ್ತಿ,ಎಲ್ಲಾ ನಮ್ಮಿಂದಲೇ ಅಂತ .ಏನ್ ಮಾಡೋದು ಎಲ್ಲ ಪಡೆದು ಬಂದಿರಬೇಕು.
ಇನ್ನೊಂದು ಉದಾಹರಣೆ ತಗೊಳ್ಳೋಣ ATM ದು .ಹಣದ ವಿಚಾರ ಬಂದಾಗ ಎಲ್ಲರ ಕಿವಿಯೂ ನಿಮಿರುತ್ತೆ .ಇದು ಬರೀ ಉದಾಹರಣೆ ಮಾತ್ರ ಜಾಸ್ತಿ excite ಆಗ್ಬೇಡಿ.
ATM ನಿಂದ ನಿಮಗೆ ಒಂದು ಲಕ್ಷ ರೂಪಾಯಿ ಡ್ರಾ ಮಾಡಬೇಕು ಅಂದುಕೊಳ್ಳಿ (ಅದಕ್ಕೆ ಮೊದಲೇ ಹೇಳಿದ್ದು ಉದಾಹರಣೆ ಅಂತ)! ನೀವು ಕಾರ್ಡ್ ತುರುಕಿಸಿದ ತಕ್ಷಣ ನಿಮ್ಮ ಕಾರ್ಡ್ ನಲ್ಲಿರೋ ಮಾಹಿತಿಯನ್ನು ಓದೋದು ಹಾರ್ಡ್ವೇರ್ .ಮಾಹಿತಿ ಯನ್ನು ಹಾರ್ಡ್ವೇರ್ ಸಹಾಯದಿಂದ ಪಡೆದ ನಂತರ ಸಾಫ್ಟ್ವೇರ್ ಏನೇನೋ ಲೆಕ್ಕಾಚಾರ ಮಾಡಿ ದೂರದಲ್ಲೆಲ್ಲೋ ಇರೋ ಬ್ಯಾಂಕ್ ನ ಸರ್ವರ್ ಗೆ ಇಂಟರ್ನೆಟ್ ಮೂಲಕ ಸಂಪರ್ಕಿಸಿ ನಿಮ್ಮ ಖಾತೆಯಲ್ಲಿ ಎಷ್ಟು ಹಣ ಇದೆ,ನಿಮಗೆ ಒಂದು ಲಕ್ಷ ನೀಡಬಹುದೋ(ನಿಮ್ಮದೇ ಹಣ ಆಗಿದ್ರೂ!)ಅಂತ ನಿರ್ಧರಿಸೋದು ,ಕೊಡೋ ಹಣದಲ್ಲಿ ಸಾವಿರದ ನೋಟು ಎಷ್ಟಿರ್ಬೇಕು,ಐನೂರರ ನೋಟು ಎಷ್ಟಿರಬೇಕು ಅಂತೆಲ್ಲಾ ಲೆಕ್ಕಾಚಾರ ಮಾಡೋದು ಸಾಫ್ಟ್ವೇರ್ .ಎಲ್ಲಾ ಲೆಕ್ಕಾಚಾರ ಮಾಡಿದ ನಂತರ ಒಂದೊಂದೇ ನೋಟನ್ನು ಒಳಗಿರೋ ಒಂದು ಡಬ್ಬಿಯಿಂದ ಎತ್ತಿ ಎತ್ತಿ ಹೊರಗೆ ತಳ್ಳೋದು ಹಾರ್ಡ್ವೇರ್.
ಕಂಪ್ಯೂಟರ್ ಮೌಸ್ ಉದಾಹರಣೆ ತೊಗೊಂಡ್ರೆ ಆ ಪುಟ್ಟ ಮೌಸ್ ಒಳಗೂ ಒಂದು ಪುಟ್ಟ ಪ್ರಾಸೆಸರ್ ಇದೆ.ನೀವು ಎಡಗಡೆ ಬಟನ್ ಒತ್ತಿದ್ದೋ ಬಲಗಡೆ ಬಟನ್ ಒತ್ತಿದ್ದೋ ಅನ್ನೋದನ್ನು ಈ ಪ್ರಾಸೆಸರ್ ಗೊತ್ತು ಮಾಡಿಕೊಳ್ಳುತ್ತೆ ಮೊದಲು(ಎರಡೂ ಬಟನ್ ಒಮ್ಮೆಗೆ ಒತ್ತಿ ಪ್ರಾಸೆಸರ್ ತಲೆ ಕೆಡಿಸಬೇಡಿ ಪ್ಲೀಸ್),ಗೊತ್ತು ಮಾಡಿದ ನಂತರ ’ಈ ವ್ಯಕ್ತಿ ಎಡಗಡೆ ಮೌಸ್ ಒತ್ತಿದ್ದಾನೆ ’ ಅಂತ ಮಾಹಿತಿಯನ್ನು ಸಾಫ್ಟ್ವೇರ್ ಗೆ ವರ್ಗಾಯಿಸುತ್ತದೆ.ಯಾವ ಬಟನ್ ಒತ್ತಿದ್ದಾನೆ ಅಂತ ಗೊತ್ತಾದ ಮೇಲೆ ಸಾಫ್ಟ್ವೇರ್ ಏನೇನೋ ಲೆಕ್ಕಾಚಾರ ಹಾಕಿ ಮುಂದಿನ ಕಾರ್ಯಾಚಾರಣೆಯನ್ನು ನಿರೂಪಿಸುತ್ತದೆ.ನೀವಂದುಕೊಂಡಷ್ಟು ಸುಲಭ ಇಲ್ಲ ಬಿಡಿ ಲೆಕ್ಕಾಚಾರ! ಬ್ಲಾಗ್ ಬರೆಯುವಾಗಲೆ ನೋಡಿ ನೀವು ಎಡಗಡೆ ಬಟನ್ ಒತ್ತುತ್ತೀರ,ಆದರೆ ಆಗ ಮೌಸ್ ಪಾಯಿಂಟರ್ Publish Post ಮೇಲಿತ್ತಾ ಅಥವಾ Save Now ಮೇಲಿತ್ತಾ ಅನ್ನೋದನ್ನು ನಿರ್ಧರಿಸೋದಕ್ಕೆ ಸಾಫ್ಟ್ವೇರ್ ಸ್ವಲ್ಪ ತಲೆ ಕೆಡಿಸ್ಕೋಬೇಕಾಗುತ್ತೆ .
ಅಂದ ಹಾಗೆ ಟಾಯ್ಲೆಟ್ನಲ್ಲೂ ಈ ಹಾರ್ಡ್ವೇರ್ ಸಾಫ್ಟ್ವೇರ್ ಬಳಕೆಯಾಗುತ್ತೆ .ಟಾಯ್ಲೆಟ್ ಬೇಸಿನ್ ಮುಂದೆ ನಿಂತ ತಕ್ಷಣ ಅದರಲ್ಲಿ ಅಳವಡಿಸಿರೋ ಸೆನ್ಸರ್ ಸಾಫ್ಟ್ವೇರ್ ಗೆ ತಿಳಿಸುತ್ತೆ ’ಯಾರೋ ಟಾಯ್ಲೆಟ್ ಗಲೀಜು ಮಾಡಲು ಬಂದಿದ್ದಾನೆ ’ ಅಂತ ! ಹಾಗೆಯೇ ನೀವು ಹೋದ ತಕ್ಷಣ ’ಪಾಪಿ ನೀರು ಹಾಕದೆ ಹೋಗ್ತಿದ್ದಾನೆ ನೀರು ಹಾಕು ’ ಅಂತ ಹಾರ್ಡ್ವೇರ್ ಗೆ ತಿಳಿಸುತ್ತೆ .ಆಗ ಹಾರ್ಡ್ವೇರ್ ಸ್ವಿಚ್ ರಿಲೀಸ್ ಮಾಡಿ ನೀರು ಹೊರ ಹಾಕುತ್ತೆ.ಆದರೆ ’ಟಾಯ್ಲೆಟ್ ನಲ್ಲಿ ಉಚ್ಚೆ ಹೊಯ್ದ ಮೇಲೆ ನೀರು ಹಾಕೋ ಅಂಥ ಸಾಫ್ಟ್ವೇರ್ ಬರೆದಿದ್ದೀನಿ ನಾನು ’ ಅಂತ ಯಾವ ಸಾಫ್ಟ್ವೇರ್ ಇಂಜಿನಿಯರೂ ಹೇಳದ ಕಾರಣ ಬಹಳಷ್ಟು ಜನರಿಗೆ ಇಲ್ಲೂ ಸಾಫ್ಟ್ವೇರ್ ಬಳಕೆಯಾಗುತ್ತೆ ಅನ್ನೋ ಸತ್ಯ ಗೊತ್ತಿರಲ್ಲ !
ಇಸ್ರೋ ಉಪಗ್ರಹ ಉಡಾವಣೆ ಮಾಡೋ ಸಂದರ್ಭದಲ್ಲಂತೂ ಬಹಳಷ್ಟು ಕೆಲಸವನ್ನು ಮಾಡೋದು ಸಾಫ್ಟ್ವೇರ್.ಉಡಾವಣೆಯ ಒಂದೊಂದೇ ಹಂತವನ್ನು ಪರಿಶೀಲಿಸಿ ಎಲ್ಲಾ ಸರಿ ಇದ್ರೆ ರಾಕೆಟ್ ಬುಡಕ್ಕೆ ಬೆಂಕಿ ಹಚ್ಚುತ್ತೆ ಇಲ್ಲದಿದ್ದಲ್ಲಿ ಅಲ್ಲೆ STOP ಅನ್ನುತ್ತೆ.
ಈ ಪ್ರಾಸೆಸರ್ ಗಳಿಗೆ ಕನ್ನಡ ಅರ್ಥ ಆಗಲ್ಲ(ಇಂಗ್ಲೀಷೂ ಅರ್ಥ ಆಗಲ್ಲ ಬಿಡಿ)! ಅದರಿಂದಲೇ ಬಹಳಷ್ಟು ಜನ ಸಾಫ್ಟ್ವೇರ್ ಇಂಜಿನಿಯರ್ ಗಳು ತಮ್ಮ ಹೊಟ್ಟೆಪಾಡನ್ನು ನೋಡ್ಕೋತಾ ಇದ್ದಾರೆ! ಪ್ರಾಸೆಸರ್ ಅರ್ಥ ಆಗೋ ಭಾಷೆಯಲ್ಲಿ ಅದಕ್ಕೆ ಕೆಲಸ ಮಾಡಲು ಅಪ್ಪಣೆ ನೀಡೋದೇ ಸಾಫ್ಟ್ವೇರ್ ಕೆಲಸ.ಅಂಥ ಭಾಷೆಗಳೇ ಈ C ,C++,Java ಗಳು.ಈ ಭಾಷೆಯನ್ನು ಸಮರ್ಪಕವಾಗಿ ಬಳಸಬಲ್ಲವನೇ ಸಾಫ್ಟ್ವೇರ್ ಇಂಜಿನಿಯರ್.
ನಮಗೆಲ್ಲರಿಗೂ ಕನ್ನಡ ಬರುತ್ತೆ ಆದರೆ ಎಲ್ಲರೂ ಕನ್ನಡ ಪಂಡಿತರಾಗಲು ಸಾಧ್ಯ ಇಲ್ಲ ಅಲ್ಲವೇ? ಹಾಗೆಯೇ ಇದೂ !
ಎರಡನೇ ಪ್ರಶ್ನೆಗೆ ಉತ್ತರ ಸ್ವಲ್ಪ ಸರಳವಾಗಿದೆ.ಚಿಕ್ಕ ದರ್ಶಿನಿ ಹೋಟೇಲಿನಲ್ಲಿ ತಟ್ಟೆ ಎತ್ತೋನಿಗೆ ತಿಂಗಳಿಗೆ ಎರಡು ಸಾವಿರ ಕೊಡ್ತಾರೆ ಅದೇ ಪಂಚತಾರಾ ಹೋಟೇಲಿನಲ್ಲಿ ತಟ್ಟೆ ಎತ್ತಿದ್ರೆ ’ಸ್ವಲ್ಪ’ ಜಾಸ್ತಿ ಸಂಬಳ ಕೊಡಲ್ವ ಹಾಗೇ ಇದು .ಅದರ ಬಗ್ಗೆ ಜಾಸ್ತಿ ತಲೆ ಕೆಡಿಸ್ಕೊಳ್ಳಬೇಡಿ ನೀವು.
ಅಲ್ಪ ಸ್ವಲ್ಪ ಸಾಫ್ಟ್ವೇರ್ ಬಗ್ಗೆ ತಿಳ್ಕೊಂಡಿದ್ರೆ ಎಲ್ಲರಿಗೂ ಉಪಯೋಗವಾಗುತ್ತೆ ಅನ್ನೋ ಕಾರಣಕ್ಕೆ ಈ ಲೇಖನ(ಬರೆಯೋಕೆ ನನಗೆ ಬೇರೆ ವಿಷಯ ಸಿಕ್ಕಿಲ್ಲ ಅಂತ ನೀವು ತಪ್ಪು ತಿಳ್ಕೊಂಡ್ರೆ ನಾನೇನೂ ಮಾಡೋಕಾಗಲ್ಲ ಬಿಡಿ!) ಬರೀತಾ ಇದ್ದೀನಿ.
ಇಂಥ ಲೇಖನವನ್ನು ಗೆಳೆಯ ವಿಜಯ್ ರಾಜ್ ಕನ್ನಂತರವರು ಈಗಾಗಲೇ ಬರೆದಿದ್ದಾರೆ.ಅದನ್ನು ಓದದೆ ಇರೋರು,ಓದಿದ್ದರೂ ಮರೆತು ಹೋದವರು ಮತ್ತೊಮ್ಮೆ ಓದಲಿ ಅಂತ ಅಷ್ಟೆ .
ನಾನು ಸಾಫ್ಟ್ವೇರ್ ಇಂಜಿನಿಯರ್ ಅಲ್ಲ ! ನಾನು ಹಾರ್ಡ್ವೇರ್ ಇಂಜಿನಿಯರ್ ,ನಾವುಗಳು ತಯಾರಿಸಿದ ಹಾರ್ಡ್ವೇರ್ ನಲ್ಲಿ ನಮ್ಮ ಗೆಳೆಯ/ಗೆಳತಿಯರು ಬರೆದ ಸಾಫ್ಟ್ವೇರ್ ಕೆಲಸ ಮಾಡೋದು .ಇದರಿಂದ ತಿಳಿಯೋದೇನೆಂದರೆ ಹಾರ್ಡ್ವೇರ್ ಇಲ್ಲದೆ ಸಾಫ್ಟ್ವೇರ್ ಕೆಲಸ ನಡೆಯಲ್ಲ ಅಂತ.ಹಾರ್ಡ್ವೇರ್ ಅಂದ ತಕ್ಷಣ ಬಹಳಷ್ಟು ಜನರಿಗೆ ತಲೆಗೆ ಹೊಳೆಯೋದು ನಟ್ಟು ಬೋಲ್ಟು ,ಪೇಂಯ್ಟು!
ಆ ಹಾರ್ಡ್ವೇರ್ ಬೇರೆ ಸ್ವಾಮಿ .ಒಬ್ಬ ಇಂಜಿನಿಯರ್ ಗೆ ಹಾರ್ಡ್ವೇರ್ ಅಂದರೆ ಕಂಪ್ಯೂಟರ್ ಮದರ್ ಬೋರ್ಡ್ ಥರದ್ದು.ಹಾಗೆ ನೋಡೋದಕ್ಕೆ ಹೋದರೆ ಬಹಳಷ್ಟು ವಸ್ತುಗಳು ಕಂಪ್ಯೂಟರ್ ಗಳೆ.ಕಂಪ್ಯೂಟರ್ ಅನ್ನು ನಮಗೆ ಬೇಕಾದ ಕೆಲಸಕ್ಕೆ ಬಹಳ ಸುಲಭವಾಗಿ ಬಗ್ಗಿಸಬಹುದು.ಅಂದರೆ ಹಾಡು ಕೇಳಬಹುದು ಅಥವಾ ಅದೇ ಕಂಪ್ಯೂಟರ್ ನಲ್ಲಿ ಕಡತಗಳನ್ನು ಟೈಪಿಸಿ ಮುದ್ರಿಸಲೂ ಬಹುದು.
ಅದೇ ಒಂದು MP3 Player ಆದ್ರೆ ಬರೀ ಹಾಡನ್ನಷ್ಟೇ ಕೇಳಬಹುದು.ಅದರಲ್ಲೂ ಕಂಪ್ಯೂಟರ್ನಲ್ಲಿರೋ ಅಂಥದ್ದೇ ಒಂದು ಶಕ್ತಿಶಾಲಿ ಪ್ರಾಸೆಸರ್ ಇದೆ.ಆದರೆ ಅದಕ್ಕೆ ಬರೀ ಹಾಡು ಹಾಡಿಸೋದಷ್ಟೆ ಗೊತ್ತು!ಅದು ಬರೀ ಒಂದು ರೀತಿಯ ಕೆಲಸವನ್ನು ಮಾತ್ರ ಮಾಡೋದರಿಂದ ಅದರಲ್ಲಿ ಉಪಯೋಗಿಸೋ ಪ್ರಾಸೆಸರ್ ಬೆಲೆ ತುಂಬಾ ಕಮ್ಮಿ ಇರುತ್ತೆ.ಹಾಗಾಗಿ MP3 Player ಬೆಲೆ ಕಡಿಮೆ.ಕಂಪ್ಯೂಟರ್ ಬೆಲೆ ತೀರಾ ಜಾಸ್ತಿ.
ಅದೇ ರೀತಿ ವಾಷಿಂಗ್ ಮೆಶಿನ್ ನಲ್ಲೂ ಒಂದು ಪ್ರಾಸೆಸರ್ ಇದೆ.ಆದರೆ ಪಾಪ ಅದಕ್ಕೆ ಬಟ್ಟೆ ಒಗೆಯೊದು ಬಿಟ್ಟು ಬೇರೇನೂ ಗೊತ್ತಿಲ್ಲ! ಈಗೀಗ ಅದರ ಬುದ್ಧಿ ಸ್ವಲ್ಪ ಬೆಳೆದಿದೆ ಅನ್ನಿ.ಬಟ್ಟೆ ಒಗೆಯೋದಲ್ಲದೆ ಒಣಗಿಸಿಯೂ ಕೊಡುತ್ತೆ.ಟಿ.ವಿ ಯಲ್ಲೂ ಪ್ರಾಸೆಸರ್ ಇದೆ ಆದರೆ ಅದಕ್ಕೆ ವಿಡೀಯೋ ತೋರಿಸೋದು ಬಿಟ್ಟರೆ ಬೇರೇನೂ ಗೊತ್ತಿಲ್ಲ.
ಸಾರಾಂಶ ಇಷ್ಟೇ .ಈ ಎಲ್ಲಾ ವಸ್ತುಗಳೂ ಒಂದು ಮಿನಿ ಕಂಪ್ಯೂಟರ್ ಇದ್ದ ಹಾಗೆ .ಹಾಗಾಗಿ ಈ ಎಲ್ಲಾ ವಸ್ತುಗಳಲ್ಲೂ ಸಾಫ್ಟ್ವೆರ್ ಇದ್ದೇ ಇದೆ.ಕಂಪ್ಯೂಟರ್ ನಲ್ಲಿರೋ ಹಾಗೇನೇ ಈ ಟಿ.ವಿ ,ವಾಷಿಂಗ್ ಮೆಶಿನ್,ಸೆಟ್ ಟಾಪ್ ಬಾಕ್ಸ್ ,ಶೇವಿಂಗ್ ಮೆಶಿನ್,ಮಿಕ್ಸಿ ಎಲ್ಲಾದರಲ್ಲೂ ಪ್ರಾಸೆಸರ್ ,ಸಾಫ್ಟ್ವೇರ್ ಎರಡೂ ಇದ್ದೇ ಇರುತ್ತೆ .
ನಮಗೆ ಗೊತ್ತಿಲ್ಲ ಅಷ್ಟೇ !
ಮನುಷ್ಯನ ಉದಾಹರಣೆ ತಗೊಳ್ಳೋದಾದ್ರೆ ಕೈ ಒಂದು ಹಾರ್ಡ್ವೇರ್ ಅದೇ ಮೆದುಳು ಪ್ರಾಸೆಸರ್. ನಿಮಗೆ ಯಾರಿಗಾದರೂ ಹೊಡೆಯಬೇಕೆಂದರೆ.....ಬೇಡ ಬಿಡಿ ನೆಗೆಟಿವ್ ಥಿಂಕಿಂಗ್ ಬೇಡ! ನಿಮಗೆ ಯಾರನ್ನಾದರೂ ಮುಟ್ಟಬೇಕೆನಿಸಿದ ತಕ್ಷಣ ಏನಾಗುತ್ತೆ ಅಂದರೆ ಪ್ರಾಸೆಸರ್ ಆದ ಮೆದುಳಿಗೆ ಸಂಕೇತಗಳು ಹೋಗಿ ನಿಮ್ಮ ಕೈ ಯಾರನ್ನು ಮುಟ್ಟಬೇಕೋ ಅವರನ್ನು ಮುಟ್ಟುತ್ತೆ.ಇಲ್ಲಿ ಕೈ ಹಾರ್ಡ್ವೇರ್, ಮೆದುಳು ಪ್ರಾಸೆಸರ್ ,ಆದರೆ ಯಾರನ್ನು ಮುಟ್ಟಬೇಕು ,ಹೇಗೆ ಮುಟ್ಟಬೇಕು ,ಎಲ್ಲಿ ಮುಟ್ಟಬೇಕು ಅನ್ನೋ ಸಂಕೇತಗಳು ಕೊಡೋದಕ್ಕೆ ಒಂದು ಸಾಫ್ಟ್ವೇರ್ ಇದೆ.ದುರ್ದೈವವಶಾತ್ ಮಾಮೂಲಿನಂತೆ ಇಲ್ಲೂ ಸಾಫ್ಟ್ವೇರ್ ಕಣ್ಣಿಗೆ ಕಾಣಿಸಲ್ಲ!ಇಂಥ ಒಂದು ಅದ್ಭುತ ಸಾಫ್ಟ್ವೇರ್ ಬರೆದ ಇಂಜಿನಿಯರ್ ಹೆಸರು ’ದೇವರು’!
ಯಾರ್ಯಾರನ್ನೋ ಮುಟ್ಟೋದಕ್ಕೆ ನಿಮಗೆ ನಿಮ್ಮ ಪ್ರಾಸೆಸರ್ ಹೇಳಿದ್ರೆ ನಿಮ್ಮ ಸಾಫ್ಟ್ವೇರ್ ಹಾಳಾಗಿದೆ ಅಂತ ಅರ್ಥ!
ವಾಶಿಂಗ್ ಮೆಶಿನ್ ಉದಾಹರಣೆ ತಗೊಂಡ್ರೆ ಮೋಟರ್ ಎಷ್ಟು ಹೊತ್ತು ತಿರುಗಬೇಕು ,ಯಾವಾಗ ತಿರುಗೋದನ್ನು ನಿಲ್ಲಿಸಬೇಕು,ಯಾವಾಗ ಬಿಸಿಗಾಳಿ ಊದಬೇಕು ಎಲ್ಲಾದನ್ನು ನಿರ್ಧರಿಸೋದು ಸಾಫ್ಟ್ಟ್ವೇರ್ ಕೆಲಸ.
ಅದೇ ರೀತಿ ಟಿ.ವಿ ಯಲ್ಲಿ ರಿಮೋಟ್ ನಲ್ಲಿ ಬಟನ್ ಒತ್ತಿದ ತಕ್ಷಣ ಯಾವ ಚಾನೆಲ್ ಬದಲಾಯಿಸಬೇಕು ಅನ್ನೋದನ್ನು ನಿರ್ಧರಿಸೋದು ಸಾಫ್ಟ್ವೇರ್ .ಬದಲಾಯಿಸೋದು ಮಾತ್ರ ಪ್ರಾಸೆಸರ್ !ಈ ಹಾರ್ಡ್ವೇರ್ ಒಂಥರಾ ಗುಲಾಮ ಕಣ್ರಿ ಅದಕ್ಕೆ ಸಾಫ್ಟ್ವೇರ್ ಇಂಜಿನಿಯರ್ಗಳಿಗೆ ಸ್ವಲ್ಪ ಕೊಬ್ಬು ಜಾಸ್ತಿ,ಎಲ್ಲಾ ನಮ್ಮಿಂದಲೇ ಅಂತ .ಏನ್ ಮಾಡೋದು ಎಲ್ಲ ಪಡೆದು ಬಂದಿರಬೇಕು.
ಇನ್ನೊಂದು ಉದಾಹರಣೆ ತಗೊಳ್ಳೋಣ ATM ದು .ಹಣದ ವಿಚಾರ ಬಂದಾಗ ಎಲ್ಲರ ಕಿವಿಯೂ ನಿಮಿರುತ್ತೆ .ಇದು ಬರೀ ಉದಾಹರಣೆ ಮಾತ್ರ ಜಾಸ್ತಿ excite ಆಗ್ಬೇಡಿ.
ATM ನಿಂದ ನಿಮಗೆ ಒಂದು ಲಕ್ಷ ರೂಪಾಯಿ ಡ್ರಾ ಮಾಡಬೇಕು ಅಂದುಕೊಳ್ಳಿ (ಅದಕ್ಕೆ ಮೊದಲೇ ಹೇಳಿದ್ದು ಉದಾಹರಣೆ ಅಂತ)! ನೀವು ಕಾರ್ಡ್ ತುರುಕಿಸಿದ ತಕ್ಷಣ ನಿಮ್ಮ ಕಾರ್ಡ್ ನಲ್ಲಿರೋ ಮಾಹಿತಿಯನ್ನು ಓದೋದು ಹಾರ್ಡ್ವೇರ್ .ಮಾಹಿತಿ ಯನ್ನು ಹಾರ್ಡ್ವೇರ್ ಸಹಾಯದಿಂದ ಪಡೆದ ನಂತರ ಸಾಫ್ಟ್ವೇರ್ ಏನೇನೋ ಲೆಕ್ಕಾಚಾರ ಮಾಡಿ ದೂರದಲ್ಲೆಲ್ಲೋ ಇರೋ ಬ್ಯಾಂಕ್ ನ ಸರ್ವರ್ ಗೆ ಇಂಟರ್ನೆಟ್ ಮೂಲಕ ಸಂಪರ್ಕಿಸಿ ನಿಮ್ಮ ಖಾತೆಯಲ್ಲಿ ಎಷ್ಟು ಹಣ ಇದೆ,ನಿಮಗೆ ಒಂದು ಲಕ್ಷ ನೀಡಬಹುದೋ(ನಿಮ್ಮದೇ ಹಣ ಆಗಿದ್ರೂ!)ಅಂತ ನಿರ್ಧರಿಸೋದು ,ಕೊಡೋ ಹಣದಲ್ಲಿ ಸಾವಿರದ ನೋಟು ಎಷ್ಟಿರ್ಬೇಕು,ಐನೂರರ ನೋಟು ಎಷ್ಟಿರಬೇಕು ಅಂತೆಲ್ಲಾ ಲೆಕ್ಕಾಚಾರ ಮಾಡೋದು ಸಾಫ್ಟ್ವೇರ್ .ಎಲ್ಲಾ ಲೆಕ್ಕಾಚಾರ ಮಾಡಿದ ನಂತರ ಒಂದೊಂದೇ ನೋಟನ್ನು ಒಳಗಿರೋ ಒಂದು ಡಬ್ಬಿಯಿಂದ ಎತ್ತಿ ಎತ್ತಿ ಹೊರಗೆ ತಳ್ಳೋದು ಹಾರ್ಡ್ವೇರ್.
ಕಂಪ್ಯೂಟರ್ ಮೌಸ್ ಉದಾಹರಣೆ ತೊಗೊಂಡ್ರೆ ಆ ಪುಟ್ಟ ಮೌಸ್ ಒಳಗೂ ಒಂದು ಪುಟ್ಟ ಪ್ರಾಸೆಸರ್ ಇದೆ.ನೀವು ಎಡಗಡೆ ಬಟನ್ ಒತ್ತಿದ್ದೋ ಬಲಗಡೆ ಬಟನ್ ಒತ್ತಿದ್ದೋ ಅನ್ನೋದನ್ನು ಈ ಪ್ರಾಸೆಸರ್ ಗೊತ್ತು ಮಾಡಿಕೊಳ್ಳುತ್ತೆ ಮೊದಲು(ಎರಡೂ ಬಟನ್ ಒಮ್ಮೆಗೆ ಒತ್ತಿ ಪ್ರಾಸೆಸರ್ ತಲೆ ಕೆಡಿಸಬೇಡಿ ಪ್ಲೀಸ್),ಗೊತ್ತು ಮಾಡಿದ ನಂತರ ’ಈ ವ್ಯಕ್ತಿ ಎಡಗಡೆ ಮೌಸ್ ಒತ್ತಿದ್ದಾನೆ ’ ಅಂತ ಮಾಹಿತಿಯನ್ನು ಸಾಫ್ಟ್ವೇರ್ ಗೆ ವರ್ಗಾಯಿಸುತ್ತದೆ.ಯಾವ ಬಟನ್ ಒತ್ತಿದ್ದಾನೆ ಅಂತ ಗೊತ್ತಾದ ಮೇಲೆ ಸಾಫ್ಟ್ವೇರ್ ಏನೇನೋ ಲೆಕ್ಕಾಚಾರ ಹಾಕಿ ಮುಂದಿನ ಕಾರ್ಯಾಚಾರಣೆಯನ್ನು ನಿರೂಪಿಸುತ್ತದೆ.ನೀವಂದುಕೊಂಡಷ್ಟು ಸುಲಭ ಇಲ್ಲ ಬಿಡಿ ಲೆಕ್ಕಾಚಾರ! ಬ್ಲಾಗ್ ಬರೆಯುವಾಗಲೆ ನೋಡಿ ನೀವು ಎಡಗಡೆ ಬಟನ್ ಒತ್ತುತ್ತೀರ,ಆದರೆ ಆಗ ಮೌಸ್ ಪಾಯಿಂಟರ್ Publish Post ಮೇಲಿತ್ತಾ ಅಥವಾ Save Now ಮೇಲಿತ್ತಾ ಅನ್ನೋದನ್ನು ನಿರ್ಧರಿಸೋದಕ್ಕೆ ಸಾಫ್ಟ್ವೇರ್ ಸ್ವಲ್ಪ ತಲೆ ಕೆಡಿಸ್ಕೋಬೇಕಾಗುತ್ತೆ .
ಅಂದ ಹಾಗೆ ಟಾಯ್ಲೆಟ್ನಲ್ಲೂ ಈ ಹಾರ್ಡ್ವೇರ್ ಸಾಫ್ಟ್ವೇರ್ ಬಳಕೆಯಾಗುತ್ತೆ .ಟಾಯ್ಲೆಟ್ ಬೇಸಿನ್ ಮುಂದೆ ನಿಂತ ತಕ್ಷಣ ಅದರಲ್ಲಿ ಅಳವಡಿಸಿರೋ ಸೆನ್ಸರ್ ಸಾಫ್ಟ್ವೇರ್ ಗೆ ತಿಳಿಸುತ್ತೆ ’ಯಾರೋ ಟಾಯ್ಲೆಟ್ ಗಲೀಜು ಮಾಡಲು ಬಂದಿದ್ದಾನೆ ’ ಅಂತ ! ಹಾಗೆಯೇ ನೀವು ಹೋದ ತಕ್ಷಣ ’ಪಾಪಿ ನೀರು ಹಾಕದೆ ಹೋಗ್ತಿದ್ದಾನೆ ನೀರು ಹಾಕು ’ ಅಂತ ಹಾರ್ಡ್ವೇರ್ ಗೆ ತಿಳಿಸುತ್ತೆ .ಆಗ ಹಾರ್ಡ್ವೇರ್ ಸ್ವಿಚ್ ರಿಲೀಸ್ ಮಾಡಿ ನೀರು ಹೊರ ಹಾಕುತ್ತೆ.ಆದರೆ ’ಟಾಯ್ಲೆಟ್ ನಲ್ಲಿ ಉಚ್ಚೆ ಹೊಯ್ದ ಮೇಲೆ ನೀರು ಹಾಕೋ ಅಂಥ ಸಾಫ್ಟ್ವೇರ್ ಬರೆದಿದ್ದೀನಿ ನಾನು ’ ಅಂತ ಯಾವ ಸಾಫ್ಟ್ವೇರ್ ಇಂಜಿನಿಯರೂ ಹೇಳದ ಕಾರಣ ಬಹಳಷ್ಟು ಜನರಿಗೆ ಇಲ್ಲೂ ಸಾಫ್ಟ್ವೇರ್ ಬಳಕೆಯಾಗುತ್ತೆ ಅನ್ನೋ ಸತ್ಯ ಗೊತ್ತಿರಲ್ಲ !
ಇಸ್ರೋ ಉಪಗ್ರಹ ಉಡಾವಣೆ ಮಾಡೋ ಸಂದರ್ಭದಲ್ಲಂತೂ ಬಹಳಷ್ಟು ಕೆಲಸವನ್ನು ಮಾಡೋದು ಸಾಫ್ಟ್ವೇರ್.ಉಡಾವಣೆಯ ಒಂದೊಂದೇ ಹಂತವನ್ನು ಪರಿಶೀಲಿಸಿ ಎಲ್ಲಾ ಸರಿ ಇದ್ರೆ ರಾಕೆಟ್ ಬುಡಕ್ಕೆ ಬೆಂಕಿ ಹಚ್ಚುತ್ತೆ ಇಲ್ಲದಿದ್ದಲ್ಲಿ ಅಲ್ಲೆ STOP ಅನ್ನುತ್ತೆ.
ಈ ಪ್ರಾಸೆಸರ್ ಗಳಿಗೆ ಕನ್ನಡ ಅರ್ಥ ಆಗಲ್ಲ(ಇಂಗ್ಲೀಷೂ ಅರ್ಥ ಆಗಲ್ಲ ಬಿಡಿ)! ಅದರಿಂದಲೇ ಬಹಳಷ್ಟು ಜನ ಸಾಫ್ಟ್ವೇರ್ ಇಂಜಿನಿಯರ್ ಗಳು ತಮ್ಮ ಹೊಟ್ಟೆಪಾಡನ್ನು ನೋಡ್ಕೋತಾ ಇದ್ದಾರೆ! ಪ್ರಾಸೆಸರ್ ಅರ್ಥ ಆಗೋ ಭಾಷೆಯಲ್ಲಿ ಅದಕ್ಕೆ ಕೆಲಸ ಮಾಡಲು ಅಪ್ಪಣೆ ನೀಡೋದೇ ಸಾಫ್ಟ್ವೇರ್ ಕೆಲಸ.ಅಂಥ ಭಾಷೆಗಳೇ ಈ C ,C++,Java ಗಳು.ಈ ಭಾಷೆಯನ್ನು ಸಮರ್ಪಕವಾಗಿ ಬಳಸಬಲ್ಲವನೇ ಸಾಫ್ಟ್ವೇರ್ ಇಂಜಿನಿಯರ್.
ನಮಗೆಲ್ಲರಿಗೂ ಕನ್ನಡ ಬರುತ್ತೆ ಆದರೆ ಎಲ್ಲರೂ ಕನ್ನಡ ಪಂಡಿತರಾಗಲು ಸಾಧ್ಯ ಇಲ್ಲ ಅಲ್ಲವೇ? ಹಾಗೆಯೇ ಇದೂ !
Sunday, June 7, 2009
ಗೇರ್ ಗೇರ್ ಗೇರಣ್ಣ.....
ಇವತ್ತು ಬೆಳಿಗ್ಗೆ ಬಿ.ಇ.ಎಲ್ ಕಾಲೋನಿಯ ಒಳಗೆ ಹಾಗೆ ನಡೆದು ಹೋಗ್ತಾ ಇದ್ದೆ .ನಮ್ಮ ಮನೆ ಬಿ.ಇ.ಎಲ್ ಕಾಲೋನಿಯ ಆಸು ಪಾಸಿನಲ್ಲೇ ಇರೋದ್ರಿಂದ ಆಗಾಗ ಕಾಲೋನಿಯ ಒಳಗಿರುವ ಗಣಪತಿ ದೇವಸ್ಥಾನಕ್ಕೆ ಭೇಟಿ ಕೊಡೋದು ಹವ್ಯಾಸ.ಸಕ್ಕತ್ ಕೂಲ್ ಕಾಲೋನಿ ಇದು.ಹೀಗೆ ಕಾಲೊನಿಯ ಒಳಗಡೆ ನಡೆದುಕೊಂಡು ಹೋಗ್ತಾ ಇರ್ಬೇಕಾದ್ರೆ ಟಪಕ್ ಅಂತ ಒಂದು ಗೇರು ಹಣ್ಣು ಬಿತ್ತು.ಸ್ವಲ್ಪ ಟೈಮಿಂಗ್ ಹೆಚ್ಚು ಕಮ್ಮಿ ಆಗಿದ್ದಿದ್ರೆ ನನ್ ತಲೆ ಮೇಲೇ ಬೀಳ್ತಾ ಇತ್ತು ! ಸಧ್ಯ ತಪ್ಪಿಸಿಕೊಂಡೆ.
’ ಗೇರು ಹಣ್ಣು ತಲೆ ಮೇಲೆ ಬಿದ್ರೆ ಸಾಯ್ತಾರಾ ? ಏನೀ ಹುಡುಗ ವಿಪರೀತ ಆಡ್ತಾನೆ ’ ಅಂದುಕೋಬೇಡಿ .ಸಾಯಲ್ಲ ಆದ್ರೆ ಅದು ಶರ್ಟ್ ಮೇಲೇನಾದ್ರೂ ಬಿದ್ರೆ ಅದರ ಕಲೆ ಸರ್ಫ್ ಎಕ್ಸೆಲ್ ಮತ್ತೆ ಏರಿಯಲ್ ಎರಡೂ ಮಿಕ್ಸ್ ಮಾಡಿ ಒಗೆದರೂ ಹೋಗಲ್ಲ! ಅದಕ್ಕೆ ಭಯ .
ಗೇರು ಹಣ್ಣು ಬಿದ್ದಿದ್ದೆ ತಡ ನಾನು ಯೋಚಿಸೋದಕ್ಕೆ ಶುರು ಮಾಡಿದೆ.
ಅದು ಮೇಲೆ ಹೋಗದೆ ಕೆಳಗೇ ಯಾಕೆ ಬಿತ್ತು ಅಂತ ಅಲ್ಲ ಮಾರಾಯ್ರೇ ! ಅದೆಲ್ಲ ಆ ಪಾಪಿ ನ್ಯೂಟನ್ ಮೊದಲೇ ಎಲ್ಲಾ ಸಂಶೋಧನೆ ಮಾಡಿ ಮುಗಿಸಿದ್ದಾನೆ .ನನ್ನಂಥ ಬಡಪಾಯಿಗಳಿಗೆ ಏನೂ ಉಳಿಸಿಲ್ಲ ಈ ವಿಜ್ಞಾನಿಗಳು !ನಾನು ಯೋಚಿಸತೊಡಗಿದ್ದು ಬೆಂಗಳೂರಿನಂಥ ಮಹಾನಗರಿಯಲ್ಲಿ ಗೇರು ಹಣ್ಣು ಎಲ್ಲಿಂದ ಬಿತ್ತು ಅಂತ .
ತಲೆ ಎತ್ತಿ ನೋಡಿದ್ರೆ ಗೇರು ಹಣ್ಣಿನ ಮರ.’ನೀನು ತಲೆ ಎತ್ತಿ ನೋಡೋ ಅಗತ್ಯವೇ ಇರಲಿಲ್ಲ .ಒಂದು ವೇಳೆ ಗೇರು ಹಣ್ಣು ಬಿದ್ದಿದ್ದೇ ಅದ್ರೆ ಅದು ಗೇರು ಹಣ್ಣಿನ ಮರದಿಂದಲೇ ಆಗಿರುತ್ತೆ’ ಅಂತೆಲ್ಲಾ ನೀವು ನನ್ನ ಹತ್ತಿರ ವಾದಿಸಲು ಹೊರಟಿದ್ರೆ ಸ್ವಲ್ಪ ನಿಲ್ಲಿ. ಮಹಾಸ್ವಾಮಿ ಇದು ಬೆಂಗಳೂರು .ಐಟಿ-ಬಿಟಿ ನಗರ !ಯಾರಿಗೆ ಗೊತ್ತು ಎಲ್ಲೆಲ್ಲಿಂದ ಏನೇನು ಬೀಳುತ್ತೆ ಅಂತ ! ಅದಕ್ಕೆ ಸ್ವಲ್ಪ ತಲೆ ಎತ್ತಲು ಕಷ್ಟವಾದ್ರೂ ಪರ್ವಾಗಿಲ್ಲ ಕನ್ಫರ್ಮ್ ಮಾಡೋದೇ ಒಳ್ಳೆಯದು ಅನಿಸಿತು ನನಗೆ.
ಗೇರು ಹಣ್ಣು ಬಿದ್ದಿದ್ದು ನಿಜವಾದ ಗೇರು ಮರದಿಂದಲೇ.ಅದೆಷ್ಟು ಬಾರಿ ಬಿ.ಇ.ಎಲ್ ಕಾಲೋನಿಯ ಒಳಗಡೆ ಸುತ್ತು ಹಾಕಿದ್ದೇನೋ .ಒಂದು ದಿನವೂ ಗೇರುಮರ ಗಮನಿಸಿರಲಿಲ್ಲ ನಾನು !ಗೇರು ಮರವೇನು ಇಲ್ಲಿ ಎಲ್ಲಾ ಥರದ ಮರಗಳೂ ಕಾಣ ಸಿಗುತ್ತವೆ.ಪ್ರತಿ ಮನೆಯಲ್ಲೂ ಒಂದು ಗೇರು ಅಥವ ಹಲಸು ಅಥವ ಮಾವಿನ ಮರ ಇದ್ದೇ ಇದೆ.ತುಂಬಾ ಅದೃಷ್ಟಶಾಲಿಗಳು ಈ ಕಾಲೋನಿಯವರು.ಪಾಪ ಈ ಮರಗಳನ್ನು ನೆಟ್ಟವರು ರಿಟೈರ್ಡ್ ಆಗಿ ಎಲ್ಲಿದ್ದಾರೋ ? ಆದ್ರೆ ಅದರ ಫಲ ಮಾತ್ರ ತುಂಬಾ ಈಗ ಅಲ್ಲಿರೋ ಜನರಿಗೆ ಸಿಗುತ್ತಾ ಇದೆ.ಮರಗಳ ವಿಷಯದಲ್ಲಂತೂ ಇದೇ ಗೋಳು.ನಾವು ಗಿಡ ನೆಟ್ಟರೆ ನಮಗೆ ಫಲ ಸಿಗೋದು ಅಷ್ಟರಲ್ಲೇ ಇದೆ ಅಂತೇನಾದ್ರೂ ನಮ್ಮ ಪೂರ್ವಜರು ಸುಮ್ಮನಿದ್ದರೆ ನಮಗೆ ಚಿಪ್ಪೇ ಗತಿಯಾಗ್ತಾ ಇತ್ತು(ಅಯ್ಯೋ ಚಿಪ್ಪು ಸಿಗಲೂ ತೆಂಗಿನಮರ ನೆಟ್ಟಿರಬೇಕು ಅಲ್ವಾ!).
ನನಗೆ ಗೇರು ಹಣ್ಣೆಂದ್ರೆ ತುಂಬಾ ಇಷ್ಟ.ಈ ಹಣ್ಣನ್ನು ನೋಡಿದ ತಕ್ಷಣ ಬಾಲ್ಯಕ್ಕೆ ರಿವೈಂಡ್ ಆಗುತ್ತೆ ನೆನಪುಗಳು.ಗೇರು ಹಣ್ಣು ಅಂದ್ರೆ ಇಷ್ಟ ಅಂದ ತಕ್ಷಣ ಕೆಲವರು ತಲ ಕೆರ್ಕೋತಾ ಇರಬಹುದು .’ ಏನ್ ಟೇಸ್ಟ್ ಮಾರಾಯ ಈ ಹುಡುಗನದ್ದು ’ ಅಂತ! ನಿಜ ಹೇಳಬೇಕೂಂದ್ರೆ ಆ ಹಣ್ಣಿನ ಟೇಸ್ಟೇ ನೆನಪಿಲ್ಲ ನನಗೆ .ತಿಂದ್ರೆ ತಾನೇ ನೆನಪಿರೋದು .
ನಮ್ಮನ್ನು ಚಿಕ್ಕಂದಿನಲ್ಲೇ ಬಿಸಿನೆಸ್ ಮ್ಯಾನ್ ಗಳನ್ನಾಗಿ ಮಾಡಿದ್ದಕ್ಕಷ್ಟೇ ನನಗೆ ಆ ಹಣ್ಣಿನ ಬಗ್ಗೆ ವಿಪರೀತ ಪ್ರೀತಿ ,ಗೌರವ .ಗೇರು ಹಣ್ಣು ಕಾಣಿಸಿದ ತಕ್ಷಣ ಹುಡುಗರು ಮಾಡುವ ಮೊದಲ ಕೆಲಸ ಅಂದ್ರೆ ಆ ಹಣ್ಣನ್ನು ಕಾಲಿನಿಂದ ಒತ್ತಿ ಹಿಡಿದು ಅದರ ಬೀಜವನ್ನು ಕೀಳುವುದು !ಅಲ್ಲಿಯವರೆಗೆ ಫಳ ಫಳ ಹೊಳೀತಾ ಇದ್ದ ಗೇರು ಹಣ್ಣು ಮಾತ್ರ ಈಗ ವಿಲ ವಿಲ ಒದ್ದಾಡ್ತಿರೋ ಹಾಗೆ ಕಾಣ್ಸುತ್ತೆ ! ಅಪ್ಪಿತಪ್ಪಿ ಕೂಡಾ ಆ ಹಣ್ಣಿನ ರುಚಿ ನೋಡೋದಕ್ಕೂ ಹೋಗಲ್ಲ ಯಾರೂ .ಅಷ್ಟಕ್ಕೂ ಆ ಗೋಡಂಬಿ ಬೀಜ ತರೋ ಕಾಸಿನ ರುಚಿ ಮುಂದೆ ಹಣ್ಣಿನ ರುಚಿ ಯಾರಿಗೆ ಬೇಕು ಹೇಳಿ . ಬೇರೆ ಯಾವ ಹಣ್ಣೂ ಈ ಪರಿ ಕಾಸು ತಂದು ಕೊಟ್ಟಿರಲಿಕ್ಕಿಲ್ಲ ಹುಡುಗರಿಗೆ.
ನಮ್ಮ ಮನೆಯ ಹಿಂದೆಯೇ ಒಂದು ಗೇರು ಹಣ್ಣಿನ ಮರವಿತ್ತು.ನನ್ನ ಸ್ನೇಹಿತರೆಲ್ಲ ಊರಲ್ಲಿರೋ ಯಾವ ಗೇರು ಹಣ್ಣಿನ ಮರವನ್ನೂ ಬಿಡ್ತಾ ಇರಲಿಲ್ಲ.ಆದ್ರೆ ನನಗೆ ಅವರ ಥರ ಏಟು ತಿಂದುಕೊಂಡು ಗೇರು ಬೀಜ ಸಂಗ್ರಹ ಮಾಡೋ ಹುಚ್ಚಿರಲಿಲ್ಲ(ಪರ್ಯಾಯ ಶಬ್ದ ಧೈರ್ಯ!).ಹಾಗಾಗಿ ನಾನು ನನ್ನ ಮನೆಯ ಹಿಂದಿರುವ ಗೇರು ಮರಕ್ಕಷ್ಟೇ ನಿಷ್ಠಾವಂತ ನಾಗಿ ’ಏಕ ಗೇರು ಮರ ವೃತಸ್ಥ ’ ಅನಿಸಿಕೊಂಡಿದ್ದೆ.ನನ್ನ ಕೆಲಸವೇನೂ ಸುಲಭದ್ದಾಗಿತ್ತು ಅಂದುಕೊಳ್ಳಬೇಡಿ.ಎರಡು ಬಲಿಷ್ಟ ನಾಯಿಗಳು ಆ ಗೇರುಮರದ ವಾಚ್ ಮ್ಯಾನ್(ವುಮನ್??)ಆಗಿ ನೇಮಕವಾಗಿತ್ತು.ಹಾಗಾಗಿ ಅಲ್ಲಿಂದ ಗೇರು ಹಣ್ಣನ್ನು ಎತ್ತಿ(ಕದ್ದು!) ತರೋದು ತುಂಬಾ ಚ್ಯಾಲೆಂಜಿಗ್ ಆಗಿರ್ತಾ ಇತ್ತು .
ಗೇರು ಹಣ್ಣನ್ನು ಬೀಳಿಸಲು ಕಲ್ಲೆಸೆಯಬೇಕಾದರೆ ನಮಗೆ ಬರೀ ಗೇರು ಹಣ್ಣಷ್ಟೆ ಕಾಣಿಸ್ತಾ ಇತ್ತು ! ಬೇರೇನೂ ಕಾಣಿಸ್ತಾ ಇರಲಿಲ್ಲ .ಅರ್ಜುನನಿಗಿದ್ದ ಏಕಾಗ್ರತೆ ನಮಗಿತ್ತು ಅಂತ ನೀವೇನಾದರೂ ಅಂದುಕೊಂಡಿದ್ದರೆ ಅದು ತಪ್ಪು !ನಮ್ಮ ಮನೆಯ ಕಂಪೌಂಡ್ ನಮಗಿಂತ ಎತ್ತರವಿತ್ತು .ಹಾಗಾಗಿ ಈ ಕಡೆಯಿಂದ ನಮಗೆ ಬರೀ ಮರದಲ್ಲಿರೋ ಗೇರು ಹಣ್ಣಷ್ಟೇ ಕಾಣಿಸ್ತಾ ಇತ್ತು ,ಬೇರೇನೂ ಕಾಣಿಸ್ತಾ ಇರಲಿಲ್ಲ!
’ದೇವರೇ ಮರದ ಕೆಳಗೆ ಯಾರೂ ನಡೆಯದಿರಲಿ ’ ಅಂತ ದೇವರಲ್ಲಿ ಪ್ರಾರ್ಥಿಸಿಯೇ ನಾವು ಕಲ್ಲೆಸೀತಾ ಇದ್ದಿದ್ದು.ಕೆಲವೊಂದು ಸಲ ನಾವು ಬೀಳಿಸಿದ ಗೇರು ಹಣ್ಣನ್ನು ನಮಗಿಂತ ಮೊದಲು ಆ ಹಾದಿಯಲ್ಲಿ ನಡೆದು ಹೋಗುವವರು ಎತ್ತಿ ಹೋಗೋದೂ ಇತ್ತು.Practice makes man/woman perfect ಅನ್ನೋ ಮಾತಿನ ಅರ್ಥ ನಮಗೆ ಆಗಲೇ ತಿಳಿದಿದ್ದು.ಯಾಕಂದ್ರೆ ದಿನಾ ಕಲ್ಲು ಎಸೆದು ಎಸೆದು ಗೇರು ಹಣ್ಣನ್ನು ಕೇವಲ ಒಂದೇ ಕಲ್ಲಲ್ಲಿ ಬೀಳಿಸುವ ವಿದ್ಯೆ ನಮಗೆ ಕರಗತವಾಗಿತ್ತು.ಅದೆಷ್ಟೇ ಪ್ರಯತ್ನಿಸಿದರೂ ಒಂದು ಕಲ್ಲಲ್ಲಿ ಎರಡು ಹಣ್ಣನ್ನು ಬೀಳಿಸುವ ಕಲೆ ಕರಗತವಾಗಲೇ ಇಲ್ಲ.
ನಮಗೆ ಹಣ್ಣನ್ನು ಬೀಳಿಸೋದು ದೊಡ್ಡ ಸಮಸ್ಯೆಯೇ ಆಗಿರಲಿಲ್ಲ .ಸಮಸ್ಯೆ ಇರ್ತಾ ಇದ್ದಿದ್ದೇ ಹಣ್ಣನ್ನು ಬೀಳಿಸಿದ ಮೇಲೆ ಅದನ್ನು ತರೋದ್ರಲ್ಲಿ!ಕಂಪೌಂಡ್ ನಮಗಿಂತ ಎತ್ತರವಾಗಿದ್ದರಿಂದ ದೂರದಿಂದ ಪೋಲ್ ವಾಲ್ಟ್ ಅಥ್ಲೀಟ್ ಥರ ಓಡಿ ಬಂದು ಕಂಪೌಂಡ್ ಮೇಲೆ ಲ್ಯಾಂಡ್ ಆಗ್ಬೇಕು.ಅದಾದ ಮೇಲೆ ಆ ಎರಡು ನಾಯಿಗಳು ಎಲ್ಲಿವೆ ಅನ್ನೋದನ್ನು ನೋಡಬೇಕು.ಯಾರೂ ಇಲ್ಲವೆಂದು ಖಚಿತವಾದ ಮೇಲೆ ಬಿದ್ದ ಗೇರು ಹಣ್ಣು ಎಲ್ಲಿದೆ ಅಂತ ಇಲ್ಲಿಂದಲೇ ಪತ್ತೆ ಮಾಡಬೇಕು.ಎಲ್ಲಾ ಸರಿ ಇದೆ ಅನ್ನೋದು ಖಾತ್ರಿಯಾದರೆ ಮಾತ್ರ ಚಂಗನೆ ಹಾರಿ ಗೇರು ಹಣ್ಣನ್ನು ಎತ್ತಿ ಜೋಬಿನೊಳಗೆ ಹಾಕಿ ಅದೇ ಸ್ಪೀಡಿನಲ್ಲಿ ಮತ್ತೆ ಅಥ್ಲೀಟ್ ಥರ ಚಂಗನೆ ಕಂಪೌಂಡ್ ಹಾರಿ ವಾಪಸ್ ಬರಬೇಕು.ಮೊದಲೇ ತಯಾರಿ ನಡೆಸದೆ ಅಲ್ಲಿ ಹೋಗಿ ಗೇರು ಹಣ್ಣು ಎಲ್ಲಿ ಬಿದ್ದಿದೆ ಅಂತ ಹುಡುಕ್ತಾ ಇದ್ರೆ ನಾಯಿಗಳು ಬಂದು ಚಡ್ಡಿ ಹರಿಯುತ್ತಿದ್ದವು ಅಷ್ಟೆ!
ಅಲ್ಲಿ ಎರಡು ನಾಯಿಗಳಿದ್ರೂ ಒಂದು ಮಜ ಥರೋ ಸಂಗತಿ ಇತ್ತು.ಎರಡೂ ನಾಯಿಗಳು ಸ್ನೇಹಿತರಾಗಿದ್ದರಿಂದ ಅವು ಎಲ್ಲೇ ಹೋದರೂ ಜೊತೆ ಜೊತೆಗೆ ಹೋಗುತ್ತಿದ್ದವು.ಹಾಗಾಗಿ ಅಸಲಿಗೆ ಅವು ಎರಡಾಗಿದ್ದರೂ ನಾವು ಒಂದರ ಮೇಲಷ್ಟೆ ನಿಗಾ ಇಟ್ಟರೆ ಸಾಕಾಗ್ತಾ ಇತ್ತು.ಅಷ್ಟರ ಮಟ್ಟಿಗೆ ಅವುಗಳ ಸ್ನೇಹ ನಮಗೆ ಸಹಕಾರಿಯಾಗಿತ್ತು.
ಹೀಗೆ ಬಹಳ ಕಷ್ಟಪಟ್ಟು ತಂದ ಗೇರು ಹಣ್ಣನ್ನು ಯಥಾ ಪ್ರಕಾರ ಕಾಲ ಕೆಳಗೆ ಇಟ್ಟು ಗೇರು ಬೀಜವನ್ನು ಎಳೆದು ಪಾಲೀಥೀನ್ ಚೀಲದೊಳಗೆ ಹಾಕಿ ಆ ಚೀಲದ ತೂಕವನ್ನೊಮ್ಮೆ ಕೈಯಲ್ಲೇ ತೂಗಿದಾಗಲೇ ನಮಗೆ ಸಮಾಧಾನ.ಹೀಗೆ ಎಲ್ಲಾ ಹುಡುಗರ ಆಸಕ್ತಿ ಗೇರು ಬೀಜವನ್ನು ಸಂಗ್ರಹಿಸೋದರಲ್ಲೇ ಇದ್ದಿದ್ದರಿಂದ ಮಂಗಳೂರಿನ ಹುಡುಗರಿಗೆ ಗೇರು ಹಣ್ಣಿನ ರುಚಿ ಗೊತ್ತಿರುವುದು ಸ್ವಲ್ಪ ಸಂಶಯ.ಮೊನ್ನೆ ಗೋವಾಗೆ ಹೋಗಿದ್ದಾಗ ಫೆನ್ನಿ ಕುಡಿದಾಗಲೇ ಗೇರು ಹಣ್ಣಿನ ನಿಜವಾದ ರುಚಿ ಗೊತ್ತಾಗಿದ್ದು ನನಗೆ !
ಕೆಲವು ಹುಡುಗರು ಹೀಗೆ ಕಂಡವರ ಮನೆಯ ಗೇರುಬೀಜವನ್ನು ಕದ್ದು ತಮ್ಮ ಥೈಲಿ ಭಾರ ಮಾಡುವುದಲ್ಲದೇ ಇನ್ನೊಂದು ವಿಧಾನದಿಂದಲೂ ತಮ್ಮ ಥೈಲಿಯ ಭಾರವನ್ನು ಹೆಚ್ಚಿಸುತ್ತಿದ್ದರು(ಕೆಲವೊಮ್ಮೆ ಇಳಿಸುತ್ತಿದ್ದರು!)
ಆ ಇನ್ನೊಂದು ವಿಧಾನವೇ ಗೇರು ಬೀಜದಾಟ! ಈ ಆಟದ ಬಗ್ಗೆ ಬರೆದರೆ ಅದೇ ಒಂದು ಲೇಖನವಾಗುತ್ತೆ.ತಮ್ಮಲ್ಲಿರೋ ಗೇರು ಬೀಜಗಳನ್ನು ಪ್ರತಿಸ್ಪರ್ಧಿಯ ಗೇರು ಬೀಜದೊಂದಿಗೆ ಮಣ್ಣಿನಲ್ಲಿ ನೇರ ನಿಲ್ಲಿಸಿ ಕಲ್ಲಿನಿಂದ ಅದಕ್ಕೆ ಗುರಿ ಇಟ್ಟು ಎಸೆದು...... ಹೀಗೆ ಆ ಆಟಕ್ಕೇ ದೊಡ್ಡ ನೀತಿ,ನಿಯಮಗಳಿವೆ.ಒಟ್ಟಿನಲ್ಲಿ ಆಟದ ಕೊನೆಗೆ ಒಂದೋ ನಿಮಗೆ ಪ್ರತಿಸ್ಪರ್ಧಿಯ ಗೇರು ಬೀಜಗಳು ದೊರೆಯುತ್ತವೆ ,ಅಥವಾ ನೀವು ನಿಮ್ಮ ಗೇರು ಬೀಜಗಳನ್ನು ಪ್ರತಿಸ್ಪರ್ಧಿಗೆ ಒಲ್ಲದ ಮನಸ್ಸಿನಿಂದ ವರ್ಗಾಯಿಸಬೇಕು !
ಹೀಗೆ ಇಡೀ ಗೇರು ಹಣ್ಣಿನ ಸೀಸನ್ ನಲ್ಲಿ ಗೇರು ಬೀಜಗಳನ್ನು ಸಂಗ್ರಹಿಸಿ ಅದನ್ನು ಅಂಗಡಿಗೆ ಹೊಗಿ ಮಾರಿದಾಗ ಅವನು ಕೊಡುವ ಗರಿ ಗರಿ ನೋಟು ಎಣಿಸಿದಾಗಲೇ ಹುಡುಗರಿಗೆ ಸಮಾಧಾನ.ಅವನು ನೂರು ರುಪಾಯಿಯ ಒಂದೇ ಒಂದು ನೋಟು ಕೊಟ್ರೆ ಅದಕ್ಕೂ ಸಿಟ್ಟು ಹುಡುಗರಿಗೆ! ಅದರ ಬದಲು ಹತ್ತು ರೂ ನ ಹತ್ತು ನೋಟು ಕೊಟ್ರೆ ಅದನ್ನು ಮತ್ತೆ ಮತ್ತೆ ಎಣಿಸಿ ಜೇಬಿಗಿಳಿಸೋದರಲ್ಲೇ ಮಜಾ ಇರೋದು.
ಈಗ ಬಿಡಿ ’ನಿಮ್ಮ ಸಂಬಳ ನಿಮ್ಮ ಅಕೌಂಟ್ ಗೆ ಜಮೆಯಾಗಿದೆ’ ಅಂತ ಒಂದೇ ಒಂದು SMS ಬರುತ್ತೆ ಅಷ್ಟೆ !
’ ಗೇರು ಹಣ್ಣು ತಲೆ ಮೇಲೆ ಬಿದ್ರೆ ಸಾಯ್ತಾರಾ ? ಏನೀ ಹುಡುಗ ವಿಪರೀತ ಆಡ್ತಾನೆ ’ ಅಂದುಕೋಬೇಡಿ .ಸಾಯಲ್ಲ ಆದ್ರೆ ಅದು ಶರ್ಟ್ ಮೇಲೇನಾದ್ರೂ ಬಿದ್ರೆ ಅದರ ಕಲೆ ಸರ್ಫ್ ಎಕ್ಸೆಲ್ ಮತ್ತೆ ಏರಿಯಲ್ ಎರಡೂ ಮಿಕ್ಸ್ ಮಾಡಿ ಒಗೆದರೂ ಹೋಗಲ್ಲ! ಅದಕ್ಕೆ ಭಯ .
ಗೇರು ಹಣ್ಣು ಬಿದ್ದಿದ್ದೆ ತಡ ನಾನು ಯೋಚಿಸೋದಕ್ಕೆ ಶುರು ಮಾಡಿದೆ.
ಅದು ಮೇಲೆ ಹೋಗದೆ ಕೆಳಗೇ ಯಾಕೆ ಬಿತ್ತು ಅಂತ ಅಲ್ಲ ಮಾರಾಯ್ರೇ ! ಅದೆಲ್ಲ ಆ ಪಾಪಿ ನ್ಯೂಟನ್ ಮೊದಲೇ ಎಲ್ಲಾ ಸಂಶೋಧನೆ ಮಾಡಿ ಮುಗಿಸಿದ್ದಾನೆ .ನನ್ನಂಥ ಬಡಪಾಯಿಗಳಿಗೆ ಏನೂ ಉಳಿಸಿಲ್ಲ ಈ ವಿಜ್ಞಾನಿಗಳು !ನಾನು ಯೋಚಿಸತೊಡಗಿದ್ದು ಬೆಂಗಳೂರಿನಂಥ ಮಹಾನಗರಿಯಲ್ಲಿ ಗೇರು ಹಣ್ಣು ಎಲ್ಲಿಂದ ಬಿತ್ತು ಅಂತ .
ತಲೆ ಎತ್ತಿ ನೋಡಿದ್ರೆ ಗೇರು ಹಣ್ಣಿನ ಮರ.’ನೀನು ತಲೆ ಎತ್ತಿ ನೋಡೋ ಅಗತ್ಯವೇ ಇರಲಿಲ್ಲ .ಒಂದು ವೇಳೆ ಗೇರು ಹಣ್ಣು ಬಿದ್ದಿದ್ದೇ ಅದ್ರೆ ಅದು ಗೇರು ಹಣ್ಣಿನ ಮರದಿಂದಲೇ ಆಗಿರುತ್ತೆ’ ಅಂತೆಲ್ಲಾ ನೀವು ನನ್ನ ಹತ್ತಿರ ವಾದಿಸಲು ಹೊರಟಿದ್ರೆ ಸ್ವಲ್ಪ ನಿಲ್ಲಿ. ಮಹಾಸ್ವಾಮಿ ಇದು ಬೆಂಗಳೂರು .ಐಟಿ-ಬಿಟಿ ನಗರ !ಯಾರಿಗೆ ಗೊತ್ತು ಎಲ್ಲೆಲ್ಲಿಂದ ಏನೇನು ಬೀಳುತ್ತೆ ಅಂತ ! ಅದಕ್ಕೆ ಸ್ವಲ್ಪ ತಲೆ ಎತ್ತಲು ಕಷ್ಟವಾದ್ರೂ ಪರ್ವಾಗಿಲ್ಲ ಕನ್ಫರ್ಮ್ ಮಾಡೋದೇ ಒಳ್ಳೆಯದು ಅನಿಸಿತು ನನಗೆ.
ಗೇರು ಹಣ್ಣು ಬಿದ್ದಿದ್ದು ನಿಜವಾದ ಗೇರು ಮರದಿಂದಲೇ.ಅದೆಷ್ಟು ಬಾರಿ ಬಿ.ಇ.ಎಲ್ ಕಾಲೋನಿಯ ಒಳಗಡೆ ಸುತ್ತು ಹಾಕಿದ್ದೇನೋ .ಒಂದು ದಿನವೂ ಗೇರುಮರ ಗಮನಿಸಿರಲಿಲ್ಲ ನಾನು !ಗೇರು ಮರವೇನು ಇಲ್ಲಿ ಎಲ್ಲಾ ಥರದ ಮರಗಳೂ ಕಾಣ ಸಿಗುತ್ತವೆ.ಪ್ರತಿ ಮನೆಯಲ್ಲೂ ಒಂದು ಗೇರು ಅಥವ ಹಲಸು ಅಥವ ಮಾವಿನ ಮರ ಇದ್ದೇ ಇದೆ.ತುಂಬಾ ಅದೃಷ್ಟಶಾಲಿಗಳು ಈ ಕಾಲೋನಿಯವರು.ಪಾಪ ಈ ಮರಗಳನ್ನು ನೆಟ್ಟವರು ರಿಟೈರ್ಡ್ ಆಗಿ ಎಲ್ಲಿದ್ದಾರೋ ? ಆದ್ರೆ ಅದರ ಫಲ ಮಾತ್ರ ತುಂಬಾ ಈಗ ಅಲ್ಲಿರೋ ಜನರಿಗೆ ಸಿಗುತ್ತಾ ಇದೆ.ಮರಗಳ ವಿಷಯದಲ್ಲಂತೂ ಇದೇ ಗೋಳು.ನಾವು ಗಿಡ ನೆಟ್ಟರೆ ನಮಗೆ ಫಲ ಸಿಗೋದು ಅಷ್ಟರಲ್ಲೇ ಇದೆ ಅಂತೇನಾದ್ರೂ ನಮ್ಮ ಪೂರ್ವಜರು ಸುಮ್ಮನಿದ್ದರೆ ನಮಗೆ ಚಿಪ್ಪೇ ಗತಿಯಾಗ್ತಾ ಇತ್ತು(ಅಯ್ಯೋ ಚಿಪ್ಪು ಸಿಗಲೂ ತೆಂಗಿನಮರ ನೆಟ್ಟಿರಬೇಕು ಅಲ್ವಾ!).
ನನಗೆ ಗೇರು ಹಣ್ಣೆಂದ್ರೆ ತುಂಬಾ ಇಷ್ಟ.ಈ ಹಣ್ಣನ್ನು ನೋಡಿದ ತಕ್ಷಣ ಬಾಲ್ಯಕ್ಕೆ ರಿವೈಂಡ್ ಆಗುತ್ತೆ ನೆನಪುಗಳು.ಗೇರು ಹಣ್ಣು ಅಂದ್ರೆ ಇಷ್ಟ ಅಂದ ತಕ್ಷಣ ಕೆಲವರು ತಲ ಕೆರ್ಕೋತಾ ಇರಬಹುದು .’ ಏನ್ ಟೇಸ್ಟ್ ಮಾರಾಯ ಈ ಹುಡುಗನದ್ದು ’ ಅಂತ! ನಿಜ ಹೇಳಬೇಕೂಂದ್ರೆ ಆ ಹಣ್ಣಿನ ಟೇಸ್ಟೇ ನೆನಪಿಲ್ಲ ನನಗೆ .ತಿಂದ್ರೆ ತಾನೇ ನೆನಪಿರೋದು .
ನಮ್ಮನ್ನು ಚಿಕ್ಕಂದಿನಲ್ಲೇ ಬಿಸಿನೆಸ್ ಮ್ಯಾನ್ ಗಳನ್ನಾಗಿ ಮಾಡಿದ್ದಕ್ಕಷ್ಟೇ ನನಗೆ ಆ ಹಣ್ಣಿನ ಬಗ್ಗೆ ವಿಪರೀತ ಪ್ರೀತಿ ,ಗೌರವ .ಗೇರು ಹಣ್ಣು ಕಾಣಿಸಿದ ತಕ್ಷಣ ಹುಡುಗರು ಮಾಡುವ ಮೊದಲ ಕೆಲಸ ಅಂದ್ರೆ ಆ ಹಣ್ಣನ್ನು ಕಾಲಿನಿಂದ ಒತ್ತಿ ಹಿಡಿದು ಅದರ ಬೀಜವನ್ನು ಕೀಳುವುದು !ಅಲ್ಲಿಯವರೆಗೆ ಫಳ ಫಳ ಹೊಳೀತಾ ಇದ್ದ ಗೇರು ಹಣ್ಣು ಮಾತ್ರ ಈಗ ವಿಲ ವಿಲ ಒದ್ದಾಡ್ತಿರೋ ಹಾಗೆ ಕಾಣ್ಸುತ್ತೆ ! ಅಪ್ಪಿತಪ್ಪಿ ಕೂಡಾ ಆ ಹಣ್ಣಿನ ರುಚಿ ನೋಡೋದಕ್ಕೂ ಹೋಗಲ್ಲ ಯಾರೂ .ಅಷ್ಟಕ್ಕೂ ಆ ಗೋಡಂಬಿ ಬೀಜ ತರೋ ಕಾಸಿನ ರುಚಿ ಮುಂದೆ ಹಣ್ಣಿನ ರುಚಿ ಯಾರಿಗೆ ಬೇಕು ಹೇಳಿ . ಬೇರೆ ಯಾವ ಹಣ್ಣೂ ಈ ಪರಿ ಕಾಸು ತಂದು ಕೊಟ್ಟಿರಲಿಕ್ಕಿಲ್ಲ ಹುಡುಗರಿಗೆ.
ನಮ್ಮ ಮನೆಯ ಹಿಂದೆಯೇ ಒಂದು ಗೇರು ಹಣ್ಣಿನ ಮರವಿತ್ತು.ನನ್ನ ಸ್ನೇಹಿತರೆಲ್ಲ ಊರಲ್ಲಿರೋ ಯಾವ ಗೇರು ಹಣ್ಣಿನ ಮರವನ್ನೂ ಬಿಡ್ತಾ ಇರಲಿಲ್ಲ.ಆದ್ರೆ ನನಗೆ ಅವರ ಥರ ಏಟು ತಿಂದುಕೊಂಡು ಗೇರು ಬೀಜ ಸಂಗ್ರಹ ಮಾಡೋ ಹುಚ್ಚಿರಲಿಲ್ಲ(ಪರ್ಯಾಯ ಶಬ್ದ ಧೈರ್ಯ!).ಹಾಗಾಗಿ ನಾನು ನನ್ನ ಮನೆಯ ಹಿಂದಿರುವ ಗೇರು ಮರಕ್ಕಷ್ಟೇ ನಿಷ್ಠಾವಂತ ನಾಗಿ ’ಏಕ ಗೇರು ಮರ ವೃತಸ್ಥ ’ ಅನಿಸಿಕೊಂಡಿದ್ದೆ.ನನ್ನ ಕೆಲಸವೇನೂ ಸುಲಭದ್ದಾಗಿತ್ತು ಅಂದುಕೊಳ್ಳಬೇಡಿ.ಎರಡು ಬಲಿಷ್ಟ ನಾಯಿಗಳು ಆ ಗೇರುಮರದ ವಾಚ್ ಮ್ಯಾನ್(ವುಮನ್??)ಆಗಿ ನೇಮಕವಾಗಿತ್ತು.ಹಾಗಾಗಿ ಅಲ್ಲಿಂದ ಗೇರು ಹಣ್ಣನ್ನು ಎತ್ತಿ(ಕದ್ದು!) ತರೋದು ತುಂಬಾ ಚ್ಯಾಲೆಂಜಿಗ್ ಆಗಿರ್ತಾ ಇತ್ತು .
ಗೇರು ಹಣ್ಣನ್ನು ಬೀಳಿಸಲು ಕಲ್ಲೆಸೆಯಬೇಕಾದರೆ ನಮಗೆ ಬರೀ ಗೇರು ಹಣ್ಣಷ್ಟೆ ಕಾಣಿಸ್ತಾ ಇತ್ತು ! ಬೇರೇನೂ ಕಾಣಿಸ್ತಾ ಇರಲಿಲ್ಲ .ಅರ್ಜುನನಿಗಿದ್ದ ಏಕಾಗ್ರತೆ ನಮಗಿತ್ತು ಅಂತ ನೀವೇನಾದರೂ ಅಂದುಕೊಂಡಿದ್ದರೆ ಅದು ತಪ್ಪು !ನಮ್ಮ ಮನೆಯ ಕಂಪೌಂಡ್ ನಮಗಿಂತ ಎತ್ತರವಿತ್ತು .ಹಾಗಾಗಿ ಈ ಕಡೆಯಿಂದ ನಮಗೆ ಬರೀ ಮರದಲ್ಲಿರೋ ಗೇರು ಹಣ್ಣಷ್ಟೇ ಕಾಣಿಸ್ತಾ ಇತ್ತು ,ಬೇರೇನೂ ಕಾಣಿಸ್ತಾ ಇರಲಿಲ್ಲ!
’ದೇವರೇ ಮರದ ಕೆಳಗೆ ಯಾರೂ ನಡೆಯದಿರಲಿ ’ ಅಂತ ದೇವರಲ್ಲಿ ಪ್ರಾರ್ಥಿಸಿಯೇ ನಾವು ಕಲ್ಲೆಸೀತಾ ಇದ್ದಿದ್ದು.ಕೆಲವೊಂದು ಸಲ ನಾವು ಬೀಳಿಸಿದ ಗೇರು ಹಣ್ಣನ್ನು ನಮಗಿಂತ ಮೊದಲು ಆ ಹಾದಿಯಲ್ಲಿ ನಡೆದು ಹೋಗುವವರು ಎತ್ತಿ ಹೋಗೋದೂ ಇತ್ತು.Practice makes man/woman perfect ಅನ್ನೋ ಮಾತಿನ ಅರ್ಥ ನಮಗೆ ಆಗಲೇ ತಿಳಿದಿದ್ದು.ಯಾಕಂದ್ರೆ ದಿನಾ ಕಲ್ಲು ಎಸೆದು ಎಸೆದು ಗೇರು ಹಣ್ಣನ್ನು ಕೇವಲ ಒಂದೇ ಕಲ್ಲಲ್ಲಿ ಬೀಳಿಸುವ ವಿದ್ಯೆ ನಮಗೆ ಕರಗತವಾಗಿತ್ತು.ಅದೆಷ್ಟೇ ಪ್ರಯತ್ನಿಸಿದರೂ ಒಂದು ಕಲ್ಲಲ್ಲಿ ಎರಡು ಹಣ್ಣನ್ನು ಬೀಳಿಸುವ ಕಲೆ ಕರಗತವಾಗಲೇ ಇಲ್ಲ.
ನಮಗೆ ಹಣ್ಣನ್ನು ಬೀಳಿಸೋದು ದೊಡ್ಡ ಸಮಸ್ಯೆಯೇ ಆಗಿರಲಿಲ್ಲ .ಸಮಸ್ಯೆ ಇರ್ತಾ ಇದ್ದಿದ್ದೇ ಹಣ್ಣನ್ನು ಬೀಳಿಸಿದ ಮೇಲೆ ಅದನ್ನು ತರೋದ್ರಲ್ಲಿ!ಕಂಪೌಂಡ್ ನಮಗಿಂತ ಎತ್ತರವಾಗಿದ್ದರಿಂದ ದೂರದಿಂದ ಪೋಲ್ ವಾಲ್ಟ್ ಅಥ್ಲೀಟ್ ಥರ ಓಡಿ ಬಂದು ಕಂಪೌಂಡ್ ಮೇಲೆ ಲ್ಯಾಂಡ್ ಆಗ್ಬೇಕು.ಅದಾದ ಮೇಲೆ ಆ ಎರಡು ನಾಯಿಗಳು ಎಲ್ಲಿವೆ ಅನ್ನೋದನ್ನು ನೋಡಬೇಕು.ಯಾರೂ ಇಲ್ಲವೆಂದು ಖಚಿತವಾದ ಮೇಲೆ ಬಿದ್ದ ಗೇರು ಹಣ್ಣು ಎಲ್ಲಿದೆ ಅಂತ ಇಲ್ಲಿಂದಲೇ ಪತ್ತೆ ಮಾಡಬೇಕು.ಎಲ್ಲಾ ಸರಿ ಇದೆ ಅನ್ನೋದು ಖಾತ್ರಿಯಾದರೆ ಮಾತ್ರ ಚಂಗನೆ ಹಾರಿ ಗೇರು ಹಣ್ಣನ್ನು ಎತ್ತಿ ಜೋಬಿನೊಳಗೆ ಹಾಕಿ ಅದೇ ಸ್ಪೀಡಿನಲ್ಲಿ ಮತ್ತೆ ಅಥ್ಲೀಟ್ ಥರ ಚಂಗನೆ ಕಂಪೌಂಡ್ ಹಾರಿ ವಾಪಸ್ ಬರಬೇಕು.ಮೊದಲೇ ತಯಾರಿ ನಡೆಸದೆ ಅಲ್ಲಿ ಹೋಗಿ ಗೇರು ಹಣ್ಣು ಎಲ್ಲಿ ಬಿದ್ದಿದೆ ಅಂತ ಹುಡುಕ್ತಾ ಇದ್ರೆ ನಾಯಿಗಳು ಬಂದು ಚಡ್ಡಿ ಹರಿಯುತ್ತಿದ್ದವು ಅಷ್ಟೆ!
ಅಲ್ಲಿ ಎರಡು ನಾಯಿಗಳಿದ್ರೂ ಒಂದು ಮಜ ಥರೋ ಸಂಗತಿ ಇತ್ತು.ಎರಡೂ ನಾಯಿಗಳು ಸ್ನೇಹಿತರಾಗಿದ್ದರಿಂದ ಅವು ಎಲ್ಲೇ ಹೋದರೂ ಜೊತೆ ಜೊತೆಗೆ ಹೋಗುತ್ತಿದ್ದವು.ಹಾಗಾಗಿ ಅಸಲಿಗೆ ಅವು ಎರಡಾಗಿದ್ದರೂ ನಾವು ಒಂದರ ಮೇಲಷ್ಟೆ ನಿಗಾ ಇಟ್ಟರೆ ಸಾಕಾಗ್ತಾ ಇತ್ತು.ಅಷ್ಟರ ಮಟ್ಟಿಗೆ ಅವುಗಳ ಸ್ನೇಹ ನಮಗೆ ಸಹಕಾರಿಯಾಗಿತ್ತು.
ಹೀಗೆ ಬಹಳ ಕಷ್ಟಪಟ್ಟು ತಂದ ಗೇರು ಹಣ್ಣನ್ನು ಯಥಾ ಪ್ರಕಾರ ಕಾಲ ಕೆಳಗೆ ಇಟ್ಟು ಗೇರು ಬೀಜವನ್ನು ಎಳೆದು ಪಾಲೀಥೀನ್ ಚೀಲದೊಳಗೆ ಹಾಕಿ ಆ ಚೀಲದ ತೂಕವನ್ನೊಮ್ಮೆ ಕೈಯಲ್ಲೇ ತೂಗಿದಾಗಲೇ ನಮಗೆ ಸಮಾಧಾನ.ಹೀಗೆ ಎಲ್ಲಾ ಹುಡುಗರ ಆಸಕ್ತಿ ಗೇರು ಬೀಜವನ್ನು ಸಂಗ್ರಹಿಸೋದರಲ್ಲೇ ಇದ್ದಿದ್ದರಿಂದ ಮಂಗಳೂರಿನ ಹುಡುಗರಿಗೆ ಗೇರು ಹಣ್ಣಿನ ರುಚಿ ಗೊತ್ತಿರುವುದು ಸ್ವಲ್ಪ ಸಂಶಯ.ಮೊನ್ನೆ ಗೋವಾಗೆ ಹೋಗಿದ್ದಾಗ ಫೆನ್ನಿ ಕುಡಿದಾಗಲೇ ಗೇರು ಹಣ್ಣಿನ ನಿಜವಾದ ರುಚಿ ಗೊತ್ತಾಗಿದ್ದು ನನಗೆ !
ಕೆಲವು ಹುಡುಗರು ಹೀಗೆ ಕಂಡವರ ಮನೆಯ ಗೇರುಬೀಜವನ್ನು ಕದ್ದು ತಮ್ಮ ಥೈಲಿ ಭಾರ ಮಾಡುವುದಲ್ಲದೇ ಇನ್ನೊಂದು ವಿಧಾನದಿಂದಲೂ ತಮ್ಮ ಥೈಲಿಯ ಭಾರವನ್ನು ಹೆಚ್ಚಿಸುತ್ತಿದ್ದರು(ಕೆಲವೊಮ್ಮೆ ಇಳಿಸುತ್ತಿದ್ದರು!)
ಆ ಇನ್ನೊಂದು ವಿಧಾನವೇ ಗೇರು ಬೀಜದಾಟ! ಈ ಆಟದ ಬಗ್ಗೆ ಬರೆದರೆ ಅದೇ ಒಂದು ಲೇಖನವಾಗುತ್ತೆ.ತಮ್ಮಲ್ಲಿರೋ ಗೇರು ಬೀಜಗಳನ್ನು ಪ್ರತಿಸ್ಪರ್ಧಿಯ ಗೇರು ಬೀಜದೊಂದಿಗೆ ಮಣ್ಣಿನಲ್ಲಿ ನೇರ ನಿಲ್ಲಿಸಿ ಕಲ್ಲಿನಿಂದ ಅದಕ್ಕೆ ಗುರಿ ಇಟ್ಟು ಎಸೆದು...... ಹೀಗೆ ಆ ಆಟಕ್ಕೇ ದೊಡ್ಡ ನೀತಿ,ನಿಯಮಗಳಿವೆ.ಒಟ್ಟಿನಲ್ಲಿ ಆಟದ ಕೊನೆಗೆ ಒಂದೋ ನಿಮಗೆ ಪ್ರತಿಸ್ಪರ್ಧಿಯ ಗೇರು ಬೀಜಗಳು ದೊರೆಯುತ್ತವೆ ,ಅಥವಾ ನೀವು ನಿಮ್ಮ ಗೇರು ಬೀಜಗಳನ್ನು ಪ್ರತಿಸ್ಪರ್ಧಿಗೆ ಒಲ್ಲದ ಮನಸ್ಸಿನಿಂದ ವರ್ಗಾಯಿಸಬೇಕು !
ಹೀಗೆ ಇಡೀ ಗೇರು ಹಣ್ಣಿನ ಸೀಸನ್ ನಲ್ಲಿ ಗೇರು ಬೀಜಗಳನ್ನು ಸಂಗ್ರಹಿಸಿ ಅದನ್ನು ಅಂಗಡಿಗೆ ಹೊಗಿ ಮಾರಿದಾಗ ಅವನು ಕೊಡುವ ಗರಿ ಗರಿ ನೋಟು ಎಣಿಸಿದಾಗಲೇ ಹುಡುಗರಿಗೆ ಸಮಾಧಾನ.ಅವನು ನೂರು ರುಪಾಯಿಯ ಒಂದೇ ಒಂದು ನೋಟು ಕೊಟ್ರೆ ಅದಕ್ಕೂ ಸಿಟ್ಟು ಹುಡುಗರಿಗೆ! ಅದರ ಬದಲು ಹತ್ತು ರೂ ನ ಹತ್ತು ನೋಟು ಕೊಟ್ರೆ ಅದನ್ನು ಮತ್ತೆ ಮತ್ತೆ ಎಣಿಸಿ ಜೇಬಿಗಿಳಿಸೋದರಲ್ಲೇ ಮಜಾ ಇರೋದು.
ಈಗ ಬಿಡಿ ’ನಿಮ್ಮ ಸಂಬಳ ನಿಮ್ಮ ಅಕೌಂಟ್ ಗೆ ಜಮೆಯಾಗಿದೆ’ ಅಂತ ಒಂದೇ ಒಂದು SMS ಬರುತ್ತೆ ಅಷ್ಟೆ !
Subscribe to:
Posts (Atom)