
ಈ ಶುಕ್ರವಾರ ಮೂರು ಚಲನಚಿತ್ರ ನೋಡಿದೆ !
ಬೆಳಗಿನ ಶೋ ’ಶಿಶಿರ’.ಮ್ಯಾಟನಿ ಶೋ ’ಮಳೆಯಲಿ ಜೊತೆಯಲಿ’ ರಾತ್ರಿ ಶೋ ’ತ್ರೀ ಈಡಿಯಟ್ಸ್’!!!
’ಶಿಶಿರ’ ತುಂಬಾ ಉತ್ತಮ ಪ್ರಯತ್ನ.ಛಾಯಾಗ್ರಹಣ,ನಿರ್ದೇಶನ,ಸಂಗೀತ, ನಾಯಕ ಯಶಸ್ ನ ನಟನೆ ಎಲ್ಲವೂ ಚೆನ್ನಾಗಿತ್ತು.ಚಿತ್ರಕಥೆಯೊಂದನ್ನು ಬಿಟ್ಟು:( ಸಸ್ಪೆನ್ಸ್ ಚಿತ್ರಕ್ಕಿರಬೇಕಾದ ಕೆಲವು ಅಂಶಗಳು ಕಡಿಮೆ ಆಗಿದ್ದೇ ಎಡವಟ್ಟು.ನಿರ್ದೇಶಕರು ಮುಂದಿನ ಪ್ರಯತ್ನದಲ್ಲಿ ಖಂಡಿತ ಯಶಸ್ವಿಯಾಗ್ತಾರೆ ಅನ್ನೋ ಭರವಸೆ ನನಗಿದೆ.
ಬಹುನಿರೀಕ್ಷಿತ ’ತ್ರೀ ಈಡಿಯಟ್ಸ್ ’ ಮಾತ್ರ ನಿರೀಕ್ಷೆಗೆ ಮೀರಿ ಚೆನ್ನಾಗಿದೆ.ತುಂಬಾನೇ ಖುಷಿ ಕೊಟ್ಟಿತು ಇಡೀ ಚಿತ್ರ.ಒಂದೇ ಒಂದು ನಿಮಿಷ ಬೋರ್ ಹೊಡೆಸಿಲ್ಲ.ಅದ್ಭುತ ನಿರ್ದೇಶನ,ಅದ್ಭುತ ಕಥೆ,ಅದ್ಭುತ ಹಾಡುಗಳು ಹಾಗೆಯೇ ತುಂಬಾ ಒಳ್ಳೆಯ ಸಂದೇಶ.
ಬೊಮನ್ ಇರಾನಿ ಸಂಪೂರ್ಣ ವಿಭಿನ್ನವಾಗಿ ನಟಿಸಿದ್ದಾರೆ.ಬಾಡಿ ಲ್ಯಾಂಗ್ವೇಜ್ ಆಗಲಿ,ಡೈಲಾಗ್ ಡೆಲಿವರಿಯಾಗಲಿ ಎಲ್ಲವೂ ಸೂಪರ್! ಬೊಮನ್ ರ ನಟನೆ ’ಮುನ್ನಾಭಾಯಿಯ’ ಥರದ್ದೇ ಇರಬಹುದೇನೊ ಅಂದುಕೊಂಡವರಿಗೆ ದೊಡ್ಡ ಅಚ್ಚರಿ ಕೊಡ್ತಾರೆ ಅವರು.
ಚೇತನ್ ಭಗತ್ ರ ಕಾದಂಬರಿಯ ಎಳೆಯನ್ನಷ್ಟೇ ಹಿಡಿದು ಚಿತ್ರ ಮಾಡಿದರೂ ಕಾದಂಬರಿಯ ಆಶಯಕ್ಕೆ ಒಂದಿಷ್ಟೂ ಚ್ಯುತಿ ಬಂದಿಲ್ಲ ಬದಲಾಗಿ ಸರಿಯಾದ ನ್ಯಾಯ ದೊರಕಿದೆ.ಭಾರತದ ಶಿಕ್ಷಣ ವ್ಯವಸ್ಥೆಯ ಬಗ್ಗೆ ಎಲ್ಲರೂ ಮತ್ತೊಮ್ಮೆ ಯೋಚಿಸುವಂತೆ ಮಾಡುತ್ತೆ ಈ ಚಿತ್ರ.
ಆಮೀರ್ ,ಶರ್ಮನ್ ಜೋಷಿ,ಮಾಧವನ್,ಬೊಮನ್,ಕರೀನಾ ಗೆ ಸರಿ ಸಾಟಿಯಾಗಿ ಓಮಿ ಅನ್ನೊ ನಟ ಅದ್ಭುತವಾಗಿ ನಟಿಸಿದ್ದಾನೆ.ಚಿತ್ರದುದ್ದಕ್ಕೂ ನಕ್ಕು ನಲಿಸುವ ಸಂಭಾಷಣೆಗಳು.
ಶಿಕ್ಷಣ ಬರೀ ಮಾರ್ಕ್ಸ್ ಗಳಿಸೋದಷ್ಟೇ ಕಲಿಸುತ್ತೆ ,ಬದುಕುವುದನ್ನಲ್ಲ!