
" ರಾಮಾಯಣ,ಮಹಾಭಾರತ,ಬೈಬಲ್,ಕುರಾನ್-ಇವೆಲ್ಲಾ ನನ್ನ ಮಟ್ಟಿಗೆ ಕೇವಲ literature texts.
ವೈಜ್ನಾನಿಕ ಸತ್ಯಗಳನ್ನು ಕಂಡುಕೊಂಡವರಿಗೆ ಅದರ ಅಗತ್ಯವಿಲ್ಲ ಅಂದುಕೊಂಡಿದ್ದೇನೆ "
ಹೀಗಂತ ಗೆಳತಿಯೊಬ್ಬರು ನನ್ನ ಲೇಖನಕ್ಕೆ ಪ್ರತಿಕ್ರಿಯಿಸುತ್ತಾ ಬರೆದಿದ್ರು !ಬೈಬಲ್ ,ಕುರಾನ್ ಬಗ್ಗೆ ನಾನು ಓದಿಲ್ಲವಾದ್ದರಿಂದ ನನ್ಗೆ ಆ ಬಗ್ಗೆ ಮಾತಾಡೋದು ಕಷ್ಟ.ಆದ್ರೆ ರಾಮಾಯಣ ,ಮಹಾಭಾರತದ ಬಗ್ಗೆ ನನಗೆ ಮೊದಲಿನಿಂದಲೂ ಒಂದು ಬೆರಗಿದೆ ,ಗೌರವವಿದೆ.
ಈ ಎರಡನ್ನೂ ನಾನು ಓದಿಲ್ಲ! ಬರೀ ನೋಡಿದ್ದಷ್ಟೆ(ಟಿ.ವಿ ಯಲ್ಲಿ ಮಾರಾಯ್ರೆ, ಹಸ್ತಿನಾವತಿ,ಅಯೋಧ್ಯೆಗೆ ಹೋಗಿಲ್ಲ ಇನ್ನೂ!)
ಮೇಲೆ ಹೇಳಿದ ಪ್ರಕಾರ ರಾಮಾಯಣ ,ಮಹಾಭಾರತಗಳು ’ಬರೀ’ literature texts ಗಳಾಗಿದ್ದಿದ್ರೆ ನಾನಂತೂ ತುಂಬಾ ಖುಶಿ ಪಡ್ತೀನಿ! ಒಂದು ವೇಳೆ ಇದೊಂದು ಸತ್ಯ ಕಥೆ ಆಗಿದ್ರೆ ಟುಸ್ಸ್ ಸ್ಸ್ ಸ್ಸ್ ಸ್ಸ್ ಸ್ಸ್ ಪಟಾಕಿ!!!!
ಯಾಕೆ ಅಂತೀರಾ?? ಸತ್ಯ ಕಥೆ ಬರೆಯೋದೇನ್ರಿ ದೊಡ್ದ ವಿಷಯ?? ಎಲ್ಲೋ ಏನೋ ಆಗಿರುತ್ತೆ ಅದನ್ನು ನಿಮಗೆ ’ಯಾರೋ ’ ಹೇಳಿರ್ತಾರೆ ನೀವು ಅದನ್ನು ಚಾಚೂ ತಪ್ಪದೆ ಬರ್ದಿರ್ತೀರ .ಅದರಲ್ಲೇನು greatness? ನಿಮಗೆ ಕೂಲಿ ಕೊಟ್ಟು,.ಅರ್ಧ ಟೀ (ಬೆಂಗಳೊರ್ರಿನಲ್ಲಾದ್ರೆ ಮಾತ್ರ!) ಕುಡಿಸಿ ಕಳಿಸೋದು.ಆಮೇಲೆ ಯಾವುದಾದ್ರೂ ಪಬ್ಲಿಷರ್ ಹಿಡ್ಕೊಂಡು ಪ್ರಕಟಿಸೋದು ಅದ್ರಲ್ಲೇನು ವಿಶೇಷ ಅಲ್ವಾ??
ಆದ್ರೆ ಸ್ವಲ್ಪ ಯೋಚಿಸಿ ನೋಡಿ -ಈ ರಾಮಾಯಣ ,ಮಹಾಭಾರತಗಳು ಕಟ್ಟುಕಥೆಗಳೇ ಆಗಿದ್ದಿದ್ರೆ..........????
ಎಷ್ಟು ಬುದ್ಧಿವಂತನಾಗಿದ್ದಿರಬಹುದು ಅದರ ಲೇಖಕ??ಕಥೆ ಬಿಡ್ರಿ ಆ ಕಥೆಗಳಲ್ಲಿ ಬರೋ ಸಾವಿರಾರು ಪಾತ್ರದ ಹೆಸರುಗಳನ್ನು ಯೋಚಿಸಲೇ ಎಷ್ಟು ತಲೆ ಓಡಿಸಿರ್ಬೇಕು ಆ ಲೇಖಕ?? ನನ್ನ ಜುಜುಬಿ ಬ್ಲಾಗ್ ಗೆ ಒಂದು ಹೆಸರಿಡಲು ಎಷ್ಟು ತಲೆ ಕೆರ್ಕೊಂಡ್ರೂ ಹೊಸ ಹೆಸರು ಹೊಳೀಲಿಲ್ಲ!
ನಮ್ಮ ಮಕ್ಕಳಿಗೆ ಹೆಸರಿಡ್ಬೇಕಾದ್ರೆ ಎಷ್ಟೇ ಒರಿಜಿನಲ್ ಇಡೊದಕ್ಕೆ try ಮಾಡಿದ್ರೂ ಅದು ಎಲ್ಲೊ use ಆಗಿರುತ್ತೆ!
ಇಂಥ ಒಂದು ಕಟ್ಟು ಕಥೆ ತಯಾರು ಮಾಡ್ಬೇಕಾದ್ರೆ ಆ ಲೇಖಕರು ಎಷ್ಟು ಒದ್ದಾಡಿರ್ಬೇಕು ಅಲ್ವ?? ಒಂದು ಕಡೆ ಬಂದ ಹೆಸರು ಇನ್ನೊಂದು ಕಡೆ ಇಲ್ಲ.ಕಥೆಯಲ್ಲಿ twistಗಳ ಮೇಲೆ twistಗಳು .ಕಾಮಿಡಿ ಇದೆ,ಸಸ್ಪೆನ್ಸ್ ಇದೆ ,horror ಇದೆ ,ಎಲ್ಲ ಇದೆ!!
ಆಮೇಲೆ ಈ ಮಹಾಭಾರತ,ರಾಮಾಯಣಗಳನ್ನು ವೈಜ್ಞಾನಿಕ ದೃಷ್ಟಿಯಿಂದ ನೋಡಿ ಅಂತ ಹೇಳೋಮಂದಿನೂ ಸಿಗ್ತಾರೆ !
ನಾವು ಯಾರ್ರಿ ವಿಜ್ಞಾನದ ಬಗ್ಗೆ ಮಾತಾಡೊದಕ್ಕೆ ಅಧಿಕಾರ ಉಳ್ಳವರು?? ಹೊಸದಾಗಿ ಕಂಡು ಹುಡುಕೋದು ಬಿಡಿ ಯಾವತ್ತೋ ನ್ಯೂಟನ್ ಕಂಡು ಹುಡುಕಿದ ನಿಯಮಗಳನ್ನೇ 5 marks ಗೆ ಆಗೋ ಅಷ್ಟು ಬರೆಯೋ ಯೋಗ್ಯತೆ ನಮಗಿಲ್ಲ(ನನ್ನಂಥ ಸಾಮನ್ಯ ಜನರಿಗೆ)!
ಈ ವಿಜ್ಞಾನಿಗಳೂ ಪಾಪ ಒಂದು ದಿನ ಭೂಮಿ ಚಪ್ಪಟೆ ಅಂತಾರೆ! ಮಾರನೇ ದಿನ ಭೂಮಿ ಗುಂಡಗಿದೆ ಅಂತಾರೆ.ನಾಳೆ ಭೂಮಿ ಚೌಕವಾಗಿದೆ ಅಂದ್ರೂ ಅನ್ನಬಹುದು!
ನಾನು ವಿಜ್ಞಾನಿಗಳನ್ನು ಅವಮಾನಿಸಲು ಈ ರೀತಿ ಬರೆದಿಲ್ಲ .ಅವರ ಬಗ್ಗೆ ಅಪಾರ ಗೌರವವಿದೆ ನನಗೆ. ಆದ್ರೆ ವಿಜ್ಞಾನದ ಸಿದ್ಧಾಂತಗಳೂ ಕಾಲ ಕಾಲಕ್ಕೆ ಬದಲಾಗೋದಂತೂ ನಿಜ.The ultimate truth ! ಅನ್ನೋ ಅಂಥದ್ದು ವಿಜ್ಞಾನದಲ್ಲೂ ಇಲ್ಲ,ಅಲ್ವ??
ಒಂದು ದಿನ ಮೊಟ್ಟೆ ಸಸ್ಯಾಹಾರಿ ಅಂತಾರೆ ,ಆಮೇಲೆ ಯಾವುದೋ ಲೇಖನದಲ್ಲಿ ಮಾಂಸಾಹಾರ ಅಂತಾರೆ.ಒಬ್ಬ ಕೊಪರ್ನಿಕಸ್ ಅಂದದ್ದೇ ಸರಿ ಅಂತಾನೆ,ಇನ್ನೊಬ್ಬ ಗೆಲಿಲಿಯೊ ಅಂದಿದ್ದೇ ಸರಿ ಅಂತಾನೆ.ಮತ್ತೊಬ್ಬ ಎಲ್ಲರದ್ದೂ ತಪ್ಪು ’ನಾನು ಹೇಳಿದ್ದೆ ಸರಿ ’ ಅಂತಾನೆ(ನನ್ ಥರ ಪಾರ್ಟಿ!).
ಈಗ ವೈಜ್ಞಾನಿಕ ದೃಷ್ಟಿಯಿಂದಲೇ ನೋಡೋಣ ರಾಮಾಯಣ ,ಮಹಾಭಾರತಗಳನ್ನು:-
ರಾವಣ ಪುಷ್ಪಕ ವಿಮಾನದಲ್ಲಿ ಬಂದು ಸೀತೆಯನ್ನು ಅಪಹರಿಸಿದ ಅಂತ ಮೇಷ್ಟ್ರು ಹೇಳ್ತಾ ಇದ್ರೆ ಕೊನೆ ಬೆಂಚಲ್ಲಿ ಕೂತು ಮಕ್ಕಳು ಮುಸಿ ಮುಸಿ ನಗ್ತಾರೆ! ಏನಪ್ಪ ಜೋಕ್ ಮಾಡ್ತಾರೆ ಮೇಷ್ಟ್ರು! ,ಆ ಕಾಲದಲ್ಲಿ ವಿಮಾನ ಇತ್ತಂತೆ ,ಅದೂ ಹಾರ್ತಾ ಇತ್ತಂತೆ!!
ಆದ್ರೆ ಮನಮೋಹನ್ ಸಿಂಗ್ ಕಿಂಗ್ ಫಿಶರ್ airlines ನಲ್ಲಿ ಇನ್ನು ಅರ್ಧ ಗಂಟೆಯಲ್ಲಿ ಬೆಂಗಳೂರಿಗೆ ಬರ್ತಾರಂತೆ ಅಂದ್ರೆ ಹಾರ,ತುರಾಯಿ ತಗೊಂಡು ವಿಮಾನ ನಿಲ್ದಾಣಕ್ಕೆ ಧಾವಿಸ್ತಾರೆ ಜನ -ಆಗ ನಗಲ್ಲ!!!!!!
ಸಂಜಯ ಯುದ್ಧಭೂಮಿಯಲ್ಲಿ ಏನಾಗ್ತಾ ಇತ್ತು ಅಂತ ಇಲ್ಲೇ ಕುಳಿತು ಧೃತರಾಷ್ಟ್ರನಿಗೆ ವಿವರಿಸ್ತಾ ಇದ್ದ ಅಂತ lecturer ಹೇಳ್ತಾ ಇದ್ರೆ ಅಸಡ್ಡೆಯಿಂದ ಮುಂದಿನ ಬೆಂಚಿನಲ್ಲಿ ಕೂತ ಹುಡುಗಿಯ ಜಡೆ ಜೊತೆ ಆಟ ಆಡ್ತಾನೆ ಕಾಲೇಜ್ ಹುಡುಗ!
ಆದ್ರೆ ದೂರದಲ್ಲೆಲ್ಲೋ ಸೌತ್ ಆಫ್ರಿಕಾದಲ್ಲಿ ಅಗೋ ಮ್ಯಾಚ್ ಬಗ್ಗೆ ,ರವಿಶಾಸ್ರಿ ಇಲ್ಲೇ ದೆಹಲಿ ಸ್ಟೇಡಿಯಂ ನಲ್ಲಿ ಕೂತು ಕಮೆಂಟ್ರಿ ಕೊಡ್ತಾ ಇದ್ರೆ ಅದನ್ನು laysಗೆ ಸ್ವಲ್ಪ ಉಪ್ಪಿನಕಾಯಿ ಹಾಕಿ ತಿನ್ತಾ ಚಪ್ಪರಿಸಿ ಮ್ಯಾಚ್ ನೋಡ್ತಾನೆ ಅದೇ ಕಾಲೇಜಿನ ಪಡ್ದೆ ಹುಡುಗ!
ಇದು ವಿಜ್ಞಾನ - ಅದು ಅಜ್ಞಾನ !!!
ಋಷಿ ಮುನಿಗಳು ತಮ್ಮ ದಿವ್ಯ ಜ್ಞಾನದಿಂದ ದೂರದ್ಲ್ಲಿದ್ದ ಇನ್ನೊಬ್ಬರ ಬಳಿ ಸಂವಹನ ನಡೆಸ್ತಾ ಇದ್ರು ಅಂತ ಹೇಳಿದ್ರೆ ನಂಬೋಕೆ ಆಗಲ್ಲ ನಮಗೆ.
ಆದ್ರೆ ಇಲ್ಲಿಂದ U.K ನಲ್ಲಿರೋ ಮಗಳ ಹತ್ರ ಮೊಬೈಲ್ ನಲ್ಲಿ ಮಾತಾಡ್ತೀನಿ ಅಂದ್ರೆ ನಗಲ್ಲ ಬದಲಾಗಿ ’ಎಷ್ಟು ಬೀಳುತ್ತೆ ಮಿನಿಟಿಗೆ ’ ಅಂತ ಪ್ರಶ್ಶ್ನಿಸ್ತಾರೆ!!!!
ಘಟೋತ್ಕಚ ದೈತ್ಯ ದೇಹಿಯಾಗಿದ್ದ ಅಂದ್ರೆ ಖಂಡಿತ ನಂಬಲ್ಲ ! ಆದ್ರೆ ದ ಗ್ರೇಟ್ ಖಲಿ WWE ನಲ್ಲಿ ಪೈಟ್ ಮಾಡ್ತಾ ಇದ್ರೆ ’ಏನು ಕಟ್ಟು ಮಸ್ತಾದ ಜೀವ ಕಣ್ರಿ ’ ಅಂತೀವಿ! ಡೈನೋಸರ್ ಬಗ್ಗೆ ಬಂದ ’ಜುರಾಸಿಕ್ ಪಾರ್ಕ್ ’ ನೋಡಿ ಖುಷಿ ಪಡ್ತೀವಿ!
ಕುಂತಿ ಕೇವಲ ದೇವರ ಪ್ರಾರ್ಥನೆಯಿಂದ ಗರ್ಭವತಿ ಆದ್ಲು ಅಂದ್ರೆ ನಂಬಲ್ಲ!
’ಪಕ್ಕದ ಮನೆ ಆಂಟಿಯ ಗಂಡ ಸತ್ತು ಮೂರು ವರ್ಷ ಆಯ್ತು ,ಆದ್ರೆ ವೀರ್ಯಾಣು ಫ್ರಿಜ್ ನಲ್ಲಿ ಜೋಪಾನವಾಗಿಟ್ಟಿದ್ರಿಂದ In vitro fertilization ಮಾಡಿ ಈಗ ಗರ್ಭವತಿ ಆದ್ರು ಅಂದ್ರೆ -ವಾವ್ ಇದು ನೋಡ್ರಿ ವಿಜ್ಞಾನ ಅಂದ್ರೆ! ’ಅಂತ ಖುಷಿ ಪಡ್ತೀವಿ!
ಅರ್ಜುನ ಬಿಟ್ಟ ಬಾಣ ಟಾರ್ಗೆಟ್ ನ ಹುಡುಕಿಕೊಂಡು ಹೋಗಿ ದಾಳಿ ನಡೆಸುತ್ತೆ ಅಂದ್ರೆ ನಂಬಲ್ಲ!
ಆದ್ರೆ ಅಬ್ದುಲ್ ಕಲಾಂ ಡಿಸೈನ್ ಮಾಡಿದ ’guide missile' targetನ ಹುಡುಕಿಕೊಂಡು ಹೋಗಿ ದಾಳಿ ಮಾಡುತ್ತೆ ಅಂದ್ರೆ ’ಗ್ರೇಟ್ ಕಣ್ರಿ ಅಬ್ದುಲ್ ಕಲಾಂ’ .Brilliant scientist ಅಂತೀವಿ!!!!!
ಅಬ್ದುಲ್ ಕಲಾಂರದ್ದು ವೈಜ್ಞಾನಿಕ ಸತ್ಯ - ಅರ್ಜುನ ಮಾಡಿದ್ದು ’literature text '????
ಇಷ್ಟೊಂದು ಬೆರಗುಗಳನ್ನು ಕೂಡಿದ ರಾಮಾಯಣ ,ಮಹಾಭಾರತ ನಮಗೆ just literature texts!!
ಅದೇ ವರ್ಷಕ್ಕೊಂದು ಹೆಂಡತಿಯರನ್ನು ಬದಲಾಯಿಸುವ ಸಲ್ಮಾನ್ ರಶ್ದಿ ಬರೆದಿರೋ ’Midnight’s Children' ಸಾರ್ವಕಾಲಿಕ ಶ್ರೇಷ್ಠ ಬೂಕರ್ ಕೃತಿ!
ರಾಮಾಯಣ ,ಮಹಾಭಾರತಗಳು ಏನಾದ್ರೂ ನಿಜ ಕಥೆಗಳೇ ಆಗಿದ್ರೆ -’ಛೇ ,ಬೇಜಾರು.......’
ಇವುಗಳೇನಾದ್ರೂ ಕಾಲ್ಪನಿಕ ಕಥೆಗಳೇ ಆಗಿದ್ರೆ - ಪ್ರೀತಿಯ ರಾಮಾಯಣ ,ಮಹಾಭಾರತದ ಲೇಖಕರೇ ನೀವು ನಿಜಕ್ಕೊ ಗ್ರೇಟ್ !